ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Friday, October 15, 2010

ಬತ್ತಗೆರೆ ಸಾವಿತ್ರಜ್ಜಿ

ಬತ್ತಗೆರೆ ಸಾವಿತ್ರಜ್ಜಿ ಎಂಬ  ಆಧುನಿಕ ಹರಿಕಾರ್ತಿ


ನನ್ನ ಜೀವಾಮೃತವೆ...
                       ನೀನು 'ಇಂಥ ೨೧ ನೇ ಶತಮಾನದಲ್ಲಿಯೂ ಕೂಡ ಪತ್ರ ಬರವಣಿಗೆ ಯಾಕೆ??'  ಅಂಥ ಕೇಳಿದ್ದೆ ನೆನಪಿದೆಯ??? ನಿಜ.. ಆದರೆ ಮನದ ಎಲ್ಲಾ ತುಮುಲ ಹಾಗೂ ಭಾವನೆಗಳ ಮಿಡಿತವನ್ನ ಹೊರ ಹಾಕಲು ಇಂದಿನ ಆಧುನಿಕ ಸಂಪರ್ಕ ಮದ್ಯಮಗಳಿಂದ ಎಷ್ಟೇ ಸಾದ್ಯ ಕಣೋ ಅಂತ ನೀನು ಹೇಳಿದರು.. ಪತ್ರ ಬರೆಯುವಿಕೆ ಹಾಗೂ ಅದರ ಪರತುತ್ತರಕ್ಕಾಗಿ ಕಾಯುವಿಕೆ ನಿಜಕ್ಕೂ ಆ ಸಮಯದಲ್ಲಿ ಸಿಗುವ ಖುಷಿಯನ್ನ ಪದಗಳಲ್ಲಿ ಹಿದಿದಿರಲಾಗದಂತಹುದು.. ಅಂದಾಗ. ನೀನು  ಅದೇನೋ ನೋಡೇ ಬಿಡ್ತೀನಿ ಅಂತ ಸವಾಲು ಸ್ವಿಕರಿಸುವವಳಂತೆ ನೋಡಿ ಒಪ್ಪಿಕೊಂಡೆ.. ಈಗ ನಂಗೆ ಪುರುಸೊತ್ತು ಸಿಗುವುದಿಲ್ಲ ನನ್ನ ಬಂಗಾರ ಅಂತ ಹೇಳುತ್ತಾನೆ ಎಷ್ಟೋ ಪತ್ರ ನಮ್ಮಿಬ್ಬರ ನಡುವೆ ಬಟವಾಡೆ ಆಗಿ ಹೋಯಿತು ಅಲ್ಲವ???  ನಿಜ ನಾನು ಪತ್ರ ಬರೆಯಲು ಕಲಿತದ್ದು ನನ್ನ ಅಮ್ಮನಿಂದ ನಾನು ಶಾಲೆಗೆ ಸೇರಿ ಅಲ್ಲಿ ಪತ್ರ ಬರೆಯುವುದನ್ನ ಹೇಳಿ ಕೊಡುವ ಮೊದಲೇ.. ನನ್ನ ಹೆತ್ತಮ್ಮ ತನ್ನ ತವರೊರಿಗೆ ಹಾಗೂ ದೂರದ ಕೇರಳ ದಲ್ಲಿದ್ದ ನನ್ನ ಚಿಕ್ಕಪ್ಪನಿಗೆಲ್ಲ ಪತ್ರ ಬರೆದು ಕ್ಷೇಮ ಸಮಾಚಾರ ಕೇಳುವಾಗ ನನ್ನ ಹತ್ತಿರದಲ್ಲೇ ಬರೆದು ಕೊಡು.. ಹೀಗೆ ಬರೆಯಬೇಕು ಎಂದೆಲ್ಲಾ ನಿರ್ದೇಶಿಸಿ ಕೊನೆಯದಾಗಿ ತಪ್ಪುಗಳಿದ್ದಲ್ಲಿ ತಿದ್ದಿ ಓದಿ ಎಂದು ಮುಗಿಸುತ್ತಿದಳು.. ಅದು ನನಗೆ ಈಗ ನನ್ನ ಭಾವನೆಯನ್ನ ಹಂಚಿಕೊಳ್ಳಲು ಸಹಾಯ ಮಾಡುತ್ತಿದೆ..
                    ಹಃ  ಮೊನ್ನೆ ಅಮ್ಮ ಫೋನ್ ಮಾಡಿದ್ದಾಗ ನಮ್ಮೂರಿನ ಸಾವಿತ್ರಜ್ಜಿ ತೀರಿಹೋದಳು ಎಂದಳು.. ಫೋನ್ ಇಟ್ಟ ಮೇಲೆ ಸಾವಿತ್ರಜ್ಜಿ ಎಂಬ ಆಧುನಿಕ ಹರಿಕಾರ್ತಿಯ ನೆನಪು ಕಣ್ಣು ಮುಂದೆ ಬಿಡದೆ ಕಾಡಿತು.. ಬೊಚ್ಚು ಬಾಯಿಯ ಕಾಟನ್ ಸೀರೆಯ ಆ ಆಜ್ಜಿ ನನಗೆ ತಿಳಿದಂತೆ ನನ್ನ ಅಜ್ಜಿಯ ಆಪ್ತ ಗೆಳತಿ.. ದಿನ ಮಧ್ಯಾಹ್ನ  ಊಟ ಚಹ ಆದ ಮೇಲೆ ಒಂದು ಕುಡುಗೋಲು ಹಿಡಿದು ಅದನ್ನು ಮಸೆಯುವ ನೆಪ ಮಾಡಿ ನಮ್ಮ ಮನೆಗೆ ದಾವಿಸಿದಳೆಂದರೆ   ಅಲ್ಲಿ ಆರಂಭ ಆಯಿತು ಮುದುಕಿಯರ ಕಟ್ಟೆ ಮಾತುಕತೆ... ಇನ್ನೂ ಆ ಅಜ್ಜಿ ಹೊರಡಲು ಸೂರ್ಯ ತನ್ನ ದಿನಚರಿ ಮುಗಿಸಿ ಇನ್ನೂ ತಾನು ನಾಳೆ ಬರುವೆ ಎಂದು ಹಿಂದಿನ ಧರೆಯ ಕಡೆ ಹೊರಟಿರ ಬೇಕು ಅಷ್ಟೊತ್ತಿಗೆಲ್ಲ ಕವಳದ ಬಟ್ಟಲಿನಲ್ಲಿಯ ಸಾಮಗ್ರಿಗಳೆಲ್ಲ ( ಅಡಕೆ, ಸುಣ್ಣ, ತಂಬಾಕು) ಮುದುಕಿಯರ ಸ್ಪರ್ದೆಯಲ್ಲಿ ತಾನು ಸೋತೆ ಎನ್ನುತ್ತಾ ಬರಿದಾಗಿ ಅವರ ಬಾಯಿಗಳಿಗೆ ಆಹಾರ ವಾಗಿರುತ್ತದೆ.. ಇನ್ನುಲಿದದ್ದರಲ್ಲಿ ಒಂದು ಕವಳ ಬಡ ಸಾವಿತ್ರಜ್ಜಿಯ ಮುಡಿ ಕಂಕುಳನ್ನ ಸೇರಿರುತ್ತೆ.. ಅಜ್ಜಿ ಹೊರಾಡುವ ವೇಳೆಗೆಲ್ಲ ನಾವು ಶಾಲೆ ಮುಗಿಸಿ ಮನೆಗೆ ಬಂದಿರುತ್ತೆವೆಲ್ಲ ನಮ್ಮ ಹುಡುಗಾಟಿಕೆಗೆ ಎಷ್ಟೋ ಬಾರಿ ಆ ಅಜ್ಜಿಯ  ಬಾಯಿಂದ ಅಷ್ಟೋತ್ತರವನ್ನ ಕೇಳಿಸಿಕೊಂಡದ್ದು ಉಂಟು.. ಹಾಗೇ ಕೆಲವೊಮ್ಮೆ ಅಜ್ಜಿಗೆ ಕೊಡುತ್ತಿದ್ದ ತ್ರಾಸುಗಳು ಅಷ್ಟಿಷ್ಟಲ್ಲ.. ಅಲ್ಲವ??? 
               ಒಮ್ಮೆ ನಿನಗೆ ನೆನಪಿದೆಯ ಸಾವಿತ್ರಜ್ಜಿಯ ಬಂದಳೆಂದು ಕವಳದ ಬಟ್ಟಲು ಅಡಗಿಸಿಟ್ಟದ್ದು.. ನಂತರ ಅದು ಯಾಕೆ ಹಂಗೆ ಮಾಡಿದೆ ಎಂದು ಆ ಅಜ್ಜಿ ಕೇಳಲಾಗಿ ನಾನು ನಿಮ್ಮ ಮನೆಯ ಅಡಿಕೆ ಖರ್ಚಾಗುತ್ತದೆ ಎಂದು ಇಲ್ಲಿಗೆ ಬಂದು ಕವಳ ಹಾಕುತ್ತಿಯ  ಎಂದದ್ದು.. ಅವಳು ಅದನ್ನೇ ದೊಡ್ದದನ್ನಗಿಸಿ ಸತ್ಯವನ್ನ ಅರಗಿಸಿ ಕೊಳ್ಳಲಾಗದೆ ನನಗೆ ಹೊಡೆದದ್ದು. ನಾನು ಇನ್ನೇನು ಎಲ್ಲಾ ಮುಗಿಯಿತು ಇನ್ನೂ ಅತ್ತು ಸಂತೈಸಿ ಕೊಳ್ಳೋಣ ಎಂದಿರುವಾಗಲೇ ಆದರ್ಶವನೆಲ್ಲ ತನ್ನ ಮಗ ಮೈಗೂಡಿಸಿಕೊಂಡು ಬೆಳೆಯೇಬೇಕೆಂದು ನನ್ನ ಸಣ್ಣ ಸಣ್ಣ ತಪ್ಪಿಗೂ ಕೈ ಗೆ ಸಿಕ್ಕಿದುದ್ರಲ್ಲಿ ತನಗೆ ಸಮಾಧಾನ ಆಗುವ ತನಕ ಬಡಿದು  ನನ್ನ ಹದ ಮಾಡುತ್ತಿದ್ದ ನನ್ನ ತೀರ್ಥರೂಪನಿಗೆ ಸುದ್ದಿ ಮುಟ್ಟಿಸಿ ಅವನಿಂದ ಆ ಅಜ್ಜಿ ಹೊಡೆದ ನೋವಿನ ಮೇಲೆ ಮತ್ತೊಂದಿಷ್ಟು ತನ್ನ ದೇಣಿಗೆಯನ್ನ ಆಪ್ಪ ಕೊಟ್ಟಿದ್ದು.. ಅದನ್ನ ಕಂಡು ಕಾಣದವಳಂತೆ ಸುಮ್ಮನಿದ್ದ ನನ್ನ ಅಮ್ಮನ ಹತ್ತಿರ ನಾನು ತೋರಿಸಿದಾಗ ಆಕೆ  'ಕೊಟ್ಟು ಹಂಗಿಸಬೇಡ' ಎಂಬ ಪಾಠ ಹೇಳಿ ನನ್ನ ಸಮಾಧಾನ ಮಾಡಿದ್ದೂ ..   ನಂತರ ಆದ  ಬಸುಂದೆಗಳಿಗೆ ಅಮ್ಮ ಎಣ್ಣೆ ಹಚ್ಚುತ್ತ ಏನೇನೋ ಪುರಾಣದ ಕಥೆ ಹೇಳಿದ್ದು.. ಸೆರಗಿನಲ್ಲೆ ಕಣ್ಣು ಒರೆಸಿಕೊಂಡದ್ದು..
 ಈ ಪ್ರಸಂಗ ಆದ ನಂತರ ನಾವಿಬ್ಬರು  ಆ ಅಜ್ಜಿಯನ್ನು ಇನ್ನಷ್ಟು ದ್ವೇಷಿಸಲು ಶುರು ಮಾಡಿದ್ದೂ... ನಂತರ ನಮ್ಮದೇ ತಪ್ಪು ಎಂದು ಗೊತ್ತಾದ ಮೇಲು ಅವರು ನನಗೆ ಹೊಡೆದೇಕೆ ಹೇಳ ಬೇಕಿತ್ತು ಹಾಗೇ ಹೇಳಿದ್ದರೆ ತಿಳಿದು ಕೊಳ್ಳುತ್ತಿದ್ದೆ ಎಂದು ನಮ್ಮನ್ನೇ ಸಮರ್ಥಿಸಿಕೊಂಡದ್ದು..
ಎಲ್ಲಾ ನೆನಪಾಯಿತು...
 ಹ ಆ ಅಜ್ಜಿಯ ಬಗ್ಗೆ ನಾನು ಅಭಿಮಾನ ಹೊಂದಿರಲು ಕಾರಣ ಹಾಗೂ ಅವಳನ್ನ ನಮ್ಮೂರಿನ ಆಧುನಿಕ ಹರಿಕಾರ್ತಿ ಎನ್ನಲು ಆಕೆಯ ವೈಚಾರಿಕ ನಿಲುವನ್ನು ಆವಳ ಧ್ರುಧತೆಯನ್ನು ಕಂಡಾಗ ನಿಜಕ್ಕೂ ನನಗೆ ಆಕೆಯಲ್ಲಿ ಅಭಿಮಾನ ಮೂಡುತ್ತದೆ..  ಹಾಗೇ ಹೇಳಲು ಕಾರಣವಿದೆ.. ಅವಳು ನನಗೆ ತಿಳಿದಂತೆ.. ನಮ್ಮ ಸಮಾಜದಲ್ಲಿ ಸ್ತ್ರೀಯರಿಗೆ ಸ್ಥಾನ ಮಾನವೇ ಇಲ್ಲಾ ಎನ್ನೋ ಕಾಲದಲ್ಲಿ  ತನ್ನ ೩ ಗಂಡು ಮಕ್ಕಳನ್ನ ದೂರ ಇಟ್ಟು ತನ್ನ ಕಿರಿಯ ಮಗಳಿಗೆ ತನ್ನ ಮನೆಯ ಯಜಮಾನಿಕೆಯನ್ನ  ನೀಡಿ ಅವಳ ಜೊತೆಗೆ ಜೀವನ ನೆಡೆಸಿದವಳು.. ಅಷ್ಟೇ ಅಲ್ಲಾ ತನ್ನ ಆ ಮಗಳು ಮದುವೆಯಾಗಿ ವರ್ಷವಾಗುವ ಮುನ್ನವೇ  ಗಂಡನನ್ನು ಬಿಟ್ಟು ಬೇರೆ ಜಾತಿಯ ಕುಬೇರನನ್ನ ವಿವಾಹ ಆದಾಗ.. ಧೃತಿಗೆಡದೆ ಅದನ್ನು ಸಮಾಜ್ ಏನೇ ಅಂದರು ತಲೆಕೆಡಿಸಿಕೊಳ್ಳದೆ.. ತನ್ನ ಆ ಮಗಳಿಗೆ ಒತ್ತಾಸೆ ಆಗಿ ನಿಂತ ಮಹಾತಾಯಿ ಅವಳು.. ಆ ಮೂಲಕ ಸಂಪ್ರದಾಯವನ್ನೆಲ್ಲ ಬದಿಗೊತ್ತಿ ಜಾತ್ಯತಿತತೆಯನ್ನ ಮೆರೆದ ಆಧುನಿಕ ಹರಿಕಾರ್ತಿ ಎಂದರೆ ತಪ್ಪದಿತೇನು?? ನೀನೆ ಹೇಳು ನನ್ನ ಅಭಿಪ್ರಾಯ ಸರಿ ಇಲ್ಲವೇನು ನನ್ನ ಚಿನ್ನು????

3 comments:

  1. ಹೇಯ್ .........
    ಸಕ್ಕತ್ತಾಗಿ ಬರದ್ದೆ .. ನಂಗೆ ರಾಶಿ ಇಷ್ಟಾ ಆತು. ಕಥೆ ಬರ್ದ stlye like ಆತು. very nice yaaaaar

    ReplyDelete
  2. bembala olleyadikke iddare chennagirtu! alda? nanna tiira vayaktika abhipraaya.

    ReplyDelete
  3. yes.. madam.. Modern Means Not only good it includes bad also na??? welcome for your opinion.. Thats why she is saying by her method..

    ReplyDelete