ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Thursday, July 19, 2012

ಮೊಬೈಲ್ ಎಂಬ ಮಾಯಾವಿ.

ನಲ್ಮೆಯ ಗೆಳತಿ,
 ತುಂಬಾ ದಿನ ಆಯ್ತು ನಿನ್ನ ಓಲೆಗೆ ಉತ್ತರಿಸಬೇಕು ಅಂತ ಅಂದು ಕೊಂಡು. ಆದ್ರೆ ಈಗ ಸಮಯ ಸಿಕ್ಕಿತು. ಹೌದು ಚನ್ನಾಗಿದ್ದಿಯ? ಮುಂಗಾರಿನ ಅಬ್ಬರ ಕಡಿಮೆಯಂತೆ ಹೌದೇನು? ಕಳೆದ ಸಲ ನಾವಿಬ್ಬರು ಒಂದೇ ಕೊಡೆ ಹಿಡಿದು ಧುಮ್ಮಿಕ್ಕುತ್ತಿದ್ದ, ಜೋಗದ ವೈಯಾರವನ್ನ ಕಣ್ಣು ತುಂಬಿ ಕೊಂಡದ್ದು ನೆನಪಿದೆಯೇನು? ನನಗಂತೂ  ಆ ದಿನಗಳು ಇನ್ನೊಮ್ಮೆ ಬರಬಾರದೆ ಅನಿಸಿದೆ.

 ಈ ಪತ್ರ ಬರೆಯಲು ತಡವಾಗಲು ಕಾರಣ ನೀನೆ ಅಂದರೇ ನಿನಗೆ ಕೋಪ ಬರುತ್ತೆ ಅಲ್ಲವ.. ಆದರೂ ನಿಜ ಏನಪ್ಪಾ ಅಂದ್ರೇ  ಮೊದಲೆಲ್ಲ.. ನಾನು ನಿನ್ನ ಕ್ಷೇಮ ವಾರ್ತೆಗಾಗಿ ೩- ೪ ದಿನ ಚಾತಕ ಪಕ್ಷಿ ಅಂತೆ ಕಾಯುತ್ತಿದ್ದೆವಲ್ಲ ತಡ ನಂತರ ಪೋಸ್ಟ್ ಮ್ಯಾನ್ ಪತ್ರ ಕೈ ಗಿದುತ್ತಿದ್ದಂತೆ ಒಂದೇ ಉಸಿರಿನಲ್ಲಿ ಅದನ್ನ ಓದಿ ಮುಗಿಸಬೇಕೆನ್ನುವ ಆ ಧಾವಂತ ಈಗೇಕೋ ಕಡಿಮೆ ಆಗಿದೆ. ಕಾರಣ ನಮ್ಮಿಬ್ಬರ ನಡುವೆ ಮೊದಲಿನ ಪ್ರೀತಿ ಕಡಿಮೆ ಆಗಿದೆ ಎಂದಲ್ಲ,  ನಮ್ಮಿಬ್ಬರಿಗೂ. ನಮ್ಮಿಬ್ಬರ ಬಗೆಗಿನ . ಕ್ಷಣ ಕ್ಷಣದ  ಮಾಹಿತಿಗಳು ಅತಿ ಶೀಘ್ರದಲ್ಲಿ ಸಿಗುತ್ತಿರುವುದು. ಅದೆಲ್ಲ ಆಗಿದ್ದು.. ಮೊಬೈಲ್ ಫೋನ್ ಎಂಬ ಮಾಯಾವಿ ಇಂದ ಅಲ್ಲವೇ. 
 ಮೊದ ಮೊದಲು ನಿನ್ನೊಟ್ಟಿಗೆ ದಿನವು ಮಾತನಾಡಲು ಆಗುತ್ತಲ್ಲ ಅಂತ ಖುಷಿ ಪಟ್ಟಿದ್ದೆ. ಆದರೆ ಈಗ ಒಂದು ಕ್ಷಣ ನಿನ್ನಿಂದ ಉತ್ತರ ಬರುವುದು ತಡವಾದರೂ ನನಗೆ ಕಾಯಲಾಗದು. ಈ ಪತ್ರ ಬರೆಯುವಾಗ ಇದ್ದ ಸಹನೆ, ತಾಳ್ಮೆ, ಹಿತವಾದ ಪ್ರೀತಿಯ ಕನವರಿಕೆ.. ಆ ಕಾಯುವಿಕೆಯಲ್ಲಿ ಸೃಷ್ಟಿ ಆಗುತ್ತಿದ್ದ ಸುಂದರ ಜಗತ್ತು. ಎಲ್ಲಾ ಈ ಮೊಬೈಲ್ ಫೋನ್ ಎಂಬ ಮಾಯಾವಿ ನುಂಗಿ ಹಾಕಿ ಬಿಟ್ಟ ಅಲ್ಲವೇ.
ಅದಕ್ಕಾಗಿ ಅವನ ಜಾತಕ ತಿಳಿಯೋಣ ಎಂದು ಒಂದಿಷ್ಟು ಮಾಹಿತಿ ಸಂಗ್ರಹಿಸಿದೆ . ಅದನ್ನ ನಿನ್ನೊಂದಿಗೆ ಹಂಚಿ ಕೊಳ್ಳುತ್ತಿರುವೆ.
ಈ ಮಾಯಾವಿಯಾ ಬಗ್ಗೆ ತಿಳಿಯ ಬೇಕೆಂದರೆ ಸ್ವಲ್ಪ ಬಿಡುವು ಮಾಡಿ ಕೊಂಡೆ ಈ ಮುಂದಿನ ಪತ್ರ ಓದಬೇಕು ನನ್ನ ಮುದ್ದು ಗೆಳತಿ. ತಿಳಿತ? ಏನೇ ಸಂಶಯ ಇದ್ದರು ನನ್ನ ಖಾಸಗಿ ನಂಬರ್ ಗೆ ಒಂದು ಮಿಸ್ ಕಾಲ್ ತಪ್ಪದೆ ಮಾಡು.
ಅದು  ಎಪ್ರಿಲ್ , ೩ ೧೯೭೩, ರ ದಿನ, ನಮ್ಮೆಲ್ಲರಿಗೂ  ಚಿರಪರಿಚಿತ ಆಗಿರುವ ಸೆಲ್ ಫೋನ್ ನಾ ತಯಾರಕ ಕಂಪನಿ "ಮೋಟೊರೋಲ" (Motorola) ದ ಕೆಲಸಗಾರ ಮಾರ್ಟಿನ್ ಕೂಪೆರ್ (Martin Cooper), ಬೆಲ್ ಲ್ಯಾಬ್ ನಾ ವಿಜ್ಞಾನಿ ಡಾ. ಜೋಎಲ್ ಏಂಜೆಲ್  (Joel Engel) ಗೆ ಫೋನ್ ಮಾಡುವ ಮೂಲಕ ತಾನು ಕಂಡು ಹಿಡಿದ ಆಧುನಿಕ ಫೋನ್ ನಾ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದ. ಅದೇ ವರ್ಷದ ಅಕ್ಟೋಬರ್  ೧೭ ರಂದು ಅಧಿಕೃತವಾಗಿ ಮೊಬೈಲ್ ಜನಕ ಎಂದು ಕರೆಯಲ್ಪಟ್ಟ.(Patent). ಇಂದಿನ ನವ ನವೀನ ಸೆಲ್ ಫೋನ್ ಗಳ ಹುಟ್ಟಿಗೆ ನಾಂದಿ ಹಾಡಿದ.ಈ ಯುಗವನ್ನ ಸೆಲ್ ಫೋನ್ ಇತಿಹಾಸದಲ್ಲಿ  ಮೊದಲ ಕಾಲಗಟ್ಟ (1 generation) ಎಂದು ಕರೆಯಲ್ಪಟ್ಟಿದೆ.

ಇದಕ್ಕೂ ಮೊದಲು ಇದರ ಪೂರ್ವ ಇತಿಹಾಸ ನೋಡುವುದಾದರೆ ೧೯೦೮ ರಲ್ಲೇ ನಾಥನ್ (Nathan Stabblefield) ನನ್ನೇ ಎಲ್ಲರು ಸೆಲ್ ಫೋನ್ ಕಂಡು ಹಿಡಿದವನು ಎಂದು ತಪ್ಪಾಗಿ ತಿಳಿದಿದ್ದರು. ಅವನು ಕಂಡು ಹಿಡಿದದ್ದು ಕೇವೆ ರೇಡಿಯೋ ಫೋನ್. ಅದನ್ನ ಆಧರಿಸಿಯೇ, ಹಾಗೂ George Sweigert ಕಂಡು ಹಿಡಿದಿದ್ದ ರೇಡಿಯೋ ಗೆಜೆಟ್ (Redio Gadget ) ಎಂಬ ಉಪಕರಣ ಬಳಸಿ ಅಂದಿನ ಮಿಲಟರಿ ಗಳಲ್ಲಿ, ದೂರವಾಣಿ ಬಳಸುತ್ತಿದ್ದರು.ಅದು ತುಂಬಾ ನಿಯಮಿತ ಕರೆಗಳನ್ನು ಮಾತ್ರ ಮಾಡಲು ಸಾಧ್ಯವಿತ್ತು. ಮಾರ್ಟಿನ್ ರ ಅನ್ವೇಷಣೆ ಇಂದಾಗಿ ಹೊಸ ತಲೆಮಾರಿನ ಸೆಲ್ ಫೋನ್ ಯುಗ ಆರಂಭವಾಯಿತು. ಈ ಅವಧಿಯಲ್ಲಿ ಕಂಪನಿಗಳು ಸೆಲ್ಲುಲಾರ್ ನೆಟ್ ವೊರ್ಕ್ಸ್ (Cellular Network)   ತಯಾರಿಕೆ ಆರಂಭಿಸಿದವು. ಆದರೂ ಈ ಕಾಲದ ಸೆಲ್ ಫೋನ್ ಗಳು ಭಾರಿ ಗಾತ್ರದ ಹಾಗೂ ತೂಕದ್ದಾಗಿದ್ದವು.

ಎರಡನೇ ತಲೆಮಾರು ( Second Generation - 2G )
ಈ ತಲೆಮಾರಿನಲ್ಲಿ  GSM, IDEN & IS-95, ನೆಟ್ ವರ್ಕ್ ಗಳು ಆರಂಭಗೊಂಡವು. ಮೊದಲಿನ ತಲೆಮಾರಿಗಿಂತ ಉತ್ತಮ ಗುಣಮಟ್ಟದ ಹಾಗೂ ಗಾತ್ರದಲ್ಲಿ ಚಿಕ್ಕದಾದ, ಸುಂದರ ಸೆಲ್ ಫೋನ್ ಗಳ ಉಗಮ ಆಯಿತು. ಈ ಅವಧಿಯಲ್ಲೇ, ಉತ್ತಮ ಸಮಯ ಹರಣದ ಸಾಧಕವಾದ ಟೆಕ್ಸ್ಟ್ ಮೆಸೇಜ್ (Text Massage) ಆಗಿದ್ದು. 2G ತಲೆಮಾರಿನಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಫಿನ್ಲ್ಯಾಂಡ್ (Finland) ನಲ್ಲಿ ೧೯೯೩ ಯಲ್ಲಿ ಮೊದಲ ಟೆಕ್ಸ್ಟ್ ಮೆಸೇಜ್ ರವಾನೆ ಮಾಡಲ್ಪಟ್ಟಿತು. ಈ ಕಾಲದಲ್ಲೇ, Ringing Tone ಗಳು ಕಂಡು ಹಿಡಿಯಲ್ಪಟ್ಟು. ಮೊಬೈಲ್ ಫೋನ್ ಎಂಬುದು ಜಗತ್ತಿನಾದ್ಯಂತ ಮನೆಮಾತಗಳು ಕಾರಣ ಆಯಿತು.

ಮೂರನೇ ತಲೆಮಾರು ( Third Generation - 3 G)

೨೦೧೧ ರಲ್ಲಿ  ಜಪಾನ್ ಮೊಟ್ಟ ಮೊದಲ ಬಾರಿಗೆ ೩ಜಿ ನೆಟ್ ವರ್ಕ್ ನಾ ಮೊಬೈಲ್ ಫೋನ್ ಗಳನ್ನ ಬಳಸಿತು. ಸೆಲ್ ಫೋನ್ ನಲ್ಲೆ ಅಂತರಜಾಲ  ಸೌಲಭ್ಯ ಲಭ್ಯವಾಯಿತು. 

ನಾಲ್ಕನೆ ತಲೆಮಾರು ( Fourth Generation- 4 G)  
೨೦೦೯ ರಿಂದ ೩ಜಿ ತಲೆಮಾರಿನ್ನು ಇನ್ನಷ್ಟು ಉತ್ತಮ ಪಡಿಸುವ ಪ್ರಯತ್ನ ಶುರುವಾಗಿದೆ ಗೆಳತಿ. ಇನ್ನೂ ಸ್ವಲ್ಪ ಕಾಲಾವಧಿಯಲ್ಲಿ ನಾವು ಈ ೪ ಜಿ ಮೊಬೈಲ್ ಗಳನ್ನೂ ನೋಡಬಹುದಾಗಿದೆ.

ಮೊಬೈಲ್ ನಾ ಸಾಧಕ ಬಾಧಕ ಏನೇ ಇರಲಿ.. ಇದೊಂದು ನಮ್ಮ ಅಧುನಿಕ ತಂತ್ರ ಜ್ಞಾನದ ಒಂದು ಅಧ್ಭುತ ಅನ್ವೇಷಣೆ ಏನ್ ಅಂತಿಯ..?

ಈ ಗಣೇಶ ಚತುರ್ಥಿಗೆ ಮನೆಗೆ ಬರುತ್ತಿರುವೆ. ನಿನ್ನ ನೋಡಬೇಕು ಎಂದು ಮನ ಹಂಬಲಿಸಿದೆ. ಯಾವದಕ್ಕೂ.. ಪತ್ರ ಮುಟ್ಟಿದ ತಕ್ಷಣ ಒಂದು ಫೋನ್ ಮಾಡು..!!!

ಇಂತಿ  ನಿನ್ನ ಹುಡುಗ.

Friday, April 6, 2012

ಪ್ರಾಯಶ್ಚಿತ್

"ನಲ್ಮೆಯ ಗೆಳೆಯ,
                           ಆರಮಿದ್ಯನೋ. ದೋಸ್ತ.. ಮನೇಲಿ ಎಲ್ಲಾ ಎಂಥ ಮಾಡ್ತಿದ್ದ. ಇದೇನಪ್ಪ ಪ್ರೀತಿಯಲ್ಲಿ ಬಿದ್ದವು ಕೂಡ.. ಪ್ರೇಮ ಪತ್ರ  ಬರೆಯ ಕಾಲ ಅಲ್ಲದೆ ಇರೋ ಈ ಕಾಲದಲ್ಲಿ ನಿನಗೆ ಎಂತಕೆ ಈ ಪತ್ರ ಬರಿತಿದ್ದಿ ಅಂತ ಹೇಳಿ ಆಶ್ಚರ್ಯ ಆಗ್ತಿದ್ದ!!! ಆ ನಿನ್ನ ಕೌತುಕ ಕೆಲವೇ ಕ್ಷಣದಲ್ಲಿ ಮರೆಯಾಗುತು. ಆದರೆ ಈ ನನ್ನ ಪತ್ರನಾ ಪೂರ್ತಿ ಓದು ಪ್ಲೀಸ್. ಏನೇ ಹೇಳು ದೋಸ್ತ ಬರವಣಿಗೆಯಲ್ಲಿ ನಾವು ಮಗುವಿನಂತೆ ನಮ್ಮ ಭಾವನೆಯನ್ನ ವ್ಯಕ್ತ ಪಡಿಸಲಾಗ್ತು ಯಾಕಂದ್ರೆ ನಮಗೆ ಓದುವವರ ಭಾವನೆಗಳು ನಾವು ಏನು ಹೇಳವು ಹೇಳಿ ಮಾಡಿದ್ವೋ ಅದನ್ನ ಹೇಳಲೇ ಅಡ್ಡಿ ಆಗ್ತಿಲ್ಲೆ.. ಅಲ್ಲದ.
                ನನ್ನ ನೋವನ್ನ ನಿನ್ನ ಹತ್ರ ಹೇಳಿ ಕೊಳ್ಳವು ಹೇಳಿ ಈ ಪತ್ರ ಬರಿತಿದ್ದಿ, " ಸುದೀ, ನಿನ್ನ ತಂಗಿ ನಾ ನಾನು ತುಂಬಾ ಇಷ್ಟ ಪಡ್ತಿದ್ದಿ ಕಣೋ, ಅವಳಿಗೂ ನಾನು ಅಂದ್ರೇ ತುಂಬಾ ಇಷ್ಟ, ನಂಗವು ನಿನ್ನ ಮತ್ತೆ ನಿನ್ನ ಅಪ್ಪ ಅಮ್ಮನ, ಒಪ್ಪಿಗೆ ಸಿಕ್ಕದರೆ ಮದ್ವೆ ಆಗವು ಮಾಡಿದ್ಯ.. ಏನ್ ಹೇಳ್ತೆ?" ಅಂತ ನೀನು ಕೇಳಿದ್ದು, ಅದಕ್ಕೆ "ವಿಶು, ಖಂಡಿತ ಈ ವಿಷ್ಯ ನನ್ನ ಅಪ್ಪ ಅಮ್ಮನ ಹತ್ರ ಮಾತಾಡ್ತಿ' ಅಂತ ನಿನಗೆ ಹೇಳಿದಿದ್ದಿ. ಆಗ ನೀನು ತುಂಬಾ ಖುಶಿನು ಪಟ್ಟಿದಿದ್ದೆ.  ನಂತರ ಯೋಚನೆ ಮಾಡದಿ ನನ್ನ ಮುದ್ದಿನ ತಂಗಿನ ನಿನಗೆ ಎಂತಕೆ ಕೊಡವು? ಅದು ನೀನು  ಜಮೀನು ನೋಡ್ಕಂಡು ಮನೆ ಬದಿಗೆ ಇದ್ದವ.

ಈಗಂತೂ ಜಮೀನು ನೋಡ್ಕಂಡು ಮನೆ ಬದಿಗೆ ಇರದು ಅಂದ್ರೇ ಅದರಂತ ದರಿದ್ರ ಮತ್ತೊಂದಿಲ್ಲೇ.. ಸಮಯಕ್ಕೆ ಸರಿಯಾಗಿ ಕೆಲ್ಸದವು ಸಿಗ್ತಿವಿಲ್ಲೇ. ಎಲ್ಲಾ ಕೆಲ್ಸನು ನಾವೇ ಮಾಡ್ಕ್ಯಳವು,  ಕೆಲ್ಸದವು ಸಿಕ್ಕದ್ರು ಅವು ಕೇಳದಷ್ಟು ಕೊಟ್ಟು ಕೆಲಸ ಮಾದಿಸ್ಕ್ಯಳವು . ನಮ್ಮಲ್ಲಿ ಹಳ್ಳಿ ರಾಜಕೀಯ ಹೇಳದು ನಾವು ಅಕ್ಕ ಪಕ್ಕದವರ ಹತ್ರ ಸರಿಯಾಗಿ ಇರದೇ ಕಷ್ಟ. ಇನ್ನೂ ಸರಿ ಇದ್ದಾರುನು  ಅಕ್ಕ ಪಕ್ಕದವು ನಮ್ಮ ಸಹಾಯಕ್ಕೆ ಬತ್ತವನ ಹೇಳೋ ಹಂಗು ಇಲ್ಲೇ.. ಯಾಕಂದ್ರೆ ಅಕ್ಕ ಪಕ್ಕದಲ್ಲಿ ಇರೋ ಮನೆ ಎಲ್ಲಾ ವಯೋ ವೃದ್ಧರೆ ಇರ್ತ್ವೆ ಹೊರತು ನಮ್ಮ ಅಂತ ಯುವಕರು ಯಾರು ಸಿಗ್ತ್ವಿಲ್ಲೇ, ಸಿಕ್ಕದ್ರು ಅವು ಓದ್ತಾ ಇರ್ತ.. ಅವಕೆ ಜಮೀನು ಕೆಲಸಕ್ಕೆ ಬಾರಲೇ ಹೇಳಲೇ ಮನಸು ಬತ್ತಿಲ್ಲೆ. ಇಂಥ ಸ್ಥಿತಿ ಕಂಡೆ ಅಲ್ಲದ ನಾನು ಬೆಂಗಳೂರಿಗೆ ಬಂದು ಕೆಲಸ ಮಾಡ್ತಿದ್ದದ್ದು !!! ನನ್ನ ತಂಗಿಗೆ ಇಂಥ ಕಷ್ಟದ ಜೀವನ ಬೇಡವೇ ಬೇಡ . ನನ್ನ ತಂಗಿ ತುಂಬಾ ಓದದೆ ಇದ್ದಿಕ್ಕು ಆದರೆ ಇವತ್ತಲ್ಲ ನಾಳೆ ಅವಳಿಗೆ ದೊಡ್ಡ ನೌಕರಿಯಲ್ಲಿ ಇರೋ ಅಂದ್ರೇ ಸಾಫ್ಟ್ವೇರ್ ಇಂಜಿನಿಯರ್ ಅಂತವರನ್ನ ಯಾರಗಾದ್ರು ಕೊಟ್ಟು ಮದ್ವೆ ಮಾಡವು ಹೇಳಿ ನಿರ್ಧಾರ ಮಾಡಿ ಅದನ್ನೇ ಅಪ್ಪನ ಮನದಲ್ಲಿ ತುರುಕಿ.. ನನ್ನ ಅಪ್ಪನಾ ಮೂಲಕ ಹೇಳಸಿ, ನೀನು ನನ್ನ ತಂಗಿನ ಮದ್ವೆ ಆಗದೆ ಹೋದಂಗೆ ಮಾಡದಿ. ಅವಳಿಗೆ ಬೇರೆ ಕಡೆ ಒಳ್ಳೆ ಹುಡುಗನ್ನ ನೋಡಿ ಮದ್ವೇನು ಮಾಡದ್ಯ. ಹುಡುಗ ಒಳ್ಳೆ ಕೆಲಸದಲ್ಲೂ ಇದ್ದಿದ್ದ.. ಆದರೆ ನಷಿಬ ನೋಡು, ಅವಳು ಚನ್ನಗಿರವು ಹೇಳಿ ನಾನು ಹಂಗೆ ಮಾಡದಿ ಆದರೆ ಅವಳಿಗೆ ಆ ಯೋಗ ಇತ್ತಿಲ್ಲೇ.. ಮದ್ವೆ ಆಗಿ ವರುಷ ಕಳೆಯೋ ಒಟ್ಟಿಗೆ ಚನ್ನಗಿದ್ದ ಅವಳ ಸಂಸಾರಕ್ಕೆ ಯಾರ್ ಕಣ್ಣು ಬಿತ್ತೋ ಗೊತ್ತಿಲ್ಲೆ, ಅವರಿಬ್ಬರೂ ಕಾರಲ್ಲಿ ಹೋಗ್ತಿರಕ್ಕದ್ರೆ ಆಕ್ಸಿಡೆಂಟ್ ಆಗಿ, ನನ್ನ ಒಬ್ಬಳೇ ಮುದ್ದಿನ ತಂಗಿ ಎರಡು ಕಾಲು ಕಳಕಂಡು ಜೀವಂತ್ ಶವ ಆಗೋತು.

ಇತ್ತಲಾಗೆ ನಮ್ಮ ಮನೆಳು ಅಮ್ಮ ಸತ್ತು ಹೋದ ಮೇಲೆ ನಾನು ಊರಿಗೆ ಬಂದು ಜಮೀನು ನೋಡ್ಕಂಡು ಇರದು ಅನಿವಾರ್ಯ ಆಗೋತು, ಯಾಕಂದ್ರೆ ಅಪ್ಪನ ಹತ್ರ ಇಲ್ಲೇ ನಾ ಇರುವಲ್ಲೇ ಬಾ ಅಂದ್ರೇ, ನನ್ನವಳು ಇದ್ದ ಮನೆ ಬಿಟ್ಟು ಬರಲೇ ಆಗ್ತಿಲ್ಲೆ.. ನೀನೆ ಬೇಕಾದ್ರೆ ಬಾ ಅಂದ.. " ಎಲ್ಲಾ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಹೇಳಿ"  ಮತ್ತೆ ಮನೆಗೆ ಬಂದು ಜಮೀನು ನೋಡಲೇ ಹನಕದಿ. ಕಾಲ ಎಷ್ಟ್ ಬೇಗ ಬದಲಾಗ್ತು ಅಲ್ಲದ ದೋಸ್ತ? ಆವತ್ತು ನಾನು ನಿನಗೆ ಅಹಂಕಾರದಲ್ಲಿ ಮಾಡಿದ ಅನ್ಯಾಯಕ್ಕೆ  ಆ ವಿಧಿ ನನಗೆ ಶಿಕ್ಷೆ ಕೊಟ್ಟೆ ಬಿಟ್ಟಚು. ನನಗು ಮದ್ವೆ ಆಗ ಅನಿವಾರ್ಯತೆ ಬಂತು.. ಆದ್ರೆ ನಾನು ಇವಾಗ ಜಮೀನು ನೋಡ್ಕಂಡು ಮನೆಲಿರವಾಗಿದ್ದಕ್ಕೆ ಯಾರು ಹೆಣ್ಣು ಕೊಡವು ಇಲ್ಲೇ ನಮ್ಮ ಜಾತಿಲಿ. ಎಲ್ಲಾ ನಾನು ಯೋಚನೆ ಮಾಡದಂಗೆ, ಮಾಡದ.. ಅನ್ನಿಸ್ತು. ಅಂತು ಯಾವದೋ ಅನಾಥ ಹುಡುಗಿನ ಮದ್ವೆ ಆದಿ ಅವಳಿಗೆ ನಮ್ಮ ಜಾತಿ ಸಂಸ್ಕಾರ ಒಂದು ಚೂರು ಇಲ್ಲೇ.. ಅಂತ ಹೇಳಲೇ ನನಗೆ ಸುಮಾರಾಗ್ತು.. ನಿನಗೆ ನಾನು ಅನ್ಯಾಯ ಮಾಡದಿ. ಆದ್ರೆ ನಿನಗೆ ಒಳ್ಳೇದೆ ಆತು.. ನಮ್ಮ ಜಾತಿ ಕೂಸೇ ಸಿಕ್ಕಚು. ನೀನು ಒಳ್ಳೆ ರೀತಿ ಇಂದಾನೆ ಇದ್ದೆ.  ಆದರೆ ನನ್ನ ಸ್ಥಿತಿ ನೋಡು, ನನಗೆ ನನ್ನವಳ ಕರ್ಕಂಡು ನಮ್ಮ ನೆಂಟರು - ಇಷ್ಟರ ಮನೆಗೆ ಹೋಗಲೇ ನಾಚಿಕೆ. ನಿನ್ನ ಅಂತ ಗೆಳೆಯರ ಎದುರು ತಲೆ ಎತ್ತಿ ನಿಲ್ಲೋ ಅರ್ಹತೆನೇ ಕಳಕಂಡಿಗಿಡಿ, ದೋಸ್ತ.. ನನ್ನ ತಪ್ಪಿಗೆ ಸರಿಯಾದ ಪ್ರಾಯಶ್ಚಿತ ಆಗೋತು.. ಈ ನನ್ನ ನೋವನ್ನ ಯಾರಿಗೂ ಹೆಲ್ಕಳಲೇ ಆಗ್ತಾ ಇಲ್ಲೇ.. ನನ್ನ ಒಳಗೆ ನನ್ನ ಬಗ್ಗೆನೇ ದ್ವೇಷ ಹುಟ್ತತ, ಇದ್ದು ನನ್ನ ತಂಗಿಯ ನಿನಗಾದ್ರು ಕೊಟ್ಟು ಮದ್ವೆ ಮಾಡಿದ್ದರೆ ಇವಾಗ ಅವಳನ್ನ ನೋಡವು ಅನ್ನಿಸದಾಗ ನಿಮ್ಮ ಮನೆಗೆ ಬಂದು ನೋಡಲಾದ್ರು ಆಗ್ತಿತ್ತು.. ಆದ್ರೆ ಅವಳಿದ್ದ ಪರದೇಶದಲ್ಲಿ.. ಅಲ್ಲಿಗೆ ಹೋಗೋ ಹಂಗು ಇಲ್ಲೇ.. ಇಲ್ಲಿ ನನ್ನ ದುಃಖ ಯಾರತ್ರ ಹೆಲ್ಕಲವು ತಿಳಿತ ಇಲ್ಲೇ.. ಅದಕ್ಕಾಗಿ ವಿಧಿ ಇಲ್ಲದೆ ನಿನಗೆ ಪತ್ರ ಬರದಿ.. ಬಹುಷ ಇದು ನನ್ನ ಕೊನೆಯ ಪತ್ರ.. ಈ ನಿನ್ನ ಗೆಳೆಯನನ್ನ ಕ್ಷಮಿಸು,
ಇಂತಿ ನಿನ್ನ ಸುಧಿ
ಇದನ್ನ ಓಡಿ ಮುಗ್ಸಿ ಏನೋ ಎಡವಟ್ಟು ಆಜು ಅಂದ್ಕಂಡು ಅವರ ಮನೆಗೆ ಫೋನ್ ಮಾಡದರೆ, ಅವ ಇವತ್ತು ಬೆಳಗ್ಗೆ ಆತ್ಮಹತ್ಯೆ ಮಾದ್ಕಂಜ ಹೇಳಿ ಆ ಕಡೆ ಇಂದ ಸುದ್ದಿ ಬಂತು..
ಅವನ ಅಂತಿಮ ದರ್ಶನಕ್ಕೆ   ಹೋಗವು ಇನ್ನೂ.. ಆದರೂ ಅವನನ್ನ ನನ್ನ ಗೆಳೆಯ ಹೇಳಕಲೆ ನನಗೆ ನಾಚಿಕೆ  ಆಗ್ತಾ ಇದ್ದು. ಅವ ನನಗೆ ಮೋಸ ಮಾಡದ ಅಂತ ಖಂಡಿತ ಅಲ್ಲಾ. ಜೀವನದ ಸವಾಲಿಗೆ ಉತ್ತರಿಸಲು ಹೆದರಿ ಹೇಡಿ ಹಂಗೆ ಆತ್ಮಹತ್ಯೆ ಮಾಡ್ಕಂಡ ಹೇಳಿ. ನಿಜಕ್ಕೂ ಅವನು ಹೇಡಿ ಅನ್ನಿಸ್ತ ಇದ್ದು? ಆದರೆ ಅವನು ಮಾಡಿದ ತಪ್ಪ? ಸರಿ ನಾ ?