ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Wednesday, September 8, 2010

ನನ್ನ ಮೊದಲ ಚುನಾವಣೆ

 ಮರೆಯಲಾಗದ ಚುನಾವಣೆ :
                      ಪ್ರಾಥಮಿಕ ವಿದ್ಯಾಬ್ಯಾಸವನ್ನ ನಮ್ಮುರಿನಲ್ಲೇ ಮುಗಿಸಿದ್ದ ನಾನು ಹೈಸ್ಚೂಲ್ಗೆಂದು.. ಬಿದ್ರಕಾನ್ ಎಂಬ ಹಳ್ಳಿಯನ್ನ ಸೇರಿದೆ. ಅಲ್ಲಿವರೆಗೂ " ಕುರುಡರ ಸಾಮ್ರಾಜ್ಯದಲ್ಲಿ ಒಕ್ಕನ್ನಿನವನೇ ಮೇಲು" ಎಂಬಂತೆ ನಮ್ಮೂರಿನ ನಮ್ಮ ಶಾಲೆಯಲ್ಲಿ ನಾನೇ ಎಲ್ಲದರಲ್ಲೂ ಮೊದಲಿಗ.. !!!
                  
                      ಬಿದ್ರಕಾನ್ ನಲ್ಲಿ ಹೈಸ್ಚೂಲ್ಗೆ ಸೇರಿದ ಮೇಲೆ ನಮ್ಮದೊಂದು ಗುಂಪೇ ರಚನೆ ಯಾಯಿತು.. ಮನೋಜ್ ಉಳ್ಳಾನೆ, ಸುಮಂತ ಚಟ್ಟ್ನಲ್ಲಿ, ನಾಗರಾಜ್, ಪ್ರದೀಪ್ ಜಾಗಣೆ, ಗುರುಪ್ರಸಾದ ಹಿಪನಳ್ಲಿ... ವಿನಯ ಮಾವಿನಹಳ್ಳಿ, ಹರ್ಷ, ಹೀಗೆ ೧೦ -೧೧ ಮಂದಿಯಿದ್ದ ನಾವು ೮ ನೇ ಕ್ಲಾಸ್ ನಿಂದಲೇ ನಮ್ಮದೇ ಸಾಮ್ರಾಜ್ಯವಿದು ಎನ್ನುತ್ತಾ ಹೈಸ್ಚೂಲ್ ಜೀವನ ನಡೆಸುತ್ತಿದ್ದೆವು, ಹೀಗಿರಲು ಕಾಲ ಚಕ್ರ ತಿರುಗಿ ಅಂತು ೧೦ ನೇ ತರಗತಿಗೆ ಬಂದದ್ದಾಯಿತು..

             ಆಗ ಚುನಾವಣೆಯ ಘಾಟು ನಮಗೂ ಬಡಿಯಿತು.. ಚುನಾವಣೆಯ ದಿನದಂದು ಎಲ್ಲಾ  ಸಮಾವೇಶಗಳನ್ನ  ನಡೆಸುತ್ತಿದ್ದ ೯ ನೇ ಕ್ಲಾಸ್ ಸೇರಿದ್ದೆವು.. ನಮ್ಮ ಗುಂಪಿನಿಂದ ಎಲ್ಲರು ಒಂದೊಂದು ವಿಭಾಗಕ್ಕೆ ನಿಂತಿದ್ದರು.. ಓದಿ ಓದಿ ಆದ ಕೂಚು ಭಟ್ಟ ಎಂದೇ ಎಲ್ಲರಿಂದಲೂ ಕರೆಸಿಕೊಳ್ಳುತ್ತಿದ್ದ ಕಲಾದರನು ನಮ್ಮ ಗೆಳೆಯರ ಸ್ಪರ್ಧಿಸದೇ ಬಿಟ್ಟಿದ್ದ  ಸಾಂಸ್ಕ್ರತಿಕ ವಿಭಾಗಕ್ಕೆ ನಿಂತ ಅವನಿಗೆ ವಿರುದ್ಧ ಯಾರು ??? ಅಂಥ ನಾವೆಲ್ಲ ಮನಸಿನಲ್ಲೇ ಯೋಚಿಸುತ್ತಿರುವಾಗಲೇ ಯಾರೋ ನನ್ನ ಮಿತ್ರ ನನ್ನ ಹೆಸರು ಕೂಗಿದ ಅಲ್ಲಿವರೆಗೂ ಚುನಾವಣೆ ಎಂದರೇನೆ ಏನು ತಿಳಿಯದ ನಾನು ಗೆಳೆಯರ ಒತ್ತಾಯದ ಮೇರೆಗೆ ಸಮ್ಮತಿಸಿದೆ.. ಹೇಗೂ ನನ್ನ ಎದುರಾಳಿ ನನಗಿಂತ ಎಲ್ಲರಿಗೂ   ಚಿರಪರಿಚಿತ.. ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿ ಆಗಿದ್ದುದರಿಂದ ನನಗೆ ಸೋಲೇ ನಿಶ್ಚಿತ ಎಂದು ಭಾವಿಸಿದ್ದೆ..
           ಅದರಲ್ಲೂ ನನಗೆ ಮೊದಲ ಚುನಾವಣೆ, ಅದೇನೋ ಹೇಳುತ್ತಾರಲ್ಲ ನಾನು ಅವನ ಮುಂದೆ ಬಲಿಪಶುವಿನಂತೆ ಆಗುವೆನೆಂಬ ಭಯ & ಎಲ್ಲರು ವೇದಿಕೆಯ ಮೇಲೇರಿ ಮತ ಯಾಚಿಸಲು ತೊಡಗಿದಾಗ  ನಾನು ಅಕ್ಷರಶಃ ನಡುಗುತ್ತಲೇ ಹೋಗಿ ನಡುಗುವ ದ್ವನಿಯಲ್ಲೇ ಮತಯಾಚಿಸಿ ಬಂದೆ...

           ನಂತರ ಇಂಗ್ಲಿಷ್ ಶಿಕ್ಷಕರಾಗಿದ್ದ ಶ್ರೀ S V ಹೆಗಡೆಯವರು ಚುನಾವಣೆಯ ಫಲಿತಾಂಶ ಹೇಳಲು ಆರಂಭಿಸಿದಾಗ ನಿಜಕ್ಕೂ ದಿಗಿಲಾಗಿತ್ತು.. ನಂತರ ಎಲ್ಲಾ ನನ್ನ ಮಿತ್ರರು ಅವರು ನಿಂತ ವಿಭಾಗದಲ್ಲಿ ಆಯ್ಕೆ ಆದದ್ದು ತಿಳಿದೊಡನೆ ತುಂಬಾ ಹರ್ಷವಾಗ ತೊಡಗಿತು. ಇನ್ನು ನನ್ನ ವಿಭಾಗದ ಫಲಿತಾಂಶ ಕೇಳಿದಾಗ ನಿಜಕ್ಕೂ ನನಗೆ ನಂಬಲು ಸದ್ಯವಗಲೇ ಇಲ್ಲ.. ಹೇಗೂ ನನಗೆ ಸೋಲು ಎಂದು ತಲೆ ತಗಗಿಸಿಕೊನ್ದವನಿಗೆ ನಿಜಕ್ಕೂ ಆಶ್ಚರ್ಯಕಾದಿತ್ತು.. ನನ್ನ ಪ್ರತಿಸ್ಪರ್ಧಿ ೧೮ ಮತ ಪಡೆದಿದ್ದರೆ ನಾನು ಅಮೋಘ ೮೧ ಮತಗಳನ್ನ ಪಡೆದು ವಿಜಯಿ ಆಗಿದ್ದೆ. ಮಾರನೆ ದಿನ ನಮ್ಮ ಹೆಡ್ ಮಾಸ್ಟರ್ ನಮ್ಮ ಕ್ಲಾಸಿನಲ್ಲಿ ಇ ವಿಷ್ಯ ಹೇಳುತ್ತಾ " ಅಲ್ಲಾ ಭತ್ತ್ಗೆರೆ ಈ ರೀತಿ ಗೆಲ್ಲುತ್ತಾನೆ ಅಂಥ ನಾನು ಅಂದ್ಕೊಂಡೆ ಇರಲ್ಲಿಲ್ಲ.. ಅಲ್ಲಾ ನಾನೆನದ್ರು ಎಲೆಕ್ಷನ್ ಗೆ ನಿಂತರೇ ಬಹುಷಃ ನಮ್ಮ ಮನೆಯವರೇ ನನಗೆ ಮತ ಹಾಕೋದಿಲ್ಲ ಅಂತದರಲ್ಲಿ ಇವ ಬೇರೆ ಊರಗೆ ಬಂದು ಈ ರೀತಿ ಗೆಲ್ಲತ ಅಂದ್ರೇ ನಂಬೋದಕ್ಕೆ ಆಗಲ್ಲ.. ನೀನು ಏನು ಗಿಮಿಕ್ಕು ಮಾಡದೇ ಅಂಥ ನಮಗೂ ಹೇಳೋ ಮಾರಾಯ" ಎಂದಾಗ ನಿಜಕ್ಕೂ ಈಡಿ ಕ್ಲಾಸ್ ಬಿದ್ದು ಬಿದ್ದು ನಕ್ಕಿದ್ದೆವು... ನಿಜಕ್ಕೂ ಆ ಗೆಲುವು ಅದೇನೋ ಹೇಳುತ್ತಾರಲ್ಲ ಹೂ ಜೊತೆಗೆ ನಾರು ಭಗವಂತನ ಮುಡಿ ಸೇರಿತು ಅಂತಾರಲ್ಲ ಹಾಗೆ, ನನ್ನ ಗೆಳೆಯರ ಬಳಗದ ಸಹಾಯದಿಂದ ನಾನು ಗೆದ್ದಿದ್ದೆ..


ಆ  ನೆನಪು ಗಳನ್ನ ನೆನೆದಾಗ ತುಂಬಾ ಸಂತಸವಾಗುತ್ತದೆ... ಅಂಥ ದಿನಗಳು ಬೇಕೆಂದರು ಮತ್ತೆ ಬರಲಾರದು ಸವಿ ನೆನಪೊಂದೇ ಶಾಶ್ವತ....

2 comments:

  1. idra background color change maadi odavke swalpa kastha aagtu...
    nimma haleya savi nenapu nangu nanna high school days haange... kann munde batta iddu... thanks a lot!

    ReplyDelete
  2. okay thanks for valuable suggestion akka...... and also for liking this article

    ReplyDelete