ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Wednesday, November 3, 2010

ಇಬ್ಬಂದಿತನ

                             ಬಾಲ್ಯದಲ್ಲಿ ಪಕ್ಕದ ಮನೆಗೆ ಸಿಟಿಯಿಂದ ರಜಾ ಸಮಯದಲ್ಲಿ ಅವರ ನೆಂಟರು ಬಂದರು ಎಂದರೆ ಅವರನ್ನ ಕೌತುಕದಿಂದ ನೋಡುತ್ತಿದ್ದ.. ಅವರ ಮಾತನಾಡುವ ದಾಟಿ, ಅವರ ವಿಚಾರಧಾರೆಗಲೆಲ್ಲ ತುಂಬಾ ವಿಭಿನ್ನ ಅನ್ನಿಸುತಿತ್ತು. ಆದರೆ ಆವನ ವಯಸ್ಸಿನ ಮಕ್ಕಳು  ಮೈ ತುಂಬಾ ಬಟ್ಟೆ ಹಾಕಿಕೊಳ್ಳದೆ ಇದ್ದುದನ್ನ ನೋಡಿ ಮನಸಿನ್ನಲ್ಲೇ ಮರುಕ ಪಟ್ಟಿದ್ದ. ಒಮ್ಮೆ ಹೀಗೆ ಪಕ್ಕದ ಮನೆಗೆ ಬಂದ ಇವನ ವಯಸ್ಸಿನ ಮಗುವಿನ ಹತ್ತಿರ ಕೇಳಿಯೇ ಬಿಟ್ಟಿದ್ದ.. ಇದೆಂತ ಡ್ರೆಸ್ ನಿನ್ನದು ಮೈ ಎಲ್ಲಾ ಕಾಣುತ್ತಿದೆ?? ಅಂತ. ಅದಕ್ಕೆ ಆ ಹುಡುಗಿ ಹೇಳಿದ್ದಳು ಅಯ್ಯೋ ಇದು ಫಾಶಿಒನ್ ಡ್ರೆಸ್  ಕಣೋ ತರುಣ್ ಎಂದು. ಹೌದಾ ನಮ್ಮಮ್ಮ ಮತ್ತೆ ನಮ್ಮ ಮನೆನಲ್ಲಿ ಮೈ ಕಾಣುವಂತ ಬಟ್ಟೆ ಹಾಕಿಕೊಂಡರೆ ಏನು ಮೈ ತುಂಬಾ ಬಟ್ಟೆ ಹಾಕಿಕೊಲ್ಲೋಕೆ ಆಗದೆ ಇರೋಷ್ಟು ದಾರಿದ್ರ್ಯ ಬಂತೇನೋ ನಮಗೆ ಅಂಥ ಬೈಒದನ್ನ ನೆನಪಿಸಿಕೊಂಡು ತರುಣ್ ಸುಮ್ಮನಾಗಿದ್ದ. ಆಗೆಲ್ಲ ಅಂತವರನ್ನ ಕಂಡಾಗ ಕನಿಕರ ಹುಟ್ಟುತಿತ್ತು. ನಂತರ ಬೆಳೆದು ದೊಡ್ದವನಗುತ್ತ ಹೋದಂತೆ ಅವಳು ಹೇಳಿದ್ದೆ ಸರಿ ಇದು ಈಗಿನವರ ಫಾಶಿಒನ್ ಎಂದು ತಿಳಿದಿತ್ತು. ಅಂತ ಜೀವನ ತನಗೆ ಬೇಡವೇ ಬೇಡ ಎಂದು ಮನದಲ್ಲೇ ನಿರ್ಧರಿಸಿ ಬಿಟ್ಟಿದ್ದ. ಆದರೆ ಏನು ಎಲ್ಲಾ ಇವನ ವಯಸ್ಸಿನವರು ಶಾಲಾ- ಕಾಲೇಜು ಮೆಟ್ಟಿಲು ಹತ್ತುವಾಗ ತಾನು ಏನು ಮಾಡಬೇಕೆಂದು ಸರಿಯಾದ ಮಾರ್ಗದರ್ಶಕರಿಲ್ಲದೆ.. ಕುರಿಯಂತೆ ತಾನು ಹಿಂಬಾಲಿಸಿದ್ದ. ಕ್ರಮೇಣ ಅದರಲ್ಲೇ ಹಿಡಿತ ಸಾಧಿಸಿ ಎಲ್ಲರಿಂದಲೂ ಗುರುತಿಸಿಕೊಳ್ಳುವನ್ತವನಾಗಿದ್ದ. ಹೀಗೆ ಪದವಿಯನ್ನು ಮುಗಿಸಿದ ಹುಡುಗ.. ತನ್ನ ಗೆಳೆಯರೆಲ್ಲ ಮುಂದೆ ಓದಲು ನಡೆದರೆ.. ಇವನಿಗೆ ಮುಂದೆ ಓದಿಸಿ ಅನ್ನಲು ಮನೆಯಲ್ಲಿಯ ಸ್ಥಿತಿ ತಿಳಿದು ಬಾಯಿ ಬರದೆ ಬೆಂಗಳೂರು ಎಂಬ ಮಾಯಾನಗರಿಗೆ ಮನೆಯವರೆಲ್ಲ ಕಳುಹಿಸಿಕೊಟ್ಟ ಮೇಲೆ ಬಂದಿದ್ದ. ಬರುವಾಗ ನೂರಾರು ಕನಸು ಅವನ ಜೊತೆಗಿತ್ತು.. ಹೇಗಾದರೂ ಮಾಡಿ ಸ್ವಲ್ಪ್  ದುಡ್ಡು ಮಾಡಿಕೊಂಡು ಬೇಗನೆ  ಊರಿಗೆ ವಾಪಸಾಗಬೇಕು. ಅಲ್ಲೇ ಏನಾದರು ಬಿಸಿನೆಸ್ ಮಾಡಬೇಕು.. ಒಟ್ಟಿನಲ್ಲಿ ಅಪ್ಪ ಅಮ್ಮನ   ಕೊನೆ ತನಕ ಚನ್ನಾಗಿ ನೋಡಿ ಕೊಳ್ಳಬೇಕು..  ಆದರೆ  ಈಗ ಏನು ಮಾಡಬೇಕೆಂದೇ ತಿಳಿಯದೆ ಚಿಕ್ಕದಾಗಿದ್ದ ರೂಮ್ನಲ್ಲಿ ಬೆಡ್ ಮೇಲೆ ಮಲಗಿ ಯೋಚಿಸುತ್ತಿದ್ದಾನೆ ತರುಣ್.      
                          ಈಗೊಂದು ಪುಟ್ಟ ಕೆಲಸ ಸಿಕ್ಕಿದೆ ಆದರೆ ಊರಲ್ಲಿ ಇದ್ದಾಗಿನ ಗೆಲುವು ಮಾಯವಾಗಿದೆ. ಹೌದು ಮುಂದೊಂದು ದಿನ ಉತ್ತಮವಾದ ಕೆಲಸ ಸಿಕ್ಕೆ ಸಿಗುವುದೆಂಬ ನಂಬಿಕೆ ನಮ್ಮ ತರುಣನಿಗೆ ಇದೆ. ಯಾಕೆಂದರೆ ಅವನು ಊರಲ್ಲಿ ಬುದ್ಧಿವಂತ ಅಂತ ಹೆಸರು ಮಾಡಿದ್ದವನು.. ಎಲ್ಲಾ ತರಗತಿಯನ್ನು ರಾಂಕ್ ಪಡೆಯದಿದ್ದರೂ ಪ್ರಥಮ ದರ್ಜೆ ಯಲ್ಲಿಯೇ ಪಾಸಾಗಿ ಬಂದವನು. ಆದರೆ ಅವನಿಗೆ ತಾನು ಏನು ಅಲ್ಲಾ ಅನ್ನೋದು ಈ ಮಾಯಾನಗರಿಗೆ ಬಂದಾಗಲೇ ಅರಿವಾದದ್ದು. ಯಾಕೆಂದರೆ ಕನ್ನಡ ಮಾದ್ಯಮದಲ್ಲಿ ಓದಿದ ಈ ಹುಡುಗನಿಗೆ, ಕನ್ನಡ ರಾಜಧಾನಿಯಲ್ಲಿ ಕನ್ನಡ ಬಂದವರು ಮಾತನಾಡಲು ಇಂಗ್ಲಿಶ್ ಅನ್ನೇ ಅವಲಂಬಿಸಿ,  ತಾವು ಪರಕೀಯರು ಎಂದು ತೋರಿಸಿ ಕೊಳ್ಳುವುದರಲ್ಲೇ ತಮ್ಮ ಜಾಣತನ ಆಡಗಿದೆ ಎಂದು ತೋರಿಸಿಕೊಟ್ಟಿದ್ದಾರೆ.  ಬೆಂಗಳೂರು ಎಂಬ ಚೆಲುವೆ ಅದೆಷ್ಟು ಜನರಿಗೆ ಆಶ್ರಯ ನೀಡಿದೆಯೋ ಯಾರಿಗೆ ಗೊತ್ತು. ನಮ್ಮ ತರುಣ ವಯಸ್ಸಿನ ತರುಣನಿಗೆ ಇಲ್ಲಿ ಆಶ್ರಯ ಸಿಗಲಾರದು ಎಂಬ ಚಿಂತೆ ಅಲ್ಲಾ.. ಈ ಬೆಂಗಳೂರು ಎಂಬ ಮಾಯಾನಗರಿಗೆ ಬಂದ ಹೊಸತರಲ್ಲಿ  ಎಲ್ಲರಿಗೂ ಕಾಡಿರಬಹುದಾದ ಚಿಂತೆ ಇದಾಗಿರಬಹುದು. ಕನಸು ಕಾಣುವ ವಯಸ್ಸಿನಲ್ಲಿ ಚಿಂತೆ ಆವರಿಸಿ ಇಬ್ಬಂದಿತನಕ್ಕೆ ಕಾರಣವಿದೆ..
                               ಈ ನಗರದಲ್ಲಿ   ಅವನು ಹಳೆಯ ತಲೆಮಾರಿನ ಜನರಿಂದ ಹಿಡಿದು.. ಇವನ ವಯೋಮಾನದ ಎಲ್ಲಾ ಜನರ ಮುಖವನ್ನ ನೋಡಿದ್ದಾನೆ.. ಯಾರಲ್ಲೂ ಹಳ್ಳಿಯ ಜನರಲ್ಲಿ ಕಾಣ ಬಹುದಾದ ಸಹಜ ಮಂದಹಾಸ ಕಂಡಿಲ್ಲ.. ಸದಾ ಏನೋ ಕಳೆದು ಕೊಂಡವರಂತೆ  ಕಾಣುವ ಮುಖಗಳು.. ದುಡ್ಡು ಮಾಡುವ ಏಕೈಕ ಉದ್ದೇಶದಿಂದಲೇ ತಾವು ಬದುಕಿದ್ದೇವೆ ಎಂಬಂತೆ ಕಾಣುವ ಜನರಿವರು.. ಅವರಂತೆಯೇ ತಾನು.. ಛೆ ಇದೊಂದು ಜೀವನವೇನು.. ಹಳ್ಳಿಯ ಜನರಿಗೆ ಆಸೆಗಳು ಎಷ್ಟೇ ಇದ್ದರು, ತಾವು ಬೆಳೆದ ಪೈರಿಗೆ ಸಮರ್ಪಕವಾದ ಬೆಲೆ ಎಂದು ದೊರೆಯದಿದ್ದರು. . ಆ ನೋವನ್ನು ನುಂಗಿ ತಾವು ಮಾಡುವ ಕೆಲಸದಲ್ಲಿ ನಿಷ್ಠೆಯಿಂದ ದುಡಿದು.. ಆತ್ಮ ತೃಪ್ತಿಯನ್ನ ಕಾಣುತ್ತ ನಗುತ್ತಾರೆ.. ಅಂತ ನಗು ತಿಂಗಳ ತಿಂಗಳ ನಿಯಮಿತವಾಗಿ ಸಂಬಾವನೆ ಪಡೆಯುವ ಈ ನಗರದ ಜನರಲ್ಲಿ ಕಾಣಲು ಸಾಧ್ಯವೇನು??? ಯಾವಾಗಲೂ ತೀರದ ಬಯಕೆಯಲ್ಲೇ ಜೀವನ ಸಾಗಿಸುವ ಈ ಬದುಕೇಕೆ ಅನ್ನಿಸುತ್ತಿದೆ.  ಮೊದ ಮೊದಲು ಒಂದು ಕೆಲಸ ಸಿಕ್ಕರೆ ಸಾಕು ಎಂಬ ಚಡಪಡಿಕೆ, ನಂತರ ಒಂದು ಓಡಾಟಕ್ಕೆ ಬೈಕ್ ಆದರು ಹೊಂದುವ ಬಯಕೆ. ಇವುಗಳ ನಡುವೆ ಮದುವೆಯ ಹಂಬಲ. ಅದು ಮುಗಿಯಿತು  ನಂತರ ಸ್ವಲ್ಪ ಮೇಲ್ದರ್ಜೆಗೆ ಹೋದನೆಂದರೆ ಒಂದು ಕಾರನ್ನಾದರೂ ಹೊಂದಬೇಕೆಂಬ ಬಯಕೆ. ಅದು ಮುಗಿದ ಮೇಲೆ  ಒಂದು ಸಣ್ಣ ಸೈಟ್ ಮಾಡಿ ಒಂದು ಪುಟ್ಟ ಮನೆಯನ್ನೇಕೆ ಕಟ್ಟಿಸಬಾರದು ತಾನು ಎಂಬ ಹಂಬಲಿಕೆ. ಅದು ಮುಗಿದ ಮೇಲೆ ಮತ್ತೊಂದು..ಇಷ್ಟಕ್ಕೆ ಜನ್ಮವೆಲ್ಲ ಮುಗಿಯುತ್ತ ಬಂದಿರುತ್ತೆ. ಇಷ್ಟಾದರೂ ಬಾಲ್ಯದಲ್ಲಿ ಕಾಣುತಿದ್ದ ಮಂದಹಾಸ ಆ ಮೊಗದಲ್ಲಿ ಕಾಣುವುದೇ ಇಲ್ಲಾ.. ಮತ್ತೇನೋ ಚಿಂತೆ.. ಬಹುಷ ತನ್ನ ಹೆತ್ತುರನ್ನ ಮರೆತೆನಲ್ಲ ಎಂಬುದಿರಬೇಕು.. ಈ ತರಹದ ಜೀವನ ಬೇಕೇನು??
                                   ಹೀಗೆ ಬದುಕ ಸವೆಸಿದರೆ ತಾನು ಕಂಡ ಕನಸು ನನಸಾಗುವುದಾದರು ಯಾವಾಗ ?? ಎಂಬುದೇ ತರುಣನ ಚಿಂತೆ. ಹಾಗೊಂದು ವೇಳೆ ಕೃಷಿ ಮಾಡಿಕೊಂಡೆ ಜೀವನ ನಡೆಸೋಣ ಅದರಿಂದ ನಾಲ್ಕಾರು ಜನರಿಗೆ ಕೆಲಸ ನೀಡುವಂತವನಗುತ್ತೇನೆ. ಆದರೆ   ಕೃಷಿ ಮಾಡಿಕೊಂಡು ಜೀವನ ನಡೆಸುವಷ್ಟು  ಜಮೀನು ಆತನ ತಂದೆಯ ಹತ್ತಿರವಿಲ್ಲ.. ಅದು ಅಲ್ಲದೆ   ಹುಟ್ಟ ಒಳ್ಳೆಯ ಓದುಗ ಎಂಬ ಖ್ಯಾತಿ ಬೇರೆ ಅಂತವನು ಮನೆಯ ಬದಿಯಲ್ಲೇ ಉಳಿದರೆ ಜನ ಏನೆಂದಾರು ??
               ಅವನು ಒಮ್ಮೊಮ್ಮೆ ಯೋಚಿಸುವುದುಂಟು ಯಾಕೆ ಕೃಷಿಕರಿಗಾಗಿ ಕೊಡ ಮಾಡುವ ಸಾಲದಲ್ಲಿ ಜಮೀನನ್ನು ಪಡೆದು, ಬೇಸಾಯ ಶುರುಮಾಡಬಾರದು. ಒಂದು ವೇಳೆ ಅದರಲ್ಲಿ ಸೋತೆ ಎಂದಾದರೆ.. ನಮ್ಮೂರಿನ ಜನ ಖಂಡಿತ ನಕ್ಕಾರು ಎಂಬ ಭಯ. ಕೃಷಿಕ ಕುಟುಂಬದಲ್ಲೇ ಜನಿಸಿದರು ಯಾವತ್ತು ತನ್ನ ಅಪ್ಪ ಅಮ್ಮನಂತೆ ಮೈ ಬಗ್ಗಿಸಿ ದುಡಿದವನಲ್ಲ.. ಕೆಲಸಕ್ಕೆ ಬಂದವರೋಟ್ಟಿಗೆ ಅಪ್ಪನೊಂದಿಗೆ ಹೊಗುತ್ತಿದ್ದನಾದರೂ ಅವರಂತೆ ಮೈ ಬಗ್ಗಿಸಿ, ಬೆವರು ಸುರಿಸಿ ದುಡಿದವನಲ್ಲ.. ಆದರೆ ಈಗ್ಯಾಕೋ ಅದೇ ಜೀವನ ನೆಮ್ಮದಿ ಅನ್ನಿಸುತ್ತಿದೆ.. ಆದರೆ ಪ್ರತಿ ವರ್ಷ ಅಪ್ಪ, ಚಿಕ್ಕಪ್ಪ ಎಲ್ಲಾ ಮಾತನಾಡುವುದನ್ನ ಕೇಳಿದ್ದಾನೆ.. ಚೊಲೋ ಮಾಡಿ ಓದಿಕಂಡು ಒಳ್ಳೆ ನೌಕರಿ ಸೇರರ್ರೋ ನಮ್ಮ ತರ ನೀವು ಆಗೋದು  ಬೇಡ ಅನ್ನೋ ದೊಡ್ಡವರ ಹಿತ ವಚನಗಳನ್ನ ಆದೆಷ್ಟೋ ಬಾರಿ ಕೇಳಿಸಿಕೊಂಡಿದ್ದಾನೆ.. ಆದರು ನಿಜವಾಗಿಯೂ ಅವರಷ್ಟು ಪುಣ್ಯಾತ್ಮರು ಮತ್ತೊಬ್ಬರಿಲ್ಲ.. ಅನ್ನಿಸುತ್ತಿದೆ.. ಈ ಹಾಳು ಪೇಟೆ ಜೀವನಕ್ಕಿಂತ. ಅವರ ಜೀವನ ಎಷ್ಟೋ ಮೇಲು ಅನ್ನಿಸುತ್ತಿದೆ.. 
               .

Wednesday, October 27, 2010

ಮನದ ತುಮುಲ

ಮನದ ತುಮುಲ :
 ಪ್ರೀತಿಯ ಮನದ ಒಡತಿಯೇ,
                       ನಿನಗೆ ಹೀಗೊಂದು ಪತ್ರ ನಾನು ಬರೆದದ್ದು ನೆನಪಿದೆಯೇನು???  ಈ ಪತ್ರ ಬರೆಯಲು ಕಾರಣವಾದ ನಿನ್ನ ಪತ್ರವನ್ನ ನಾ ಅದೆಷ್ಟೋ ಬಾರಿ ಓದಿ ನಕ್ಕಿರುವೆ.. ಅತ್ತಿರುವೆ.. ಅದು ಮೊದ ಮೊದಲು ನಾವು ಪತ್ರ ಮುಖೇನ ಕ್ಷೇಮ ಸಮಾಚಾರ ಆರಂಭಿಸಿದಾಗಿನದು.. 
                        ಆ ನೀ ಕಳುಹಿಸಿದ ಪತ್ರ ನೋಡಿ ದಂಗಾಗಿದ್ದೆ. ಅದಕ್ಕೆ ಆ ಪತ್ರವನ್ನ ಮತ್ತೊಮ್ಮೆ ಬರೆಯುವ ತವಕ. ಹಾಗೇ ತಮಗೆ ಮತ್ತೊಮ್ಮೆ ಕೊರೆತ 
                ಪ್ರಿಯೆ, ರಾಣಿ, ಸುಂದರಿ, ಗುಬ್ಬಚ್ಚಿ, ಸಹಜ ಸುಂದರಿ, cute ಗರ್ಲ್, ಚೆಲುವೆ, ರಾಜಕುಮಾರಿ, ಹಃ ರಾಜಕುಮಾರಿ ಎಂಬ ಶಬ್ದ ತುಂಬಾ ಒಪ್ಪುತ್ತದೆ ಕಣೆ ನಿನಗೆ ಸಹಜ ಸ್ಥಿತಿಯಲ್ಲಿ ನೀನು ರಾಜಕುಮಾರಿ.. ಅದೇ ಕೊಪಿಸಿಕೊಂಡಿದ್ದಾಗ ಬರೆ ಮಾರಿ.. ಎಂದೆಲ್ಲಾ ನನ್ನ ಪತ್ರದಲ್ಲಿಯಾ ಬ್ರಹ್ಮ ಲಿಪಿಯಲ್ಲಿ ಗಿಚಿಯಿರುವದನ್ನ ಅರ್ಥೈಸಿಕೊಂಡು   ನೀನು ಒಗಟಾಗಿ ನನ್ನ ಪ್ರಶ್ನೆ ಕೇಳಿದ್ದೆ.. ಏನು ಹಾಗೆಲ್ಲ ಕರೆಯುತ್ತಿಯೇ??? ಇದರ ಅರ್ಥವೇನು ಎಂದು??? 
              ಹುಂ ಆಗೋ ಏನೇನೋ ಸಬೂಬು ಹೇಳಿದರು ಕೇಳದೆ ನಂತರ ಉತ್ತರವನ್ನು ಚಾಪಿಸಿದ್ದೆ ಅಲ್ಲವೇ???  ಹಾಗೇ ಕರೆಯಬೇಕೆನ್ದೆನಿಸಿತು ಕರೆದೆ. ಹೇ ನಿಜ ಹೇಳಲೆನೇ.. ಇದುವರೆಗೂ ನನ್ನ ಬಾಳಿನಲ್ಲಿ ಹಾಗೇ ಕರೆಸಿಕೊಂಡಿರುವವ್ರು ಯಾರದ್ರು ಇದ್ದರೆ ಅದು ನೀನು ಮಾತ್ರ. ಅದು ನಿನ್ನ ದುರ್ವಿಧಿ ಅಂಥ ಬೇಕಾದರು  ಅಂದುಕೋ.. 
                ಹೇ ಈ ನನ್ನ ಸ್ಥಿತಿಯನ್ನ ಹೇಳ ಬಯಸುತ್ತೇನೆ ನನ್ನ ಅರಗಿಣಿ, ಮೇಲ್ವರ್ಗದ ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದ ನನಗೆ ಮಾತ್ರ ಹೀಗೆ ಅನ್ನಿಸುವುದೋ ಅಥವಾ ನನ್ನ ಅಂಥ ಎಲ್ಲಾ ಹುಡುಗರಿಗೂ ಹೀಗೆ ಅನ್ನಿಸುವುದೋ ಗೊತ್ತಿಲ್ಲ.. ಮೊದಲೇ ಹೇಳಿ ಬಿಡುತ್ತೇನೆ ಅದೇನೋ ಅಂತಾರಲ್ಲ ಬಿಸಿ ತುಪ್ಪ ಬಾಯಿಯಲ್ಲಿ ಹಾಗಿದೆ ನನ್ನ ಸ್ಥಿತಿ. ನಿನ್ನನ್ನ ಕಳೆದು ಕೊಳ್ಳಲು ಮನಸಿಲ್ಲ. ಹಾಗೇ ನೀನು ಅಥವಾ ನಿನ್ನ ಅಂಥಹ ವಿದ್ಯಾವಂತ ತರುಣಿಯರು ಬಯಸುವ ಆರ್ಥಿಕ ಶ್ರೀಮಂತಿಕೆಯನ್ನು ನಾನು ಕೇಳಿಕೊಂಡು ಬಂದಿಲ್ಲ ಕಣೆ. ನೀನು ಬೇಕೇ ಬೇಕು ಅಂಥ ಹೇಳಿ ನಾನು ಏನಾದರೂ ನಮ್ಮಿಬ್ಬರ ಈ ಸಂಬಂಧಕ್ಕೆ "ಲವ್" ಎಂಬ ಬಣ್ಣ ಹಚ್ಚಿ ನಿನ್ನ ಮುಂದೆ ನಿವೇದಿಸಿದರೆ ಮುಗಿದೇ ಹೋಯಿತು. 
                    ನೀನು ಆಗ ನೀಡುವ ಉತ್ತರವನ್ನ ನಾನು ಇಗಲೇ ಊಹಿಸಬಲ್ಲೆ ನನ್ನ ಗೆಳತಿಯೇ.. ನೀನು ಆಗ  ಏನೋ ನೀನು ಇಂಥ ಮನುಷ್ಯ ಅಂದು ಕೊಂಡಿರಲಿಲ್ಲ. ಚೀ..  ನೋಡೋ ಇವತ್ತೇ ಲಾಸ್ಟ್ ಇನ್ನುಮುಂದೆ ನನ್ನ ಹತ್ರ ಮಾತಾಡಲು ಬೇಡ ಯಾವದೇ ರೀತಿ ಕಾಂಟಾಕ್ಟ್ ಕೂಡ ನಮ್ಮಿಬ್ಬರ ನಡುವೆ ಬೇಡ ತಿಳಿತ?? ಅಂಥ ಮುಖದ ಮೇಲೆ ಹೊಡೆದಂತೆ ಮಾತನಾಡಿ ಒಂದೇ ಮಾತಿನಲ್ಲಿ ನಮ್ಮಿಬ್ಬರ ನಡುವಿನ ಗೆಳೆತನವನ್ನ ಕಡಿದು ಹಾಕಿ ಒಮ್ಮೆಯೂ ತಿರುಗಿ ನೋಡದೆ ಹೋಗಬಲ್ಲೆ ಎಂಬುದ ನಾ ಬಲ್ಲೆ.  ಹಾಗೇ  ಹೇಳಿಸ್ಕೊಂಡು ಜೀವನ ಪರ್ಯಂತ ನಿನ್ನಿಂದ ದೂರವಗಿರೋದ್ಕಿಂತ  ಈಗ ಹೇಗಿದ್ದಿವೋ ಹಾಗೇ ಇರೋದ್ರಲ್ಲೇ ತುಂಬಾ ಸುಖ ಅನ್ನಿಸ್ತಿದೆ ಕಣೆ. ಯಾಕಂದ್ರೆ ನಾನು ಒಂದು ವೇಳೆ ಹಾಗೇ ನಿನ್ನಲ್ಲಿ ನಿವೇದಿಸಿಕೊಂದಾಗ ನೀನು ನೀಡಬಹುದಾದ ಉತ್ತರ ತಪ್ಪು ಅಂಥ ನನಗೆ ಅನ್ನಿಸೋಲ್ಲ ಯಾಕಂದ್ರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಇಷ್ಟಗಲಿರುತ್ತಲ್ವ?? 
       ಹೇ ನಾನು ಹೀಗೆಲ್ಲ ಮಾತಾಡ್ತಾ ಇದ್ದೀನಿ ಅಂಥ ತಪ್ಪು ತಿಳಿಬೇಡ, ಈ ಹದಿ ಹರೆಯದ ವಯಸ್ಸಿನಲ್ಲಿ ಬಯಸುವ ದೈಹಿಕ ತೃಪ್ತಿ ಬೇಕಾದರೆ ಮುಂದೊಂದು ದಿನ ಸಿಗಬಹುದು. ಸಿಗದೇ ಹೋದರು ಪಡಿಬಹುದು. ಆದರೆ ಮನಸಿಗೆ ಮುದ ನೀಡ ಬಹುದಾದ ಮಧುರ ಮಾತುಗಳು, ಪರಸ್ಪರ ಕಾಳಜಿ, ಪ್ರೀತಿ, ಸುಂದರ  ಬದುಕಿಗೆ ಬೇಕಾದ ಪ್ರೋತ್ಸಾಹದಾಯಕ  ಸಾಹಚರ್ಯ ಸಿಗಬೇಕು ಅಂತಾದ್ರೆ ಅದರ ಅರ್ಥಗೊತ್ತಿರೋ ಹಾಗೂ ಅಂಥ ಹೃದಯ ಇರೋ ನಿನ್ನ ಅಂಥವರೇ ಬೇಕು. 
               ಅಂಥ ನಿನ್ನನ್ನ ಕಳಕೊಂಡು ಬದುಕೋದು ಹೇಗೆ ಸುಂದರಿ.. ಅದಕ್ಕೆ ಹೇಳಿದ್ದು. ನನಗೆ ಆ ಲವ್ ಅನ್ನೋ ಸಂಬಂಧ ಹಚ್ಚಿ ನಿನ್ನ ಸಂಬಂಧ ಕಳಕೊಲೋಕೆ  ನನಗೆ ಇಷ್ಟ ಇಲ್ಲಾ.. 
                    ಎಲ್ಲಾ ಗೊಂದಲ ಗೊಂದಲಮಯವಾಗಿದೆಯ?? ಏನು ಮಾಡೋದು ಹೇಳು ಹೇಳಿ ಕೇಳದೆ ಈ ಭೂಮಿ ಮೇಲೆ ಹುಟ್ಟಿ ಬಿಟ್ಟಿದಿನಿ.. ಅದು ನಿನ್ನ ಪರಿಚಿತನಾಗಿ. ಈಗ ನಿನ್ನ ಕಳಕೊಲೋಕೆ ನನಗೆ ಸುತರಾಂ ಇಷ್ಟ ಇಲ್ಲಾ.. ಕಣೆ..   
                   ಇಷ್ಟಕ್ಕೂ ಒಂದು ವಿನಂತಿ ನೀನು ನನ್ನ ಈ ಸ್ಥಿತಿಯನ್ನು ಒಪ್ಪಿ ಕೂಡ ನನ್ನೊಟ್ಟಿಗೆ ಸಾಥ್ ನೀಡುವೆ ಎಂದರೆ.. ನಾನು ನಿನಗೆ ಚಿರಋಣಿ.


                                               ಇಂತಿ ನಿನ್ನ ಪ್ರೀತಿಯ
                                                        ಬೆನಕ 


  
                       

Friday, October 22, 2010

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು...3

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು..
೩  
                                         
             ನಮ್ಮ  ಯಜಮಾನನ ಮನೆಯಲ್ಲಿ  ಎಂದಿನಂತೆ... ಹೋದೆ.. ಇಂದು ನಾನು ಇನ್ನೂ ಮುಂದೆ ನಿಮ್ಮಲ್ಲಿ ಕೆಲಸ ಮಾಡಲಾರೆ ಎಂದು ಹೇಳೇ ಬಿಡಬೇಕು ಅನ್ನಿಸಿದರು.. ಬಾಯಿ ಯಾಕೋ ಸಹಕರಿಸಲಿಲ್ಲ.. ಮಾಮೂಲಿನಂತೆ ಕೆಲಸ ಮಾಡಿದೆ.. ನಮ್ಮ ಯಜಮಾನರಿಗೆ ಯಾಕೋ ಅಶ್ವಿನ ಮೇಲೆ ಸಿಟ್ಟು ಆರಿದಂತಿತ್ತು.. ಬಹುಶಃ ಅವನಿರದಿರುವ ದಿನಗಳಲ್ಲಿ ಯಾವದೋ ಸೂಳೆಯರೊಂದಿಗೆ ಮಜಾ ಮಾಡಿರಬೇಕು.. ಅಥವಾ ಅಶ್ವಿನನ ಊರಿನಿಂದಲೇ  ಬಂದಿರುವ ಇಲ್ಲಿನ ಎಲ್ಲಾ ಸ್ಥಿತಿಗೂ  ಹೊಂದಿಕೊಂಡಿರುವ ಕೆಲವೊಮ್ಮೆ ನನಗೆ ಹೇಸಿಗೆ ಹುಟ್ಟಿಸುವನ್ತೆಲ್ಲ ನಮ್ಮ ಯಜಮನನೊಂದಿಗೆ ನಡೆದು ಕೊಳ್ಳುವ  ಶರತ್ ಎಂಬ ಹುಡುಗ ಚನ್ನಾಗಿ ಯಜಮಾನನ ಸೇವೆ ಮಾಡಿರಬೇಕು.. ಹಲವು ಬಾರಿ ಯೋಚಿಸಿದ್ದಿದೆ..  ಇಬ್ಬರು ಒಂದೇ ಕಡೆಯಿಂದ ಬಂದರು.. ಇವರಿಬ್ಬರ ನಡುವೆ ಅದೆಂತಾ ಭಿನ್ನತೆ.. ಹಲವು ಬಾರಿ ಅವರಿಬ್ಬರ ನಡುವೆಯೇ ಅದೇ ಯಾವುದೊ ಹವ್ಯಕ ಭಾಷೆಯಂತೆ ಅದ್ರಲ್ಲಿ ವಾಗ್ಯುದ್ದ ನಡೆಯುತ್ತದೆ.. ಅದನ್ನೆಲ್ಲ ಮೊದ ಮೊದಲು ತಮಿಳಿಗೆ ಹೊಂದಿಸಿ ಹೇಳುತ್ತಿದ್ದವನು ಶರತ್. ಅವನು ಇವನಂತೆ ಬಲು ಬೇಗ ತಮಿಳು ಕಲಿತವನು.. ಅಶ್ವಿನ ತಮಿಳು ಲಿಪಿಯನ್ನು ಕಲಿತ ಜೊತೆಗೆ ನನಗು ಕನ್ನಡ ಹೇಳಿಕೊಟ್ಟ. ಅವನ ಹತ್ತಿರ ಎನಗಬೇಕೆನ್ದಿರುವೆ ಎಂದು ಕೇಳಿದಾಗ ಟೀಚರ್ ಆಗಬೇಕೆಂಬ ಆಸೆ ಇದೆ ಕಣೋ. ಎಂದಿದ್ದ.. ಖಂಡಿತ.. ಅವನೇನಾದರೂ ಶಿಕ್ಷಕನಾದರೆ ಖಂಡಿತ ಒಬ್ಬ ಆದರ್ಶ ಶಿಕ್ಷಕನಾಗುವುದರಲ್ಲಿ ನನಗಂತೂ ಅನುಮಾನವಿರಲಿಲ್ಲ...ಅಷ್ಟು ಚನ್ನಾಗಿ ನನಗೆ ಕನ್ನಡ ಕಲಿಸಿ ಕೊಟ್ಟಿದ್ದ..  ಅವನು ತಮಿಳು ಲಿಪಿಯನ್ನು ಕಲಿತದ್ದು , ನಂತರ ತಮಿಳು ಪತ್ರಿಕೆಯನ್ನ ಓದ ತೊಡಗಿದ್ದನ್ನು    ಕಂಡ ನಮ್ಮ ಯಜಮಾನ ಅಭಿಮಾನದಿಂದ ಬೇಶ್ ಅಂದಿದ್ದರು.. ಅದನ್ನ ಕಂಡು.. ನಮಗೆಲ್ಲ ಆಶ್ಚರ್ಯವಾಗದೆ ಇರಲಿಲ್ಲ.. ಒಮ್ಮೊಮ್ಮೆ.. ನಮ್ಮ ಯಜಮಾನನು ಒಳ್ಳೆಯವನಂತೆ ಕಾಣಿಸುತ್ತನಲ್ಲ ಎಂದು.. ಅದಕ್ಕೆ ಆಗ  ನನ್ನ ಮಿತ್ರ ಹೇಳಿದ್ದು ನೆನಪಿಗೆ ಬರುತ್ತಿದೆ.. ದೋಸ್ತ  ಯಾರು ಕೆಟ್ಟವರಲ್ಲ ಪರಿಸ್ತಿತಿ ಕೆಟ್ಟವರ್ನ್ನಗಿಸುತ್ತದೆ. 
                            ಮದುವೆ ಮುಗಿಸಿ ಬಂದು ಒಂದೆರಡು ದಿನ ಕಳೆದಿರಬಹುದು ಅಂದು ರಾತ್ರಿ ಮದಿರೆಯ ಸೇವನೆಗೆ ಕುಳಿತಿದ್ದರು ನಮ್ಮ ಸಾಹುಕಾರ. ಪಕ್ಕದಲ್ಲಿ ನಾನು ಮತ್ತೆ ಶರತ್ . ಲೋಟಕ್ಕೆ ಮದಿರೆಯನ್ನ ಎರಸಿ ಕುಡಿಸುತ್ತಿದ್ದೆವು. ಅಶ್ವಿನ್ ಮಾತ್ರ ಎದುರಿನಲ್ಲಿ ಇರಲಿಲ್ಲ.. ಅವನು ಸಂದ್ಯವಂದನೆಗೆಂದು ಅವನೇ ತಂದಿಟ್ಟುಕೊಂಡಿದ್ದ.. ದೇವರ ಫೋಟೋ ಮುಂದೆ ಕುಳಿತಿದ್ದ. 
                            ಆಗ ಅಶ್ವಿನ್ ನ ಬಗ್ಗೆ ಮಾತನಾಡ ತೊಡಗಿದರು. ನಮ್ಮ ಬಾಸ್ ಏನೇನೋ ತಮ್ಮ ಕೀಳು ಶಬ್ದಗಳಿಂದ ಅವನನ್ನ ವರ್ಣಿಸುತ್ತಿದ್ದರು. ನನ್ನ ಸೇವೆ ಮಾಡೋಕೆ ಅಂಥ ಕರ್ಕೊಂಡು ಬಂದ್ರೆ ಇವನ ಸೇವೆನೆ ನಾನು ಮಾಡ ಬೇಕಾಗಿದೆ.. ಎಂದು ಮುಂತಾಗಿ ಮಾತನಾಡುತ್ತಿದ್ದರು.ಅದಕ್ಕೆ ಶರತ್ ಧ್ವನಿಗೂಡಿಸುತ್ತಿದ್ದ. ಅಷ್ಟರಲ್ಲಿ ಅಶ್ವಿನ್ ಅಲ್ಲಿಗೆ ಬಂದ.. ಅದನ್ನ ಕಂಡ ನಮ್ಮ ಬಾಸ್ ನ ನಾಲಿಗೆ ತಕ್ಷಣ ಹೊರಳಿ ಅವನ ಬಗ್ಗೆ ಪ್ರೀತಿ ಹೆಚ್ಚಿ ಬಿಟ್ಟಿತು. ಹಾಗೇ ಪ್ರೀತಿಯಿಂದ ಅವನನ್ನು ತಮ್ಮ ಪಕ್ಕ ಕರೆದು ಕೂಡ್ರಿಸಿಕೊಂಡರು ಬೆಣ್ಣೆಯಲ್ಲಿ ನೂಲು ತೆಗೆದಂತೆ ಅವನೊಟ್ಟಿಗೆ ಹರಟ ತೊಡಗಿದರು. ಅವನ ಕನಸುಗಳ ಬಗ್ಗೆ ಕೇಳಿದರು ಅವನು ಟೀಚರ್ ಆಗಬೇಕೆಂಬ ಆಸೆ ಇದೆ ಎಂದ. ಅದಕ್ಕೆ ಅವರು ಕುಡಿದ ಅಮಲಿನಲ್ಲಿ ಟೀಚರ್ ವೃತ್ತಿಯ ಬಗ್ಗೆ ಕೇವಲವಾಗಿ ಮಾತನಾಡಿ ಬಿಟ್ಟರು. ಅದನ್ನ ಕಂಡು ಅಶ್ವಿನ ಮುಖ ಕೆಂಪಗುತ್ತಿರುವುದು ಕಂಡಿತು. ನಂತರ ಕಲಾಮಜೀ ಅವರ ಯಾವುದೊ  ಒಂದು ನುಡಿಮುತ್ತು ಊದುರಿಸಿ ಯಾವತ್ತು ನಮ್ಮ ಕನಸು ದೊಡ್ಡದಾಗಿರಬೇಕು ಆತಿ ಚಿಕ್ಕ ಗುರಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದೆಲ್ಲಾ ಅವನ ತಲೆ ಸವರ ತೊಡಗಿದರು.ನಂತರ ತಾವು ಕುಡಿಯುತ್ತಿದ್ದ ಮದಿರೆಯ ಲೋಟವನ್ನ ಅವನ ಬಾಯಿಯ ಹತ್ತಿರ ತಂದರು. ಆಗ ಪರಿಸ್ಥಿತಿ ವಿಕೋಪ ತಲುಪಿತು. ನಾನು ಈಗ ಅಶ್ವಿನ್ ಅನ್ನು ತಡೆಯುವಷ್ಟು ಆತನಿಗೆ ಆತ್ಮಿಯನಗಿದ್ದೆ ಆದರೆ ನಮ್ಮ ಬಾಸ್ ಗೆ ಏನು ಎದುರೇಟು ನೀಡುತ್ತಾನೆ ಎಂದು ನೋಡಲೇ ಬೇಕಾಗಿತ್ತು. ಅದು ಅಲ್ಲದೆ ಅವನು ನನ್ನ ಮಾತನಾಡುವ ಬಾಯಿ ಆಗಿದ್ದ.  ಅಶ್ವಿನ ಆ ಲೋಟವನ್ನು ಕಸಿದು ಕೊಂಡು ದೂರದಲ್ಲಿ ಇಡಲು ಹೋದಾಗ ಅದರಲ್ಲಿರುವ ಮದಿರೆ ತುಳುಕಿ ನಮ್ಮ ಬಾಸ್ ಮೇಲೆ ಚೆಲ್ಲಿ ಅವರ ಮುಖ ಕಪ್ಪಿಟ್ಟಿತು.. ಸಿಟ್ಟಿನಲ್ಲಿ ಅವನ ಮೇಲೆ ಕೈ ಮಾಡ ಹೋದರು. ಅವರ ಕೈ ಹಿಡಿದು ಕೊಂಡ.. ಅಶ್ವಿನ್  ತನ್ನ ವಾಗ್ಜರಿಯನ್ನ ಆರಂಭಿಸಿದ. " ಏನೋ ಅಂದೇ  ಟೀಚರ್ ಅಂದರೇ ಏನು ಅಂಥ ತಿಳಿದಿದಿಯ ನೀನು. ಒಂದು ಮಾತು ನೆನಪಿಟ್ಟಕೋ ಇವತ್ತು ನೀನು ದೊಡ್ಡ ಹೆಸರು ಮಾಡಿರಬಹುದು. ಸುಪ್ರಿಂ ಕೋರ್ಟ್ ಲಾಯೆರ್ ಆಗಿರಬಹುದು. ಅದಕ್ಕೆಲ್ಲ ತಳಹದಿ ಆಗಿ ನಿಂತಿರೋರಲ್ಲಿ ಟೀಚರ್ ಪ್ರಮುಖ. ನಿನ್ನ ಹೆತ್ತ ತಂದೆ ತಾಯಿಗಾದ್ರೂ ನಿನ್ನ ಬೆಳೆಸೋದ್ರಲ್ಲಿ ಮಗ ಮುಂದೆ ತಮ್ಮನ್ನ ಚನ್ನಾಗಿ ನೋಡ್ಕೋಬೇಕು ಅಂಥ ಅನ್ನೋ ಸ್ವಾರ್ಥ ಇರುತ್ತೆ.. ಆದರೆ ಅದೇ ಟೀಚರ್ ಗೆ ಯಾವ ಆಸೆ ಇರುತ್ತೆ.. ತಿಂಗಳ ಸಂಬಳ ಕಲಿಸದೆ ಹೋದರು ಅವರ ಕೈ ಸೇರುತ್ತೆ. ಆದರು ಅವರು ತಮ್ಮ ಮಕ್ಕಳಂತೆ ನಮ್ಮನ್ನ ತಿದ್ದುತಾರೆ. ಒಂದು ವೇಳೆ ನಿನಗೆ ಒಳ್ಳೆ ಟೀಚರ್ ಸಿಗದೇನೇ  ಅವರು ನಿನಗೆ ಮದಿರೆ ಕುಡಿ ಸ್ಟೇಟಸ್ ಬರುತ್ತೆ ಅನ್ನೋ ಹಿತವಚನ ಹೇಳಿ ಮದಿರೆ ಬಾಟಲ್ ನಿನ್ನ ಕೈ ಹಿಡಿಸಿದಿದ್ರೆ ನೀನು ಇಷ್ಟೊತ್ತಿಗೆ ಯಾವ ಮೊರಿನಲ್ಲಿ ಕುಡಿದು ಬಿದ್ದಿರ್ತಿದ್ಯೋ ಏನೋ.. ದೇಶಕ್ಕೆ ಸುಸಂಸ್ಕ್ರತ ಪ್ರಜೆಗಳನ್ನ ಕೊಡಬೇಕು ಅಂತ ಅಂದ್ರೇ ಅದಕ್ಕೆ ಟೀಚರ್ ಪಾತ್ರ ಬಹು ದೊಡ್ಡದು.. ಹೌದು ನೀನು ಹೇಳೋದು ಕೆಲವಷ್ಟು ನಿಜ.  ಅದರಲ್ಲಿ ನೀನು ಗಳಿಸಿದಷ್ಟು ಹಣ ಹೆಸರು ಗಳಿಸಲಿಕ್ಕೆ ಆಗದೆ ಇರಬಹುದು.. ಆದರೆ ನೆಮ್ಮದಿ ಇದೆ. ಸಾಯೋ ಕಾಲದಲ್ಲಿ ನಮ್ಮ ಕೈ ಹಿಡಿದವಳು ನಾವು ಹೆತ್ತ ಮಕ್ಕಳು ಎಲ್ಲರಿಂದ ದೂರಾಗಿ ಬದುಕೋ ನಿನ್ನ ಅಂಥ ಬೀದಿ ನಾಯಿ ಪಾಡು ಖಂಡಿತ ಬರಲ್ಲ ಅನ್ನೋ ನಂಬಿಕೆ ಇದೆ. ಹಾಗೇ ನಾನು ಇಲ್ಲೇ ನಿನ್ನ ಕೈ ಕೆಳಗೆ ಜೀತ ಮಾಡ್ಕೊಂಡಿದ್ರೆ ಆ ಸುಖಾನು ಸಿಗೋಲ್ಲ ನಿನ್ನ ಸ್ಟೇಟಸ್ ಕೂಡ ಕನ್ನಡಿಯ ಗಂಟಾಗಿ ಬಿಡುತ್ತೆ.. ಸಿಕ್ಕದ್ರು ಅದು ನೀ ಕೊಟ್ಟ ಭಿಕ್ಷೆ ಆಗಿರುತ್ತೆ.. ಅದೆಲ್ಲ ನನಗೆ ಬೇಡ. ನಾನು ಊರಿಗೆ ಹೋಗ್ತೀನಿ. ನನ್ನ ಹತ್ರ ಇವಾಗ ಊರಿಗೆ ಹೋಗೋಷ್ಟು ದುಡ್ಡಿಲ್ಲ ಕೊಡಿ ನಂತರ ನಿಮ್ಮ ಅಕೌಂಟ್ ಗೆ  ಜಮ ಮಾಡ್ತೀನಿ. ಇಲ್ಲಿ ನಾನು ಕೆಲಸ ಕೂಡ ಮಾಡಿರೋದ್ರಿಂದ ಊಟ ಮಾಡಿರೋದಕ್ಕೆ ಅಂತ ನಾನೇನು ನಿಮಗೆ ಕೊಡೋದು ಇಲ್ಲಾ ಅಂದ್ಕೋತೀನಿ. ಹಃ ಹಾಗೇ ನಮ್ಮ ಬಾಲಾಜಿಗೂ ಈ ಬದುಕು ಸಾಕಾಗಿದೆ. ಅವನನ್ನ ಅವರ ಮನೆಗೆ ಕಳಿಸಿಕೊಡಿ. ಅವನು ನಿಮಗೆ ಕೊಡ್ಬೇಕಿರೋ ಹಣಾನ ಕಂಡಿತ ಅವನೇ ಸ್ವತಂತ್ರವಾಗಿ ದುಡುದು ತೀರಿಸ್ತಾನೆ. ಅದರಲ್ಲಿ ನಂಬಿಕೆ ಇರಲಿ. ಯಾಕಂದ್ರೆ ಅವನು ನನ್ನ ಹಾಗೇ  ಸಾಕಸ್ಟು ಕನಸ ಕಂಡಿದಾನೆ. ದಯಮಾಡಿ ಅದನ್ನ ಚಿವುಟಿ ಹಾಕದೆ ಚಿಗುರಲು ಬಿಡಿ. ಖಂಡಿತ ನೀವು ನಮ್ಮ ಅಂಥ ಅಮಾಯಕರನ್ನ ಓದುಸ್ತಿವಿ ಅಂಥ ಕರೆಸ್ಕೊಂದು ಅವರ ಓದಿಗೆ ತಿಲಾಂಜಲಿ ಇಡೋ ಹಾಗೇ ಮಾಡಬೇಡಿ.  ಬೇಕಾದರೆ ದಿನ ರಾತ್ರಿ ಬರ್ತಾರಲ್ವ ಅಂಥವರನ್ನ ಯಾರನ್ನಾದರು ಖಾಯಮ ಆಗಿ ಇರಿಸಿಕೊಳಿ. ಆದರೆ ಅವರಿಗೂ ಒಂದು ಕನ್ಸಿರುತ್ತೆ ಅನ್ನೋದನ್ನ ಮರಿಬೇಡಿ.. ಅದಕ್ಕಿಂತ ನಿಮ್ಮ ಹೆಂಡತಿ ಮಕ್ಕಳ ಸಂಗಡ ಬದುಕೋದು ಎಸ್ಟೋ ಉತ್ತಮ. ಪ್ರೀತಿ ಮತ್ತೆ ನೆಮ್ಮದಿನ ಹಣದಿಂದ ಮತ್ತೆ ಬಲವಂತವಾಗಿ ಯಾರಿಂದಲೂ ಕಿತ್ತ್ಕೊಲೋಕೆ ಆಗಲ್ಲ ಅನ್ನೋದು ದೊಡ್ಡವರಾದ ನಿಮಗೆ ಗೊತ್ತು. ಇಲ್ಲಿ ನಿಮಗೆ ಗುಲಾಮರಾಗಿ ದುಡಿತ ಇರೋ ಯಾರೊಬ್ಬರಿಗೂ ನಿಮ್ಮ ಮೇಲೆ ನಿಜವಾದ ಪ್ರೀತಿ ಇಲ್ಲಾ.. ಇದ್ದಿದ್ದರೆ ಇಷ್ಟು ನಿಮ್ಮ ಬಗ್ಗೆ ಮಾತಾಡ್ತಾ ಇರೋ ನನ್ನನ್ನ ಹೊಡೆದು ಹಾಕ್ತಿದ್ರು.. ಇಲ್ಲಾ ಕೊಲೇನೆ ಮಾಡ್ತಿದ್ರು.. ಅಲ್ಲವ ಸರ್??"
ಇಷ್ಟು ಹೇಳಿ ಬಾಟಲ್ ನಲ್ಲಿದ್ದ ನೀರನ್ನ ಕುಡಿದು ನಾಳೆ ಹೊರಡ್ತೀನಿ..ಸರ್. ನನ್ನ ಜೊತೆ ಬಾಲಾಜಿನ ಬಸ್ ಸ್ಟಾಪ್ ವರೆಗೂ ಕಳುಹಿಸಿ ಕೊಡಿ.
ಎಂದು ಎದ್ದು ಮಲಗುವ ಕೋಣೆಗೆ ನಡೆದ. 
                   ನಂತರ ನನ್ನ ಕರೆದು ಅವನ ಬ್ಯಾಗಿನಲ್ಲಿ  ೩೦೦ ರೂಪಾಯಿ ಇದೆ.. ಮೈಸೂರ್ ವರೆಗೆ ಹೋಗಲು ಇನ್ನೂ ೧೫೦ ರೂಪಾಯಿ ಬೇಕು ಅದನ್ನ ಅವನಿಗೆ ಕೊಡು. ಮೈಸೂರಿಗೆ ಹೋಗುವ ನಾಳೆ ರಾತ್ರಿಯ ಬಸ್ ಗೆ ಹತ್ತಿಸಿ ಬಾ. ಊಟ ತಿನ್ದಿಗೆನು ಕೊಡೋದು ಬೇಡ.. ಹ್ಯಾಗೂ ಆ ಭಟ್ರು ಮನೆಯಿಂದ ತಾನೆ ಕರ್ಕೊಂಡು ಬಂದಿರೋದು ಅಲ್ಲಿವರೆಗೆ ಕಳಸದ್ರೆ ಆಯ್ತು. ಇಂಥ ನಾಲಯಕಗಳ ಮಾತನ್ನೆಲ್ಲ ಕೇಳಿ ತಲೆ ಹಾಳು ಮಾಡ್ಕೋ ಬೇಡ.. ತಿಳಿತ. ಎಂದರು. ಅಲ್ಲಾ ಅಶ್ವಿನ್  ಹತ್ತಿರ ಇರೋ ಬಿಡಿಗಾಸನ್ನು ಸಹ ಕದ್ದು ನೋಡಿದ್ದಾರಲ್ಲ ಎಂಥ ಮನುಷ್ಯ ಇರಬಹುದು. ಇವನು. ಅನ್ನಿಸಿ ಸರಿ ಎಂದು ಹೋಗಿ ಮಲಗಿದೆ.
                             ಅಲ್ಲಿಂದ ಮಾರನೇ ದಿನ ರಾತ್ರಿ ಅಂದರೇ ನವೆಂಬರ್ ೧೪ ರ ರಾತ್ರಿ  ಲಗೇಜ್ ಹಿಡಿದು ಅಶ್ವಿನ್ ಜೊತೆ ಹೊರಟೆ. ಮನೆಯಿಂದ  ಹೊರಡುವಾಗ ಅಶ್ವಿನ್ ನಮ್ಮ ಬಾಸ್ ಹತ್ತಿರ ಬಂದು ನಿಂತು " ಸರ್ ನಾನೇನಾದರೂ ತಪ್ಪಾಗಿ ಮಾತಾಡಿದ್ರೆ ಕ್ಷಮಿಸಿ. ನಿಮ್ಮ ಮನಸಿಗೆ ನೋವು ಆಗುವಂತೆ ಮಾತಾಡದೆ. ನನಗೆ ಓದುಬೇಕು ಅಷ್ಟೇ ಅದಕ್ಕೆ ನಮ್ಮ ಮನೆ ಪರಿಸ್ತಿತಿ ಓದ್ಸೋ ಅಷ್ಟು ಚನ್ನಾಗಿ ಇರಲಿಲ್ಲ ಅದು ಅಲ್ಲದೆ ನಮಗೆ ಹತ್ತಿರದ ಸಂಬಂದಿ ಆಗಿದ್ದ ನಮ್ಮ ಭಟ್ರು ಹೇಳಿದ್ರು ಒಳ್ಳೆ ಜನ ಅವರೇ ಓದ್ಸ್ತಾರೆ ಅಂತೆಲ್ಲ ಏನೇನೋ ಹೇಳ್ದಾಗ.. ನನ್ನ ಕಿವಿ ಮೇಲೆ ಬಿದ್ದಿದ್ದು ಓದು ಹೇಳೋ ಶಬ್ದ ಮಾತ್ರ. ಅದಕ್ಕೆ ಜಾಸ್ತಿ ಯೋಚನೆ ಮಾಡದೇ ಒಪ್ಪ್ಕೊಂದು ಇಲ್ಲಿಗೆ ಬಂದೆ..ನಿಮಗೆ ಅಂದೇನು ಪ್ರಯೋಜನ.. ಎಲ್ಲಾ ನನ್ನ ಮಂಕು ಬುದ್ದಿ.. ನಿಮಗೆ ಗೊತ್ತ ಸರ್ ನಾನು ಪಿ.ಯು.ಸಿ.ನಲ್ಲಿ ತಾಲೂಕಿಗೆ ೩ ನೇ ರಾಂಕ್ . ಪರೀಕ್ಷೇಲಿ ಪಾಸಾದೆ ಎಂಬ ಮತ್ತಲ್ಲಿ  ಜೀವನ ಎಂಬ ಪರೀಕ್ಷೇಲಿ ಫೈಲ್ ಆಗಿಬಿಟ್ಟೆ. ಆದರು ಬೇಜಾರಿಲ್ಲ ಸರ್ ಇದೊಂದು ಮರೆಯಲಾಗದ ನೆನಪು.. ಧನ್ಯವಾದಗಳು " ಹೇಳಿ ಹೊರಟ. ಅದಕ್ಕೆ ನಮ್ಮ ಬಾಸ್ ಮಾಡಿದ್ದೇನು ಗೊತ್ತೇ ಕರೆದು ಅಪ್ಪಿಕೊಂಡು. ಆದಷ್ಟು ಬೇಗ ಈ ಮನೆಗೆ ವಾಪಸ್ಸ್ ಬಾ ಅಶ್ವಿನ್ ಖಂಡಿತ ನಿನ್ನ ಓದಿಸ್ತಿನಿ." ಸರ್ ಇಲ್ಲಾ ಸರ್ ನನಗೆ ಇಂಥ ಜೀವನ ಇಷ್ಟ ಆಗೋಲ್ಲ.. ನನಗೆ ನನ್ನ ಪುಟ್ಟ ಹಳ್ಳಿಯ ಜೀವನಾನೆ ಚಂದ ಅಲ್ಲಿಂದಲೇ ಮತ್ತೊಮ್ಮೆ ಹುಟ್ಟಿ ಬರ್ತೀನಿ. ಜಗತ್ತನ್ನ ಆ ಕಣ್ಣುಗಳಿಂದಲೇ ನೋಡ್ಲಿಕ್ಕೆ ಇಷ್ಟ ಪಡ್ತೀನಿ. "
            ಅಲ್ಲಿಂದ  ಚನ್ನೈ ಬಸ್ ಸ್ಟಾಪ್ ನಲ್ಲಿ ಮೈಸೂರ್ಗೆ ಹೋಗೋ ಬಸ್ ಹತ್ತಿಸಿದೆ.. ನಂತರ. ದೋಸ್ತ ಯಾವಾಗಲು ಕಾಂಟಾಕ್ಟ್ ಅಲ್ಲಿ ಇರು ಎಂದೆ.. ಆಯಿತು.. ಆದಷ್ಟು ಬೇಗ ನೀನು ಕೂಡ ಹೊಸ ಬಾಲಾಜಿ ಆಗು ಎಂದ.. ಅಷ್ಟೇ ಅಲ್ಲಾ ನೀನು ಒಂದು ದೊಡ್ಡ ಬಿಸಿನೆಸ್ ಮ್ಯಾನ್ ಆಗೇ ಆಗ್ತಿಯ ಆ ನಿಮ್ಮ ಯಜಮಾನನ ಮನೆಯಲ್ಲಿ ಹಾಕಿದ ಅರ್ಧದಷ್ಟು ಪರಿಶ್ರಮ ನಿನ್ನ ಬಿಸಿನೆಸ್ ಗೆ ಪ್ರೀತಿಯಿಂದ ಹಾಕು.. ನೀನು ದೊಡ್ಡ ಮನುಷ್ಯನಾದೆ ಅಂದ್ರೇ ಎಲ್ಲರಿಗಿಂತ ಜಾಸ್ತಿ ಖುಷಿ ಪಡುವವನು ನಾನು..ಎಂದು ಹೊರಟೆ ಹೋದ.   ಅಲ್ಲಿಂದ ಹೊರಟು ಹೋದವನ ಮುಖ ನಂತರ ನೋಡಲೇ ಇಲ್ಲಾ. ಆದರೆ.. ಆ ಅರೆ ಮಲೆನಾಡ ಹುಡುಗ.. ನಂತರ ಒಂದೆರಡು ಪತ್ರಗಳ ಮೂಲಕ ತನ್ನ ಅರೆಬೆಂದ ಕನಸುಗಳ ಸ್ಥಿತಿ ಹೇಳಿಕೊಂಡ.. ಅದೆಲ್ಲ ನನಗೆ ಸ್ಪೂರ್ತಿ ಕೊಟ್ಟಿತು. ಅದೇ ಈಗ  ಜೀವನದಲ್ಲಿ ಮೊಬೈಲ್ ಶೋ ರೂಂ ಇಟ್ಟು ಕೊಂಡು. ಕೈ ಅಲ್ಲಿ ನಾನಾ ತರಹದ ಬಿಸಿನೆಸ್ ಮಾಡಿಕೊಂಡು ಪಲ್ಸುರ್ ಬೈಕ್ನಲ್ಲಿ ಅಮ್ಮನನ್ನ ಕೂರಿಸಿಕೊಂಡು ಸಿಟಿ ಸುತ್ತಲು ಕಾರಣ ಆಯಿತು.. ಅಷ್ಟೇ ಅಲ್ಲಾ ನಾನು ಇವಾಗ ೧೦-೧೫ ಮಂದಿ ಜನರಿಗೆ ಕೆಲಸ ಕೊಟ್ಟಿದೀನಿ.. ಬರುವ ವರ್ಷ  ಮತ್ತಷ್ಟು ವಿಸ್ತರಿಸಬೇಕೆಂದಿದೆ. ಆದರೆ ನನ್ನ ಯಜಮನಂತೆ ದರ್ಪದಿಂದಗಲಿ ಹಣದಿಂದಗಲಿ ನನ್ನ ಕೆಲಸಗರರನ್ನ್ ಗೆದ್ದಿಲ್ಲ ಬದಲಿಗೆ  ಪ್ರೀತಿಯಿಂದ ಗೆದ್ದಿದ್ದೇನೆ.. ಇದಕ್ಕೆ ಅವನು ಸ್ಪೂರ್ತಿಯುತ ಪತ್ರಗಳು ಕಾರಣ. ಅವನು  ಬರೆದ ಕೆಲವು ಪತ್ರಗಳನ್ನ ಮುಂದಿನ ಸಂಚಿಕೆ ಅಲ್ಲಿ ತೆರೆದಿದುತ್ತೇನೆ. ನಾನು ಕೂಡ ಅವನಿಗೆ ಒಂದೆರಡು ಪತ್ರ ಬರೆದಿದ್ದೆ. ಬೇಗ ಬಾ ಎಂದು..  
         
              ಮುಂದುವರೆಯುವುದು ..

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು... 2

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು....


೨ 
   ಅಂದಿನಿಂದ ಯಾವ ಕೆಲಸವನ್ನು ಮಾಡದೇ ಸುಮ್ಮನೆ ಪುಸ್ತಕ ಹಿಡಿದು ಕುಳಿತಿರುತ್ತಿದ್ದ.. ಊಟಕ್ಕೆ ಹತ್ತಿರದಲ್ಲೇ ಇದ್ದ ಶಂಕರ ಮಠವನ್ನ ಅವಲಂಬಿಸಿದ.. ಅಲ್ಲಿಯ ಊಟ ಮಾಡ  ತೊಡಗಿದ ಮೇಲೆ ಗೆಲುವಾದ.. ನನ್ನೊಟ್ಟಿಗೆ ಒಮ್ಮೆ ಹೇ ಬಾಲಾಜಿ ನಾನು ಇವಾಗ ಮೊದಲಿನತಗುತ್ತಿದ್ದೇನೆ ಆರೋಗ್ಯದಲ್ಲಿ.. ನಾನು ಆರೋಗ್ಯವನ್ತಂದೆ ಎಂದಾದರೆ ಈ ನಿನ್ನ ಬಾಸ್ ಗೆ ಒಂದು ಗತಿ ಕಾಣಿಸದೆ ಬಿಡಲಾರೆ..ಈ ನಿಮ್ಮ ಆಹಾರ ನಮಗೆ ಒಗ್ಗುವುದಿಲ್ಲ.. ಮಠದಲ್ಲಿ ಕೊಡೊ ಊಟ ನಿಜಕ್ಕೂ ನಮ್ಮ ಬದಿಯ ಊಟದಂತಿದೆ.  ಹೌದು ನಿನಗೇನೂ ದಾಡಿ ಇವನಲ್ಲಿ  ಯಾಕೆ ಜೀತಕ್ಕೆ ಸೇರಿರುವೆ.. ಸೂಳೆಯಾಗಿ, ಮನೆ ಕೆಲಸದವನಾಗಿ ಬದುಕಲು ನಾಚಿಕೆ ಆಗೋದಿಲ್ಲೇನು...ನಿನ್ನಿಷ್ಟ. ಎಂದವನು ನಂತರ   ಯಾಕೋ ನನಗೆ ನಿನ್ನ ಕಂಡಾಗ ನೀನು ನನ್ನ ಅಂತೆ ಅಳುವುದನ್ನ ಕಂಡಿರುವದರಿಂದ ಹೇಳಿದೆ..ಅಷ್ಟೇ " ಎಂದ.

           ನಂತರ ಅವನಿಗೂ ನಮ್ಮ ಬಾಸ್ ಗು ಮಾತು ಕತೆ ಇಲ್ಲದಾಯಿತು..   ಅಷ್ಟೊತ್ತಿಗಾಗಲೇ ನನ್ನ ಅಕ್ಕನನ್ನ ನಮ್ಮ ಯಜಮಾನನ ಸಿನಿಯರ್ ಅಸಿಸ್ಟಂಟ್  ಪಾರ್ಥ ಸಾರಥಿ ಪ್ರೇಮಿಸಿದ್ದ.. ಅದನ್ನ ತಿಳಿದಾಗ ನನ್ನ ಕಣ್ಣು ಒದ್ದೆಯಾಗಿತ್ತು... ಅಂದಿನಿಂದ ಮತ್ತೊಂದು  ಫುಲ್ ಬಾಟಲ್ ಮದಿರೆ ಖಾಲಿ ಆಗ ತೊಡಗಿತ್ತು .. ಆದರೇನು ನಮ್ಮ ಯಜಮಾನನ ಒತ್ತಾಯಕ್ಕೆ ಮನೆಯಲೆಲ್ಲ ಒಪ್ಪಿದ್ದರು. ಎಲ್ಲಕಿಂತ ಹೆಚ್ಚಾಗಿ ಅಕ್ಕನು ಇಷ್ಟ ಒಪ್ಪಿದ್ದಳು. ಆ ಮದುವೆಗೆ ಇನ್ನೆರಡು ದಿನ ಬಾಕಿ ಇತ್ತು. ಅದಕ್ಕಾಗಿ ಮನೆಗೆ ಹೊರಟವನ ಸಂಗಡ ನಮ್ಮ ಯಜಮಾನನ ದಿನಚರಿಗೆ ಆಡ್ಡಿ ಆಗಿದ್ದ  ಅಶ್ವಿನ್ ಅನ್ನು ನನ್ನ ಒಟ್ಟಿಗೆ  ಕಳುಹಿಸಿ ಕೊಟ್ಟರು.
                                                  ಅವನಿಗೆ  ಟಿ ನಗರದ ಹೊರವಲಯದಲ್ಲಿದ್ದ  ಸಣ್ಣದೊಂದು ಅಪಾರ್ಟ್ಮೆಂಟ್ ನಾ ನನ್ನ ಗೂಡಿಗೆ ಕರೆದೊಯ್ಯುವಾಗಲೇ ಹೇಳಿದೆ. " ಅಶ್ವಿನ್ ನೀನು ಅಂದು ಕೇಳಿದ ಪ್ರಶ್ನೆಗಳಿಗೆ ಇಂದು ನಿನಗೆ ಉತ್ತರ ಸಿಗ ಬಹುದು... ಮೊದಲು ನಮ್ಮ ಮನೆ ನೋಡುವಿಯಂತೆ ನಡೆ" ಎಂದು ಕರೆದು ಕೊಂದು ಹೋದೆ..   
                 ಮನೆಯನ್ನ ನೋಡಿ ಒಮ್ಮೆ ಅವಕ್ಕದವಂತೆ ಕಂಡ ಅಶ್ವಿನಗೆ  ನಾನು ಇನ್ನೂ ನಾಲ್ಕೈದು ದಿನ ನನ್ನೊಟ್ಟಿಗೆ ಇದೆ ಮನೆಯಲ್ಲಿ ಇರಬೇಕು.. ನನ್ನ ಅಕ್ಕನ ಮದುವೆ ಇದೆ ನಾನು ಕೆಲಸದ ಮೇರೆಗೆ ಹೊರಗೆ ಹೋಗುತ್ತಿರುತ್ತೇನೆ ಆದರು ನನ್ನ ಅಜ್ಜಿ ಮನೆಯಲ್ಲೇ ಇರುತ್ತಲೇ.. ಅವಳೊಂದಿಗೆ ಇರು. ಹ ಮನೆಯವರನ್ನ ಪರಿಚಯ ಮಾಡಿಸಿಲ್ಲ ಅಲ್ಲವೇ .. ನೋಡು ಎರಡು ಕಾಲು ಕಳೆದು ಕೊಂಡು ಇದೀಗ ಕೃತಕ ಕಾಲಿನಲ್ಲಿ ಓಡಾಡುತ್ತಿರುವ  ಇವರೇ  ನನ್ನ ತಂದೆ, ಇದೀಗ ಕಾಲಿನೋಟ್ಟಿಗೆ  ಕಳೆದು ಹೋದ ತಮ್ಮ ಸಣ್ಣ ಜಾಬ್ ಅನ್ನು  ಮರೆತು ಎಲ್ ಆಯ ಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.. ಇವರು ನಮ್ ತಾಯಿ. ಮೊದಲು ಗೃಹಿಣಿ ಆಗಿದ್ದವಳು ನಮ್ಮ ಮನೆಯ ಕಷ್ಟ್ ಕಾಲದಲ್ಲಿ ಅಪ್ಪನಿಗೆ ನೆರವಾಗಲು ಟೈಪಿಸ್ಟ್  ಕೆಲಸ ಮಾಡುತ್ತಿದ್ದಾಳೆ.. ಇನ್ನೂ ಇವಳೇ ನನ್ನ ಅಕ್ಕ , ಮದುಮಗಳು.. ಓದಿರೋದು ಎಂ.ಬಿ.ಎ. ಮದುವೆ ಆಗಲು ಹೊರಟಿರುವುದು.. ಪಿ.ಯು.ಸಿ. ಪಾಸು ಆಗಿರಬಹುದಾದ ಕುಡುಕ ಪಾರ್ಥ ಸಾರಥಿಯ ಜೊತೆ.. ಎಂದೆಲ್ಲಾ ವಿವರಿಸಿದೆ. ನಂತರ  ನಾನು ಮನೆಯಿಂದ ಯಾವುದೊ ಕೆಲಸದ ಮೇಲೆ ಹೋಗಿ ಸಂಜೆ ಮರಳುವ ವೇಳೆಗೆಲ್ಲ ನಮ್ಮ ಮನೆಯವರಿಗೆಲ್ಲ ಅಚ್ಚುಮೆಚ್ಚಿನ ಅಶು ಆಗಿ ಬಿಟ್ಟಿದ್ದ...
        ಅಜ್ಜಿ ಅಂತು ನಾನು ಬಂದ ತಕ್ಷಣ ನನ್ನೊಟ್ಟಿಗೆ ಕೇಳಿದ್ದು ಇಸ್ಟೇ.." ಇಂಥ ಒಳ್ಳೆ ಮಕ್ಕಳನ್ನೆಲ್ಲ ಯಾಕಪ್ಪ ಆ ನಿನ್ನ ಯಜಮಾನ ತನ್ನ ಅಡಿ ಆಳಾಗಿ ಮಾಡ್ಕೋತಾನೆ.. ಆ ದೇವರು ಖಂಡಿತ ಮೆಚ್ಚೋಲ್ಲ.. ಅವನು ಅನಾಥ ಹೆಣವಾಗಿ ಹೋಗ್ತಾನೆ." ಎಂದೆಲ್ಲಾ ಹೇಳದಳು.. ನಂತರ ಅಶ್ವಿನ್ ಬಗ್ಗೆ ಮತ್ತೆ ಯಜಮನನಿಗೂ ಇವನ ನಡುವೆಯೂ ನಡೆದ ಘಟನೆಗಳ ಬಗ್ಗೆ ಹೇಳಿದೆ.. ಅಜ್ಜಿ ಮೆಚ್ಚುಗೆ ಸೂಚಿಸಿದಳು..
           ಹಾಗೇ ಇವತ್ತು ಎಂದಿನಂತೆ ಕುಡಿದು ಬರದಿದ್ದ ನನ್ನನ್ನು ಆಶ್ಚರ್ಯದಿಂದ ನೋಡಿದ ಅಮ್ಮ ಏನೋ ಮೊದಲಿನ ಬಾಲಾಜಿ ಆಗಿ ಬಿಟ್ಟಿದಿಯ ಅಂದ್ಲು.. ಹೌದು  ಅಮ್ಮ.. ಈ ಅಶ್ವಿನ್ ನನ್ನ ಮೊದಲಿನ ಜೀವನದ ಸಿಹಿ ಕನಸನ್ನ ಮತ್ತೆ ನೆನಪಿಸಿದ.. ನಾನು ನಿಮ್ಮ ಮುಂದೆಲ್ಲ ಕೂಗಾಡುವಂತೆ ನಮ್ಮ ಯಜಮಾನನ ಮುಂದೆ ಕೂಗಾಡಿದ.. ಅದು ಅಲ್ಲದೆ.. ನನ್ನ ಹತ್ತಿರ ನಮ್ಮ ಮನೆಗೆ ಬರುವಾಗ ದಾರಿಯಲ್ಲಿ  ಕುಡಿಯೋದು ಒಳ್ಳೇದಲ್ಲ ಕಣಲೇ.. ಅದು.. ನೋವನ್ನ ಮರೆಸಲ್ಲ.. ನಮ್ಮ ಸಮಾಧಿ ಮಾಡುತ್ತೆ.. ಅಷ್ಟೇ.. ನೀನು ಅವನಂತೆ ಒಂದು ಸ್ಟೇಟಸ್ ಮಾಡ್ಕೋ ಬೇಕು ಅಂದ್ರೇ ಕುಡುದ್ರೆ ಸಾಧ್ಯ ಇಲ್ಲಾ.. ಓದು ಇಲ್ಲಾ ಏನಾದ್ರು ಬಿಸಿನೆಸ್ ಮಾಡು.. ಒಟ್ಟಿನಲ್ಲಿ ಈ ಹಾಳು ಮೃಗದ ಸಹವಾಸ ಬಿಡು ಎಂದ... ನಿನಗೆ ಎಷ್ಟೇ ಕಷ್ಟ ಇದ್ರೂ ಇಂತವರ ಸಂಗಡ ಇದ್ರೆ ನೀನು ಜೀತದಾಳು ಆಗೊಗ್ತಿಯ.. ಅಷ್ಟೇ.. ನಿನ್ನ ಕನಸನ್ನ ಯಾವುದು ನನಸು ಮಡ್ಕೊಲೋದಿಕ್ಕೆ  ಆಗೋಲ್ಲ.. ಅದೇ ನಾವೇ ಏನಾದ್ರು ಮಾಡಿ ದುಡುದು ತಿಂದರೆ ಮಾತ್ರ ನಮ್ಮ ಕನಸನ್ನ  ನಮ್ಮ ನಮ್ಬಿರೋರನ್ನ ಚನ್ನಾಗಿ ಅಲ್ಲದೆ ಹೋದರು ನಮಗೆ ತೃಪ್ತಿ ಆಗೋ ಹಾಗೇ ನೋಡ್ಕೋ ಬಹುದು.. ಎಂದ.. ನನಗು ಇದು ಸರಿ ಅನ್ನಿಸಿದೆ . ಅದಕ್ಕೆ ಆದಷ್ಟು ಬೇಗ ನಾನು ಏನಾದ್ರು ಬಿಸಿನೆಸ್ಸ್ ಆರಂಭಿಸಬೇಕು ಅಂತಿದಿನಿ..ಕಣಮ್ಮ.. ಇನ್ನೆಷ್ಟು ದಿನ ಅಂತ ಅವನ ಕೈ ಕೆಳಗೆ ಕೆಲಸ ಮಾಡ್ಲಿ.. ಇನ್ನೂ ಓದೋಕಂತು ನನ್ನ ಕೈ ಅಲ್ಲಿ ಸಾಧ್ಯ ಇಲ್ಲಾ.. ಒಂದು ಚಿಕ್ಕ ಬಿಸಿನೆಸ್ಸ್ಗೆ ಬೇಕಾಗೊಸ್ತು ಸಾಲ ಎಲ್ಲಾದರು ಮಾಡಿಸಿ ಕೊಡ್ತಿಯ.. ಹೇಗೂ ಅಪ್ಪನ ಕಾಲು ಆಪರೇಷನ್,  ಅಕ್ಕನ ಮದುವೆ, ಅಂತೆಲ್ಲ ಸಾಲ ಮಾಡಿ  ಕುತ್ತಿಗೆ ವರೆಗೆ ಮುಳುಗಿದಿವಿ  .. ಇನ್ನೂ ಒಂಚೂರು ಮುಳುಗ್ಲಿಕ್ಕೆ ಏನು ಭಯ ಅಲ್ಲವ ಅಮ್ಮ.. ಗೆದ್ದರೆ ನಿನ್ನ ಮತ್ತೆ ಅಪ್ಪನ್ನ ನಾನು ಬದುಕಿರೋ ತನಕ ಚನ್ನಾಗಿ ನೋಡ್ಕೊಂಡು ಆರಾಮಾಗಿ ಇರಬಹುದು ಅಲ್ಲವ??? ಇದೆಲ್ಲ.. ಅವನು ನನಗೆ ಹೇಳದೆ ಹೋದರು ಅವನು ಹಚ್ಚಿದ ಚಿಂತನೆ ಇಂದ ಹುಟ್ಟಿರೋದು.. ನನಗೇನು ಇನ್ನೂ  ೨೨ ಇನ್ನೂ ದುಡಿಯೋ ವಯಸ್ಸು..ಅಮ್ಮ ಒಪ್ಪಿಗೆ ಕೊಡಮ್ಮ.. ಆ ನನ್ನ ಯಜಮಾನನ ಹತ್ತಿರ ಮಾಡಿದ ಸಾಲ ಆದಷ್ಟು ಬೇಗ ತೀರಿಸ್ಲಿಕ್ಕೆ ಪ್ರಯತ್ನ ಪಡ್ತೀನಿ.. ಎಂದೆ..
 ನನ್ನ ಅಮ್ಮನಿಗೂ ಹರ್ಷವದಂತೆ ಕಂಡು ಬಂತು..ಆಕೆಯು ಕಣ್ಣಿನಲ್ಲೇ ಒಪ್ಪಿಗೆ ಸೂಚಿಸಿದಳು. ಆ ನನ್ನ ಅಮ್ಮನಾ ನಗು ಮೊಗ ಕಂಡು ಎಷ್ಟೋ ಕಾಲವಾಗಿತ್ತು.. ಅದನ್ನ ನನ್ನ ಗೆಳೆಯ ಅಶ್ವಿನ ಹತ್ತಿರ ಹೇಳಿದಾಗ ನಿಜಕ್ಕೂ.. ಖುಷಿ ಪಟ್ಟನಲ್ಲದೆ.. ಯಾ ಇವಾಗ ನೀನು ಬಾಲಾಜಿ ಎಂಬ ಹೆಸರಿಗೆ ತಕ್ಕವನಾದೆ ಎಂದು ಪ್ರೀತಿಯಿಂದ ಅಪ್ಪಿಕೊಂಡ.. 
           ಹಾಗೇ ಬಿಸಿನೆಸ್ ಸ್ಟಾರ್ಟ್ ಮಾಡಿದರೆ ನಿಜಕ್ಕೂ ಈ ನನ್ನ ಗೆಳೆಯನನ್ನ ಜೊತೆಯಲ್ಲೇ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿ ಕೇಳಿದರೆ.. ನೋಡೋಣ ಗೆಳೆಯ ಎಂದಷ್ಟೇ.. ಹೇಳಿದ.. ಅಂತು ಅಕ್ಕನ ಮದುವೆ ನಾನು ಬಯಸಿದಂತೆ ನಡೆಯದಿದ್ದರೂ.. ನಡೆದು ಹೋಯಿತು.. ಅಕ್ಕ ಸಂತಸದಿಂದ ಇದ್ದರಷ್ಟೇ ಸಾಕು ಎಂದು ಬಯಸಿದೆ.. ನನ್ನ ಭಾವ ಈಗ ಆರ್ಥಿಕವಾಗಿ ಬಲಿಷ್ಟನಗಿದ್ದ.. ಎಷ್ಟಾದರೂ.. ಅವನು ನಮ್ಮ ಯಜಮಾನನ ಗುಲಾಮ ತಾನೆ.. ಎಂದು ದುಃಖವಾಯಿತು.. ಎಲ್ಲಾ ದೇವರ ಆಟ.
                        ನಮ್ಮ ಮನೆಯಲ್ಲಿ ಉಳಿದ ಕಡೆಯ ದಿನ ಊಟ ಮಾಡುತ್ತ ಅಶ್ವಿನ್ ಹೇಳಿದ್ದು ಇನ್ನೂ ನೆನಪಿದೆ.." ಬಾಲಾಜಿ ನಿಜಕ್ಕೂ ಆ ನಿನ್ನ ಸಾಹುಕಾರನ ಹಂಗಿನ ಅರಮನೆಗಿಂತ ಈ ನಿಮ್ಮ ಪ್ರೀತಿ ತುಂಬಿದ ಕುಟೀರ ನನಗೆ ತುಂಬಾ ಇಷ್ಟ ಆಯಿತು. ಅಂತು ನಮ್ಮ ಅಕ್ಕನ ಮದುವೆ ಆಯಿತು..ಈ ಮನೆಯಲ್ಲಿ  ಏನೋ ಕಳೆದುಕೊಂಡಂತೆ ಬರೆ ೨ ದಿನ ಉಳಿದ ನನಗೆ ಆಗುತ್ತಿರ ಬೇಕಾದರೆ..ಇನ್ನೂ ನಿನಗೆ ಒಡಹುಟ್ಟಿದವಳು.. ದುಃಖವಾಗುವುದು ಸಹಜ.. ನಿನ್ನ ಅಮ್ಮ , ಅಪ್ಪ, ಅಜ್ಜಿಯರ ಮನಸನ್ನ ನಾನು ಸಾಂತ್ವನ ಪಡಿಸಲಾರೆ.. ನಿಮ್ಮ ಭಾವ ನಮ್ಮ ಅಕ್ಕನನ್ನ ಚನ್ನಾಗಿ ನೋಡಿಕೊಳ್ಳಲಿ. ಖಂಡಿತ ನೋಡಿ ಕೊಲ್ಲುತ್ತಾನೆ.. ಯಾಕೆಂದರೆ.. ಹಾಗೇ ಬದಲಾಯಿಸುವ ಶಕ್ತಿ ನಿನ್ನ ಅಕ್ಕನಲ್ಲಿದೆ.. " ಎಂದು.. ಹೊರಗೆ ಬಂದು.. ಅಜ್ಜಿಯ ಕಾಲಿಗೆ ನಮಸ್ಕರಿಸಿ.. ಅಲ್ಲಿಂದ ಹೊರಟೆವು.. ನಿಜಕ್ಕೂ ಈ ನನ್ನ ಮಿತ್ರ ತನ್ನ ಅಕ್ಕನ ಮದುವೆ ಎಂಬಂತೆ ಸಡಗರದಿಂದ ನನ್ನ ಒಟ್ಟಿಗೆ ಕೆಲಸದಲ್ಲಿ ಸಹಾಯ ಮಾಡಿದ್ದ..  ಅವನು ಮತ್ತೆ ಯಜಮಾನನ ಮನೆಗೆ ಹೋಗೋಣ ಎಂದು ಹೊರಟು ನಿಂತಾಗ ನಮ್ಮ ಮನೆಯವರ ಮುಖವೆಲ್ಲ ಬಾಡಿತ್ತು .. ಅಕ್ಕನಷ್ಟೇ ಇವನು ತಮ್ಮ ಮನೆಯ ಮಗ ಈಗ ಹೊರಟು ನಿಂತಿರುವನಲ್ಲ ಎಂದು ಅವರ ಮನ ತಳ ಮಳಿಸಿತ್ತು.. ಅದಕ್ಕೆ ಸಾಕ್ಷಿ ಎಂಬಂತೆ ಅಮ್ಮ ಕೇಳಿಯೇ ಬಿಟ್ಟಳು " ಅಶ್ವಿನ್ ಅವರ ಮನೆಗೆ ಇವತ್ತೇ ಹೋಗಲೇ ಬೇಕೇನು??? ಇಲ್ಲೇ ಇದ್ದರೆ ನಮಗೂ ಏನೋ ಸ್ವಲ್ಪ ಸಮಾಧಾನ ಬೇಕಾದರೆ ಬಾಲಾಜಿ ಹೋಗಿ ಬರಲಿ ನೀನು ನಾಳೆ  ಹೋಗುವಿಯಂತೆ ಎಂದಳು "  ಅದಕ್ಕೆ " ಅಮ್ಮ ಇನ್ನೊಮ್ಮೆ ಖಂಡಿತ ಬರುತ್ತೇನೆ... ಆದರೆ ಇಂದು ನಾನು ಹೋಗಲೇ ಬೇಕು.. ಅನ್ಯಾತ ಭಾವಿಸದೆ ಆಶೀರ್ವದಿಸಿ ಕಳುಹಿಸಿ ಕೊಡಿ" ಎಂದು.. ಕೇಳಿಕೊಂಡ, ಇದು ಸಾಕಲ್ಲವೇ.. ನಮ್ಮ ಮನೆಯವರು ಅವನನ್ನ ನನ್ನ ಅಂತೆ ಎಷ್ಟು ಹಚ್ಚಿಕೊಂಡಿದ್ದರು ಎಂದು ತಿಳಿಯಲು... ನಿಜಕ್ಕೂ ಅವನು ನಾನು ನಮ್ಮ ಯಜಮಾನನ ಮನೆಗೆ ಹೊರಟಾಗ ದಾರಿಯ ನಡುವೆ ಫೋನ್ ರಿಂಗಿನಿಸಿತ್ತು.. ಅಮ್ಮ ಹೇಳುತ್ತಿದ್ದಳು.. ಮನೆ ಯಾಕೋ ಬಿಕೋ ಅನ್ನುತ್ತಿದೆ ಕಣೋ.. ಬೇಗ  ಹೋಗಿ ನಿಮ್ಮ ಯಜಮಾನನ ಮನೆಯಿಂದ ರಜಾ ಪಡೆದು ಬೇಗ ಬಾ....




ಮುಂದುವರೆಯುವುದು...

ಅರೆಮಲೆನಾಡ ಹುಡುಗನ ಅರೆಬೆಂದ ಕನಸು

ಅರೆಮಲೆನಾಡ ಹುಡುಗನ ಅರೆಬೆಂದ ಕನಸು
ಓದುವ ಮುನ್ನ ಒಂದು ಮಾತು : ಇದು ಸತ್ಯ ಘಟನೆ ಆಧಾರಿತ ಕಥೆ. ಹಃ ಅದು ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. ಆದರೆ    ಈ ಕಥೆಯಲ್ಲಿ ಬರುವ ವಕೀಲರಂತ ಗೋ ಮುಖ ವ್ಯಾಘ್ರಗಳು, ಭಟ್ಟರಂತ ಪ್ರಜ್ಞಾವಂತ ಬ್ರೋಕೆರ್ ಗಳಿಂದ ವಿದ್ಯೆಗಾಗಿ ಹಪಹಪಿಸಿ ಎಡವುವ ಬಾಲಾಜಿ, ಅಶ್ವಿನ್, ಶರತರಂತೆ ಯಾರು ಬಲಿ ಆಗದೆ ಎಚ್ಚರವಹಿಸುವಂತಗಲಿ ಎಂಬುದೇ ಈ ಕಥೆ ಬರೆದವನ ಆಶಯ. ಇಂಥ ಆಧುನಿಕ ಕಾಲಗಟ್ಟದಲ್ಲೂ ಇಂತವು ನಡೆಯುವುದೇ ಎಂದು ಕೇಳಬಹುದು. ಹಲವು ಪ್ರಶ್ನೆಗಳು ಎದುರಾಗಬಹುದು.. ಅದರ ಜಿಜ್ಞಾಸೆ ನಿಮಗೆ ಬಿಟ್ಟದ್ದು..


೧ 
ನವೆಂಬರ್ ೧೪

                        ಈ ದಿನ ಬಂದಗೆಲೆಲ್ಲ ಭಾರತೀಯರಿಗೆ ನೆನಪಾಗುವುದು ಮಕ್ಕಳ ದಿನಾಚರಣೆ ಎಂಬ ಸುದಿನ ನೆಹರು ಎಂಬ ಅನಭಿಷಿಕ್ತ ದೊರೆಯ ಹುಟ್ಟಿದ ದಿನ. ಆದರೆ ಭಾರತಿಯನದರೂ ನನಗೆ ನೆನಪಾಗುವುದು ನನ್ನ ಬಾಳಿನಲ್ಲಿ ವಿಮೋಚನೆಯ ದಾರಿ ಕಾಣಿಸಿದ ಸ್ವಾತಂತ್ರ್ಯದ ಬಗ್ಗೆ ತಿಳಿಸಿದ ಅಶ್ವಿನ ಎಂಬ ಮಲೆನಾಡ ಕನಸಿನ ಹುಡುಗ ಮಾತ್ರ.. 
                  ಎಲ್ಲರಂತೆ ನಾನು ಕೂಡ ಚನ್ನಾಗಿ ಓದ ಬೇಕು ನಂತರ ಒಳ್ಳೆ ಕೆಲಸ ಹಿಡಿಯಬೇಕು ಇಷ್ಟು ದಿನ ನನ್ನ ಹೆತ್ತು ಹೊತ್ತು ಸಲಹಿದ ನನ್ನ ಅಪ್ಪ ಅಮ್ಮ ನ್ದಿರನ್ನ "ನ ಭುತೊಹ್  ನ ಭವಿಷ್ಯತಿ" ಎನ್ನುವಂತೆ ಚನ್ನಾಗಿ ನೋಡಿಕೊಳ್ಳಬೇಕು.. ಜೊತೆಗೆ ನನ್ನ ಒಡಹುಟ್ಟಿದ ಅಕ್ಕನ ಮದುವೆಯನ್ನ ಚನ್ನಾಗಿ ಮಾಡಬೇಕು.. ಅವರ ಮೊಗದಲ್ಲಿಯಾ ನಗುವನ್ನ ಕಂಡು ನಾನು ಮಗುವಾಗಬೇಕು.. ಇದೆಲ್ಲವು ನಾನು ಪಿ ಯು. ಸಿ ಓದುತ್ತಿದ್ದಾಗ ಕಂಡ ಕನಸುಗಳು.
             ಅದು  ಸುಪ್ರಿಂ ಕೋರ್ಟ್ ಲಾಯೆರ್ ಎಂಬ ಗೋಮುಖ ವ್ಯಾಘ್ರನ ಕೈ ಕೆಳಗೆ ಕೆಲಸಕ್ಕೆ ಸೇರುವ ಮೊದಲಿನದು.. ಅಲ್ಲಿ ಅವನು ನಮಗೆ ಮುಂದೆ ಓದಿಸುತ್ತೇನೆ ಎಂದು ತಮ್ಮಲ್ಲಿ ಸೇರಿಸಿಕೊಂದಾಗಳು ಆ ಕನಸಿಗೆ ರೆಕ್ಕೆ ಪುಕ್ಕ ಬಲಿತಿತ್ತು. ಆದರೆ ಅಲ್ಲಿನ ದಿನಗಳು ನನ್ನ ಕನಸಿನ ಪಕ್ಷಿಯ ರೆಕ್ಕೆಯನ್ನ ಕಡಿದು ಹಾಕಿದವು. ಅಲ್ಲಿನ ದಿನಚರಿ ಹೇಗಿತ್ತು ಎಂದರೆ ಬೆಳಗ್ಗೆ ಮುಂಜಾನೆ ಎದ್ದು ಅರಮನೆಯಸ್ಟು ದೊಡ್ಡದಾಗಿದ್ದ ಮನೆಯನ್ನ ಎರಡೆರಡು ಬಾರಿ ಗುಡಿಸಿ ಒರೆಸಬೇಕು. ಏಕೆಂದರೆ ಒಂದು ಬಾರಿ ಮಾತ್ರ ಒರೆಸುವುದು ಸತ್ತವರ ಮನೆಯಲ್ಲಿ ಮಾತ್ರವಂತೆ.. ನಮ್ಮಲ್ಲಿ ಇನ್ನೊಬ್ಬ ನಮ್ಮ ವಕೀಲರಿಗೆ ಬೆಳಗಿನ ಬಿಸಿ ಬಿಸಿ ತಿಂಡಿ ಕಾಫಿ ಮಾಡಿ ಕೊಡಬೇಕು.. ಅಷ್ಟೆಲ್ಲ ಮಾಡುವದರ ಜೊತೆಗೆ ಅವನಿಗೆ ತಿನ್ನಿಸಬೇಕು. ಅದೆಲ್ಲ ಮುಗಿಯುವ ವೇಳೆಗೆ ೧೦ ಗಂಟೆ ಆಗಿರುತ್ತದೆ, ನಂತರ ರೇಶನ್ ಅಕ್ಕಿಯಿಂದ ಮಾಡಿದ ಅನ್ನದಲ್ಲಿ ಬೆಳಗಿನ ಊಟ. ಅದರ ನಂತರ ಅವನ ಬಟ್ಟೆಗಳನ್ನೆಲ್ಲ ತೊಳೆದು ಹಾಕಬೇಕು. ಹೀಗೆ ಹತ್ತು ಹಲವು ಕೆಲಸಗಳು ಕೆಲವಷ್ಟನ್ನು ಹೇಳದಿದ್ದರೆ ಚೆನ್ನ.. ಮಧ್ಯನ್ನ ಕೂಡ ನಮಗೆಲ್ಲ ತಂಗಳು ರೇಶನ್ ಊಟ. ರಾತ್ರಿ ನಮ್ಮ ಯಜಮಾನ ಕುಡಿದು ಅಮಲೇರಿ ಮಲಗಿದ ಮೇಲೆ ಅಂದರೇ ಭೂತ ಪ್ರೇತಗಳು ಎಚ್ಚರವಾಗುವ ಸಮಯದಲ್ಲಿ ಊಟ. ನಂತರ ಯಾವುದೇ ಹುಡುಗಿ ಅಂದು ಬಾರದಿದ್ದರೆ ಹುಡುಗಿಯ ಜಾಗದಲ್ಲಿ ನಾವು ವಕೀಲನ ಜೊತೆ ಮಲಗಬೇಕು   ಅದೆಲ್ಲದರ ನಡುವೆ ಬೆಳಗ್ಗೆ ಬೇಗ ಏಳಬೇಕು. ಇಸ್ಟೆಲ್ಲಾ ಮಾಡಿ ನಾವು ಓದುವುದು ಯಾವಾಗ??? ಆದರು ನಿಮಗೆ ಆಶ್ಚರ್ಯವಾಗಬಹುದು ದಿನವಿಡೀ ಕಾಲೇಜ್ ಗೆ ಹೋಗಿ ಎಕ್ಷಮ ಬರೆದರೂ ನಾನು ಪಿ. ಯು. ಸಿನಲ್ಲಿ ೬೦% ಮಾಡುವಾಗ ಹರಸಾಹಸ ಪಟ್ಟಿದ್ದೆ. ಆದರೆ ಪುಸ್ತಕ ಎಂಬುದನ್ನೇ ಓದದೆ ಕಾಲೇಜ್ ಮೆಟ್ಟಿಲು ಎಕ್ಷಮ ಗೆ ಮಾತ್ರವೇ ಹತ್ತಿ ಪ್ರತಿಷ್ಟಿತ ವಿಶ್ವ ವಿದ್ಯನಿಲಯದಿಂದ ಕಲಾ ಪದವಿ ಪಡೆದಿದ್ದೆ ಎಲ್ಲಾ ನಮ್ಮ ವಕೀಲರ ಪ್ರಭಾವದಿಂದ.. ಆಗಲೇ ತಿಳಿದದ್ದು ಹಣವೊಂದಿದ್ದರೆ ಏನನ್ನು ಸಾಧಿಸಬಹುದು.. ಕ್ರಮೇಣ ನನ್ನ ದುಃಖ ಮರೆಯಲು ಮದಿರೆಯಾ ಸಹವಾಸ ಅನಿವಾರ್ಯವಾಯಿತು.. ಈ ರೀತಿ ಬೇರೆ ಕಡೆ ಎಲ್ಲಾದರೂ ದುಡಿದಿದ್ದಾರೆ ನಮಗೆ ನೆಮ್ಮದಿ ಆದರು ಇರುತಿತ್ತು.. ಆದರೆ ಇವನು ನಮಗೆ ೩ ಹೊತ್ತು ಊಟ ಕೊಡುತ್ತಿದ್ದ ಅಷ್ಟೇ.. ಆರೋಗ್ಯ ಹದಗೆಟ್ಟರು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ನಾನು ಇಲ್ಲಿ ಉಳಿದಿರಲು ಕಾರಣ ಒಂದೇ ಯಾವುದೇ ಸೆಕ್ಯೂರಿಟಿ ಕೆಲದೇನೆ ನನ್ನ ಅಪ್ಪನ ಆಪರೇಷನ್ ದುಡ್ಡು ಅವನೇ ಕೊಟ್ಟಿದ್ದ..
    ಇಂತಹ  ಜೀತದ ಬದುಕಿನಲ್ಲಿ ನನ್ನ ಕನಸೆಲ್ಲ  ಮರೆತೇ ಹೋಗಿದ್ದವು ಎಲ್ಲೋ ಒಮ್ಮೊಮ್ಮೆ ನೆನಪಾದರು ಅದನ್ನ ಮರೆಯಲು ನಮ್ಮ ಸಾಹುಕಾರ ತನಗಾಗಿ ನಮ್ಮಿಂದ ಹೊರಿಸಿ ತಂದಿರುತ್ತಿದ್ದ ವಿವಿಧ ಬಣ್ಣದ ಮದಿರೆಯ ಕದ್ದು ಕುಡಿದರೆ ಮರೆತೇ ಹೋಗುತ್ತಿತ್ತು.. ಆಗ ಸಿಕ್ಕವನೆ ಈ ಅಶ್ವಿನ್ ಎಂಬ ಗಾರುಡಿಗ..
           ಆವತ್ತು ಮೈಸೂರ್ ಗೆ ಅವನನ್ನು ಕರೆ ತರಲು ನಮ್ಮ ಬಾಸ್ ಸಂಗಡ ಹೋದಾಗ " ಒಳ್ಳೆ ಹಳ್ಳಿ ಗಮ್ಮಾರ ಸಿಕ್ಕಿದ ಇನ್ನೂ ನಾನು ಮಾಡುವ ಕೆಲಸವೆಲ್ಲ ಇವನ ಹತ್ತಿರವೇ ಮಾಡಿಸಿದರಾಯಿತು ಒಳ್ಳೆ ಬಕರ. ಎಂದೆಲ್ಲಾ ಮನಸಿನಲ್ಲೇ ಮಂಡಿಗೆ ಮೆಂದಿದ್ದೆ."  ನಂತರ  ನೆದೆದಿದ್ದೆಲ್ಲವನ್ನ ಸಾಧ್ಯಂತ ವಿವರಿಸುವೆ.. ಅವನನ್ನು ಬಿಡಲು ಬಂದಿದ್ದ ಬಹುಶಃ ಅವನ್ ತಂದೆ ಇರಬೇಕು ನಮ್ಮ ಯಜಮಾನನ ಹತ್ತಿರ " ಸ್ವಾಮಿ ನಮಗೆ ನಿಮ್ಮ ಭಾಷೆ ಬರಲಾರದು ಆದರು ಹೇಳುತ್ತೇನೆ.. ಇವನಿಗೆ ತುಂಬಾ ಕಲಿಯಬೇಕೆಂಬ ಚಪಲ ಆದ್ರೆ ನನ್ನ ಕೈಯಲ್ಲಿ ಅಷ್ಟೆಲ್ಲ ಓದಿಸಲಾಗದು. ನೀವು ಓದಿಸುತ್ತಿರೆಂದು ಎಂದು ನಮ್ಮ ಭಟ್ರು ಹೇಳಿದುದರಿಂದ ನಿಮ್ಮೊಂದಿಗೆ ಈ ನನ್ನ ಮಗನನ್ನ ಕಳುಹಿಸಿ ಕೊಡುತ್ತೇನೆ." ಎಂದೆಲ್ಲಾ ವಿನಿತವಾಗಿ ಕೇಳಿಕೊಂಡಾಗ ಖಂಡಿತ ಎನ್ನುವಂತೆ ಭರವಸೆ ಕೊಟ್ಟ ಈ ನಮ್ಮ ಬಾಸ್. ನನಗೆ ಮನದಲ್ಲೇ ನಗು ಈ ಪುಣ್ಯಾತ್ಮ ಈ ನಮ್ಮ ಬಾಸ್ ಒಳ್ಳೆಯದನ್ನ ಮಾಡುವ ಎಂದು ನಂಬಿರುವನಲ್ಲ ಎಂದು.
           ನಂತರ ನಡೆದಿದ್ದೆ ಬೇರೆ ಅವನು ನಮ್ಮ ಬಾಸ್ ಮನೆಗೆ ಹೆದರುತ್ತಲೇ ಬಂದ.. ನಾ ತಿಳ್ದಷ್ಟು  ದಡ್ದನೆನಗಿರಲಿಲ್ಲ.. ಆಂಗ್ಲ ದಿನಪತ್ರಿಕೆಗಳನ್ನೆಲ್ಲ ಸಲೀಸಾಗಿ ಓದುತ್ತಿದ್ದ ಒಮ್ಮೆ ನನಗೆ ಅನುಮಾನ ಬಂದು ಇದು ನಾಟಕವ ಎಂದು ಪರೀಕ್ಷಿಸ ಹೋಗಿ ಕೈ ಸುಟ್ಟು ಕೊಂಡಿದ್ದಿದೆ.. ಕೆಲವೇ ದಿನಗಳಲ್ಲಿ ನಾವು ಮಾತಾಡುವ ತಮಿಳನ್ನ ಅರ್ಥ ಮಾಡಿಕೊಂಡು ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯಿಸ ತೊಡಗಿದ. ನನ್ನ ಕೆಲಸವನ್ನು ಅವನೇ ಮೊದ ಮೊದಲು ಮಾಡುತ್ತಿದ್ದವನು. ಒಂದು ಕ್ಷಣವೂ ಸುಮ್ಮನೆ ಕೂರದೆ ನಮ್ಮ ಬಾಸ್ ನಿಂದ ಏನೇನೋ ಇಂಗ್ಲಿಷ್ ಬುಕ್ ಕೇಳಿಕೊಂಡು ಓದ ತೊಡಗಿದ.. ನಂತರ ಕಂಪ್ಯೂಟರ್ ಅನ್ನು ನಮಗೆಲ್ಲ ಕಲಿಸಿದಂತೆ ಒಂದು ದಿನ ಹೀಗೆ ಉಪಯೋಗಿಸುವುದು ಎಂದು ತೋರಿಸಿಕೊಟ್ಟರು. ದಿನವು ಅದನ್ನ ಉಪಯೋಗಿಸಿ ಏನೇನೋ ಕಲಿಯ ತೊಡಗಿದ.. ನಮಗೂ ಆಸೆ ಇದ್ದರು ನಮ್ಮ ಕೆಲಸ ಕಾರ್ಯ ಮುಗಿಸುವುದರೊಳಗಾಗಿ ಮೈ ಮನವೆಲ್ಲ ದಣಿದು ಹಿಪ್ಪೆ ಆಗಿರುತಿತ್ತು ಮಲಗಿದರೆ ಸಾಕಾಗುತ್ತಿತ್ತು ಅದು ಅಲ್ಲದೆ ನಮ್ಮ ಬಾಸ್ ಈ ಮೊದ್ಲು ನಾನು ಹೀಗೆ ಬಳಸಲು ಹೋದಾಗ ಬೈದಿದ್ದ  ನೆನಪುಗಳು.. ಆಗೆಲ್ಲ ಆ ಬೇಸರ ಮರೆಯಲು ಆಸರೆ ಎಂದರೆ ಮದಿರೆ ಮತ್ತು ಸಿಗರೆಟ್ .

                   ನಂತರ ಇದ್ದಕಿದ್ದಂತೆ ಯಾಕೋ ಏನೋ ಅವನಿಗೆ ಚನ್ನೈ ವಾತಾವರಣ ಹಿಡಿದಸದೆ ಕಳೆಗುಂದಿದ. ಆರೋಗ್ಯ ಹದಗೆಟ್ಟಿತು.. ಇದೆ ವೇಳೆ ನಮ್ಮ ಬಾಸ್ ಅವನ ಮೇಲೆ ನಮಗೆ ಹೇಳಿದಂತೆ ಎಲ್ಲಾ ರೀತಿಯ ಕೆಲಸ ಹೇಳ ತೊಡಗಿದ  ಆದರೆ ಅವನು ಅದನ್ನ ಸಾಧ್ಯವಾದಷ್ಟು  ಮಾಡುತ್ತಿದ್ದ. ಒಂದು ದಿನ ಕುಡಿತದ ಮತ್ತಿನಲ್ಲಿದ್ದ ನಮ್ಮ ಬಾಸ್ ಅಶ್ವಿನ್ ನನ್ನು ತನ್ನ ಬಳಿ ಬರಲು ಕರೆದು ತಾವು ಊಟ ಮಾಡುತ್ತಿದ್ದ ತಟ್ಟೆಯಲ್ಲಿದ್ದ ತಮ್ಮ ಎಂಜಲನ್ನು ಅವನಿಗೆ ತಿನ್ನಿಸ ಹೋದರು.. ಎಲ್ಲಿತ್ತೋ ಅವನಿಗೆ ಸಿಟ್ಟು ಅವರ ತಟ್ಟೆಯನ್ನು ಕಸಿದು ದೂರ ಬಿಸಿ ಒಗೆದ " ಏನೋ ನಿನ್ನ ಎಂಜಲು ನಾನು ತಿನ್ನ ಬೇಕಾ? ನೋಡು ನಾನು ತಿಳುವರಿಕೆ ಬಂದಾಗಲಿಂದ ನನ್ನ ಅಪ್ಪ ಅಮ್ಮನ ಎನ್ಜಳನ್ನೇ ನಾನು ತಿನ್ದವನಲ್ಲ ಅಂತದ್ರಲ್ಲಿ ನಿನ್ನ ಅಂಥ ನಂಬಿಕೆ ದ್ರೋಹಿಗಳ ಎಂಜಲು ತಿನ್ನಿತಿನ??? ನನಗೆ ಶಿಕ್ಷಣ ಕೊಡ್ಸ್ತಿನಿ ಅಂಥ ಕರಕೊಂಡು ಬಂದು ಇಲ್ಲಿ ನಿನ್ನ ಜೀತದ ಕೆಲಸ ಮಾಡಸ್ತಿಯ??? ನಿನ್ನೆ ರಾತ್ರಿ ಯಾವುದೊ ನಿನ್ನ ಸೂಳೆ ಬಂದಿಲ್ಲ ಅಂತ ನನ್ನ ಕರೆದಿದ್ದೆ ಅಲ್ವ??? ಆಗ ಕೊಟ್ಟ ಏಟು ಮರೆತು ಹೊಯ್ತ ನನ್ನ ಮಗನೆ??? ಹೌದು.... ನಿಮ್ಮ ಕಾಲದಲ್ಲಿ ಅದೇನೋ ನಿನ್ನ ಎಂಜಲನ್ನ ನಿನ್ನ ಹೆಂಡತಿನದ್ರು ತಿನ್ನೋ ಸಂಪ್ರದಾಯ ಇತ್ತಲ್ಲವ??? ಅವಳೆಲ್ಲಿ  ಹೋದಳು??? ನಿನ್ನ ಕಾಟ ತದೆಲಿಕ್ಕ ಆಗದೆ ಬೇರೆ ಮನೆ ಮಾಡಿದಳ??? ಇನ್ನೂ ವೃದ್ದಾಪ್ಯದಲ್ಲಿ ನಮ್ಮನ್ನ ನೋಡ್ಕೋ ಬೇಕಾಗಿರೋದು ನಮ್ಮ ಭಾರತೀಯ ಸಂಸ್ಕ್ರುತಿನಲ್ಲಿ ಹೆತ್ತ ಮಕ್ಕಳು ಅವರು ಕೂಡ ನಿನ್ನ ಕಾಟ ಸಹಿಸಲಿಕ್ಕಗದೆ ದೂರ ಇಟ್ಟರ??? ಇಷ್ಟಾದರೂ ಇನ್ನೂ ನಿನ್ನ ದರಿದ್ರ ಬುದ್ದಿ ಬಿಟ್ಟಿಲ್ವ??? ಏನೋ ಅಂದೇ ಕುಡದ್ರೆ ಸ್ಟೇಟಸ್ ಬರುತ್ತಾ??? ಹಾಗೇ ಕುಡಿಯೋದ್ರಿನ್ದೆಲ್ಲ ಸ್ಟೇಟಸ್ ಬರೋ ಹಂಗಿದ್ರೆ ನಮ್ಮ ದೇಶದಲ್ಲಿ ದಟ್ಟ ದರಿದ್ರತೆನ, ಬಡತನನ ಮರೆಯ್ಕೊಸ್ಕರ ಕಂಠ ಪೂರ್ತಿ ಕುಡಿದು ಹಾದಿಯಲ್ಲಿ ಬಿಳತರಲ್ವ ಅಂತ ಬೇಜವಾಬ್ದಾರಿ ನಾಲಾಯಕ ಜನರೆಲ್ಲಾ ಒಳ್ಳೆ ಹೆಸರು ಮಾಡಿ ಬಿಡತಿದ್ರು.    ಇನ್ನೊಂದು ಸಲ ಏನಾದ್ರು ನನ್ನ ತಂಟೆಗೆ ಬಂದ್ರೆ ಅಷ್ಟೇ." ಎಂದೆಲ್ಲಾ ಆರ್ಭಟಿಸಿದ.  ಅವನ ಧೈರ್ಯ ಕಂಡು ನಿಜಕ್ಕೂ ಬೆರಗಾದೆ.. ಯಾವದೋ ತಮಿಳು ಫಿಲ್ಮನಲ್ಲಿ ನೋಡಿದ ಡೈಲಾಗ್ ನಂತಿತ್ತು..ಆದರೆ ಅದನ್ನ ನಿನ್ನೆ ಮೊನ್ನೆ ಕಂಡ ಈ ಹುಡುಗನ ಬಾಯಿಯಲ್ಲಿ ಕೇಳಿದ್ದೆ .
                                 ಆ ಸನ್ನಿವೇಶದ ನಂತರ ನಮ್ಮ ಬಾಸ್ ಎಂಬ ವಕೀಲ ಕೂಡ ಒಂದು ಕ್ಷಣ ನಡುಗಿದ್ದ.. ಅದನ್ನ ಮರೆಯಲು ಮತ್ತೊಂದು ಪೆಗ್ ಹಾಕಿದ್ದ!!! ನನಗೋ ಅವನಿಗೆ ಕೆಲಸ ಹೇಳಲು ಹೆದರಿಕೆ ಆಗ ತೊಡಗಿತು.. ಅವನ ಹೇಳಿದ್ದೆಲ್ಲ ಹಲವು ಬಾರಿ  ಮೆಲಕು ಹಾಕಿದಾಗ ನಿಜಕ್ಕೂ ಅವನ ಬಗ್ಗೆ ಭಯ ಮಿಶ್ರಿತ ಅಭಿಮಾನ ಮೂಡಿತ್ತು..
                                                                                                                                                            ಮುಂದುವರೆಯುವುದು....

Friday, October 15, 2010

ಬತ್ತಗೆರೆ ಸಾವಿತ್ರಜ್ಜಿ

ಬತ್ತಗೆರೆ ಸಾವಿತ್ರಜ್ಜಿ ಎಂಬ  ಆಧುನಿಕ ಹರಿಕಾರ್ತಿ


ನನ್ನ ಜೀವಾಮೃತವೆ...
                       ನೀನು 'ಇಂಥ ೨೧ ನೇ ಶತಮಾನದಲ್ಲಿಯೂ ಕೂಡ ಪತ್ರ ಬರವಣಿಗೆ ಯಾಕೆ??'  ಅಂಥ ಕೇಳಿದ್ದೆ ನೆನಪಿದೆಯ??? ನಿಜ.. ಆದರೆ ಮನದ ಎಲ್ಲಾ ತುಮುಲ ಹಾಗೂ ಭಾವನೆಗಳ ಮಿಡಿತವನ್ನ ಹೊರ ಹಾಕಲು ಇಂದಿನ ಆಧುನಿಕ ಸಂಪರ್ಕ ಮದ್ಯಮಗಳಿಂದ ಎಷ್ಟೇ ಸಾದ್ಯ ಕಣೋ ಅಂತ ನೀನು ಹೇಳಿದರು.. ಪತ್ರ ಬರೆಯುವಿಕೆ ಹಾಗೂ ಅದರ ಪರತುತ್ತರಕ್ಕಾಗಿ ಕಾಯುವಿಕೆ ನಿಜಕ್ಕೂ ಆ ಸಮಯದಲ್ಲಿ ಸಿಗುವ ಖುಷಿಯನ್ನ ಪದಗಳಲ್ಲಿ ಹಿದಿದಿರಲಾಗದಂತಹುದು.. ಅಂದಾಗ. ನೀನು  ಅದೇನೋ ನೋಡೇ ಬಿಡ್ತೀನಿ ಅಂತ ಸವಾಲು ಸ್ವಿಕರಿಸುವವಳಂತೆ ನೋಡಿ ಒಪ್ಪಿಕೊಂಡೆ.. ಈಗ ನಂಗೆ ಪುರುಸೊತ್ತು ಸಿಗುವುದಿಲ್ಲ ನನ್ನ ಬಂಗಾರ ಅಂತ ಹೇಳುತ್ತಾನೆ ಎಷ್ಟೋ ಪತ್ರ ನಮ್ಮಿಬ್ಬರ ನಡುವೆ ಬಟವಾಡೆ ಆಗಿ ಹೋಯಿತು ಅಲ್ಲವ???  ನಿಜ ನಾನು ಪತ್ರ ಬರೆಯಲು ಕಲಿತದ್ದು ನನ್ನ ಅಮ್ಮನಿಂದ ನಾನು ಶಾಲೆಗೆ ಸೇರಿ ಅಲ್ಲಿ ಪತ್ರ ಬರೆಯುವುದನ್ನ ಹೇಳಿ ಕೊಡುವ ಮೊದಲೇ.. ನನ್ನ ಹೆತ್ತಮ್ಮ ತನ್ನ ತವರೊರಿಗೆ ಹಾಗೂ ದೂರದ ಕೇರಳ ದಲ್ಲಿದ್ದ ನನ್ನ ಚಿಕ್ಕಪ್ಪನಿಗೆಲ್ಲ ಪತ್ರ ಬರೆದು ಕ್ಷೇಮ ಸಮಾಚಾರ ಕೇಳುವಾಗ ನನ್ನ ಹತ್ತಿರದಲ್ಲೇ ಬರೆದು ಕೊಡು.. ಹೀಗೆ ಬರೆಯಬೇಕು ಎಂದೆಲ್ಲಾ ನಿರ್ದೇಶಿಸಿ ಕೊನೆಯದಾಗಿ ತಪ್ಪುಗಳಿದ್ದಲ್ಲಿ ತಿದ್ದಿ ಓದಿ ಎಂದು ಮುಗಿಸುತ್ತಿದಳು.. ಅದು ನನಗೆ ಈಗ ನನ್ನ ಭಾವನೆಯನ್ನ ಹಂಚಿಕೊಳ್ಳಲು ಸಹಾಯ ಮಾಡುತ್ತಿದೆ..
                    ಹಃ  ಮೊನ್ನೆ ಅಮ್ಮ ಫೋನ್ ಮಾಡಿದ್ದಾಗ ನಮ್ಮೂರಿನ ಸಾವಿತ್ರಜ್ಜಿ ತೀರಿಹೋದಳು ಎಂದಳು.. ಫೋನ್ ಇಟ್ಟ ಮೇಲೆ ಸಾವಿತ್ರಜ್ಜಿ ಎಂಬ ಆಧುನಿಕ ಹರಿಕಾರ್ತಿಯ ನೆನಪು ಕಣ್ಣು ಮುಂದೆ ಬಿಡದೆ ಕಾಡಿತು.. ಬೊಚ್ಚು ಬಾಯಿಯ ಕಾಟನ್ ಸೀರೆಯ ಆ ಆಜ್ಜಿ ನನಗೆ ತಿಳಿದಂತೆ ನನ್ನ ಅಜ್ಜಿಯ ಆಪ್ತ ಗೆಳತಿ.. ದಿನ ಮಧ್ಯಾಹ್ನ  ಊಟ ಚಹ ಆದ ಮೇಲೆ ಒಂದು ಕುಡುಗೋಲು ಹಿಡಿದು ಅದನ್ನು ಮಸೆಯುವ ನೆಪ ಮಾಡಿ ನಮ್ಮ ಮನೆಗೆ ದಾವಿಸಿದಳೆಂದರೆ   ಅಲ್ಲಿ ಆರಂಭ ಆಯಿತು ಮುದುಕಿಯರ ಕಟ್ಟೆ ಮಾತುಕತೆ... ಇನ್ನೂ ಆ ಅಜ್ಜಿ ಹೊರಡಲು ಸೂರ್ಯ ತನ್ನ ದಿನಚರಿ ಮುಗಿಸಿ ಇನ್ನೂ ತಾನು ನಾಳೆ ಬರುವೆ ಎಂದು ಹಿಂದಿನ ಧರೆಯ ಕಡೆ ಹೊರಟಿರ ಬೇಕು ಅಷ್ಟೊತ್ತಿಗೆಲ್ಲ ಕವಳದ ಬಟ್ಟಲಿನಲ್ಲಿಯ ಸಾಮಗ್ರಿಗಳೆಲ್ಲ ( ಅಡಕೆ, ಸುಣ್ಣ, ತಂಬಾಕು) ಮುದುಕಿಯರ ಸ್ಪರ್ದೆಯಲ್ಲಿ ತಾನು ಸೋತೆ ಎನ್ನುತ್ತಾ ಬರಿದಾಗಿ ಅವರ ಬಾಯಿಗಳಿಗೆ ಆಹಾರ ವಾಗಿರುತ್ತದೆ.. ಇನ್ನುಲಿದದ್ದರಲ್ಲಿ ಒಂದು ಕವಳ ಬಡ ಸಾವಿತ್ರಜ್ಜಿಯ ಮುಡಿ ಕಂಕುಳನ್ನ ಸೇರಿರುತ್ತೆ.. ಅಜ್ಜಿ ಹೊರಾಡುವ ವೇಳೆಗೆಲ್ಲ ನಾವು ಶಾಲೆ ಮುಗಿಸಿ ಮನೆಗೆ ಬಂದಿರುತ್ತೆವೆಲ್ಲ ನಮ್ಮ ಹುಡುಗಾಟಿಕೆಗೆ ಎಷ್ಟೋ ಬಾರಿ ಆ ಅಜ್ಜಿಯ  ಬಾಯಿಂದ ಅಷ್ಟೋತ್ತರವನ್ನ ಕೇಳಿಸಿಕೊಂಡದ್ದು ಉಂಟು.. ಹಾಗೇ ಕೆಲವೊಮ್ಮೆ ಅಜ್ಜಿಗೆ ಕೊಡುತ್ತಿದ್ದ ತ್ರಾಸುಗಳು ಅಷ್ಟಿಷ್ಟಲ್ಲ.. ಅಲ್ಲವ??? 
               ಒಮ್ಮೆ ನಿನಗೆ ನೆನಪಿದೆಯ ಸಾವಿತ್ರಜ್ಜಿಯ ಬಂದಳೆಂದು ಕವಳದ ಬಟ್ಟಲು ಅಡಗಿಸಿಟ್ಟದ್ದು.. ನಂತರ ಅದು ಯಾಕೆ ಹಂಗೆ ಮಾಡಿದೆ ಎಂದು ಆ ಅಜ್ಜಿ ಕೇಳಲಾಗಿ ನಾನು ನಿಮ್ಮ ಮನೆಯ ಅಡಿಕೆ ಖರ್ಚಾಗುತ್ತದೆ ಎಂದು ಇಲ್ಲಿಗೆ ಬಂದು ಕವಳ ಹಾಕುತ್ತಿಯ  ಎಂದದ್ದು.. ಅವಳು ಅದನ್ನೇ ದೊಡ್ದದನ್ನಗಿಸಿ ಸತ್ಯವನ್ನ ಅರಗಿಸಿ ಕೊಳ್ಳಲಾಗದೆ ನನಗೆ ಹೊಡೆದದ್ದು. ನಾನು ಇನ್ನೇನು ಎಲ್ಲಾ ಮುಗಿಯಿತು ಇನ್ನೂ ಅತ್ತು ಸಂತೈಸಿ ಕೊಳ್ಳೋಣ ಎಂದಿರುವಾಗಲೇ ಆದರ್ಶವನೆಲ್ಲ ತನ್ನ ಮಗ ಮೈಗೂಡಿಸಿಕೊಂಡು ಬೆಳೆಯೇಬೇಕೆಂದು ನನ್ನ ಸಣ್ಣ ಸಣ್ಣ ತಪ್ಪಿಗೂ ಕೈ ಗೆ ಸಿಕ್ಕಿದುದ್ರಲ್ಲಿ ತನಗೆ ಸಮಾಧಾನ ಆಗುವ ತನಕ ಬಡಿದು  ನನ್ನ ಹದ ಮಾಡುತ್ತಿದ್ದ ನನ್ನ ತೀರ್ಥರೂಪನಿಗೆ ಸುದ್ದಿ ಮುಟ್ಟಿಸಿ ಅವನಿಂದ ಆ ಅಜ್ಜಿ ಹೊಡೆದ ನೋವಿನ ಮೇಲೆ ಮತ್ತೊಂದಿಷ್ಟು ತನ್ನ ದೇಣಿಗೆಯನ್ನ ಆಪ್ಪ ಕೊಟ್ಟಿದ್ದು.. ಅದನ್ನ ಕಂಡು ಕಾಣದವಳಂತೆ ಸುಮ್ಮನಿದ್ದ ನನ್ನ ಅಮ್ಮನ ಹತ್ತಿರ ನಾನು ತೋರಿಸಿದಾಗ ಆಕೆ  'ಕೊಟ್ಟು ಹಂಗಿಸಬೇಡ' ಎಂಬ ಪಾಠ ಹೇಳಿ ನನ್ನ ಸಮಾಧಾನ ಮಾಡಿದ್ದೂ ..   ನಂತರ ಆದ  ಬಸುಂದೆಗಳಿಗೆ ಅಮ್ಮ ಎಣ್ಣೆ ಹಚ್ಚುತ್ತ ಏನೇನೋ ಪುರಾಣದ ಕಥೆ ಹೇಳಿದ್ದು.. ಸೆರಗಿನಲ್ಲೆ ಕಣ್ಣು ಒರೆಸಿಕೊಂಡದ್ದು..
 ಈ ಪ್ರಸಂಗ ಆದ ನಂತರ ನಾವಿಬ್ಬರು  ಆ ಅಜ್ಜಿಯನ್ನು ಇನ್ನಷ್ಟು ದ್ವೇಷಿಸಲು ಶುರು ಮಾಡಿದ್ದೂ... ನಂತರ ನಮ್ಮದೇ ತಪ್ಪು ಎಂದು ಗೊತ್ತಾದ ಮೇಲು ಅವರು ನನಗೆ ಹೊಡೆದೇಕೆ ಹೇಳ ಬೇಕಿತ್ತು ಹಾಗೇ ಹೇಳಿದ್ದರೆ ತಿಳಿದು ಕೊಳ್ಳುತ್ತಿದ್ದೆ ಎಂದು ನಮ್ಮನ್ನೇ ಸಮರ್ಥಿಸಿಕೊಂಡದ್ದು..
ಎಲ್ಲಾ ನೆನಪಾಯಿತು...
 ಹ ಆ ಅಜ್ಜಿಯ ಬಗ್ಗೆ ನಾನು ಅಭಿಮಾನ ಹೊಂದಿರಲು ಕಾರಣ ಹಾಗೂ ಅವಳನ್ನ ನಮ್ಮೂರಿನ ಆಧುನಿಕ ಹರಿಕಾರ್ತಿ ಎನ್ನಲು ಆಕೆಯ ವೈಚಾರಿಕ ನಿಲುವನ್ನು ಆವಳ ಧ್ರುಧತೆಯನ್ನು ಕಂಡಾಗ ನಿಜಕ್ಕೂ ನನಗೆ ಆಕೆಯಲ್ಲಿ ಅಭಿಮಾನ ಮೂಡುತ್ತದೆ..  ಹಾಗೇ ಹೇಳಲು ಕಾರಣವಿದೆ.. ಅವಳು ನನಗೆ ತಿಳಿದಂತೆ.. ನಮ್ಮ ಸಮಾಜದಲ್ಲಿ ಸ್ತ್ರೀಯರಿಗೆ ಸ್ಥಾನ ಮಾನವೇ ಇಲ್ಲಾ ಎನ್ನೋ ಕಾಲದಲ್ಲಿ  ತನ್ನ ೩ ಗಂಡು ಮಕ್ಕಳನ್ನ ದೂರ ಇಟ್ಟು ತನ್ನ ಕಿರಿಯ ಮಗಳಿಗೆ ತನ್ನ ಮನೆಯ ಯಜಮಾನಿಕೆಯನ್ನ  ನೀಡಿ ಅವಳ ಜೊತೆಗೆ ಜೀವನ ನೆಡೆಸಿದವಳು.. ಅಷ್ಟೇ ಅಲ್ಲಾ ತನ್ನ ಆ ಮಗಳು ಮದುವೆಯಾಗಿ ವರ್ಷವಾಗುವ ಮುನ್ನವೇ  ಗಂಡನನ್ನು ಬಿಟ್ಟು ಬೇರೆ ಜಾತಿಯ ಕುಬೇರನನ್ನ ವಿವಾಹ ಆದಾಗ.. ಧೃತಿಗೆಡದೆ ಅದನ್ನು ಸಮಾಜ್ ಏನೇ ಅಂದರು ತಲೆಕೆಡಿಸಿಕೊಳ್ಳದೆ.. ತನ್ನ ಆ ಮಗಳಿಗೆ ಒತ್ತಾಸೆ ಆಗಿ ನಿಂತ ಮಹಾತಾಯಿ ಅವಳು.. ಆ ಮೂಲಕ ಸಂಪ್ರದಾಯವನ್ನೆಲ್ಲ ಬದಿಗೊತ್ತಿ ಜಾತ್ಯತಿತತೆಯನ್ನ ಮೆರೆದ ಆಧುನಿಕ ಹರಿಕಾರ್ತಿ ಎಂದರೆ ತಪ್ಪದಿತೇನು?? ನೀನೆ ಹೇಳು ನನ್ನ ಅಭಿಪ್ರಾಯ ಸರಿ ಇಲ್ಲವೇನು ನನ್ನ ಚಿನ್ನು????

Monday, September 27, 2010

ಇಂದಿನ ಚುನಾವಣೆಯ ಅಣಕ

ಇಂದಿನ ಚುನಾವಣೆಯ ಅಣಕ :
         ಓ ನನ್ನ ಜೀವವೇ,
                                ಹೇಗಿದ್ದೀಯ??? ಎಲ್ಲಿರುವೆ??? ಕ್ಷೇಮವೇನು??? ಎಂದೆಲ್ಲಾ ಕೇಳಲಾರೆ ನಿನೇಲ್ಲಿದ್ದರು ಸುಖದಿನದಂದ ಇರುವೆ ಎಂದೇ ಭಾವಿಸುವೆ.. ಏಕೆ ಎಂದರೆ ನೀನೆ ನಾನಾಗಿರುವಾಗ, ನಾನೇ ನಿನಾಗಿರುವಾಗ, ನಿನಗೆ ನೋವು ಉಂಟಾದರೆ ನನ್ನೀ ಮನ ಸಂತಸದಿಂದ ಇರಲು ಸಾಧ್ಯವೇನು??? ಅಂಥಹ ಪ್ರಶ್ನೆಗಳೆಲ್ಲಾ ನಮ್ಮಿಬ್ಬರ ನಡುವೆ ಅರ್ಥವಿಲ್ಲದ್ದು ಎಂದೇ ನನ್ನ ಒಡಲಾಳದ ಇಂಗಿತ..




                           ನಾನು ನಿನಗೆ ಹೇಳದೆ ಇರುವ ವಿಷಯ ಯಾವುದಾದರು ಇದೆಯೇನು???? ಆದರು ನಾನು ಮತ್ತೊಮ್ಮೆ ನಮ್ಮ ಪಿ. ಯು. ಸಿ ಕಾಲೇಜ್ನಲ್ಲಿ  ವಿದ್ಯಾರ್ಥಿ ಪರಿಷತ್ತಿಗೆ ನಡೆದ  ನಮ್ಮ ಪಾಲಿನ ಮಹಾ ಚುನಾವಣೆಯ ಘಟನೆಯನ್ನು ಹೇಳ ಬಯಸುತ್ತೇನೆ..




           ಹೈಸ್ಚೂಲ್ನಲ್ಲಿ ಸಾಂಸ್ಕ್ರತಿಕ ಮಂತ್ರಿಯಾಗಿ ಚುನಾವಣೆಯಲ್ಲಿ ಗೆಲುವಿನ ಸವಿ ಉಂಡಿದ್ದ ನನಗೆ ದ್ವಿತೀಯ ಪಿ.ಯು.ಸಿಯಲ್ಲೂ ಚುನಾವಣೆಗೆ ನಿಲ್ಲಬೇಕಾದ ಅನಿವಾರ್ಯತೆ ಬಂದಿತು.. ಕಾಲೇಜ್ಗೆ ಹೋಗೋದೇ ಬೇಡ ಕಲ್ತಿರೋದು ಸಾಕು ಯಾವದಾದ್ರು ಕೆಲಸ ಮಾಡಲಿ ಸಾಕು ಎಂಬ ನಮ್ಮ ಮನೆಯ ಯಜಮಾನ ಚಿಕ್ಕಪ್ಪನ ಒತ್ತಡದ ನಡುವೆಯೂ ಏನೋ ಒಂದು ಕಲಿಬೇಕು ಕಲಿಯುತ್ತೇನೆ ಎಂದು ಹಠ ಮಾಡಿ ಸಂಬಂಧಿಕರಾದ ನನ್ನ ಪಾಲಿನ ಪ್ರಾತಃ ಸ್ಮರನಿಯರಾದವರ ಮನೆಯಲ್ಲಿ ಉಳಿದು ಅಮ್ಮ ಕೊಡಿಸಿದ ಸೈಕಲ್ ಏರಿ ನಾನಿಕಟ್ಟ ಸರಕಾರಿ ಪ.ಪೂ.ಕಾಲೇಜ್ ನಾ ವಿದ್ಯಾರ್ಥಿ ಆದೆ.  ವಿಚಿತ್ರವೋ ಏನೋ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿದ ನಾನು ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿ!!!! ಗುರುಗಳಿಗೆಲ್ಲ ನೆಚ್ಚಿನ ವಿದ್ಯಾರ್ಥಿಗಳಲ್ಲಿ ನಾನು ಒಬ್ಬ... ಪ್ರಥಮ ವರ್ಷದಲ್ಲಿ ತರಗತಿಗೆ ಮೊದಲಿಗನಾಗಿದ್ದರಿಂದ ವಿದ್ಯಾರ್ಥಿ ಪರಿಷತ್ತಿನಲ್ಲಿ ಸದಸ್ಯತ್ವ ಸ್ಪರ್ದಿಸದೆ ಸಿಕ್ಕಿತ್ತು. ಆದರು ನಮ್ಮ ಗುರುವರ್ಯರೊಬ್ಬರು ನಮ್ಮ ಬ್ಯಾಚಿನಿಂದ ಮಹಿಳಾ  ಪ್ರತಿನಿಧಿಯನ್ನೇ ಆರಿಸಿ ತರಬೇಕೆಂದು ಗಂಡು ಮಕ್ಕಳಾದರೆ ತಮಗೆ ನಿಷ್ಥೆ ತೋರರೆಂಬ ದೂರಾಲೋಚನೆಯಿಂದ ಗಂಡು ಮಕ್ಕಳು ಕೆಲವೇ ಸಂಖ್ಯೆ ಅಲ್ಲಿ ಬಂದಿದ್ದ ದಿನವನ್ನು ಆರಿಸಿ ಧಿಡೀರ ಅಂಥ ಚುನಾವಣೆ ಘೋಷಿಸಲಾಯಿತು.. ಮತ್ತು ಅಂದೇ ನಾಮಪತ್ರ ಸಲ್ಲಿಸಲು ಕಡೆಯ ದಿನ. ಮಾರನೇ ದಿನವೇ ನಮ್ಮ ಸಂಸತ್ತಿನ ಮಹಾ ಚುನಾವಣೆ.. 



                    ಇದನ್ನರಿತು  ಮೊದಲ ವರ್ಷ ಹಾವು ಮುಂಗಸಿ ಅಂತೆ ಕಚ್ಚಾಡುತ್ತಿದ್ದು ಕೊನೆಯ ವರ್ಷದಲ್ಲಿ ಆತ್ಮೀಯ ಮಿತ್ರನಾಗಿದ್ದ ವಿನಯ ದಂತ್ಕಲ್ ನನ್ನು ನಿಲ್ಲಿಸಲು ತಿರ್ಮಾನಿಸಿದೆವು.. ಆದ್ರೆ ಅವಿರೋಧ ಆಯ್ಕೆ ಆದ್ರೆ ಮತ್ತೆ ಬೇಗ ತರಗತಿಗಳು ಆರಂಭವಾಗುತ್ತದೆ ಅದಕ್ಕಾಗಿ ಚುನಾವಣೆ ನಡೆಸೋಣ ಎಂದು ನಿರ್ಧರಿಸಿದೆವು. ಅವನಿಗೆ ಎದುರಾಳಿಯಾಗಿ ಯಾರು ನಿಲ್ಲಲು ತಯಾರಿ ಇಲ್ಲದಿದ್ದಾಗ ನಾನೇ ಸ್ಪರ್ಧಿಸಲು ತೀರ್ಮಾನಿಸಿದೆ... ಅದರ ಹಿಂದಿನ ಕಾರಣ ಇಷ್ಟೇ ತುಂಬಾನೇ ಕಡಿಮೆ ಜನರಿರುವ ನಮ್ಮ ತರಗತಿಯಲ್ಲಿ ಹುದುಗಿಯರ್ದೆ ಸಂಖ್ಯಾ ಬಾಹುಳ್ಯ ಜಾಸ್ತಿ ಇದ್ದರು ಅವರಾರು ನಿಲ್ಲದೆ ಇದ್ದರೆ ಮಾತ್ರ ನಾನು ನಿಲ್ಲುವುದು  ಒಂದು ವೇಳೆ ನಿಂತರೆ ನಾನು ನಿಲ್ಲಬಾರದು ಎಂದು ನಿರ್ಧರಿಸಿದೆ.. ಅವರಾರು ನಿಲ್ಲಲಿಲ್ಲ.. ಆ ದುರ್ಧೈವ ನಂಗೆ ಕಾದಿತ್ತು. 




ಮತ ಯಾಚನೆ ಸಮಯದಲ್ಲಿ ನಮ್ಮ ಆತ್ಮೀಯ ಮಿತ್ರ ಪಕ್ಕ ರಾಜಕಾರಣಿಯಂತೆ ಮತ ಯಾಚಿಸಿದ ಭರವಸೆಯ ಆಶ್ವಾಸನೆಗಳ ಮಹಾಪೂರವನ್ನೇ ಹರಿಸಿದ. ಪ್ರಿಯೆ ಸೋಲನ್ನೇ ಬಯಸಿ ಸ್ಪರ್ಧಿಸಿದವನ ಎದುರು ಭಾರಿ ಬ್ರಹ್ಮಸ್ತ್ರವನ್ನೇ ಬಿಸಿದ್ದ. ನಾನು ಯಾವ ರೀತಿ ಮತ ಯಾಚಿಸಿದೆ ಗೊತ್ತೇನೆ...ಚುನಾವಣೆ ಆಗಲೇಬೇಕೆಂಬ ಮಹೋನ್ನತ ಉದ್ದೇಶ ಬಿಟ್ಟರೆ ಮತ್ತಿನ್ನಾವ ದುರುದ್ದೇಶವು ನನ್ನಲ್ಲಿ ಇರಲಿಲ್ಲ ಅದಕ್ಕಾಗಿಯೇ ಸ್ಪರ್ಧಿಸಿದವನು. ನಾನು " ಪ್ರೀತಿಯ ಗೆಳೆಯರೇ/ತಿಯರೇ ತಮ್ಮಲ್ಲಿ ಕೇಳಿ ಕೊಳ್ಳುವುದಿಷ್ಟೇ,  ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗಳಾದ ನಾವುಗಳು ಮುಂದಿನ ಭವ್ಯ ಭಾರತವನ್ನ ಆಳಲು ನಮ್ಮ ನಮ್ಮ ಪ್ರತಿನಿಧಿಗಳನ್ನ ಆಯ್ಕೆ ಮಾಡುವರಾಗಿರುವದುರಿಂದ , ಇಂದು ವಿದ್ಯಾರ್ಥಿ ಪರಿಷತ್ತಿಗಾಗಿ ನಡೆಯುತ್ತಿರುವ ಈ ಚುನಾವಣೆಯನ್ನು ಒಂದು ಅಣಕವೆಂದು ಭಾವಿಸಿ. ನಾವು ಎಂಥಹ ಪ್ರತಿನಿಧಿಗಳನ್ನ ನಮ್ಮ ದೇಶವನ್ನಾಳಲು ಬರುವ ಚುನಾವಣೆಗಳಲ್ಲಿ ಕಳುಹಿಸುತ್ತೇವೆ ಎಂಬುದನ್ನ ನಾವು ಇಂದು ನಮ್ಮ ಗುರುವರ್ಯರುಗಳಿಗೆ ತೋರಿಸಿ ಕೊಡೋಣ ಎಂದು ನಿರ್ಧರಿಸಿ ಮತ ಚಲಾಯಿಸಿರಿ. ಈಗಾಗಲೇ ನನ್ನ ಗೆಳೆಯ ಹಾಗೂ ಪ್ರತಿಸ್ಪರ್ಧಿ ಇಂದಿನ ಎಲ್ಲಾ ರಾಜಕಾರಣಿಗಳಂತೆ ಆಶ್ವಸನೆಗಳನ್ನ ನೀಡಿದ್ದಾನೆ ನಾನು ನಿಮಗೆ ಯಾವದೇ ಬಗೆಯ ಆಶ್ವಾಸನೆಯನ್ನು, ಆಸೆಯನ್ನು ತೋರಿಸುವ ಪ್ರಯತ್ನ ಮಾಡಲಾರೆ.ನಾನೇ ಏನಾದ್ರು  ಆಯ್ಕೆ ಆದರೆ ಖಂಡಿತ ನನಗೆ ಸಿಗುವ ಅಧಿಕಾರವನ್ನು ನಿಮ್ಮೆಲ್ಲರ ಇಚ್ಹೆಗಳನ್ನ ಪೂರೈಸಲು ಬಳಸುತ್ತೇನೆ.. ನಾನೇ ಗೆಲ್ಲಬೇಕೆನ್ದೆನು ಇಲ್ಲ ನನ್ನ ಗೆಳೆಯ ಗೆದ್ದರೆ innu  ನನಗೆ ಸಂತೋಷ್ ಎಂದು ಕುಳಿತೆ. ಒಂದಂತು ಸತ್ಯ ಭವಿಷ್ಯತ್ತಿನ ಭಾರತದ ಚುನಾವಣೆಗಳು ಯಾವ ರೀತಿ ಇರುತ್ತವೆ ಎಂಬುದನ್ನ ಈ ಚುನಾವಣೆ ತೋರಿಸಿ ಕೊಡಲಿ ಎಂಬ ಆಶಾವಾದಿತನದಿಂದ ಫಲಿತಾಂಶವನ್ನ ಎದುರು ನೋಡುತ್ತಿರುತ್ತೇನೆ..




              ಫಲಿತಾಂಶ ಏನು ಬಂದಿರಬಹುದು ನನ್ನ ಚಿನ್ನು... ಈ ನಿನ್ನ ಹೀರೋ  ನಿನಗೆ ಮಾತ್ರ ಒಳ್ಳೆಯವನು ಉಳಿದವರಿಗೆಲ್ಲ ಅಯೋಗ್ಯ ಎಂಬುದು  ಈ ಚುನಾವಣೆ ಕಳಿಸಿ ಕೊಟ್ಟಿತು.. ಹೀನ ಮಾನವಾಗಿ ಸೋತಿದ್ದೆ..  ಆದರು ನಮ್ಮ ತಂತ್ರ ಫಲಿಸಿತ್ತು ನಮ್ಮ ಗೆಳೆಯ ಗೆದ್ದಿದ್ದ.. ನನ್ನ ಸೋಲನ್ನು ಅಣಕಿಸಿ ಕೇಳಿದ ನಮ್ಮ ಕನ್ನಡ ಗುರುಗಳಿಗೆ ನಾನು ಹೇಳಿದ ಉತ್ತರವೇನು ಗೊತ್ತೇನು ನನ್ನ ಚಿನ್ನ, ಒಂದು ರೀತಿಯಲ್ಲಿ ನನ್ನ ಉತ್ತರ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎನ್ನುವ ಜಟ್ಟಿ ಧೋರಣೆಯಂತೆ ಯಾವಾಗಲು ನಿನ್ನ ಮುಂದೆ ಸೋತಾಗ ಆಡುತ್ತಿದ್ದೆನಲ್ಲ ಅಂಥ ಒಣ ಸಮರ್ಥನೆ ಅಂಥ ಈಗ ಅನ್ನಿಸುತ್ತಿದೆ.   "ಸರ್ ನನಗೆ ಬೇಸರವಗುತ್ತಿರುವುದು  ನನ್ನ ಸೋಲಿಗಲ್ಲ. ನಿಜಕ್ಕೂ ಮನಸ್ಸು ಭಾರವಾಗುತ್ತಿರುವುದು ನಮ್ಮ ಕಾಲದಲ್ಲಿ ಆದರು ಭಾರತದ ಆಡಳಿತದ ಚುಕ್ಕಾಣಿಯನ್ನ ದಕ್ಷರು ಹಿಡಿಯುವರೆಂದು ಕನಸು ಕಾಣುತ್ತಿದ್ದೆ.. ಆದರೆ ಅದೆಲ್ಲ ಬರೆ ಭ್ರಮೆ ಎಂಬುದನ್ನ ನನ್ನ ಮಿತ್ರರು  ಈ ಚುನಾವಣೆಯ ಮೂಲಕ ಸಾಭಿತು ಪಡಿಸಿದರು ಎಂದೆ.




    ಆದರೆ ನಾನು ಹೇಳಿದ್ದು ಸರಿ ಅಂಥ ನನಗೆ ನನ್ನ ನೆಚ್ಚಿನ ಗುರುಗಳಾಗಿದ್ದ ಹಾಗೂ ನಮ್ಮ ರಾಜ್ಯಶಾಸ್ತ್ರದ ಗುರುಗಳಾಗಿದ್ದ ಯು.ಸಿ. ಶಾಸ್ತ್ರಿಗಳು ನನ್ನ ಪರವಾಗಿ, ನಡೆದಿರುವದು ಏನೆಂದು ಕನ್ನಡ ಗುರುಗಳಿಗೆ ತಿಳಿಯಪಡಿಸಿ, ಅವರು ನನ್ನ ಬೆನ್ನು ನೇವರಿಸಿದಾಗ ನಿಜಕ್ಕೂ ನಾನು ಸೋಲಿನಲ್ಲು ಗೆಲವು ಕಂಡಿದ್ದೆ..






     ಗೆಲುವಿನ ಉನ್ಮಾದತೆಯಲ್ಲಿ ಮೈ ಮರೆತಿದ್ದ ನನ್ನ ಗೆಳೆಯ ಕೊಟ್ಟ ಅಶ್ವಾಸನೆಗಳನ್ನ ಜಾರಿ ತರಲು ಪ್ರಯತ್ನಿಸಿ ವಿಫಲನಾಗಿದ್ದ. ದಿನದಾಂತ್ಯಕ್ಕೆ ನನ್ನ ಮನ ಭಾರವಾಗಲು ನನ್ನ ಮಿತ್ರ ಹೇಳಿದ ಒಂದು ಮಾತು ಸಾಕಾಯಿತು  ನನ್ನ ಆ ಕಾಲದ ಪ್ರತಿಸ್ಪರ್ಧಿ ಮತ್ತು ನನ್ನ ಮನ ಸೆಳೆದ ಹುಡುಗಿ ನನಗೆ ಓಟು ಹಾಕಲಿಲ್ಲ ಅದನ್ನು ನಾನು ಗುರುತಿಸಿದೆ ಅವಳು ನನಗೆ ಮತ ಹಾಕಿದಳು.. ಎಂದು ಆತ ಖುಷಿ ಅಲ್ಲಿ ಹೇಳಿ ಬಿಟ್ಟ.. ನಿಜ ಹೇಳು ಗೆಳತಿ ನಾವು ಯಾರ ಮೇಲಾದರೂ ಭರವಸೆ ಇಟ್ಟುಕೊಳ್ಳುವುದು ತಪ್ಪೇನು?? ಅದೊಂದೇ ಸಂಗತಿ ನನ್ನೆಲ್ಲ ಖುಷಿಯನ್ನು ನೂಚ್ಚು ನೂರು ಮಾಡಿತ್ತು.. ಈಗ ನೆನೆಸಿಕೊಂಡರೆ ಎಷ್ಟು ಸಿಲ್ಲಿ ಎನ್ನಿಸುತ್ತದೆ.. ಇಷ್ಟಕ್ಕೂ ಅವಳು ಓಟು ಹಾಕಿದ್ದ ಆದ್ರು ಯಾರಿಗೆ ನನ್ನ ಆತ್ಮೀಯ ಗೆಳೆಯನಿಗಲ್ಲವೇ..ಅದು ಅಲ್ಲದೆ ನನ್ನ ಮತ ಯಾಚನೆಯಲ್ಲೂ ನನಗೆ ಸಂತೋಷ ಆಗುವುದು ನನ್ನ ಗೆಳೆಯ ಗೆದ್ದರೆ ಮಾತ್ರ ಎಂದಿದ್ದೆನಲ್ಲವೇ ಎಂದು & ಒಂದು ವೇಳೆ,  ನೀನೆ ಆ ಜಾಗದಲ್ಲಿ ಇದ್ದರು ನನ್ನ ಗೆಳೆಯನಿಗೆ ಓಟು ಹಾಕುತ್ತಿದ್ದೆ ಅಲ್ಲವೇನು??? ಎಂದು ಸಮಾದನಿಸಿಕೊಂಡೆ.. ಅಷ್ಟರೊಳಗೆ ನನ್ನ ಆತ್ಮೀಯ ಗೆಳೆಯ ನನ್ನ ಸಮಾಧಾನ  ಮಾಡಲು ಹೇಳಿದ್ದೇನು ಗೊತ್ತೇ.. ನಿನಗೆ ರಾಜಕೀಯವೆಲ್ಲ ಬೇಡ ಓದಿನಲ್ಲಿ ಮುಂದುವರಿದರೆ ಅವಳಿಗೂ ಪೈಪೋಟಿ ಕೊಡಲು ನೀನು ಸಿಗುತ್ತಿಯ ಎಂಬ ದೂರಾಲೋಚನೆ ಇಂದ ಅವಳು ಮತ ಅವನಿಗೆ ಹಾಕಿದಳಂತೆ... 


ಗೆಳತಿ ನಿಜ ಏನು ಎನ್ನುವುದು ಅವಳಿಗೆ ಗೊತ್ತು??? ನಿನಗೆ ಏನಾದರು ನಿಮ್ಮ ಮಹಿಳೆಯರ ಮನಸ್ಸು ಯಾವಾಗ ಹೇಗೆ ಎಂದಾದರು ತಿಳಿದಿದೆಯೇನು???? 

ತಿಳಿದಿದ್ದರೆ ಉತ್ತರಿಸು ಅವಳು ನನ್ನ ಇಷ್ಟದ ಹುಡುಗಿ ಎಂದು ಹೇಳಿದೆನೆಂದು ಕೋಪಿಸದಿರು... ನನ್ನ ಜೀವವೇ??? ಇಷ್ಟ ಎಂದಾಕ್ಷಣ ಅವರೆಲ್ಲ ನಿನ್ನ ಅಂತೆ ನನ್ನ ಜೀವ ಆಗಲು ಸಾಧ್ಯವೇನು ನನ್ನ ಮನದೊದತಿಯೇ???  




ಇಂತಿ ನಿನ್ನವ
ಬೆನಕ

 

Friday, September 24, 2010

ಸಾರ್ವಜನಿಕ ಗಣಪತಿ ಉತ್ಸವ ಪ್ರಸ್ತುತ ಕಾಲಕ್ಕೆ ಬೇಕೇ???








        "ನನ್ನ  ನಲ್ಮೆಯ ಮನದಾಳದ ಮಿಡಿತವೆ,

                                 ಗಣೇಶನ ಹಬ್ಬ ಬಂತೆಂದರೆ ಎಲ್ಲಿಲ್ಲದೆ ನನ್ನ ಇ ಮನ ಕುಣಿಯುವುದು, ಆ ಹಬ್ಬದಲ್ಲಿ ಮಾತ್ರ ಅಲ್ಲವೇ ಗಣೇಶನಿಗೆ ಪ್ರೀಯವೆಂದು ಚಕ್ಕುಲಿ, ಪಂಚಕಜ್ಜಾಯ, ಮೋದಕ, ಕರ್ಜಿಕಾಯಿ, ಎಳ್ಳು ಉಂಡೆ ಹೀಗೆ ಹಲವು ವಿಧದ ಭಕ್ಷ್ಯ ಭೋಜ್ಯಗಳನ್ನೂ ಸವಿಯಲು ಸಾಧ್ಯವಾಗುತ್ತಿದ್ದುದು. ಅದು ಅಲ್ಲದೆ.. ಹಬ್ಬದ ಕೆಲವು ದಿನ ಮೊದಲೇ.. ಏನೇನೋ ನೆಪ ಹೇಳಿ ನಾವಿಬ್ಬರು ಶಾಲೆಗೆ ಗೈರು ಬಂಡಿಯ ಮುಂದೆ ಹಾಜರು ಎಂದು ಆಗುತ್ತಿದ್ದುದು.. ಅದೇನೋ ಕಾಣೆ ಉದ್ದ ಸೊಂಡಲಿನ, ಆಗಲ ಕಿವಿಯ, ದೊಡ್ಡ ಹೊಟ್ಟೆಯ  ಅತ್ಯಾಧ್ಬುತ ಕಾರ್ಟೂನ್ ಅಂತಿರುವ ಗಣೇಶನೆಂದರೆ ಇಬ್ಬರಿಗೂ ಅಚ್ಚು ಮೆಚ್ಚು.  ಅವನ ಆ ಆಕಾರಕ್ಕೆ ಬರಲು ಕಾರಣವಿರುವ ಅತಿ ರಂಜಿತ ಕಥೆಗಳನ್ನ ಕೇಳುತ್ತಲೇ ಬೆಳೆದೆವು.

                          ಸಿದ್ದಾಪುರವೆಂಬ ಅಂದಿನ ನಮ್ಮ ಮಹಾನಗರಿಗೆ ಸಾರ್ವಜನಿಕ ಗಣಪತಿ ನೋಡಲು ಮಾರನೇ ದಿನ ಸಂಜೆಯ ನಸು ಕಪ್ಪಿನಲ್ಲಿ ಕೈ ಕೈ ಹಿಡಿದು ಪಿಸು ಮಾತಾಡುತ್ತ ನಡೆಯುತ್ತಿದ್ದೆವು.ಆಗೆಲ್ಲ ದೊಡ್ಡದಾಗಿ ಸದ್ದು ಮಾಡುವ ಸಿಡಿಮದ್ದುಗಳನ್ನ ಸಿಡಿಸಿದಾಗ ನನ್ನ ಮನ ಕುಷಿಪಡುತ್ತಿತ್ತು ಯಾಕೆಂದರೆ ನೀನು ಇನ್ನಷ್ಟು ನನ್ನ ಬಿಗಿಯಾಗಿ ಹಿಡಿದಿರುತ್ತಿದ್ದೆಯಲ್ಲ ಎಂದು..    ಗೆಳತಿ ಈ ಸಲದ ಗಣೇಶ್ ಹಬ್ಬಕ್ಕೆ ಬೆಂಗಳೂರೆಂಬ ಮಾಯಾ ನಗರಿ ಯಾವ ರೀತಿ ಸಜ್ಜಾಗಿದೆ ಎಂದು ನಿನ್ನಲ್ಲಿ ಹೇಳಬೇಕು.. ಎಂದು ಆತುರದಿಂದ ಓಡೋಡಿ ಬಂದೆ.. ಬಾಲ್ಯದಿಂದಲೂ  ನನ್ನ ಕೊರೆತವನ್ನ ಸಹನೆಯಿಂದ ಕೇಳಿದವಳು ನೀನು. ನಿನಲ್ಲದೆ ಇನ್ನಾರು ಕೇಳುವರು??? ಆದರೆ ನೀನು ಸಿಗಲಿಲ್ಲ... ಅದಕ್ಕಾಗಿಯೇ ಈ ನನ್ನ ಕೊರೆತ..

           ಮೊನ್ನೆ ಮೊನ್ನೆ ಎಂದಿನಂತೆ ಗಣೇಶ, ತಾಯಿ ಸಹಿತ ಮನೆ ಮನೆಗೂ ಬಂದು ಆಶೀರ್ವದಿಸಿ ತೆರಳಿದ.. ಬರೆ   ಮನೆ ಮನೆಗೆ ಅಂದರೇ ತಪ್ಪಾದಿತು.. ಬೀದಿ  ಬೀದಿಗಳಲ್ಲಿ ಚರಂಡಿ ಸ್ಲ್ಮ, ಮತ್ತು  ಜನರೇ ಓಡಾಡಲು ಅಸಹ್ಯ ಪಡುವ ಜಾಗಗಳಲ್ಲಿಯೂ ಹಾದು ಹೋದ.. ಬೆಂಗಳೂರು ಅಂಥ ಮಹಾನಗರಿ ಅಲ್ಲಿ ಇನ್ನು ಗಣೇಶ ಕೆಲವು ಬಿದಿಗಳಲ್ಲಿ ಬಂದಿಲ್ಲ. ಬರುವ ತಯಾರಿಯಲ್ಲಿದ್ದಾನೆ.. ಇಂಥ ಸಂಧರ್ಭದಲ್ಲಿ ನನಗೆ ಈ ಮೇಲಿನ ಪ್ರಶ್ನೆ ಕಾಡುತ್ತಿದೆ.... ನನ್ನ ಮನದ ಈ  ಪ್ರಶ್ನೆಗೆ ನೀನು ಉತ್ತರಿಸುವೆಯೆಂದು ನಂಬಿರುವೆ...

         ಲೋಕಮಾನ್ಯರು ನಮ್ಮಲ್ಲಿ ಒಗ್ಗಟ್ಟನ್ನ ತಂದು ಸ್ವಾತಂತ್ರ್ಯಕ್ಕಾಗಿ ಹೊರಡುವಂತ ಉತ್ಕಟವಾದ ದೇಶ ಪ್ರೇಮದ ಜಾಗ್ರತಿಗಾಗಿ ಈ ಗಣೇಶ್ ಹಬ್ಬವನ್ನು  ಸಾರ್ವತ್ರಿಕಗೊಳಿಸಿದರೆಂದು  ಇತಿಹಾಸ ಓದಿದ ನಮ್ಮಗಳಿಗೆಲ್ಲ ಗೊತ್ತಿದೆ.. ಆದ್ರೆ ಇಂದಿನ ಮತ್ತು ಅಂದಿನ ಸಾರ್ವತ್ರಿಕ ಗಣೇಶೋತ್ಸವದ ಆಚರಣೆಗಳು ಎಷ್ಟು ಭಿನ್ನ. ಇಂದಿನ ಸಮಾಜದಲ್ಲಿ ನಾವು ಆಚರಿಸುವ ಗಣೇಶೋತ್ಸವ  ಯಾವ ಹಂತ ತಲುಪಿದೆ ಎಂದರೆ ನಿಜಕ್ಕೂ ತಿಲಕರೆನಾದರೂ ಇದ್ದಿದ್ದರೆ ಹುಟ್ಟ ಕ್ರಾಂತಿಕಾರಿಗಳಾದ ಅವರು ಬಹುಷಃ   ಕೂಡಲೇ ಇದನ್ನ ಪ್ರತಿಭಟಿಸುತ್ತಿದ್ದರು... ಆಗ ಅವರನ್ನು ನಾವು ಯಾವ ರೀತಿ ಕರೆಯುತ್ತಿದ್ದೆವು ವಯಸ್ಸಾದ ಅರಳು ಮರಳು ಎಂದೇ..??? ಅರೆಹುಚ್ಚೂ ಎಂದೇ??? ಈ ಸಮಾಜ ಯಾವ ಮಹಾಪುರುಷರನ್ನ ಬದುಕಿರುವಾಗ ಹೋಗಲಿದೆ ಹೇಳು??? ನನ್ನನ್ನೇ ತಗೋ ನೀನು ಹತ್ತಿರವಿರುವಾಗಲೆಲ್ಲ ಕೋತಿ ತರಹಇರುವೆಯೆಂದು  ಕೆಣಕಿ ಈಗ ನೀನು ಸನಿಹವಿಲ್ಲವೆಂಬ ಕಾರಣಕ್ಕೋ ನಾನರಿಯೆ. ನಿಜಕ್ಕೂ ನೀನು ಎಷ್ಟು ಸಹಜ ಸುಂದರಿ ಎಂದು ದಿನವು ಜಪಿಸುತ್ತಿಲ್ಲವೇ?? ಅಂತೆಯೇ ನಮ್ಮ ಸಮಾಜ ..

                        ದೇಶ ಪ್ರೇಮದ ಒಗ್ಗಟ್ಟಿನ ಸಂಕೇತವಾಗಿ ಅಂದು ಆರಂಭವಾದ ಗಣೇಶೋತ್ಸವಕ್ಕೂ ಇಂದಿನ ಗಣೇಶೋತ್ಸವದ ಆಚರಣೆಗೂ ಎಷ್ಟೆಲ್ಲಾ ಅಜಗಜಾಂತರ ಇಂಥ ಗಣೇಶೋತ್ಸವ ನಮಗೆ ಬೇಕೇ?

                 ಗಣೇಶ್ ಹಬ್ಬ ಬಂತೇದರೆ ಸಾಕು ನಾಯಿ ಕೊಡೆ ಗಳಂತೆ ಏಳುವ ಗಣೇಶೋತ್ಸವ ಸಂಘಗಳು, ಯಾರು ಯಾರಿಂದಲೋ ಹಣ ಸಂಗ್ರಹಿಸಿ ಗಣೇಶನನ್ನು ತರುತ್ತವೆ.. ನಿಜಕ್ಕೂ ಮನಸ್ಸು ಭಾರವಾಗುವುದು.. ಆ ನಮ್ಮ ನೆಚ್ಚಿನ ಗಣೇಶನನ್ನು ಮಾರಾಟದ ಸರಕಿನಂತೆ.. ದುಡ್ಡು ಮಾಡುವ ಸಾಧನದಂತೆ ನಡೆಸಿಕೊಳ್ಳುವುದನ್ನು ನೋಡಿ.. ನಿಜವಾದ ದೇಶಪ್ರೇಮವು ಇಲ್ಲ.. ದೇವರ ಮೇಲಿನ ಭಕ್ತಿಯನ್ನು ನಾ ಕಾಣೆ ಗೆಳತಿ ನೀನೆ ಎಲ್ಲಾದರು ಕಂಡಿರುವೆಯ???  ಸಂಗ್ರಹಿಸಿದ ಹಣವನ್ನು ಯಾವ ಸಾಮಾಜಿಕ, ಸಾಂಸ್ಕ್ರತಿಕ ಕೆಲಸಗಳಿಗೆ  ಬಳಸಿರುವುದನ್ನ ನಾನು ಅರಿಯೆನು, ನಿನಗೆ ಏನಾದ್ರು  ತಿಳಿದಿದೆಯೇನು ನನ್ನ ಒಲವೇ.  ಗಣೇಶನನ್ನು ವಿಸರ್ಜಿಸಿ ಕಳುಹಿಸಿ ಕೊಡುವ ಬಗೆ ಕಂಡಾಗ  ನಿಜಕ್ಕೂ ಮನಕ್ಕೆ ಘಾಸಿ ಆಗುತ್ತದೆ.... ಅಲ್ಲಾ ಗೆಳತಿ, ಈ  ಕಾಮೊದ್ರೆಕಿತ ಸಿನೆಮ ಹಾಡುಗಳಿಗೂ.. ಬ್ರೇಕು ಡಾನ್ಸ್ ಗಳಿಗೂ.. ಕುಡಿತದ ಮೋಜು ಮಸ್ತಿಗೂ ಆ ನಮ್ಮ ಮುದ್ದು ಗಣಪನಿಗೂ ಎಲ್ಲಿಯ ಸಂಭಂದ... ಅವೆಲ್ಲದರ ಅರ್ಥವೇನು ಸುವಿಚಾರಿಣಿ ???

                ಆ ಸಂಘಟನೆಗಳು,  ಆ ಹಣಗಳನ್ನು ಯಾವುದಾದರು ಸಾಮಾಜಿಕ, ಸಾಂಸ್ಕ್ರತಿಕ ಕೆಲಸಗಳಿಗೆ ಸದ್ವಿನಿಯೋಗ ಮಾಡಿದ್ದರೆ ಎಷ್ಟು ಚೆಂದ... ಆ ನಮ್ಮ ಗಣಪನಿಗೂ ಬಹುಷಃ ಆನಂದವಗುತ್ತಿತೇನೋ... ಆದ್ರೆ ಈ ಸಂಘಟನೆಗಳು ಗಣೇಶ ಹಬ್ಬ ಮುಗಿದ ಮೇಲೆ ಮಾಯವಾಗುತ್ತವೆ.. ಇನ್ನೂ ಅವುಗಳನ್ನ ಕಾಣಬೇಕಾದರೆ ಮತ್ತೆ ಗಣೇಶ ಹಬ್ಬವೇ ಬರಬೇಕು... ಪ್ರತಿ ಚುನಾವಣೆಗಳಲ್ಲಿ ನಮ್ಮ ರಾಜಕೀಯ ಪ್ರತಿನಿಧಿಗಳು ನಮ್ಮ ಕಾಲುತಾಗುವಂತೆ... ಇನ್ನೊಂದು ಗಣೇಶ್ ಹಬ್ಬಕ್ಕೆ ಇವರುಗಳು ಹಾಜರ್... ಎಂಥ ವಿಚಿತ್ರ !!!

                 ಓ ನನ್ನ ಒಡತಿ ನನ್ನ ಮನದ ಬೇಗುದಿಯನ್ನ ಅರುಹಿದ್ದೇನೆ ಇವಾವುವೂ ನೀನು ಈ ವರ್ಷದ   ಗಣೇಶ ಹಬ್ಬದಲ್ಲಿ ನನ್ನೊಟ್ಟಿಗೆ ಕಾಲ ಕಳೆಯಲಿಲ್ಲ ಎಂಬ ಬೇಸರದಿಂದ ಹೊರಹೊಮ್ಮಿದವು ಎಂದು ಹಗುರಾಗಿ ಭಾವಿಸದಿರು..    ಆದರು ನಿನ್ನೊಟ್ಟಿಗೆ ಗಣೇಶನನ್ನು ನೋಡಲು ತಿರುಗಿರುವುದನ್ನ ನೆನೆಸಿಕೊಂಡಾಗಲೆಲ್ಲ ಗಣೇಶೋತ್ಸವ ಬೇಕು ಅನ್ನಿಸದಿರಲು ಸಾಧ್ಯವೇ...ಕೈ ಕೈ ಹಿಡಿದು ಗಣೇಶನ್ ನೋಡುವ ಆ ಸಂಬ್ರಮದಗಳಿಗೆ ಮತ್ತೆ ಬಾರದೆಂದು ತಿಳಿದು ನಾನು ಈ ಮಾತು ಹೇಳುತ್ತಿಲ್ಲ ... ಆ ಸವಿ ನೆನೆಪು ಏನೇ ಇದ್ದರು... ಅದು ತುಂಬಾ ಮಾನಸಿಕ ವೇದನೆ.. ಪದಗಳಲ್ಲಿ ಬಂಧಿಸಲಾಗದ ಮನದ ಹಸಿಯಾದ ಗಾಯ ಕಾಣೆ ಅದು ನಮ್ಮಿಬ್ಬರಿಗೆ ಸಂಬಂದಿಸಿದ ಖಾಸಗಿ ವಿಚಾರ..
                            
                 ಆ ಬೇಸರ ಏನಿದ್ದರು... ಇದು ಮಾತ್ರ ತುಂಬಾ ಸಾಮಾಜಿಕ ಕಳಕಳಿಯಿಂದ ಹೊರಹೊಮ್ಮಿದ ಪ್ರಶ್ನೆಗಳು... ನೀನು ನಂಗೆ ಸಮಂಜಸವಾಗಿ ಉತ್ತರಿಸುವೆಯೇನು ??  ಉತ್ತರಿಸುವೆ ಎಂದೇ ನಂಬಿರುವೆ...
                               
ನಿನ್ನ ಪ್ರೀತಿಯ,
ಬೆನಕ..
             "ಸುಮುಖ" ಅಕ್ಟೋಬರ್ ೨೦೧೦ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Wednesday, September 8, 2010

ಮೊದಲ ಪ್ರೇಮ ಪತ್ರ

" ಪ್ರೀತಿಯ ಬೆನ್,
                  ನಾನು ಈ ಪತ್ರ ನಿನಗೆ ಯಾಕೆ ಬರದಿರುವೆ  ಅಂಥ ಯೋಚಸದೇನೆ ಇದನ್ನ ಓದಿ ನನಗೆ ಉತ್ತರಿಸು.... ನೀನು ನಂಬುವುದಾದರೆ ನಂಬು ಬಿಟ್ಟರೆ ಬಿಡು, ಇದನ್ನ ಅಕ್ಷರಶಃ ಬರೆಯುವಾಗ ಅಳುತ್ತ ಬರೆದಿರುವೆ....ನಾನು ಇಷ್ಟು ದಿನ  ನಿನ್ನ ಹತ್ರ  ಹೇಳಲೇ ಬಾರದು ಅಂಥ ಇದ್ದೆ.ಆದ್ರೆ... ಇವತ್ತು ಅದೇನೋ ಹೇಳವು ಅನಿಸುತಿದೆ 
ಹೇಳುವೆ  ಓದು. 
           
                     ನಿಜ ಹೇಳು, ಮಿಂಚು (ಅದೇ ನಿನ್ನ ದೇವರು ಕೊಟ್ಟ ತಂಗಿ), ನಿನಗೆ ಪರಿಚಯವಾಗೊದ್ಕಿಂತ  ಎಷ್ಟೋ ಮೊದಲು ನಮ್ಮಿಬ್ಬರ ಪರಿಚಯ ಆಗಿತ್ತು ಅಲ್ದಾ?? ಆ  ದಿನ  ನನ್ನ ಡೈರಿ ಯಲ್ಲಿ ಬರೆದ ಪುಟವನ್ನ ಎಷ್ಟು ಸಲ ತಿರುವಿ ಹಾಕಿರುವೇನೋ ಗೊತ್ತಿಲ್ಲ... ಖಂಡಿತ ಆ ಪುಟವನ್ನ ಆ ದಿನವನ್ನ ನಾನು ಖಂಡಿತ ಮರೆಯಲಾರೆ.. ನಿನಗೆ ಆ ದಿನ ನೆನಪಿದೆಯ ?? ಅವಳು ನಿನಗೆ ಪರಿಚಯವಾಗುವ ಮೊದಲೇ ನಮ್ಮ ನಡುವೆ ಎಷ್ಟೆಲ್ಲಾ misunderstanding ಗಳು ಬಂದು ನಂತರ ಕರಗಿದ್ದವು ಅಲ್ಲವ?  ವಿಷಯ ಹೇಳ್ತಿ ಕೇಳು ಯಾವಾಗಲು ನಾನು ಅವಳು ಜೊತೆಗೆ ಇದ್ದರು ನೀನು ಮೊದಲೆಲ್ಲ ನನ್ನ ಮಾತ್ರ ಮಾತನಾಡಿಸುತ್ತಿದ್ದೆ ಅದು ಸಾಧ್ಯವಿಲ್ಲ ಎಂದಾದರೆ  ನಗುವನ್ನಾದ್ರು ಬಿರಿ  ಮರೆಯಗುತ್ತಿದ್ದೆ.. ನಂತರ ನನಗೆ cuty ಗರ್ಲ್ ಎಂದೆಲ್ಲಾ ನೀನು ಕರೆಯುವಷ್ಟು ಹತ್ತಿರವಾಗಿದ್ದೆ.. ನಿಜ ಅದೇನೋ ಅರಿಯೆ ನಿನ್ನ ಕಾಮೆಂಟ್ ಗಳು ನನಗೆ ಖುಷಿ ಕೊಡುತ್ತಿತ್ತು..
                ಅವಳ ಪರಿಚಯ ಆದಗಳಿಂದ ನನ್ನ ಕಡೆಗನಿಸುತ್ತಿರುವುದು ಯಾಕೆ??? ನಾನು ಅವಳ ಜೊತೇನೆ ಇದ್ದರು ಅವಳೊಂದಿಗೆ ಮಾತ್ರ ಮಾತನಾಡುತ್ತಿ ವಿನಃ ಒಮ್ಮೆಯೂ ನನ್ನ ಹತ್ತಿರ ಮಾತಾಡುತ್ತಿಲ್ಲ ಹಾಗೆ ನೀನು ವರ್ತಿಸಿದ ದಿನವೆಲ್ಲ ನಾನೆಷ್ಟು ನೊಂದಿರುವೇನು ಗೊತ್ತ??? 
                   ಅವಳು ಬರದೆ ಇರುವ ದಿನ ನಾನೊಬ್ಬಳೆ ಬರುತ್ತಿರುವುದನ್ನ ಕಂಡು ಇಂದಾದರೂ ನೀನು ನನ್ನ ಒಂದಿಗೆ ಮಾತಾಡುವೆ ಎಂದು ಮನ ಖುಷಿ ಪಡುತಿತ್ತು, ಆದರೆ ನೀನು ನನ್ನ ನೋಡಿದವನೇ  ಮಿಂಚು ಯಾಕೆ ಬರಲಿಲ್ಲ ಎಂದು ಕೇಳಿ ಅದಕ್ಕೆ ನಾನು ಉತ್ತರಿಸುತ್ತಿದ್ದಂತೆ ಮಾಯವಗುತ್ತಿದ್ದೆ.. ಆಗೆಲ್ಲಾ ನಾನು ಎಷ್ಟು ಅತ್ತಿದ್ದೆ... ನನ್ನ ಬಾಳಿನಲ್ಲಿ ಒಬ್ಬ ಒಳ್ಳೆಯ ಗೆಳೆಯ ಸಿಕ್ಕನಲ್ಲ ಎಂದು ಸಂತೋಷ ಪಡುತ್ತಿರುವಾಗಲೇ ಯಾಕೆ ದೂರಾದೆ????
         ನಾನು ಮಿಂಚುವಿನಂತೆ ಬಿಚ್ಚು ಮನದ ಗೆಳತಿಯಲ್ಲ.. ಕಣೋ.. ಅವಳ ಗೆಳೆಯರೆಲ್ಲ ಅವಳೊಟ್ಟಿಗೆ ಮಾತಾಡುವಾಗ ನೀನೊಬ್ಬನೇ ನನ್ನ ಮಾತಾಡಿಸುತ್ತಿದ್ದೆ... ಅದು ಅವಳ ಪರಿಚಯವಾಗುವ ಮೊದಲು ಆಗೆಲ್ಲ ನಾನು ಎಷ್ಟು ಖುಷಿ ಪಟ್ಟಿದ್ದೆ ಗೊತ್ತೇನು???  ನನಗೆ ಅರಿವಿಲ್ಲದಂತೆ ನೀನು ನನ್ನ ಮನ ಗೆದ್ದಿದ್ದೆ ಅಂದರೇ ತಪ್ಪಾಗಲಾರದು.. ಬಹುಷಃ ನೀನು ಅವಳೊಂದಿಗೆ ಮಾತಾಡದೆ ನನ್ನೋದಿಗೆ ಮಾತ್ರ ಮಾತಡುತ್ತಿದ್ದುದೆ ನನ್ನ ಆ ಸಂತೋಷಕ್ಕೆ ಕಾರಣವಿರಬೇಕು... ನೀನು ಅವಳನ್ನ ತಂಗಿ ಎಂದು ತಿಳಿದಿರುವೆ ಅವಳೊಂದಿಗೆ ನೀನು ಮಾತಾಡಿದರೆ ತಪ್ಪು ಎಂದು ನಾನು ಹೇಗೆ ತಾನೆ ಹೇಳಲಿ... ಅವಳೊಂದಿಗೆ ಮಾತಾಡುತ್ತ ನನ್ನ ನೀನೇಕೆ ದೂರ ಮಾಡಿದೆ ಇದು ಸರಿಯೇನು??? ನನ್ನ ಕನಸನ್ನ ಯಾಕೆ ಒಡೆದೆ??? ಹೇಳು, ಹೇಳು ನಾನು ಒಂಟಿ ಎಂದು ತಿಳಿದು ಬದುಕುತ್ತಿರುವಾಗ ನನ್ನ ಹೃದಯವೆಂಬ ಗೂಡಿಗೆಕೆ ನನ್ನ ಅನುಮತಿ ಕೇಳದೆ ದಾಳಿ ಮಾಡಿದೆ... ಆ ಖುಷಿಯನ್ನ ನಾ ಅನುಭವಿಸುತ್ತಿರುವಾಗಲೇ ವಿನಾಕಾರಣ ಯಾಕೆ ನನ್ನ ದೂರ ಮಾಡಿದೆ????
                      ಗೆಳೆತನವೆಲ್ಲ ಪೊಳ್ಳು ಎಂದು ನಾನು ಬಾವಿಸಿದ್ದ ದಿನಗಳಲ್ಲಿ ಗೆಳೆತನದ ಸಿಹಿಯ ಹಂಚಿ ಯಾಕೆ ವಿನಾಕಾರಣ ನನ್ನ ದೂರ ತಳ್ಳಿದೆ.... ಬೆನ್ ಇದು ನನ್ನ ಒಡಲಾಳದ ಮಾತು ನಿನಗೆ ಅರ್ಥವಗುತ್ತಿದೆಯೇ????  ಹಾಗೇ ಇದಕ್ಕೆ  ನಿನ್ನ ಬಳಿ ಸಮರ್ಥನಿಯ ಉತ್ತರಗಳು ಇದ್ದಿರಬಹುದು ಅವಾವುದು ನಾನು ಪಟ್ಟ ದುಖಃವನ್ನ ಮರೆಸಲಾರವು ಈ ನೀ ಕೊಟ್ಟ ನೋವು ನಿನ್ನ ಮೇಲಿನ ಮೊದಲಿನ ಆಶಾಭಾವವನ್ನು ದೂರ ಮಾಡಿದೆ ನೀನು ಎಲ್ಲಾ ಹುಡುಗರಂತೆ..... ಎಂದು ಕಾಣುವಂತಾಗಿದೆ.. ನೆನಪಿರಲಿ..  "
    
ಇಂತಿ ನಿನ್ನ
                                                                     ಲಂಗದಾವಣಿ ಹುಡುಗಿ
            

ನನ್ನ ಮೊದಲ ಚುನಾವಣೆ

 ಮರೆಯಲಾಗದ ಚುನಾವಣೆ :
                      ಪ್ರಾಥಮಿಕ ವಿದ್ಯಾಬ್ಯಾಸವನ್ನ ನಮ್ಮುರಿನಲ್ಲೇ ಮುಗಿಸಿದ್ದ ನಾನು ಹೈಸ್ಚೂಲ್ಗೆಂದು.. ಬಿದ್ರಕಾನ್ ಎಂಬ ಹಳ್ಳಿಯನ್ನ ಸೇರಿದೆ. ಅಲ್ಲಿವರೆಗೂ " ಕುರುಡರ ಸಾಮ್ರಾಜ್ಯದಲ್ಲಿ ಒಕ್ಕನ್ನಿನವನೇ ಮೇಲು" ಎಂಬಂತೆ ನಮ್ಮೂರಿನ ನಮ್ಮ ಶಾಲೆಯಲ್ಲಿ ನಾನೇ ಎಲ್ಲದರಲ್ಲೂ ಮೊದಲಿಗ.. !!!
                  
                      ಬಿದ್ರಕಾನ್ ನಲ್ಲಿ ಹೈಸ್ಚೂಲ್ಗೆ ಸೇರಿದ ಮೇಲೆ ನಮ್ಮದೊಂದು ಗುಂಪೇ ರಚನೆ ಯಾಯಿತು.. ಮನೋಜ್ ಉಳ್ಳಾನೆ, ಸುಮಂತ ಚಟ್ಟ್ನಲ್ಲಿ, ನಾಗರಾಜ್, ಪ್ರದೀಪ್ ಜಾಗಣೆ, ಗುರುಪ್ರಸಾದ ಹಿಪನಳ್ಲಿ... ವಿನಯ ಮಾವಿನಹಳ್ಳಿ, ಹರ್ಷ, ಹೀಗೆ ೧೦ -೧೧ ಮಂದಿಯಿದ್ದ ನಾವು ೮ ನೇ ಕ್ಲಾಸ್ ನಿಂದಲೇ ನಮ್ಮದೇ ಸಾಮ್ರಾಜ್ಯವಿದು ಎನ್ನುತ್ತಾ ಹೈಸ್ಚೂಲ್ ಜೀವನ ನಡೆಸುತ್ತಿದ್ದೆವು, ಹೀಗಿರಲು ಕಾಲ ಚಕ್ರ ತಿರುಗಿ ಅಂತು ೧೦ ನೇ ತರಗತಿಗೆ ಬಂದದ್ದಾಯಿತು..

             ಆಗ ಚುನಾವಣೆಯ ಘಾಟು ನಮಗೂ ಬಡಿಯಿತು.. ಚುನಾವಣೆಯ ದಿನದಂದು ಎಲ್ಲಾ  ಸಮಾವೇಶಗಳನ್ನ  ನಡೆಸುತ್ತಿದ್ದ ೯ ನೇ ಕ್ಲಾಸ್ ಸೇರಿದ್ದೆವು.. ನಮ್ಮ ಗುಂಪಿನಿಂದ ಎಲ್ಲರು ಒಂದೊಂದು ವಿಭಾಗಕ್ಕೆ ನಿಂತಿದ್ದರು.. ಓದಿ ಓದಿ ಆದ ಕೂಚು ಭಟ್ಟ ಎಂದೇ ಎಲ್ಲರಿಂದಲೂ ಕರೆಸಿಕೊಳ್ಳುತ್ತಿದ್ದ ಕಲಾದರನು ನಮ್ಮ ಗೆಳೆಯರ ಸ್ಪರ್ಧಿಸದೇ ಬಿಟ್ಟಿದ್ದ  ಸಾಂಸ್ಕ್ರತಿಕ ವಿಭಾಗಕ್ಕೆ ನಿಂತ ಅವನಿಗೆ ವಿರುದ್ಧ ಯಾರು ??? ಅಂಥ ನಾವೆಲ್ಲ ಮನಸಿನಲ್ಲೇ ಯೋಚಿಸುತ್ತಿರುವಾಗಲೇ ಯಾರೋ ನನ್ನ ಮಿತ್ರ ನನ್ನ ಹೆಸರು ಕೂಗಿದ ಅಲ್ಲಿವರೆಗೂ ಚುನಾವಣೆ ಎಂದರೇನೆ ಏನು ತಿಳಿಯದ ನಾನು ಗೆಳೆಯರ ಒತ್ತಾಯದ ಮೇರೆಗೆ ಸಮ್ಮತಿಸಿದೆ.. ಹೇಗೂ ನನ್ನ ಎದುರಾಳಿ ನನಗಿಂತ ಎಲ್ಲರಿಗೂ   ಚಿರಪರಿಚಿತ.. ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿ ಆಗಿದ್ದುದರಿಂದ ನನಗೆ ಸೋಲೇ ನಿಶ್ಚಿತ ಎಂದು ಭಾವಿಸಿದ್ದೆ..
           ಅದರಲ್ಲೂ ನನಗೆ ಮೊದಲ ಚುನಾವಣೆ, ಅದೇನೋ ಹೇಳುತ್ತಾರಲ್ಲ ನಾನು ಅವನ ಮುಂದೆ ಬಲಿಪಶುವಿನಂತೆ ಆಗುವೆನೆಂಬ ಭಯ & ಎಲ್ಲರು ವೇದಿಕೆಯ ಮೇಲೇರಿ ಮತ ಯಾಚಿಸಲು ತೊಡಗಿದಾಗ  ನಾನು ಅಕ್ಷರಶಃ ನಡುಗುತ್ತಲೇ ಹೋಗಿ ನಡುಗುವ ದ್ವನಿಯಲ್ಲೇ ಮತಯಾಚಿಸಿ ಬಂದೆ...

           ನಂತರ ಇಂಗ್ಲಿಷ್ ಶಿಕ್ಷಕರಾಗಿದ್ದ ಶ್ರೀ S V ಹೆಗಡೆಯವರು ಚುನಾವಣೆಯ ಫಲಿತಾಂಶ ಹೇಳಲು ಆರಂಭಿಸಿದಾಗ ನಿಜಕ್ಕೂ ದಿಗಿಲಾಗಿತ್ತು.. ನಂತರ ಎಲ್ಲಾ ನನ್ನ ಮಿತ್ರರು ಅವರು ನಿಂತ ವಿಭಾಗದಲ್ಲಿ ಆಯ್ಕೆ ಆದದ್ದು ತಿಳಿದೊಡನೆ ತುಂಬಾ ಹರ್ಷವಾಗ ತೊಡಗಿತು. ಇನ್ನು ನನ್ನ ವಿಭಾಗದ ಫಲಿತಾಂಶ ಕೇಳಿದಾಗ ನಿಜಕ್ಕೂ ನನಗೆ ನಂಬಲು ಸದ್ಯವಗಲೇ ಇಲ್ಲ.. ಹೇಗೂ ನನಗೆ ಸೋಲು ಎಂದು ತಲೆ ತಗಗಿಸಿಕೊನ್ದವನಿಗೆ ನಿಜಕ್ಕೂ ಆಶ್ಚರ್ಯಕಾದಿತ್ತು.. ನನ್ನ ಪ್ರತಿಸ್ಪರ್ಧಿ ೧೮ ಮತ ಪಡೆದಿದ್ದರೆ ನಾನು ಅಮೋಘ ೮೧ ಮತಗಳನ್ನ ಪಡೆದು ವಿಜಯಿ ಆಗಿದ್ದೆ. ಮಾರನೆ ದಿನ ನಮ್ಮ ಹೆಡ್ ಮಾಸ್ಟರ್ ನಮ್ಮ ಕ್ಲಾಸಿನಲ್ಲಿ ಇ ವಿಷ್ಯ ಹೇಳುತ್ತಾ " ಅಲ್ಲಾ ಭತ್ತ್ಗೆರೆ ಈ ರೀತಿ ಗೆಲ್ಲುತ್ತಾನೆ ಅಂಥ ನಾನು ಅಂದ್ಕೊಂಡೆ ಇರಲ್ಲಿಲ್ಲ.. ಅಲ್ಲಾ ನಾನೆನದ್ರು ಎಲೆಕ್ಷನ್ ಗೆ ನಿಂತರೇ ಬಹುಷಃ ನಮ್ಮ ಮನೆಯವರೇ ನನಗೆ ಮತ ಹಾಕೋದಿಲ್ಲ ಅಂತದರಲ್ಲಿ ಇವ ಬೇರೆ ಊರಗೆ ಬಂದು ಈ ರೀತಿ ಗೆಲ್ಲತ ಅಂದ್ರೇ ನಂಬೋದಕ್ಕೆ ಆಗಲ್ಲ.. ನೀನು ಏನು ಗಿಮಿಕ್ಕು ಮಾಡದೇ ಅಂಥ ನಮಗೂ ಹೇಳೋ ಮಾರಾಯ" ಎಂದಾಗ ನಿಜಕ್ಕೂ ಈಡಿ ಕ್ಲಾಸ್ ಬಿದ್ದು ಬಿದ್ದು ನಕ್ಕಿದ್ದೆವು... ನಿಜಕ್ಕೂ ಆ ಗೆಲುವು ಅದೇನೋ ಹೇಳುತ್ತಾರಲ್ಲ ಹೂ ಜೊತೆಗೆ ನಾರು ಭಗವಂತನ ಮುಡಿ ಸೇರಿತು ಅಂತಾರಲ್ಲ ಹಾಗೆ, ನನ್ನ ಗೆಳೆಯರ ಬಳಗದ ಸಹಾಯದಿಂದ ನಾನು ಗೆದ್ದಿದ್ದೆ..


ಆ  ನೆನಪು ಗಳನ್ನ ನೆನೆದಾಗ ತುಂಬಾ ಸಂತಸವಾಗುತ್ತದೆ... ಅಂಥ ದಿನಗಳು ಬೇಕೆಂದರು ಮತ್ತೆ ಬರಲಾರದು ಸವಿ ನೆನಪೊಂದೇ ಶಾಶ್ವತ....

Tuesday, September 7, 2010

ಲವ್... ಆಯ ಮಿಸ್ ಯು

Love... I Miss U...
Oh.. Love I really mis U a lot
Where are you gone...
Without telling a single word..
I missing you lot...
Please Tell..
Any mistakes Done by me???
If I have done, U have all the rights to scold me na???
Do you know how much suffering without U....
Going far away without saying Is it panishment!!!
Ok when it'll took an end??
When does I got you again???
I am waiting... for you...
I am waiting till my last breath...
Don't kill me.. being silent..
If you not ready to come,
Give me the reason.. That's enough..
I can live rest only with a sweet memories
which are given by you....