ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Friday, October 22, 2010

ಅರೆಮಲೆನಾಡ ಹುಡುಗನ ಅರೆಬೆಂದ ಕನಸು

ಅರೆಮಲೆನಾಡ ಹುಡುಗನ ಅರೆಬೆಂದ ಕನಸು
ಓದುವ ಮುನ್ನ ಒಂದು ಮಾತು : ಇದು ಸತ್ಯ ಘಟನೆ ಆಧಾರಿತ ಕಥೆ. ಹಃ ಅದು ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. ಆದರೆ    ಈ ಕಥೆಯಲ್ಲಿ ಬರುವ ವಕೀಲರಂತ ಗೋ ಮುಖ ವ್ಯಾಘ್ರಗಳು, ಭಟ್ಟರಂತ ಪ್ರಜ್ಞಾವಂತ ಬ್ರೋಕೆರ್ ಗಳಿಂದ ವಿದ್ಯೆಗಾಗಿ ಹಪಹಪಿಸಿ ಎಡವುವ ಬಾಲಾಜಿ, ಅಶ್ವಿನ್, ಶರತರಂತೆ ಯಾರು ಬಲಿ ಆಗದೆ ಎಚ್ಚರವಹಿಸುವಂತಗಲಿ ಎಂಬುದೇ ಈ ಕಥೆ ಬರೆದವನ ಆಶಯ. ಇಂಥ ಆಧುನಿಕ ಕಾಲಗಟ್ಟದಲ್ಲೂ ಇಂತವು ನಡೆಯುವುದೇ ಎಂದು ಕೇಳಬಹುದು. ಹಲವು ಪ್ರಶ್ನೆಗಳು ಎದುರಾಗಬಹುದು.. ಅದರ ಜಿಜ್ಞಾಸೆ ನಿಮಗೆ ಬಿಟ್ಟದ್ದು..


೧ 
ನವೆಂಬರ್ ೧೪

                        ಈ ದಿನ ಬಂದಗೆಲೆಲ್ಲ ಭಾರತೀಯರಿಗೆ ನೆನಪಾಗುವುದು ಮಕ್ಕಳ ದಿನಾಚರಣೆ ಎಂಬ ಸುದಿನ ನೆಹರು ಎಂಬ ಅನಭಿಷಿಕ್ತ ದೊರೆಯ ಹುಟ್ಟಿದ ದಿನ. ಆದರೆ ಭಾರತಿಯನದರೂ ನನಗೆ ನೆನಪಾಗುವುದು ನನ್ನ ಬಾಳಿನಲ್ಲಿ ವಿಮೋಚನೆಯ ದಾರಿ ಕಾಣಿಸಿದ ಸ್ವಾತಂತ್ರ್ಯದ ಬಗ್ಗೆ ತಿಳಿಸಿದ ಅಶ್ವಿನ ಎಂಬ ಮಲೆನಾಡ ಕನಸಿನ ಹುಡುಗ ಮಾತ್ರ.. 
                  ಎಲ್ಲರಂತೆ ನಾನು ಕೂಡ ಚನ್ನಾಗಿ ಓದ ಬೇಕು ನಂತರ ಒಳ್ಳೆ ಕೆಲಸ ಹಿಡಿಯಬೇಕು ಇಷ್ಟು ದಿನ ನನ್ನ ಹೆತ್ತು ಹೊತ್ತು ಸಲಹಿದ ನನ್ನ ಅಪ್ಪ ಅಮ್ಮ ನ್ದಿರನ್ನ "ನ ಭುತೊಹ್  ನ ಭವಿಷ್ಯತಿ" ಎನ್ನುವಂತೆ ಚನ್ನಾಗಿ ನೋಡಿಕೊಳ್ಳಬೇಕು.. ಜೊತೆಗೆ ನನ್ನ ಒಡಹುಟ್ಟಿದ ಅಕ್ಕನ ಮದುವೆಯನ್ನ ಚನ್ನಾಗಿ ಮಾಡಬೇಕು.. ಅವರ ಮೊಗದಲ್ಲಿಯಾ ನಗುವನ್ನ ಕಂಡು ನಾನು ಮಗುವಾಗಬೇಕು.. ಇದೆಲ್ಲವು ನಾನು ಪಿ ಯು. ಸಿ ಓದುತ್ತಿದ್ದಾಗ ಕಂಡ ಕನಸುಗಳು.
             ಅದು  ಸುಪ್ರಿಂ ಕೋರ್ಟ್ ಲಾಯೆರ್ ಎಂಬ ಗೋಮುಖ ವ್ಯಾಘ್ರನ ಕೈ ಕೆಳಗೆ ಕೆಲಸಕ್ಕೆ ಸೇರುವ ಮೊದಲಿನದು.. ಅಲ್ಲಿ ಅವನು ನಮಗೆ ಮುಂದೆ ಓದಿಸುತ್ತೇನೆ ಎಂದು ತಮ್ಮಲ್ಲಿ ಸೇರಿಸಿಕೊಂದಾಗಳು ಆ ಕನಸಿಗೆ ರೆಕ್ಕೆ ಪುಕ್ಕ ಬಲಿತಿತ್ತು. ಆದರೆ ಅಲ್ಲಿನ ದಿನಗಳು ನನ್ನ ಕನಸಿನ ಪಕ್ಷಿಯ ರೆಕ್ಕೆಯನ್ನ ಕಡಿದು ಹಾಕಿದವು. ಅಲ್ಲಿನ ದಿನಚರಿ ಹೇಗಿತ್ತು ಎಂದರೆ ಬೆಳಗ್ಗೆ ಮುಂಜಾನೆ ಎದ್ದು ಅರಮನೆಯಸ್ಟು ದೊಡ್ಡದಾಗಿದ್ದ ಮನೆಯನ್ನ ಎರಡೆರಡು ಬಾರಿ ಗುಡಿಸಿ ಒರೆಸಬೇಕು. ಏಕೆಂದರೆ ಒಂದು ಬಾರಿ ಮಾತ್ರ ಒರೆಸುವುದು ಸತ್ತವರ ಮನೆಯಲ್ಲಿ ಮಾತ್ರವಂತೆ.. ನಮ್ಮಲ್ಲಿ ಇನ್ನೊಬ್ಬ ನಮ್ಮ ವಕೀಲರಿಗೆ ಬೆಳಗಿನ ಬಿಸಿ ಬಿಸಿ ತಿಂಡಿ ಕಾಫಿ ಮಾಡಿ ಕೊಡಬೇಕು.. ಅಷ್ಟೆಲ್ಲ ಮಾಡುವದರ ಜೊತೆಗೆ ಅವನಿಗೆ ತಿನ್ನಿಸಬೇಕು. ಅದೆಲ್ಲ ಮುಗಿಯುವ ವೇಳೆಗೆ ೧೦ ಗಂಟೆ ಆಗಿರುತ್ತದೆ, ನಂತರ ರೇಶನ್ ಅಕ್ಕಿಯಿಂದ ಮಾಡಿದ ಅನ್ನದಲ್ಲಿ ಬೆಳಗಿನ ಊಟ. ಅದರ ನಂತರ ಅವನ ಬಟ್ಟೆಗಳನ್ನೆಲ್ಲ ತೊಳೆದು ಹಾಕಬೇಕು. ಹೀಗೆ ಹತ್ತು ಹಲವು ಕೆಲಸಗಳು ಕೆಲವಷ್ಟನ್ನು ಹೇಳದಿದ್ದರೆ ಚೆನ್ನ.. ಮಧ್ಯನ್ನ ಕೂಡ ನಮಗೆಲ್ಲ ತಂಗಳು ರೇಶನ್ ಊಟ. ರಾತ್ರಿ ನಮ್ಮ ಯಜಮಾನ ಕುಡಿದು ಅಮಲೇರಿ ಮಲಗಿದ ಮೇಲೆ ಅಂದರೇ ಭೂತ ಪ್ರೇತಗಳು ಎಚ್ಚರವಾಗುವ ಸಮಯದಲ್ಲಿ ಊಟ. ನಂತರ ಯಾವುದೇ ಹುಡುಗಿ ಅಂದು ಬಾರದಿದ್ದರೆ ಹುಡುಗಿಯ ಜಾಗದಲ್ಲಿ ನಾವು ವಕೀಲನ ಜೊತೆ ಮಲಗಬೇಕು   ಅದೆಲ್ಲದರ ನಡುವೆ ಬೆಳಗ್ಗೆ ಬೇಗ ಏಳಬೇಕು. ಇಸ್ಟೆಲ್ಲಾ ಮಾಡಿ ನಾವು ಓದುವುದು ಯಾವಾಗ??? ಆದರು ನಿಮಗೆ ಆಶ್ಚರ್ಯವಾಗಬಹುದು ದಿನವಿಡೀ ಕಾಲೇಜ್ ಗೆ ಹೋಗಿ ಎಕ್ಷಮ ಬರೆದರೂ ನಾನು ಪಿ. ಯು. ಸಿನಲ್ಲಿ ೬೦% ಮಾಡುವಾಗ ಹರಸಾಹಸ ಪಟ್ಟಿದ್ದೆ. ಆದರೆ ಪುಸ್ತಕ ಎಂಬುದನ್ನೇ ಓದದೆ ಕಾಲೇಜ್ ಮೆಟ್ಟಿಲು ಎಕ್ಷಮ ಗೆ ಮಾತ್ರವೇ ಹತ್ತಿ ಪ್ರತಿಷ್ಟಿತ ವಿಶ್ವ ವಿದ್ಯನಿಲಯದಿಂದ ಕಲಾ ಪದವಿ ಪಡೆದಿದ್ದೆ ಎಲ್ಲಾ ನಮ್ಮ ವಕೀಲರ ಪ್ರಭಾವದಿಂದ.. ಆಗಲೇ ತಿಳಿದದ್ದು ಹಣವೊಂದಿದ್ದರೆ ಏನನ್ನು ಸಾಧಿಸಬಹುದು.. ಕ್ರಮೇಣ ನನ್ನ ದುಃಖ ಮರೆಯಲು ಮದಿರೆಯಾ ಸಹವಾಸ ಅನಿವಾರ್ಯವಾಯಿತು.. ಈ ರೀತಿ ಬೇರೆ ಕಡೆ ಎಲ್ಲಾದರೂ ದುಡಿದಿದ್ದಾರೆ ನಮಗೆ ನೆಮ್ಮದಿ ಆದರು ಇರುತಿತ್ತು.. ಆದರೆ ಇವನು ನಮಗೆ ೩ ಹೊತ್ತು ಊಟ ಕೊಡುತ್ತಿದ್ದ ಅಷ್ಟೇ.. ಆರೋಗ್ಯ ಹದಗೆಟ್ಟರು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ನಾನು ಇಲ್ಲಿ ಉಳಿದಿರಲು ಕಾರಣ ಒಂದೇ ಯಾವುದೇ ಸೆಕ್ಯೂರಿಟಿ ಕೆಲದೇನೆ ನನ್ನ ಅಪ್ಪನ ಆಪರೇಷನ್ ದುಡ್ಡು ಅವನೇ ಕೊಟ್ಟಿದ್ದ..
    ಇಂತಹ  ಜೀತದ ಬದುಕಿನಲ್ಲಿ ನನ್ನ ಕನಸೆಲ್ಲ  ಮರೆತೇ ಹೋಗಿದ್ದವು ಎಲ್ಲೋ ಒಮ್ಮೊಮ್ಮೆ ನೆನಪಾದರು ಅದನ್ನ ಮರೆಯಲು ನಮ್ಮ ಸಾಹುಕಾರ ತನಗಾಗಿ ನಮ್ಮಿಂದ ಹೊರಿಸಿ ತಂದಿರುತ್ತಿದ್ದ ವಿವಿಧ ಬಣ್ಣದ ಮದಿರೆಯ ಕದ್ದು ಕುಡಿದರೆ ಮರೆತೇ ಹೋಗುತ್ತಿತ್ತು.. ಆಗ ಸಿಕ್ಕವನೆ ಈ ಅಶ್ವಿನ್ ಎಂಬ ಗಾರುಡಿಗ..
           ಆವತ್ತು ಮೈಸೂರ್ ಗೆ ಅವನನ್ನು ಕರೆ ತರಲು ನಮ್ಮ ಬಾಸ್ ಸಂಗಡ ಹೋದಾಗ " ಒಳ್ಳೆ ಹಳ್ಳಿ ಗಮ್ಮಾರ ಸಿಕ್ಕಿದ ಇನ್ನೂ ನಾನು ಮಾಡುವ ಕೆಲಸವೆಲ್ಲ ಇವನ ಹತ್ತಿರವೇ ಮಾಡಿಸಿದರಾಯಿತು ಒಳ್ಳೆ ಬಕರ. ಎಂದೆಲ್ಲಾ ಮನಸಿನಲ್ಲೇ ಮಂಡಿಗೆ ಮೆಂದಿದ್ದೆ."  ನಂತರ  ನೆದೆದಿದ್ದೆಲ್ಲವನ್ನ ಸಾಧ್ಯಂತ ವಿವರಿಸುವೆ.. ಅವನನ್ನು ಬಿಡಲು ಬಂದಿದ್ದ ಬಹುಶಃ ಅವನ್ ತಂದೆ ಇರಬೇಕು ನಮ್ಮ ಯಜಮಾನನ ಹತ್ತಿರ " ಸ್ವಾಮಿ ನಮಗೆ ನಿಮ್ಮ ಭಾಷೆ ಬರಲಾರದು ಆದರು ಹೇಳುತ್ತೇನೆ.. ಇವನಿಗೆ ತುಂಬಾ ಕಲಿಯಬೇಕೆಂಬ ಚಪಲ ಆದ್ರೆ ನನ್ನ ಕೈಯಲ್ಲಿ ಅಷ್ಟೆಲ್ಲ ಓದಿಸಲಾಗದು. ನೀವು ಓದಿಸುತ್ತಿರೆಂದು ಎಂದು ನಮ್ಮ ಭಟ್ರು ಹೇಳಿದುದರಿಂದ ನಿಮ್ಮೊಂದಿಗೆ ಈ ನನ್ನ ಮಗನನ್ನ ಕಳುಹಿಸಿ ಕೊಡುತ್ತೇನೆ." ಎಂದೆಲ್ಲಾ ವಿನಿತವಾಗಿ ಕೇಳಿಕೊಂಡಾಗ ಖಂಡಿತ ಎನ್ನುವಂತೆ ಭರವಸೆ ಕೊಟ್ಟ ಈ ನಮ್ಮ ಬಾಸ್. ನನಗೆ ಮನದಲ್ಲೇ ನಗು ಈ ಪುಣ್ಯಾತ್ಮ ಈ ನಮ್ಮ ಬಾಸ್ ಒಳ್ಳೆಯದನ್ನ ಮಾಡುವ ಎಂದು ನಂಬಿರುವನಲ್ಲ ಎಂದು.
           ನಂತರ ನಡೆದಿದ್ದೆ ಬೇರೆ ಅವನು ನಮ್ಮ ಬಾಸ್ ಮನೆಗೆ ಹೆದರುತ್ತಲೇ ಬಂದ.. ನಾ ತಿಳ್ದಷ್ಟು  ದಡ್ದನೆನಗಿರಲಿಲ್ಲ.. ಆಂಗ್ಲ ದಿನಪತ್ರಿಕೆಗಳನ್ನೆಲ್ಲ ಸಲೀಸಾಗಿ ಓದುತ್ತಿದ್ದ ಒಮ್ಮೆ ನನಗೆ ಅನುಮಾನ ಬಂದು ಇದು ನಾಟಕವ ಎಂದು ಪರೀಕ್ಷಿಸ ಹೋಗಿ ಕೈ ಸುಟ್ಟು ಕೊಂಡಿದ್ದಿದೆ.. ಕೆಲವೇ ದಿನಗಳಲ್ಲಿ ನಾವು ಮಾತಾಡುವ ತಮಿಳನ್ನ ಅರ್ಥ ಮಾಡಿಕೊಂಡು ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯಿಸ ತೊಡಗಿದ. ನನ್ನ ಕೆಲಸವನ್ನು ಅವನೇ ಮೊದ ಮೊದಲು ಮಾಡುತ್ತಿದ್ದವನು. ಒಂದು ಕ್ಷಣವೂ ಸುಮ್ಮನೆ ಕೂರದೆ ನಮ್ಮ ಬಾಸ್ ನಿಂದ ಏನೇನೋ ಇಂಗ್ಲಿಷ್ ಬುಕ್ ಕೇಳಿಕೊಂಡು ಓದ ತೊಡಗಿದ.. ನಂತರ ಕಂಪ್ಯೂಟರ್ ಅನ್ನು ನಮಗೆಲ್ಲ ಕಲಿಸಿದಂತೆ ಒಂದು ದಿನ ಹೀಗೆ ಉಪಯೋಗಿಸುವುದು ಎಂದು ತೋರಿಸಿಕೊಟ್ಟರು. ದಿನವು ಅದನ್ನ ಉಪಯೋಗಿಸಿ ಏನೇನೋ ಕಲಿಯ ತೊಡಗಿದ.. ನಮಗೂ ಆಸೆ ಇದ್ದರು ನಮ್ಮ ಕೆಲಸ ಕಾರ್ಯ ಮುಗಿಸುವುದರೊಳಗಾಗಿ ಮೈ ಮನವೆಲ್ಲ ದಣಿದು ಹಿಪ್ಪೆ ಆಗಿರುತಿತ್ತು ಮಲಗಿದರೆ ಸಾಕಾಗುತ್ತಿತ್ತು ಅದು ಅಲ್ಲದೆ ನಮ್ಮ ಬಾಸ್ ಈ ಮೊದ್ಲು ನಾನು ಹೀಗೆ ಬಳಸಲು ಹೋದಾಗ ಬೈದಿದ್ದ  ನೆನಪುಗಳು.. ಆಗೆಲ್ಲ ಆ ಬೇಸರ ಮರೆಯಲು ಆಸರೆ ಎಂದರೆ ಮದಿರೆ ಮತ್ತು ಸಿಗರೆಟ್ .

                   ನಂತರ ಇದ್ದಕಿದ್ದಂತೆ ಯಾಕೋ ಏನೋ ಅವನಿಗೆ ಚನ್ನೈ ವಾತಾವರಣ ಹಿಡಿದಸದೆ ಕಳೆಗುಂದಿದ. ಆರೋಗ್ಯ ಹದಗೆಟ್ಟಿತು.. ಇದೆ ವೇಳೆ ನಮ್ಮ ಬಾಸ್ ಅವನ ಮೇಲೆ ನಮಗೆ ಹೇಳಿದಂತೆ ಎಲ್ಲಾ ರೀತಿಯ ಕೆಲಸ ಹೇಳ ತೊಡಗಿದ  ಆದರೆ ಅವನು ಅದನ್ನ ಸಾಧ್ಯವಾದಷ್ಟು  ಮಾಡುತ್ತಿದ್ದ. ಒಂದು ದಿನ ಕುಡಿತದ ಮತ್ತಿನಲ್ಲಿದ್ದ ನಮ್ಮ ಬಾಸ್ ಅಶ್ವಿನ್ ನನ್ನು ತನ್ನ ಬಳಿ ಬರಲು ಕರೆದು ತಾವು ಊಟ ಮಾಡುತ್ತಿದ್ದ ತಟ್ಟೆಯಲ್ಲಿದ್ದ ತಮ್ಮ ಎಂಜಲನ್ನು ಅವನಿಗೆ ತಿನ್ನಿಸ ಹೋದರು.. ಎಲ್ಲಿತ್ತೋ ಅವನಿಗೆ ಸಿಟ್ಟು ಅವರ ತಟ್ಟೆಯನ್ನು ಕಸಿದು ದೂರ ಬಿಸಿ ಒಗೆದ " ಏನೋ ನಿನ್ನ ಎಂಜಲು ನಾನು ತಿನ್ನ ಬೇಕಾ? ನೋಡು ನಾನು ತಿಳುವರಿಕೆ ಬಂದಾಗಲಿಂದ ನನ್ನ ಅಪ್ಪ ಅಮ್ಮನ ಎನ್ಜಳನ್ನೇ ನಾನು ತಿನ್ದವನಲ್ಲ ಅಂತದ್ರಲ್ಲಿ ನಿನ್ನ ಅಂಥ ನಂಬಿಕೆ ದ್ರೋಹಿಗಳ ಎಂಜಲು ತಿನ್ನಿತಿನ??? ನನಗೆ ಶಿಕ್ಷಣ ಕೊಡ್ಸ್ತಿನಿ ಅಂಥ ಕರಕೊಂಡು ಬಂದು ಇಲ್ಲಿ ನಿನ್ನ ಜೀತದ ಕೆಲಸ ಮಾಡಸ್ತಿಯ??? ನಿನ್ನೆ ರಾತ್ರಿ ಯಾವುದೊ ನಿನ್ನ ಸೂಳೆ ಬಂದಿಲ್ಲ ಅಂತ ನನ್ನ ಕರೆದಿದ್ದೆ ಅಲ್ವ??? ಆಗ ಕೊಟ್ಟ ಏಟು ಮರೆತು ಹೊಯ್ತ ನನ್ನ ಮಗನೆ??? ಹೌದು.... ನಿಮ್ಮ ಕಾಲದಲ್ಲಿ ಅದೇನೋ ನಿನ್ನ ಎಂಜಲನ್ನ ನಿನ್ನ ಹೆಂಡತಿನದ್ರು ತಿನ್ನೋ ಸಂಪ್ರದಾಯ ಇತ್ತಲ್ಲವ??? ಅವಳೆಲ್ಲಿ  ಹೋದಳು??? ನಿನ್ನ ಕಾಟ ತದೆಲಿಕ್ಕ ಆಗದೆ ಬೇರೆ ಮನೆ ಮಾಡಿದಳ??? ಇನ್ನೂ ವೃದ್ದಾಪ್ಯದಲ್ಲಿ ನಮ್ಮನ್ನ ನೋಡ್ಕೋ ಬೇಕಾಗಿರೋದು ನಮ್ಮ ಭಾರತೀಯ ಸಂಸ್ಕ್ರುತಿನಲ್ಲಿ ಹೆತ್ತ ಮಕ್ಕಳು ಅವರು ಕೂಡ ನಿನ್ನ ಕಾಟ ಸಹಿಸಲಿಕ್ಕಗದೆ ದೂರ ಇಟ್ಟರ??? ಇಷ್ಟಾದರೂ ಇನ್ನೂ ನಿನ್ನ ದರಿದ್ರ ಬುದ್ದಿ ಬಿಟ್ಟಿಲ್ವ??? ಏನೋ ಅಂದೇ ಕುಡದ್ರೆ ಸ್ಟೇಟಸ್ ಬರುತ್ತಾ??? ಹಾಗೇ ಕುಡಿಯೋದ್ರಿನ್ದೆಲ್ಲ ಸ್ಟೇಟಸ್ ಬರೋ ಹಂಗಿದ್ರೆ ನಮ್ಮ ದೇಶದಲ್ಲಿ ದಟ್ಟ ದರಿದ್ರತೆನ, ಬಡತನನ ಮರೆಯ್ಕೊಸ್ಕರ ಕಂಠ ಪೂರ್ತಿ ಕುಡಿದು ಹಾದಿಯಲ್ಲಿ ಬಿಳತರಲ್ವ ಅಂತ ಬೇಜವಾಬ್ದಾರಿ ನಾಲಾಯಕ ಜನರೆಲ್ಲಾ ಒಳ್ಳೆ ಹೆಸರು ಮಾಡಿ ಬಿಡತಿದ್ರು.    ಇನ್ನೊಂದು ಸಲ ಏನಾದ್ರು ನನ್ನ ತಂಟೆಗೆ ಬಂದ್ರೆ ಅಷ್ಟೇ." ಎಂದೆಲ್ಲಾ ಆರ್ಭಟಿಸಿದ.  ಅವನ ಧೈರ್ಯ ಕಂಡು ನಿಜಕ್ಕೂ ಬೆರಗಾದೆ.. ಯಾವದೋ ತಮಿಳು ಫಿಲ್ಮನಲ್ಲಿ ನೋಡಿದ ಡೈಲಾಗ್ ನಂತಿತ್ತು..ಆದರೆ ಅದನ್ನ ನಿನ್ನೆ ಮೊನ್ನೆ ಕಂಡ ಈ ಹುಡುಗನ ಬಾಯಿಯಲ್ಲಿ ಕೇಳಿದ್ದೆ .
                                 ಆ ಸನ್ನಿವೇಶದ ನಂತರ ನಮ್ಮ ಬಾಸ್ ಎಂಬ ವಕೀಲ ಕೂಡ ಒಂದು ಕ್ಷಣ ನಡುಗಿದ್ದ.. ಅದನ್ನ ಮರೆಯಲು ಮತ್ತೊಂದು ಪೆಗ್ ಹಾಕಿದ್ದ!!! ನನಗೋ ಅವನಿಗೆ ಕೆಲಸ ಹೇಳಲು ಹೆದರಿಕೆ ಆಗ ತೊಡಗಿತು.. ಅವನ ಹೇಳಿದ್ದೆಲ್ಲ ಹಲವು ಬಾರಿ  ಮೆಲಕು ಹಾಕಿದಾಗ ನಿಜಕ್ಕೂ ಅವನ ಬಗ್ಗೆ ಭಯ ಮಿಶ್ರಿತ ಅಭಿಮಾನ ಮೂಡಿತ್ತು..
                                                                                                                                                            ಮುಂದುವರೆಯುವುದು....

No comments:

Post a Comment