ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Friday, October 22, 2010

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು... 2

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು....


೨ 
   ಅಂದಿನಿಂದ ಯಾವ ಕೆಲಸವನ್ನು ಮಾಡದೇ ಸುಮ್ಮನೆ ಪುಸ್ತಕ ಹಿಡಿದು ಕುಳಿತಿರುತ್ತಿದ್ದ.. ಊಟಕ್ಕೆ ಹತ್ತಿರದಲ್ಲೇ ಇದ್ದ ಶಂಕರ ಮಠವನ್ನ ಅವಲಂಬಿಸಿದ.. ಅಲ್ಲಿಯ ಊಟ ಮಾಡ  ತೊಡಗಿದ ಮೇಲೆ ಗೆಲುವಾದ.. ನನ್ನೊಟ್ಟಿಗೆ ಒಮ್ಮೆ ಹೇ ಬಾಲಾಜಿ ನಾನು ಇವಾಗ ಮೊದಲಿನತಗುತ್ತಿದ್ದೇನೆ ಆರೋಗ್ಯದಲ್ಲಿ.. ನಾನು ಆರೋಗ್ಯವನ್ತಂದೆ ಎಂದಾದರೆ ಈ ನಿನ್ನ ಬಾಸ್ ಗೆ ಒಂದು ಗತಿ ಕಾಣಿಸದೆ ಬಿಡಲಾರೆ..ಈ ನಿಮ್ಮ ಆಹಾರ ನಮಗೆ ಒಗ್ಗುವುದಿಲ್ಲ.. ಮಠದಲ್ಲಿ ಕೊಡೊ ಊಟ ನಿಜಕ್ಕೂ ನಮ್ಮ ಬದಿಯ ಊಟದಂತಿದೆ.  ಹೌದು ನಿನಗೇನೂ ದಾಡಿ ಇವನಲ್ಲಿ  ಯಾಕೆ ಜೀತಕ್ಕೆ ಸೇರಿರುವೆ.. ಸೂಳೆಯಾಗಿ, ಮನೆ ಕೆಲಸದವನಾಗಿ ಬದುಕಲು ನಾಚಿಕೆ ಆಗೋದಿಲ್ಲೇನು...ನಿನ್ನಿಷ್ಟ. ಎಂದವನು ನಂತರ   ಯಾಕೋ ನನಗೆ ನಿನ್ನ ಕಂಡಾಗ ನೀನು ನನ್ನ ಅಂತೆ ಅಳುವುದನ್ನ ಕಂಡಿರುವದರಿಂದ ಹೇಳಿದೆ..ಅಷ್ಟೇ " ಎಂದ.

           ನಂತರ ಅವನಿಗೂ ನಮ್ಮ ಬಾಸ್ ಗು ಮಾತು ಕತೆ ಇಲ್ಲದಾಯಿತು..   ಅಷ್ಟೊತ್ತಿಗಾಗಲೇ ನನ್ನ ಅಕ್ಕನನ್ನ ನಮ್ಮ ಯಜಮಾನನ ಸಿನಿಯರ್ ಅಸಿಸ್ಟಂಟ್  ಪಾರ್ಥ ಸಾರಥಿ ಪ್ರೇಮಿಸಿದ್ದ.. ಅದನ್ನ ತಿಳಿದಾಗ ನನ್ನ ಕಣ್ಣು ಒದ್ದೆಯಾಗಿತ್ತು... ಅಂದಿನಿಂದ ಮತ್ತೊಂದು  ಫುಲ್ ಬಾಟಲ್ ಮದಿರೆ ಖಾಲಿ ಆಗ ತೊಡಗಿತ್ತು .. ಆದರೇನು ನಮ್ಮ ಯಜಮಾನನ ಒತ್ತಾಯಕ್ಕೆ ಮನೆಯಲೆಲ್ಲ ಒಪ್ಪಿದ್ದರು. ಎಲ್ಲಕಿಂತ ಹೆಚ್ಚಾಗಿ ಅಕ್ಕನು ಇಷ್ಟ ಒಪ್ಪಿದ್ದಳು. ಆ ಮದುವೆಗೆ ಇನ್ನೆರಡು ದಿನ ಬಾಕಿ ಇತ್ತು. ಅದಕ್ಕಾಗಿ ಮನೆಗೆ ಹೊರಟವನ ಸಂಗಡ ನಮ್ಮ ಯಜಮಾನನ ದಿನಚರಿಗೆ ಆಡ್ಡಿ ಆಗಿದ್ದ  ಅಶ್ವಿನ್ ಅನ್ನು ನನ್ನ ಒಟ್ಟಿಗೆ  ಕಳುಹಿಸಿ ಕೊಟ್ಟರು.
                                                  ಅವನಿಗೆ  ಟಿ ನಗರದ ಹೊರವಲಯದಲ್ಲಿದ್ದ  ಸಣ್ಣದೊಂದು ಅಪಾರ್ಟ್ಮೆಂಟ್ ನಾ ನನ್ನ ಗೂಡಿಗೆ ಕರೆದೊಯ್ಯುವಾಗಲೇ ಹೇಳಿದೆ. " ಅಶ್ವಿನ್ ನೀನು ಅಂದು ಕೇಳಿದ ಪ್ರಶ್ನೆಗಳಿಗೆ ಇಂದು ನಿನಗೆ ಉತ್ತರ ಸಿಗ ಬಹುದು... ಮೊದಲು ನಮ್ಮ ಮನೆ ನೋಡುವಿಯಂತೆ ನಡೆ" ಎಂದು ಕರೆದು ಕೊಂದು ಹೋದೆ..   
                 ಮನೆಯನ್ನ ನೋಡಿ ಒಮ್ಮೆ ಅವಕ್ಕದವಂತೆ ಕಂಡ ಅಶ್ವಿನಗೆ  ನಾನು ಇನ್ನೂ ನಾಲ್ಕೈದು ದಿನ ನನ್ನೊಟ್ಟಿಗೆ ಇದೆ ಮನೆಯಲ್ಲಿ ಇರಬೇಕು.. ನನ್ನ ಅಕ್ಕನ ಮದುವೆ ಇದೆ ನಾನು ಕೆಲಸದ ಮೇರೆಗೆ ಹೊರಗೆ ಹೋಗುತ್ತಿರುತ್ತೇನೆ ಆದರು ನನ್ನ ಅಜ್ಜಿ ಮನೆಯಲ್ಲೇ ಇರುತ್ತಲೇ.. ಅವಳೊಂದಿಗೆ ಇರು. ಹ ಮನೆಯವರನ್ನ ಪರಿಚಯ ಮಾಡಿಸಿಲ್ಲ ಅಲ್ಲವೇ .. ನೋಡು ಎರಡು ಕಾಲು ಕಳೆದು ಕೊಂಡು ಇದೀಗ ಕೃತಕ ಕಾಲಿನಲ್ಲಿ ಓಡಾಡುತ್ತಿರುವ  ಇವರೇ  ನನ್ನ ತಂದೆ, ಇದೀಗ ಕಾಲಿನೋಟ್ಟಿಗೆ  ಕಳೆದು ಹೋದ ತಮ್ಮ ಸಣ್ಣ ಜಾಬ್ ಅನ್ನು  ಮರೆತು ಎಲ್ ಆಯ ಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.. ಇವರು ನಮ್ ತಾಯಿ. ಮೊದಲು ಗೃಹಿಣಿ ಆಗಿದ್ದವಳು ನಮ್ಮ ಮನೆಯ ಕಷ್ಟ್ ಕಾಲದಲ್ಲಿ ಅಪ್ಪನಿಗೆ ನೆರವಾಗಲು ಟೈಪಿಸ್ಟ್  ಕೆಲಸ ಮಾಡುತ್ತಿದ್ದಾಳೆ.. ಇನ್ನೂ ಇವಳೇ ನನ್ನ ಅಕ್ಕ , ಮದುಮಗಳು.. ಓದಿರೋದು ಎಂ.ಬಿ.ಎ. ಮದುವೆ ಆಗಲು ಹೊರಟಿರುವುದು.. ಪಿ.ಯು.ಸಿ. ಪಾಸು ಆಗಿರಬಹುದಾದ ಕುಡುಕ ಪಾರ್ಥ ಸಾರಥಿಯ ಜೊತೆ.. ಎಂದೆಲ್ಲಾ ವಿವರಿಸಿದೆ. ನಂತರ  ನಾನು ಮನೆಯಿಂದ ಯಾವುದೊ ಕೆಲಸದ ಮೇಲೆ ಹೋಗಿ ಸಂಜೆ ಮರಳುವ ವೇಳೆಗೆಲ್ಲ ನಮ್ಮ ಮನೆಯವರಿಗೆಲ್ಲ ಅಚ್ಚುಮೆಚ್ಚಿನ ಅಶು ಆಗಿ ಬಿಟ್ಟಿದ್ದ...
        ಅಜ್ಜಿ ಅಂತು ನಾನು ಬಂದ ತಕ್ಷಣ ನನ್ನೊಟ್ಟಿಗೆ ಕೇಳಿದ್ದು ಇಸ್ಟೇ.." ಇಂಥ ಒಳ್ಳೆ ಮಕ್ಕಳನ್ನೆಲ್ಲ ಯಾಕಪ್ಪ ಆ ನಿನ್ನ ಯಜಮಾನ ತನ್ನ ಅಡಿ ಆಳಾಗಿ ಮಾಡ್ಕೋತಾನೆ.. ಆ ದೇವರು ಖಂಡಿತ ಮೆಚ್ಚೋಲ್ಲ.. ಅವನು ಅನಾಥ ಹೆಣವಾಗಿ ಹೋಗ್ತಾನೆ." ಎಂದೆಲ್ಲಾ ಹೇಳದಳು.. ನಂತರ ಅಶ್ವಿನ್ ಬಗ್ಗೆ ಮತ್ತೆ ಯಜಮನನಿಗೂ ಇವನ ನಡುವೆಯೂ ನಡೆದ ಘಟನೆಗಳ ಬಗ್ಗೆ ಹೇಳಿದೆ.. ಅಜ್ಜಿ ಮೆಚ್ಚುಗೆ ಸೂಚಿಸಿದಳು..
           ಹಾಗೇ ಇವತ್ತು ಎಂದಿನಂತೆ ಕುಡಿದು ಬರದಿದ್ದ ನನ್ನನ್ನು ಆಶ್ಚರ್ಯದಿಂದ ನೋಡಿದ ಅಮ್ಮ ಏನೋ ಮೊದಲಿನ ಬಾಲಾಜಿ ಆಗಿ ಬಿಟ್ಟಿದಿಯ ಅಂದ್ಲು.. ಹೌದು  ಅಮ್ಮ.. ಈ ಅಶ್ವಿನ್ ನನ್ನ ಮೊದಲಿನ ಜೀವನದ ಸಿಹಿ ಕನಸನ್ನ ಮತ್ತೆ ನೆನಪಿಸಿದ.. ನಾನು ನಿಮ್ಮ ಮುಂದೆಲ್ಲ ಕೂಗಾಡುವಂತೆ ನಮ್ಮ ಯಜಮಾನನ ಮುಂದೆ ಕೂಗಾಡಿದ.. ಅದು ಅಲ್ಲದೆ.. ನನ್ನ ಹತ್ತಿರ ನಮ್ಮ ಮನೆಗೆ ಬರುವಾಗ ದಾರಿಯಲ್ಲಿ  ಕುಡಿಯೋದು ಒಳ್ಳೇದಲ್ಲ ಕಣಲೇ.. ಅದು.. ನೋವನ್ನ ಮರೆಸಲ್ಲ.. ನಮ್ಮ ಸಮಾಧಿ ಮಾಡುತ್ತೆ.. ಅಷ್ಟೇ.. ನೀನು ಅವನಂತೆ ಒಂದು ಸ್ಟೇಟಸ್ ಮಾಡ್ಕೋ ಬೇಕು ಅಂದ್ರೇ ಕುಡುದ್ರೆ ಸಾಧ್ಯ ಇಲ್ಲಾ.. ಓದು ಇಲ್ಲಾ ಏನಾದ್ರು ಬಿಸಿನೆಸ್ ಮಾಡು.. ಒಟ್ಟಿನಲ್ಲಿ ಈ ಹಾಳು ಮೃಗದ ಸಹವಾಸ ಬಿಡು ಎಂದ... ನಿನಗೆ ಎಷ್ಟೇ ಕಷ್ಟ ಇದ್ರೂ ಇಂತವರ ಸಂಗಡ ಇದ್ರೆ ನೀನು ಜೀತದಾಳು ಆಗೊಗ್ತಿಯ.. ಅಷ್ಟೇ.. ನಿನ್ನ ಕನಸನ್ನ ಯಾವುದು ನನಸು ಮಡ್ಕೊಲೋದಿಕ್ಕೆ  ಆಗೋಲ್ಲ.. ಅದೇ ನಾವೇ ಏನಾದ್ರು ಮಾಡಿ ದುಡುದು ತಿಂದರೆ ಮಾತ್ರ ನಮ್ಮ ಕನಸನ್ನ  ನಮ್ಮ ನಮ್ಬಿರೋರನ್ನ ಚನ್ನಾಗಿ ಅಲ್ಲದೆ ಹೋದರು ನಮಗೆ ತೃಪ್ತಿ ಆಗೋ ಹಾಗೇ ನೋಡ್ಕೋ ಬಹುದು.. ಎಂದ.. ನನಗು ಇದು ಸರಿ ಅನ್ನಿಸಿದೆ . ಅದಕ್ಕೆ ಆದಷ್ಟು ಬೇಗ ನಾನು ಏನಾದ್ರು ಬಿಸಿನೆಸ್ಸ್ ಆರಂಭಿಸಬೇಕು ಅಂತಿದಿನಿ..ಕಣಮ್ಮ.. ಇನ್ನೆಷ್ಟು ದಿನ ಅಂತ ಅವನ ಕೈ ಕೆಳಗೆ ಕೆಲಸ ಮಾಡ್ಲಿ.. ಇನ್ನೂ ಓದೋಕಂತು ನನ್ನ ಕೈ ಅಲ್ಲಿ ಸಾಧ್ಯ ಇಲ್ಲಾ.. ಒಂದು ಚಿಕ್ಕ ಬಿಸಿನೆಸ್ಸ್ಗೆ ಬೇಕಾಗೊಸ್ತು ಸಾಲ ಎಲ್ಲಾದರು ಮಾಡಿಸಿ ಕೊಡ್ತಿಯ.. ಹೇಗೂ ಅಪ್ಪನ ಕಾಲು ಆಪರೇಷನ್,  ಅಕ್ಕನ ಮದುವೆ, ಅಂತೆಲ್ಲ ಸಾಲ ಮಾಡಿ  ಕುತ್ತಿಗೆ ವರೆಗೆ ಮುಳುಗಿದಿವಿ  .. ಇನ್ನೂ ಒಂಚೂರು ಮುಳುಗ್ಲಿಕ್ಕೆ ಏನು ಭಯ ಅಲ್ಲವ ಅಮ್ಮ.. ಗೆದ್ದರೆ ನಿನ್ನ ಮತ್ತೆ ಅಪ್ಪನ್ನ ನಾನು ಬದುಕಿರೋ ತನಕ ಚನ್ನಾಗಿ ನೋಡ್ಕೊಂಡು ಆರಾಮಾಗಿ ಇರಬಹುದು ಅಲ್ಲವ??? ಇದೆಲ್ಲ.. ಅವನು ನನಗೆ ಹೇಳದೆ ಹೋದರು ಅವನು ಹಚ್ಚಿದ ಚಿಂತನೆ ಇಂದ ಹುಟ್ಟಿರೋದು.. ನನಗೇನು ಇನ್ನೂ  ೨೨ ಇನ್ನೂ ದುಡಿಯೋ ವಯಸ್ಸು..ಅಮ್ಮ ಒಪ್ಪಿಗೆ ಕೊಡಮ್ಮ.. ಆ ನನ್ನ ಯಜಮಾನನ ಹತ್ತಿರ ಮಾಡಿದ ಸಾಲ ಆದಷ್ಟು ಬೇಗ ತೀರಿಸ್ಲಿಕ್ಕೆ ಪ್ರಯತ್ನ ಪಡ್ತೀನಿ.. ಎಂದೆ..
 ನನ್ನ ಅಮ್ಮನಿಗೂ ಹರ್ಷವದಂತೆ ಕಂಡು ಬಂತು..ಆಕೆಯು ಕಣ್ಣಿನಲ್ಲೇ ಒಪ್ಪಿಗೆ ಸೂಚಿಸಿದಳು. ಆ ನನ್ನ ಅಮ್ಮನಾ ನಗು ಮೊಗ ಕಂಡು ಎಷ್ಟೋ ಕಾಲವಾಗಿತ್ತು.. ಅದನ್ನ ನನ್ನ ಗೆಳೆಯ ಅಶ್ವಿನ ಹತ್ತಿರ ಹೇಳಿದಾಗ ನಿಜಕ್ಕೂ.. ಖುಷಿ ಪಟ್ಟನಲ್ಲದೆ.. ಯಾ ಇವಾಗ ನೀನು ಬಾಲಾಜಿ ಎಂಬ ಹೆಸರಿಗೆ ತಕ್ಕವನಾದೆ ಎಂದು ಪ್ರೀತಿಯಿಂದ ಅಪ್ಪಿಕೊಂಡ.. 
           ಹಾಗೇ ಬಿಸಿನೆಸ್ ಸ್ಟಾರ್ಟ್ ಮಾಡಿದರೆ ನಿಜಕ್ಕೂ ಈ ನನ್ನ ಗೆಳೆಯನನ್ನ ಜೊತೆಯಲ್ಲೇ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿ ಕೇಳಿದರೆ.. ನೋಡೋಣ ಗೆಳೆಯ ಎಂದಷ್ಟೇ.. ಹೇಳಿದ.. ಅಂತು ಅಕ್ಕನ ಮದುವೆ ನಾನು ಬಯಸಿದಂತೆ ನಡೆಯದಿದ್ದರೂ.. ನಡೆದು ಹೋಯಿತು.. ಅಕ್ಕ ಸಂತಸದಿಂದ ಇದ್ದರಷ್ಟೇ ಸಾಕು ಎಂದು ಬಯಸಿದೆ.. ನನ್ನ ಭಾವ ಈಗ ಆರ್ಥಿಕವಾಗಿ ಬಲಿಷ್ಟನಗಿದ್ದ.. ಎಷ್ಟಾದರೂ.. ಅವನು ನಮ್ಮ ಯಜಮಾನನ ಗುಲಾಮ ತಾನೆ.. ಎಂದು ದುಃಖವಾಯಿತು.. ಎಲ್ಲಾ ದೇವರ ಆಟ.
                        ನಮ್ಮ ಮನೆಯಲ್ಲಿ ಉಳಿದ ಕಡೆಯ ದಿನ ಊಟ ಮಾಡುತ್ತ ಅಶ್ವಿನ್ ಹೇಳಿದ್ದು ಇನ್ನೂ ನೆನಪಿದೆ.." ಬಾಲಾಜಿ ನಿಜಕ್ಕೂ ಆ ನಿನ್ನ ಸಾಹುಕಾರನ ಹಂಗಿನ ಅರಮನೆಗಿಂತ ಈ ನಿಮ್ಮ ಪ್ರೀತಿ ತುಂಬಿದ ಕುಟೀರ ನನಗೆ ತುಂಬಾ ಇಷ್ಟ ಆಯಿತು. ಅಂತು ನಮ್ಮ ಅಕ್ಕನ ಮದುವೆ ಆಯಿತು..ಈ ಮನೆಯಲ್ಲಿ  ಏನೋ ಕಳೆದುಕೊಂಡಂತೆ ಬರೆ ೨ ದಿನ ಉಳಿದ ನನಗೆ ಆಗುತ್ತಿರ ಬೇಕಾದರೆ..ಇನ್ನೂ ನಿನಗೆ ಒಡಹುಟ್ಟಿದವಳು.. ದುಃಖವಾಗುವುದು ಸಹಜ.. ನಿನ್ನ ಅಮ್ಮ , ಅಪ್ಪ, ಅಜ್ಜಿಯರ ಮನಸನ್ನ ನಾನು ಸಾಂತ್ವನ ಪಡಿಸಲಾರೆ.. ನಿಮ್ಮ ಭಾವ ನಮ್ಮ ಅಕ್ಕನನ್ನ ಚನ್ನಾಗಿ ನೋಡಿಕೊಳ್ಳಲಿ. ಖಂಡಿತ ನೋಡಿ ಕೊಲ್ಲುತ್ತಾನೆ.. ಯಾಕೆಂದರೆ.. ಹಾಗೇ ಬದಲಾಯಿಸುವ ಶಕ್ತಿ ನಿನ್ನ ಅಕ್ಕನಲ್ಲಿದೆ.. " ಎಂದು.. ಹೊರಗೆ ಬಂದು.. ಅಜ್ಜಿಯ ಕಾಲಿಗೆ ನಮಸ್ಕರಿಸಿ.. ಅಲ್ಲಿಂದ ಹೊರಟೆವು.. ನಿಜಕ್ಕೂ ಈ ನನ್ನ ಮಿತ್ರ ತನ್ನ ಅಕ್ಕನ ಮದುವೆ ಎಂಬಂತೆ ಸಡಗರದಿಂದ ನನ್ನ ಒಟ್ಟಿಗೆ ಕೆಲಸದಲ್ಲಿ ಸಹಾಯ ಮಾಡಿದ್ದ..  ಅವನು ಮತ್ತೆ ಯಜಮಾನನ ಮನೆಗೆ ಹೋಗೋಣ ಎಂದು ಹೊರಟು ನಿಂತಾಗ ನಮ್ಮ ಮನೆಯವರ ಮುಖವೆಲ್ಲ ಬಾಡಿತ್ತು .. ಅಕ್ಕನಷ್ಟೇ ಇವನು ತಮ್ಮ ಮನೆಯ ಮಗ ಈಗ ಹೊರಟು ನಿಂತಿರುವನಲ್ಲ ಎಂದು ಅವರ ಮನ ತಳ ಮಳಿಸಿತ್ತು.. ಅದಕ್ಕೆ ಸಾಕ್ಷಿ ಎಂಬಂತೆ ಅಮ್ಮ ಕೇಳಿಯೇ ಬಿಟ್ಟಳು " ಅಶ್ವಿನ್ ಅವರ ಮನೆಗೆ ಇವತ್ತೇ ಹೋಗಲೇ ಬೇಕೇನು??? ಇಲ್ಲೇ ಇದ್ದರೆ ನಮಗೂ ಏನೋ ಸ್ವಲ್ಪ ಸಮಾಧಾನ ಬೇಕಾದರೆ ಬಾಲಾಜಿ ಹೋಗಿ ಬರಲಿ ನೀನು ನಾಳೆ  ಹೋಗುವಿಯಂತೆ ಎಂದಳು "  ಅದಕ್ಕೆ " ಅಮ್ಮ ಇನ್ನೊಮ್ಮೆ ಖಂಡಿತ ಬರುತ್ತೇನೆ... ಆದರೆ ಇಂದು ನಾನು ಹೋಗಲೇ ಬೇಕು.. ಅನ್ಯಾತ ಭಾವಿಸದೆ ಆಶೀರ್ವದಿಸಿ ಕಳುಹಿಸಿ ಕೊಡಿ" ಎಂದು.. ಕೇಳಿಕೊಂಡ, ಇದು ಸಾಕಲ್ಲವೇ.. ನಮ್ಮ ಮನೆಯವರು ಅವನನ್ನ ನನ್ನ ಅಂತೆ ಎಷ್ಟು ಹಚ್ಚಿಕೊಂಡಿದ್ದರು ಎಂದು ತಿಳಿಯಲು... ನಿಜಕ್ಕೂ ಅವನು ನಾನು ನಮ್ಮ ಯಜಮಾನನ ಮನೆಗೆ ಹೊರಟಾಗ ದಾರಿಯ ನಡುವೆ ಫೋನ್ ರಿಂಗಿನಿಸಿತ್ತು.. ಅಮ್ಮ ಹೇಳುತ್ತಿದ್ದಳು.. ಮನೆ ಯಾಕೋ ಬಿಕೋ ಅನ್ನುತ್ತಿದೆ ಕಣೋ.. ಬೇಗ  ಹೋಗಿ ನಿಮ್ಮ ಯಜಮಾನನ ಮನೆಯಿಂದ ರಜಾ ಪಡೆದು ಬೇಗ ಬಾ....




ಮುಂದುವರೆಯುವುದು...

No comments:

Post a Comment