ಕಮಾಲ್ - Do Before Die..

My photo
ನಮ್ಮೂರು ಅರಕ್ಕೆರದ ಮೂರಕ್ಕೆ ಇಳಿಯದ ಸಿದ್ದಾಪುರ(ಉ.ಕ), ಕರುನಾಡು (ಕರ್ನಾಟಕ), India
ಪಕ್ಕ ಪಕ್ಕ ಹಳ್ಳಿ "ಹವಿ"(ಹವ್ಯಕ ) ಹುಡುಗ. ಇದು ನನ್ನ ಬ್ಲಾಗ್. ಅಲ್ಲಾ ಅಲ್ಲಾ ಇದು ನನ್ನ ನೆಟ್ ಮನೆ. ನೀವು ಏನೇ ಅಂದ್ರು, ನನ್ನ ಬ್ಲಾಗ್ ಗೆ ಬಂದು ತಪ್ಪು ಮಾಡದ್ರಿ ಅಂತ ಅನ್ನಿಸ್ತ ಇದ್ರೆ, ನಾನು ಹೇಳೋದು ಇಷ್ಟೇ ತಪ್ಪು ಮಾಡಿದಿರಾ, ಇನ್ನೂ ಸ್ವಲ್ಪ್ ಮಾಡದರೆ, ಏನು ತಪ್ಪಲ್ಲ. ಹಾಗೇ ಮುಂದುವರೆದು, ಕಷ್ಟ ಪಟ್ಟು ನನ್ನ ಬ್ರಹ್ಮ ಲಿಪಿಯನ್ನ ಒಸಿ ಓದಿ. ಹಾಗೇ ಇಷ್ಟ ಆದ್ರೆ & ಹಾಗೇ ಆಗದೆ ಹೋದರು ಒಸಿ, ಏನೋ ತಮ್ಮ ಅಮೂಲ್ಯ ಅಭಿಪ್ರಾಯ ತಿಳಿಸಿ. "ಹೇಯ್.. ನಿನಗೂ ಒಂದು.. ಬ್ಲಾಗ್ ಯಾಕಪ್ಪ???" ಅಂತ ಅನ್ನಿಸದ್ರೆ ಅದನ್ನು ಮುಲಾಜಿಲ್ಲದೆ, ಹೇಳಿ. ಹುಂ ಇಷ್ಟ ಆದ್ರೆ ಇನ್ನೊಮ್ಮೆ ಬನ್ನಿ ಹರಸಿ. ಬೆಳೆಸಿ.ಇದು ನಿಮ್ಮ ಹವಿ ಹುಡುಗನ .ಕಳಕಳಿಯ ನಮ್ರ ವಿನಂತಿ..

Total Pageviews

Thursday, July 28, 2011

ಎಲ್ಲಾ ವಿದ್ಯೆಗಿಂತ ಬದಕುವ ಕಲೆ ಮೇಲು..




"ತರುಣ್.. ಇಲ್ಲಿ ನೋಡೋ.. ಇಲ್ಲಿ ಯಾರೋ.. ಹುಡುಗ.. ತಾನು ರಾಂಕ್ ಬಂದಿಲ್ಲ ಅಂತ ಆತ್ಮಹತ್ಯೆ ಮಾಡ್ಕೊಂದಿದಾನಂತೆ ಕಣೋ ಪಾಪ ಅಲ್ವ???" ಅಂತ ತರುಣನ ಅಮ್ಮ ಟಿ ವಿ ನೋಡ್ತಾನೆ  ಕೂಗಿದಾಗ, facebook ನಲ್ಲಿ ಮೊರೆ ಹುದುಗಿಸಿಕೊಂಡಿದ್ದ ತರುಣ್ ಆ ಲೋಕದಿಂದ ಹೊರ ಬಂದು ಅಮ್ಮನ ಮಾತನ್ನ ಕೇಳಿದ.
ಅದನ್ನ ಕೇಳಿದ ತಕ್ಷಣ  " ಅಮ್ಮ ,ಯಾರಮ್ಮ ಪಾಪ ಬದುಕಲಿಕ್ಕೆ ಹೆದರಿ.. ಸಾವಿಗೆ ಶರಣಾದವನೋ ಅಥವಾ ಅವನಿಗೆ ರಾಂಕ್ ನೀನು ಬರಲೇ ಬೇಕು ಅಂದ್ರೇ ಮಾತ್ರ ನಿನ್ನ ಬದುಕು  ಉಜ್ವಲ ಆಗಿರುತ್ತೆ ಅನ್ನೋದನ್ನ ಚಿಕ್ಕವನಿದ್ದಗಿಂದ ತಲೇಲಿ ತುಂಬಿ.. ಬೆಳೆಸಿದರಲ್ಲ.. ಅಂತ ತಂದೆ ತಾಯಿನೋ ???" ಅಂತ ತಕ್ಷಣ ಕೇಳಿದ.. 
"ಅಂದ್ರೇ?? ನೀನು ಹೇಳೋದು ಏನೋ ಅವನ ಸಾವಿಗೆ.. ಅವರ ಅಪ್ಪ ಅಮ್ಮನೇ ಕಾರಣ ಅಂತನ?? ಯಾವ ತಂದೆ ತಾಯಿಗೆ ತಮ್ಮ ಮಗ.. ಓದಿ ಬುದ್ದಿವಂತ ಆಗಬೇಕು ಅಂತಿರಲ್ಲ ಹೇಳು?? ಹಾಗೇ ಇರೋದು ತಪ್ಪಾ??" 
"ಅಮ್ಮ ತಪ್ಪಲ್ಲ.. ಆದರೆ ತಮ್ಮ ಕನಸನ್ನ ಇದೆರ್ಸ್ಕೊಬೇಕು ಅಂತ   ಅತಿ ಆದ ಒತ್ತಡವನ್ನ ತಮ್ಮ ಮಕ್ಕಳ ಮೇಲೆ  ಹೇರೋದು ತಪ್ಪು ಅಂದೇ. " ಅಂತ ಹೇಳಿ ಅಮ್ಮನನ್ನ ಸಮಾಧಾನ ಮಾಡಿದ. ಆದರೆ ಅವನ ಯೋಚನೆ ಮಾತ್ರ ನಿಲ್ಲಲಿಲ್ಲ.
  ಅಲ್ಲಾ ಯಾಕೆ ತಾನು ರಾಂಕ್ ಬಂದಿಲ್ಲ ಅಂತ  ಪಾಸ್ ಆಗಲಿಲ್ಲ ಅಂತೆಲ್ಲ   ಸಾವಿಗೆ ಶರಣಾಗ್ತಾರೆ ?? ಅವರ ಮನಸ್ಸು ಅಷ್ಟೆಲ್ಲ ಬಾಲಿಶ ಯಾಕೆ??? ಅಲ್ಲಾ.. ಅವರಿಗೆ ಆ ರೀತಿ ಅನ್ನಿಸೋದಾದ್ರು  ಯಾಕೆ ? ಸೋಲನ್ನ ಅರಗಿಸಿ  ಗೆಲ್ಲೋ ಛಲವನ್ನ ಅವರು ಓದಿರೋ ವಿದ್ಯಾಭ್ಯಾಸದಲ್ಲಿ ಇಲ್ಲಾ ಅಂದ್ರೇ ಅಂಥ ಶಿಕ್ಷಣ  ಕಲಿಯೋದದ್ರು ಏನಕ್ಕೆ ?? ಅವರ ಬುದ್ದಿವಂತಿಕೆ ಒಂದೇ ಸೋಲಿಗೆ ನೆಲಕಚ್ಚಿತೇನು??
ನನ್ನ  ಕಣ್ಣಿಗೆ ಕಾಣೋ  ಹಾಗೇ ಹೇಳಬೇಕೆಂದರೆ  ನನ್ನ ವಯಸಿನವನೆ ಆದ ನನ್ನ ಗೆಳೆಯ ಕಿರಣ್   ಚಿಕ್ಕವನಿದ್ದಗಿಂದ  ಓದೋದ್ರಲ್ಲಿ ತುಂಬಾ ಹಿಂದೆ  ಅದೇ ವೇಳೆ ಎಲ್ಲಾ ನಮ್ಮ ಹಿರಿಯರು  ನಾನು ಬುದ್ಧಿವಂತ ಅಂತ ಅವನ ಮುಂದೇನೆ ಹೊಗೊಲೋರು. ಆಗ  ಅವನಿಗೆ ಆಗುತ್ತಿದ್ದ  ಮಾನಸಿಕ ತಳಮಳ ಇವಾಗ ನನಗೆ ಅರ್ಥ ಆಗುತ್ತಿದೆ. ಇವಾಗ ನೋಡಿ ನಾನು ಇನ್ನೂ ಜೀವನದಲ್ಲಿ  ಓದಿ  ಬದುಕಲಿಕ್ಕಾಗಿ ದೊಡ್ಡ ದೊಡ್ಡ ಕಂಪೆನಿಗಳ ಗುಲಾಮನಾದೆ.( ಕೆಲಸಗಾರನದೆ.) ಅದಕ್ಕೂ ಮೊದಲೇ ನಾನು  ಓದುತ್ತಿರುವಾಗಲೇ ಅವನು  ಅರ್ಧದಲ್ಲೇ ಶಾಲಾ ಶಿಕ್ಷಣಕ್ಕೆ  ತಿಲಾಂಜಲಿ ಹೇಳಿದ. ಆದರೆ ಹೇಡಿ ಅಂತೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ.  ಅದರ ಬದಲು ಬದಕುವ ಕಲೆ ಕಲಿತ  ನಾನು ನನ್ನ ಶಾಲಾ ವಿದ್ಯಾಭ್ಯಾಸ ಮುಗಿಸುವುದರೋಳಗೆನೆ, ಅವನು ಜೀವನದಲ್ಲಿ  ನೆಲೆ ಕಂಡು ಕೊಂಡಿದ್ದ.  ತಾನು ಯಾರಿಗೂ ಕಡಿಮೆ ಏನು ಅಲ್ಲಾ ಎಂದು ತೋರಿಸಿ ಕೊಟ್ಟ. ಆವನ ಎದುರಿಗೆ ಚಿಕ್ಕವನಾಗಿದ್ದಾಗ ಎಲ್ಲರಿಂದ ಬುದ್ಧಿವಂತ ಎಂದು ಕರೆಸಿಕೊಳ್ಳುತ್ತ.. ಸದಾ ಶಾಲಾ ವಿದ್ಯಾಭ್ಯಾಸದಲ್ಲಿ ಮುಂದಿದ್ದು  ಬದಕುವ ಕಲೆ ಕಲಿಯಲು, ಪರದಾಡುತ್ತಿದ್ದ ನನ್ನ ಅಂತವನು ತುಂಬಾ ಕುಬ್ಜ ಆಗಿ ಬಿಟ್ಟೆ. ಆದರೆ ನಾನು ಸದಾ ಅವನಿಂದ ಸ್ಪೂರ್ತಿ ಪಡೆದೆ. ನಾನು ಸೋತಾಗಳು ಅವನೇ ನನಗೆ ಸ್ಪೂರ್ತಿ ಆದ. 
ಅಂತಹ ಸ್ಪೂರ್ತಿಯ ಚಿಲುಮೆಗಳು ಇತಿಹಾಸದ ಪುಟ ಹುಡುಕಿದರೆ ಅನೇಕರು ಸಿಗುವರು,  ನಿಜ ಹೇಳ ಬೇಕೆಂದರೆ ಸೋಲನ್ನು  ಗೆಲುವನ್ನಾಗಿಸುವ 
  ಛಲವನ್ತಿಕೆಯ ಬದುಕಿನ ಕಲೆಯನ್ನ ಕಲಿತು, ಬೆಳೆಸಿಕೊಂಡು ಸೋಲಿಗೂ ಸಡ್ಡು ಹೊಡೆದು ಗೆಲುವಿನ ನಗೆ ನಕ್ಕವರೇ ನಮ್ಮ ಇತಿಹಾಸದಲ್ಲಿ ಸಾಧಕರಾಗಿ ಸದಾ ಮಿನುಗುತ್ತಿರುವರಲ್ಲವೇ? 
ಈಗ ನೀವೇ ಹೇಳಿ ರಾಂಕ್ ಬರಲಿಲ್ಲ ಎಂದೋ ತಾನು ಬಯಸಿದವರು ಸಿಗಲಿಲ್ಲ ಎಂದೋ ಆತ್ಮಹತ್ಯೆ ಮಾಡಿಕೊಳ್ಳುವವರು ನಿಜಕ್ಕೂ ಬುದ್ಧಿವಂತರೋ ?? ಅಲ್ಲಾ  ಹೇಡಿಗಳೋ  ನೀವೇ ಹೇಳಿ?? ಇಂತವರು ಸಾಯುವ ಮೊದಲು ತಮ್ಮನ್ನು ನಂಬಿರುವವರ ಬಗ್ಗೆ ಒಮ್ಮೆ ಯೋಚಿಸಬಾರದೇಕೆ? ಸೋಲನ್ನ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧನೆಯ ಸವಿಯನ್ನ ಸವಿಯಬಾರದೇಕೆ ??  ನಿಜ ಹೇಳಿ ಅಂತವರು ಸತ್ತಾಗ ಪಾಪ ಅನ್ನಬೇಕೆ ಅಥವಾ  ಹೇಡಿಗಳು ಅನ್ನಬೇಕೆ?? ಎಂದೇನೇನೋ.. ಮನಸಿನಲ್ಲೇ ಲೆಕ್ಕಾಚಾರ ಹಾಕಿ.. ಕೊನೆಗೂ.. ಅರ್ಥವಾಗದೇ ತನ್ನ ಮನದ ತುಮುಲವನ್ನ ತನ್ನ ಡೈರಿ ಅಲ್ಲಿ ಬರಹ ಆಗಿಸಲು.. ನಡೆದ..

Friday, May 27, 2011

ಬಾರ್ ಬಾರ್ ಆತಿ ಹೈ ಮುಜಕೋ.. ಮಧುರ ಯಾದ ಬಚಪನ್...............



         "ಶೀಲ ಶೀಲಾ ಕಿ ಜವಾನಿ.. ಹಂ  ತೋ ಸೆಕ್ಸಿ ಫಾರ್ ಯು...." ಈ ಹಾಡಿಗೆ ಸ್ಟೆಪ್ ಹಾಕ್ತಿದ್ದ.. ಸಣ್ಣ ಮಗುವನ್ನ ನೋಡಿದ  ತರುಣ್ ನ ಮನಸು.. ಯಾಕೋ.ಕಸಿವಿಸಿ ಆಯಿತು.. ಅದರ ಬೆನ್ನ ಹಿಂದೆಯೇ.. " ತರುಣ್ ನಮ್ಮ ಮುಗುವಿನ ಡಾನ್ಸ್  ಹೇಗಿದೆ.. ??? ಅಂತ ಸ್ವತಃ ಅವರ ಅಮ್ಮನೇ ಕೇಳಿದಾಗ.. ಮನಸಿಲ್ಲದ ಮನಸಿನಿಂದ.  ಹುಂ ಚನ್ನಾಗಿದೆ ಎಂದನು. ಆದರೆ ಮನಸು ಹೌಹಾರಿತ್ತು..
ಇನ್ನೂ ನೆಟ್ಟಗೆ ಬಾಲ್ಯದ ಸವಿಯನ್ನೇ ಸವಿಯಾದ ಪುಟ್ಟ ಹುಡುಗಿಗೆ ಎಂತ ಹಾಡುಗಳನ್ನೆಲ್ಲ ತೋರಿಸಿ ಅವರ ಪಾಲಕರು ಅವಳ ನಿಜವಾದ ಬಾಲ್ಯವನ್ನ ಕಸಿದು ಕೊಲ್ಲುತಿಲ್ಲವೇ ಎನಿಸಿತು.

ತರುಣನಿಗೆ ಇನ್ನೂ ನೆನಪಿದೆ, ಆ ಬಾಲ್ಯದ ದಿನಗಳು, ಹಿಂದೆಲ್ಲ ಪಕ್ಕದ ಮನೆಯ ಸುನಿಲ್ ಎಂಬ ತಮ್ಮನ ಸಂಗಡ.. ಕತ್ತಲಾಗುವ ತನಕ ಕ್ರಿಕೆಟ್, ಬುಗರಿ ಗೋಲಿ.ಆಟ ಆಡಿದ್ದು. ಆ ಆಟದಲ್ಲಿ ಎಲ್ಲಾ ತನ್ನದೇ ಗೆಲುವಾಗಬೇಕು ಎಂಬ ಎಲ್ಲಿಯದೋ ಹಠ. ಸೋಲನ್ನು ಜಗಳವಾಗಿ ಪರಿವರ್ತಿಸುವ.. ಛಲ.. ಹಾಗೂ ಗೆಲವು.. ಸಿಗದಿದ್ದರೆ.. ದುಃಖದಲ್ಲೇ.. ಸೋಲನ್ನ ಒಪ್ಪಿಕೊಳ್ಳುವ ಆ ತುಂಟ ಬಾಲ್ಯಇಂದಿನ ಮಕ್ಕಳಿಗೆ ಇಲ್ಲವೇ.

ಇನ್ನೂ ಶಾಲೆ ಮುಗಿದ ಮೇಲೆ  ದಾರಿಯಲ್ಲಿ  ಆ ಆ  ಕಾಲಕ್ಕೆ ಸರಿಯಾಗಿ ಸಿಗುವ ಪುನ್ನೆರಲು, ಜಂಬೆ, ಪೇರಲ, ನೆಲ್ಲಿ, ಚಳ್ಳೆ, ಬಿಕ್ಕೆ, ಹಲಗೆ, ಕೌಳಿ, ಬಿಳೆ ಮುಳ್ಳು ಹಣ್ಣು, ಇತ್ಯಾದಿ  ಇವೆಲ್ಲವನ್ನು ಮೆಲ್ಲುತ್ತ.. ಅದರಲ್ಲೂ.. ಎಲ್ಲರಿಗಿಂತ ಜಾಸ್ತಿ ತಿನ್ನಬೇಕು ಎನ್ನುವ ಹಠದಿಂದ  ಎಲ್ಲರಿಗಿಂತ ಮೊದಲು, ಆ ಸ್ಥಳಗಳಲ್ಲಿ ಹಾಜರಾಗಿ, ಆ ಫಲಗಳನ್ನ ಹೊತ್ತು ನಿಂತ ಆ ಗಿಡಗಳಿಗೆ,  ಯಾಕಾದರೂ ತಾವು ಈ ಜನ್ಮ ತಾಳಿದೆವೋ ಅನಿಸುವಷ್ಟು ಗೋಳು ಕೊಡುವ ಆ ದಿನಗಳನ್ನ ನೆನೆಸಿಕೊಂಡರೆ ಅದೇನೋ ಖುಷಿ. ಆ ಬಾಲ್ಯದ ಗೆಳೆಯರು ಒಂದಾದಾಗ ಸಿಗುವ ಆ ಹಳೆಯ ನೆನಪುಗಳು ಇಂದಿನ ಮಕ್ಕಳಿಗೆ ಸಿಗುವುದೇನು???
ಇಗಲೇ ಟಿ.ವಿ.ಯಾ ಕಂಪ್ಯೂಟರ್ ನಾ ಹುಳುಗಳಾಗುತ್ತಿರುವ  ಅವರು ತನ್ಮೂಲಕ ಅದರ ನಡುವೆಯೇ ತಮ್ಮ ಮಧುರ ಬಾಲ್ಯವನ್ನ ಕಳೆಯುತ್ತಿರುವ ಇಂದಿನ ಬಾಲಕರನ್ನ ಕಂಡಾಗ ಈ ಪ್ರಶ್ನೆ ಉದ್ಭವಿಸದಿರದು ಅಲ್ಲವೇ.??

ಮುಂದೊಂದು ದಿನ. ಜೀವನದ ಅಂತಿಮದ ದಿನದವರೆಗೂ ಅದೇ ಟಿ.ವಿ., ಕಂಪ್ಯೂಟರ್ ಎಂಬ ದೈತ್ಯ ರಾಕ್ಷಸರ ನಡುವೆಯೇ ಕಳೆಯ ಬೇಕೆಂಬ ಭಾವನೆ ಆ ಬೆಳೆದ ಮಗುವಿನಲ್ಲಿ. ಬಂದಾಗ, ಅದಕ್ಕೆ ಹಳೆಯದನ್ನ ನೆನಪಿಸಿಕೊಂಡು ಖುಷಿ ಪಡಲು ಅಂತಹ ಬಾಲ್ಯ ಅವುಗಳಿಗೆ ಲಭ್ಯವಿದೆಯೇ??? 

ಇಗಲೇ ನಾವು ಕಾಲೇಜ್ನಲ್ಲಿ ಇದ್ದಾಗಲೂ ಗೊತ್ತಿಲ್ಲದಂತ ಅದೆಷ್ಟೋ  ವಿಷಯಗಳು (ಒಳ್ಳೆಯದ್ದು ಹಾಗೂ ಕೆಟ್ಟದ್ದು) ಇ ನಮ್ಮ ಮಕ್ಕಳಿಗೆ ಗೊತ್ತು. ಅದು ಒಳ್ಳೆಯದೇ  ಆಗಿದ್ದರೆ ನಾವು.. ಹೆಮ್ಮೆ ಪಡ ಬಹುದಿತ್ತೇನೋ ಆದರೆ. ಒಳ್ಳೆಯದಕಿಂತ.. ಕೆಟ್ಟದ್ದೇ ಜಾಸ್ತಿ ಆಗಿರುವಾಗ.. ಹೆಮ್ಮೆ ಪಡುವ ಅರ್ಹತೆ.. ಪಾಲಕ, ಪೋಷಕರಾಗಿರುವ  ನಮಗಿದೆಯೇ???

ಈ ಮಕ್ಕಳು.. ಎಲ್ಲಾ ವಿಧದಲ್ಲಿಯೂ.. ನಮಗಿಂತ ಉತ್ತಮ ಹಾಗೂ ಬುದ್ದಿವಂತರು.. ಎಂದು..ಒಪ್ಪಿಕೊಳ್ಳೋಣ.. ಆದರೆ.. ಹಾಗೇ ತಮ್ಮ ಮಕ್ಕಳು.. ಎಲ್ಲರಿಂದಲೂ.. ಹೇಳಿಸಿಕೊಳ್ಳ ಬೇಕು.. ಎಂಬುದು..ಪ್ರತಿಯೊಬ್ಬ ತಂದೆ ತಾಯಿ.. ಪೋಷಕರ..ಆಸೆ ಕೂಡ.. ಆದರೆ..ನಿನ್ನೆ ಮೊನ್ನೆಯವರೆಗೂ ಎತ್ತಿ ಆಡಿಸಿದ ಮಗು.. ನೋಡು ನೋಡುತ್ತಿದ್ದಂತೆ.. ಸಮೂಹ ರಕ್ಕಸರ.. ಕೈ ಗೊಂಬೆ ಆಗಿ.. ಇಡಿ ದಿನ.. ಟಿ.ವಿ. ಹಾಗೂ ಕಂಪ್ಯೂಟರ್ ಮುಂದೆ ಕುಳಿತು..ಕಂಪ್ಯೂಟರ್ ಗೇಮ್ಸ್.. ಮತ್ತು.. ಟಿ.ವಿ.ಯಲ್ಲಿ ಬರುವ.. ಅಶ್ಲೀಲ..ಹಾಡುಗಳ ನಡುವೆ ಕಳೆದು ಹೋಗುತ್ತಿದೆ.. ಎಂದಾಗ.. ಆ ಮಗುವನ್ನ ಕಂಡರೆ.. ನಿಜಕ್ಕೂ..ಮರುಕ ಹುಟ್ಟದೆ ಇರದು..
ಹಿಂದೆಲ್ಲ.. ಮಗ್ಗಿ..ಮತ್ತು.. ಲೆಕ್ಕಗಳಲ್ಲಿ.. ತಪ್ಪದೆ.. ಪಟ್ ಅಂತ ಹೇಳುವ.. ಹಾಗೂ.. ಸಂಜೆ ಆದಂತೆ.. ಬಾಯಿ ಪಾಠವನ್ನ ತಪ್ಪದೆ ಹೇಳುವ..ಮಕ್ಕಳನ್ನು..ಬುದ್ಧಿವಂತ ಎಂದು.. ಹೊಗಳುತ್ತಿದ್ದರು.. ಅದು ಅಲ್ಲದೆ... ವಿಶೇಷ ಕಾರ್ಯಕ್ರಮದಲ್ಲಿ.. ಊಟದ ವೇಳೆ ಗ್ರಂಥಗಳನ್ನ.. ಹೇಳಿ ಹೊಗಳಿಸಿಕೊಳ್ಳಬೇಕು.. ಎನ್ನುವ..ತುಡಿತ ನಮ್ಮಲ್ಲಿ ಇರುತಿತ್ತು.. ಆದರೆ.. ಇಂದಿನ.. ಬಹುತೇಕ..ಮಕ್ಕಳಲ್ಲಿ ಇವೆಲ್ಲ ಮಾಯವಾಗಿದೆ.. ಅವರು.. ಬೇಗ ದೊಡ್ದವರಗುತ್ತಿದ್ದಾರೆ.. ಅವರು ದೊಡ್ಡವರ ವಿಷಯ ಎನ್ನುವ ಕೆಲವು.. ವಿಷಯಗಳನ್ನ.. ಮುಲಾಜಿಲ್ಲದೆ.. ಕೆಲವೊಮ್ಮೆ ದೊಡ್ಡವರು..ನಾಚುವಂತೆ ಆಡ ಬಲ್ಲರು..
ಇಂದಿನ ಮಕ್ಕಳು ನಮಗಿಂತ ಬುದ್ದಿವಂತರು.. ನಿಜ.. ಆದರೆ.. ಅವರು.. ಸರಿಯಾದ ದಾರಿಯಲ್ಲಿ ಬೆಳೆಯುತ್ತಿದ್ದಾರೆಯೇ..?? ಆಥವ.. ನಮ್ಮ ಮಕ್ಕಳು.. ಬುದ್ದಿವಂತರು.. ಎನ್ನಿಸಿಕೊಲ್ಲಬೇಕು ಎಂದು.. ಅವರ ಬಾಲ್ಯವನ್ನ.. ನಮ್ಮ ಕೈ ಆರೇ.. ಕಸಿದು ಕೊಳ್ಳುತ್ತಿದ್ದೆವೆಯೇ..???

ಇದೆಲ್ಲ.. ಆಲೋಚನೆಗಳು. ತರುಣ ನಾ ಮನಸಿನಲ್ಲಿ.. ಹರಿದಾಡಿ.. ಕೊನೆಗೆ ತಮ್ಮ ಆ ಬಾಲ್ಯವೇ ಸೊಗಸು.. ಅದಕ್ಕಾಗಿ.. ತನ್ನ ತಂದೆ ತಾಯಿ.. ಹಾಗೂ.. ಪೋಷಕರಿಗೆ.. ಮನಸಾರೆ.. ಕೃತಜ್ಞತೆ ಸಲ್ಲಿಸಿದ..

Wednesday, March 23, 2011

ಎಲ್ಲಾ.. ಪ್ರೀತಿಯಲ್ಲಿ ವಿಫಲರಾದ.. ಗೆಳಯರಿಗೆ..ಪ್ರೀತಿಯ ಕಿವಿಮಾತು..


"ಹೇಯ್ ವರುಣ್ ಯಾಕೋ ಮಂಕಾಗಿದೀಯಾ ??? ನೀನೆ ಮಂಕಾಗಿದ್ರೆ ಹ್ಯಾಂಗೋ..ನನಗಂತೂ..ಸಮಯನೆ ಹೋಗಲ್ಲ... ಗೊತ್ತ.." 
" ಅಯ್ಯೋ.. ಹೋಗೋ.. ತರುಣ್.. ನಾನೇನು.. ನಿನ್ನ ಟೈಮ್ ಪಾಸು ಮಾಡೋ..ಕಾರ್ಟೂನ್ ನೆಟ್ವರ್ಕ್ ಚಾನೆಲ್ ನೋಡು.. ಯಾವಾಗಲೂ ನಿನ್ನ ಮುಂದೆ.. ನಗಿಸ್ತ ಇರೋಕೆ.."
ಅಂತ.. ಹಾಗೇ ಬೆಡ್ ಮೇಲೆ ಒರಗಿ ಮಲಗಿದ.. 
ಪ್ರೀತಿ - ಸ್ನೇಹ..

"ನನಗೆ ಗೊತ್ತು.. ಪುಟ್ಟ.. ನಮ್ಮ ಹುಡಗನಿಗೆ ಏನೋ ಎಡವಟ್ ಆಗಿದೆ ಅಂತ.. ಅಲ್ವೋ.. ಈ ಹಾಳೂ ದೊಡ್ಡ ಸಿಟಿ ನಲ್ಲಿ ನಮ್ಮವರು ಅಂತ  ಯಾರೋ ಇದ್ದಾರೆ.. ನನಗೆ ನೀನು ನಿನಗೆ ನಾನು..ಅಷ್ಟೇ. ಏನಾಯ್ತೂ ಅಂತ ಹೇಳೋ.. ಬೆವ್ಕೂಪ್.. ಡ್ರಾಮ ಸಾಕು.. ಏನು ನಿನ್ನ ಹುಡುಗಿ ಏನ್ ಮಾಡ್ತಿದಾಳೆ.."

"ಹೇ ಹೋಗೋ...ನೀನು ಅವತ್ತು ಹೇಳಿದ್ದು.. ನಿಜ ಕಣೋ.. ಅವಳು... ನನ್ನ ಬದುಕಿನಲ್ಲಿ ಆಟ ಆಡೋಕೆ ಅಂತಾನೆ.. ಬಂದವಳು.. ಅಲ್ಲವೋ.. ನಾನು ಏನೋ ತಪ್ಪು ಮಾಡಿದಿನಿ..ಬಡ ಮದ್ಯಮ ವರ್ಗದಲ್ಲಿ ಹುಟ್ಟಿದ್ದು.. ನನ್ನ ತಪ್ಪ??? ನಾನು ಸಾಯ್ತೀನಿ.. ಕಣೋ.. "

"ನಾನು ಹೇಳೋದೆಲ್ಲ.. ನಿಜ ಇರಲ್ಲಪ್ಪ.. ನಿನ್ನ ರೆಗ್ಸೋಕೆ ಏನೋ ಹೇಳಿರ್ತೀನಿ.. ಅಷ್ಟೇ..ಅಂತದ್ದು ಏನೋ ಆಯ್ತು.. ಇವಾಗ.. ಅವಳು ಒಳ್ಳೆಯವಳೇ ಕಣೋ.. ನೀನೆ. ಏನೋ ಕಿಚಾಯಿಸಿರ್ತಿಯ.. ಅದಕ್ಕೆ ಅವಳು ಇನ್ನೇನೋ.. ಅಂದಿರ್ತಲೇ ಅಷ್ಟೇ.. ಬಾ.. ಇವಾಗ ಮಲಗೋ ಹೊತ್ತಲ್ಲ.. ಟೀ ಕುಡುದು.. ಹೀಗೆ ಒಂದು.. ಸುತ್ತ ಹಾಕಿ ಬರೋಣ.. ದೋಸ್ತ್.. ಮನಸ್ಸು... ಕಣ್ಣು.. ಎಲ್ಲಾ ತಂಪಗುತ್ತೆ.." ಅಂತ ಟೀ ಮಾಡೋದಕ್ಕೆ.. ಅಂತ ಅಡುಗೆ ಮನೆಗೆ ಹೋದೆ...ಅವನ ಬಗ್ಗೆ ಕನಿಕರ ಮೂಡಿತು.. ಅವಳನ್ನ ಎಷ್ಟು ಇವನು ಹಚ್ಚ್ಕೊಂದಿದನೆ ಅಂತ ನನಗೆ ಗೊತ್ತು..

"ಹೇ ನೀನು ಹೋಗು.. ನನಗೆ ಮೂಡ ಇಲ್ಲಾ ಅವಳ ಬಗ್ಗೆ ಏನೋ ಅಂದ್ಕಂಡಿದ್ದೆ.. ಆದ್ರೆ.. ಅವಳಗೆ ನನ್ನಗಿಂತ ಚನ್ನಗಿದ್ದವನು ಸಿಕ್ಕದ ಅಂತ ಅವನ ಹಿಂದೆ ಹೊಗೋದ..ನೀನೆ ಹೇಳು ತರುಣ್ ಯಾವಾಗಲೂ ಅವಳ ಪರನೇ ಮಾತಾಡ್ತಿದ್ದೆ.. ಅವಳು ಇವಾಗ.. ಅವಳ ಸಂಗಡ ವರ್ಕ್ ಮಾಡವನೇ ನನಗಿಂತ ಚನ್ನಗಿದಾನೆ ಅಂತ.. ಅದು ಅಲ್ಲದೆ ಅವನು ಇವಳನ್ನ  ಇಷ್ಟ ಪಟ್ನಂತೆ, ಇವಳು ಹು ಅಂದಳಂತೆ.. ಜೊತೆಗೆ ಸಾರೀ ಕಣೋ.. ನಿನಗೆ ನನಗಿಂತ ಚನ್ನಾಗಿರೋ.. ಹುಡುಗಿ ಖಂಡಿತ ಸಿಕ್ಕತಾಳೆ.. ಬೇಜಾರ ಮಾಡ್ಕೋ ಬೇಡವೋ.. ಅಂತ..  ಬೇರೆ ಹಾರೈಕೆ.. ಯಾರಿಗೆ ಬೇಕೋ ಅವಳ ಹಾರೈಕೆ. ನಾನು ಯಾವದ್ರಲ್ಲಿ ಅವನ್ಕಿಂತ ಕಡಿಮೆ ಆಗಿದಿನಿ ಅಂತ ಹೇಳು ಅಂದ್ರೇ.. ಅದಕ್ಕೂ.. ಅವಳ ಬಳಿ ಉತ್ತರ ಇಲ್ಲವೋ.. ಕೇಳದ್ರೆ.. ಅವಳೇ.. ನನಗೆ ಸರಿಯಾದ ಜೋಡಿ ಅಲ್ಲಾ ಅಂತ ಅನ್ನಿಸ್ತಂತೆ.. ನೀನೆ ಹೇಳೋ.. ಇದು ಅವಳು ಮಾಡಿರೋದು ಸರಿ ನಾ??.. ಇಷ್ಟಕ್ಕೂ.. ನನಗೆ ಇವಾಗ ಒಳ್ಳೆ ಕೆಲಸ ಇಲ್ಲಾ.. ಆದ್ರೆ ಮುಂದೆ ಸಿಗಲ್ಲ ಅಂತೇನು ಇಲ್ಲವಲ್ಲ..ಬರೆ ಮೋಸ.. ಎಲ್ಲಾ ಅವರವರಿಗೆ ಬೇಕಾದಾಗ ನನ್ನ ಬಳಸ್ಕೊಂಡು.. ನಂತರ.. ಏಂಜಲ್ ಎಲೆ ತರ ನನ್ನ ಬೀಸಕ್ತಾರೆ.. ಈ ಲೈಫ್ ಬೇಕೇನೋ ನನಗೆ.. ಯಾರಿಗಗೋ.. ನಾನು ಬದಕಬೇಕು.. ನಾನು ಸತ್ತು ಹೋಗ್ತಿನೋ.. ದೋಸ್ತ್.. ಕಾಲೇಜ್ ಇನ್ದಾನು.. ಅವಳು ನಾನು.. ಒಟ್ಟಿಗೆ ಏನೇನೋ.. ಕನಸು... ಕಟ್ಟತ ಬಂದ್ವಿ.. ಇವಾಗ.. ಆ ಕನಸನ್ನೆಲ್ಲ.. ಏನೋ.. ಮಾಡಲಿ.. ಮಾತಾಡೋ.. ಯಾಕೋ.. ನಿನಗೂ ನಾನು ಬೇಡದವನಾದನ??  "
"ಅಂತು.. ನಮ್ಮ ವರುಣ ದೇವದಾಸ ಆಗೋಕೆ ತಯಾರಿ ನಡೆಸಿದಿಯ.. ಅನ್ನು.. ಸರಿ .. ಯಾವಾಗ.. ಸಾಯ್ತಿಯ..??? ಅದನ್ನಾದರೂ ಹೇಳು..ಹಾಗೇ ಸಾಯೋವಾಗ ನಿನ್ನ ನಂಬಿದವರಿಗೂ ಒಂದು ದಾರಿ ತೋರಿಸಿ ಹೋಗು..  ಅಲ್ಲವೋ.. ನಿನ್ನ ಜೀವನದಲ್ಲಿ.. ಅವಳ ಬಿಟ್ಟರೆ.. ನಾವ್ಯಾರು ಕಾಣ್ತಾನೆ.. ಇಲ್ಲವ??? ಹೋಗಲಿ.. ನಿನ್ನ ನಂಬಿರೋ ನಿನ್ನ ಅಪ್ಪ ಅಮ್ಮ ತಂಗಿ ಗತಿ ಏನೋ..ಅವರನ್ನ್ತ ಅವರ ಕಷ್ಟ ಕಾಲದಲ್ಲಿ ನೋಡ್ಕೊಲೋರು ಯಾರು???.. ಹೌದು.. ಅವಳು ನಿನ್ನಂತ ಒಳ್ಳೆ ಹುಡುಗನಿಗೆ ಮೋಸ ಮಾಡಬಾರದಿತ್ತು. ಆದರೂ..ಒಂದು ಮಾತು. ಮತ್ತೆ ಅವಳ ಪರವಾಗಿ ಮಾತಾಡ್ತಾ ಇದೀನಿ ಅಂದ್ಕೋ ಬೇಡ.. ಅವಳು ನಿನ್ನ ಹಾಗೇ ಕಲ್ಪನಾ ಜೀವಿ ಆಗದೆ.. ವಾಸ್ತವವಾದಿ ಆಗಿರೋದಕ್ಕೆ. ಅವಳು.. ಈ ನಿರ್ಧಾರ.. ಸಾಕ್ಷಿ.. ಅದಕ್ಕೆ ಅವಳನ್ನ ಅಭಿನಂದಿಸಲೇ ಬೇಕು.. ನೋಡು.. ನಮ್ಮ ಸಮಾಜದಲ್ಲಿ.. ಹೆಣ್ಣು ಮಕ್ಕಳನ್ನ ಬೇಗ ಮದ್ವೆ ಮಾಡ್ತಾರಲ್ವ.. ಅಂತೆ.. ಅವಳನು ಇಷ್ತೊತ್ತಿಗಾಗಲೇ. ಅವರ ಮನೆಯಲ್ಲಿ.. ಮದ್ವೆ ಮಾಡೋ ತಯಾರಿ ನಡೆಸಿರಬಹುದು.. ಪಾಪ.. ಅವಳ ಸ್ಥಿತಿ ನೋಡೋ.. ಅವಳು ನಿಮ್ಮ ಪ್ರೀತಿ ವಿಷಯನ.. ಅವರ ಮನೆಯಲ್ಲಿ ಹೇಳೋಕು ಆಗದೆ.. ಒಂದು ವೇಳೆ ಹೇಳದ್ರೆ.. ಮನೆಯಲ್ಲಿ.. ಏನು ಮಾಡ್ತಾರೋ ಅನ್ನೋ ಭಯ.. ಎಲ್ಲಾ ತಾಕಲಾಟದಿಂದ.. ಮುಕ್ತಿ ಹೊಂದಬೇಕು ಅಂದ್ರೇ.. ನೀನು ಆರ್ಥಿಕವಾಗಿ.. ಗಟ್ಟಿಯಗಿರಬೇಕಿತ್ತು. ಅದು ಇಲ್ಲಾ ಅಂದ ಮೇಲೆ.. ಅವಳ ತಾನೆ ಏನು ಮಾಡ್ತಾಳೆ??? ಅವಳು.. ಇವಾಗ.. ಇಷ್ಟ ಪಡ್ತಿರೋ.. ಹುಡುಗನಾ ಬಗ್ಗೆ ಖಂಡಿತ ಮನೆಯವರು.. ಒಪ್ಪತಾರೆ.. ಯಾಕೆ ಅಂದ್ರೇ.. ಅವನು ಎಷ್ಟಂದ್ರು.. ನೀನು ಹೇಳ್ದಾಗೆ ಒಳ್ಳೆ ಜಾಬ್ ಅಲ್ಲಿ ಬೇರೆ ಇದ್ದಾನೆ.. ಅಂತಿಯ.. ಅವಳು ನಿನಗೆ ಮೋಸ ಮಾಡಿದ್ರು ಕೂಡ.. ಅವಳ ಲೈಫ್ ಅನ್ನ ಸರಿ ಮಾಡ್ಕೊಂಡ್ಲು.. ಒಂದು.. ತಿಳಕೋ.. ಅವಳು ನಿನಗೆ ಮೋಸ ಮಾಡದಲೂ ಅಂತ ಯಾಕೋ ಅಂದ್ಕೊತಿಯ..  ಅವಳು ನಿನ್ನ ಅತಿಯಾಗಿ ಪ್ರೀತಿಸ್ತ ಇರೋದಕ್ಕೆನೆ.. ಬಹುಷ.. ನಿನಗೊಂದು ಜೀವನದಲ್ಲಿ ಹೊಸ ಪಾಠ ಕಲಿಸಿ.. ಜೀವನವನ್ನ ಚಾಲೆಂಜ್ ಆಗಿ ಸ್ವೀಕರಿಸು ಅಂತ ಸೂಚ್ಯವಾಗಿ.. ಹೇಳಿ ಹೋದಳು.. ನೀನು ನೋಡದ್ರೆ.. ಅವಳ ನೆನಪಲ್ಲೇ.. ದೇವದಾಸ್ ಆಗೋ ತರ ಇದ್ದೀಯ.. come  on  da .. ಅದನ್ನೆಲ್ಲ.. ಗೋಲಿ.. ಮಾರೋ.. ಲೈಫ್ ಅಂದ.. ಮೇಲೆ ಇಂತ ನಾಲಾಯಕ್ ಜನರು.. ನಮಗೆ ಪಾಠ ಕಲ್ಸೊಕೆ ಅಂತಾನೆ ಬಾಳಲ್ಲಿ ಬರ್ತಾರೆ.. ಮರೆಯೋಕಗಲ್ಲ.. ನಿಜ... ಆದರೆ.. ಅವರ ನೆನಪಲ್ಲಿ ಅವರು ಇಷ್ಟ ಪಟ್ಟಿದಕಿಂತ ಚನ್ನಾಗಿ ಬದುಕ ಬಹುದಲ್ವೇನೋ.."
"ಹುಂ ಏನೋ ತರುಣ್.. ನಿನ್ನ ಅಷ್ಟು.. ಕಲ್ಲು ಹೃದಯ ನನ್ನದಲ ಕಣೋ.. ನೀನು ಹೇಳೋದು ನಿಜ.. ಆದರೆ.. ಈ ನೋವು ನಿನ್ನ ಅಂತವರಿಗೆ ಅರ್ಥ ಆಗಲ್ಲ ಬಿಡು.. ನೀನು ಏನೇ ಮಾತಾದದ್ರೂ ಲಾಜಿಕ್ ಅಲ್ಲಿ ಏನೋ ಎಲ್ಲಾ ಹೌದು ಅನ್ನೋ ಹಾಗೇ ಮಾಡ್ತಿಯ.. ಆದರೆ.. ಕಷ್ಟ ಕಣೋ.."
ಈಗ ಒಂದು ಸುತ್ತು ಹೊರಗಡೆ ಹಾಕಿ ಬಂದ್ರೆ.. ಲೈಫ್ ಮತ್ತೆ ಬಿಂದಾಸ ಆಗುತ್ತೆ ಹೊರಡು.. ಹೋಗೋಣ.. ಒಂದು ತಿಳಕೋ.. ನಮ್ಮ ಜೀವನದಲ್ಲಿ ಕಷ್ಟ ಬಂದಾಗಲೂ ನಗೋದಕ್ಕ.. ಕಲಿ.. ಆಗ ಕಷ್ತನು.. ಹೆದರಿ.. ಓಡುತ್ತೆ.. ಅದನ್ನೇ ಬದಕೋ ಕಲೆ.. ಅನ್ನೋದು.. ಅದು ಬಿಟ್ಟು.. ಹೀಗೆ ಜೋಲು ಮೊರೆ ಹಾಕೊಂಡಿದ್ರೆ.. ನಿನ್ನ ಪ್ರೀತಿಯ ಹುಡುಗಿ ಬಗ್ಗೆನೇ ಜನ ಏನೇನೋ.. ಮಾತಾಡ್ತಾರೆ.. ಅದು.. ನಿನ್ನ ಹತ್ರ ಸಹಿಸ್ಕೋಲ್ಲೋಕೆ ಆಗುತ್ತಾ..??? ನನ್ನ ಹತ್ರನೇ.. ಆಗಲ್ಲ.. ನಿನ್ನ ಹತ್ರ ಹೇಗೋ.. ಆಗುತ್ತೆ.. ನಾಳೆ ನೇ ನಮ್ಮ ದೇವ್ರು.. ಬೆನಕನ ಹತ್ರ.. ಒಂದು.. ಒಳ್ಳೆ ಹುಡುಗಿನ ನಮ್ಮ ಹುಡುಗನಿಗೆ ಸಿಗೋ ಹಾಗೇ ಮಾಡಪ್ಪ ಅಂತ ಕೆಳ್ಕೊತಿನಿ....ಸರಿನಾ...

Tuesday, March 8, 2011

ಬೆಳ್ಳಗೆ ಇರೋದೆಲ್ಲ ಹಾಲಲ್ಲ.. ನಾವು ನೋಡಿರೋದೆಲ್ಲ ಸತ್ಯ ಅಲ್ಲ..


" ತರುಣ್  ನನ್ನ ಮದುವೆಗೆ ಬರಲೇ.. ಬೇಕು.. ಇದೆ ಮೇ ೫ ಕ್ಕೆ.. ಅಣ್ಣ,, ನನ್ನ ನಿಶ್ಚಿತಾರ್ಥಕ್ಕೂ ನೀನು ಚಕ್ಕರ ಕೊಟ್ಟೆ.. ಆದರೆ.. ನನ್ನ ಮದುವೆಗೆ ಬರಲೇ ಬೇಕು.. ಯಾವದೇ ಸಬೂಬು.. ಹೇಳದ್ರು. ನಾನಂತು.. ಕೇಳಲ್ಲ.." ಅಂತ.. ಅವಳು.. ಹೇಳ್ತಾ ಇದ್ದರೇ.. 
ಅವಳಿಗೆ.. "ಖಂಡಿತ.. ನನಗೆ ಸ್ವಂತ ತಂಗಿ ಅಂತ ಯಾರು ಇಲ್ಲ. ದೇವರು ಕೊಟ್ಟ.. ತಂಗಿ ನೀನು.. ನಿನ್ನ ಮದ್ವೆಗೆ  ಯಾವದೇ ಕಾರಣಕ್ಕೂ.. ಮಿಸ್ ಮಾಡದೇ.. ಬರ್ತಿನಮ್ಮ.." ಅಂತ ಹೇಳಿ.. ಕಳಿಸಿದೆ..

ಅವಳನ್ನ ಅತ್ತ.. ಕಳಿಸಿದ.. ಮೇಲೆ ಅವಳು ಕೊಟ್ಟ.. ಲಗ್ನ ಪತ್ರಿಕೆ ನ ನೋಡ್ತಾ.. ನೋಡ್ತಾ.. ಅವಳು ನನ್ನ ಬಾಳಿನಲ್ಲಿ.. ಬಂದ.. ಕ್ಷಣವನ್ನ ಹಾಗೆ ಅವಳೊಂದಿಗೆ. ಕಳೆದ.. ಸುಮಧುರ.. ಕ್ಷಣವನ್ನ.. ನೆನಪಾಯಿತು...

 ಕಾಲೇಜ್ ದಿನಗಳು ಅವು.. ಆ ದಿನಗಳಲ್ಲಿ.. ಎಲ್ಲ ಹುಡುಗರಂತೆ.. ಮಜಾ ಉಡಾಯಿಸುತ್ತ ಕಾಲೇಜ್ ದಿನಗಳನ್ನ.. ಕಳೆಯುವ ಅದೃಷ್ಟ ನನಗೆ ಇರಲಿಲ್ಲ.. ಕಾಲೇಜ್ ಮುಗಿದ ತಕ್ಷಣ.. ಮನೆ.. ಮನೆಯಿಂದ.. ಮತ್ತೆ.. ಕೆಲಸಕ್ಕೆ..  ಹೀಗೆ.. ನನ್ನ ಕಾಲೇಜ್ ಜೀವನ.. 
ಆದರೂ ಅದೇನೋ ಗೊತ್ತಿಲ್ಲ.. ಕಾಲೇಜ್ ಅಲ್ಲಿದ್ದ.. ಏನ್ ಎಸ ಎಸ ಗೆ ಸೇರಿ ಬಿಟ್ಟೆ.. 

ಅದರ.. ಕ್ಯಾಂಪ್ಗೆ ಕೂಡ ಹಾಗೋ ಹೀಗೋ ಹೋಗುತ್ತಿದ್ದೆ.. ಆ ವೇಳೆಯಲ್ಲಿ.. ಪರಿಚಯವಾದ ಹುಡುಗಿ.. ಇವಳು.. ನಿಜ ಹೇಳುತ್ತೀನಿ.. ನಾನು ಜಾತಿವಾದಿ ಅಂದರು.. ಬೇಸರವಿಲ್ಲ.. ಅವಳು.. ಬೇರೆಯ ಜಾತಿಯ.. ಹುಡುಗನೊಂದಿಗೆ. ತೀರ ಅತಿ ಎನಿಸುವಷ್ಟು.. ಸಲಿಗೆ ತೋರಿಸುತ್ತಿದ್ದಳು.. ಆ ವೇಳೆಗಾಗಲೇ.. ನಮ್ಮ ಜಾತಿಯ ಹೆಣ್ಣು ಮಕ್ಕಳು.. ತುಂಬಾ ಜಾತ್ಯತೀತರು.. ಎಂದು.. ಸಮಾಜದಲ್ಲಿ ಹೆಸರು.. ಮಾಡಲು ಆರಂಭವಾಗಿತ್ತು.. (ಅಂದರೆ.. ಅಪ್ಪ ಅಮ್ಮ ಮದುವೆ ಮಾಡಿ ಮುಗಿಸುವ ಮೊದಲೇ.. ಬೇರೆ ಜಾತಿಯ ಹುಡುಗನೊಟ್ಟಿಗೆ.. ಓಡಿ ಹೋಗಿ.. ತಮ್ಮ ಹೆತ್ತವರಿಗೆ.. ಉಡುಗೊರೆ ನೀಡುವುದು.. ಆರಂಭವಾಗಿತ್ತು )

ಅದೇನೋ ಗೊತ್ತಿಲ್ಲ.. ಅವಳು ಮಾಡುತ್ತಿದ್ದ ಕೆಲಸ ಸರಿ ಇಲ್ಲ ಎನ್ನಿಸಿತು.. ಕರೆದು.. ಅವಳಲ್ಲಿ ನೇರವಾಗಿ ಹೇಳಿ ಬಿಟ್ಟೆ.. 
ನಂತರ.. ಅವಳು.. ನನಗೆ ತೀರ ಆತ್ಮಿಯಳಾಗಿ ಬಿಟ್ಟಳು.. ಅವಳು ನಮ್ಮ ಗ್ರೂಪ್ ಆಗಿದ್ದರಿಂದ.. ಯಾವಾಗಲು.. ನನ್ನೊಂದಿಗೆ ಇರ ತೊಡಗಿದಳು.. ಏನೇನೋ ಮಾತುಕತೆ.. ನೋಡಿದವರಿಗೆ.. ನಾವು. ಪ್ರೆಮಿಗಲೇನೋ  ಅನ್ನುವಷ್ಟು.. ಸಲಿಗೆ.. ನಮ್ಮಲ್ಲಿ ಬೆಳೆಯಿತು.. ಅವಳು.. ನಮ್ಮ ಮಧ್ಯೆ ಬಿರುಕು ಬಾರದಿರಲೆಂದು.. ನನ್ನನ್ನು ಅಣ್ಣ ಎಂದೇ ಕರೆಯ ತೊಡಗಿದಳು..ನನಗೋ ಒಬ್ಬ ತಂಗಿ ಸಿಕ್ಕ ಸಂತಸ.. ಅದಕ್ಕಾಗೆ.. ಅವಳನ್ನ ರೇಗಿಸುವುದು ತುಂಬಾ ಇಷ್ಟದ ಕೆಲಸವಾಗಿತ್ತು. ನಾನು ಅವಳನ್ನ.. ಹೇ ನಾನು ನಿನ್ನ ತಂಗಿ ಅಂತ ಕರಿ ಬಹುದು.. ಆದ್ರೆ.. ನೋಡಿದ.. ಜನ.. ತಂಗಿ ಅಣ್ಣನ್ನನ್ನೇ ಹೊತ್ತುಕೊಂಡು ಹೋಗೋ ಅಷ್ಟು.. ದೈತ್ಯ ಆಗಿದ್ದಾಳೆ.. ಅಂತ ಮತದ್ಕೊಂದ್ರೆ.. ಕಷ್ಟ ಕಣೆ.. ಅಂತ ಕೀಚಾಯಿಸುತ್ತಿದ್ದೆ.. ಅಲ್ಲ ನೋಡೇ.. ಒಂದು.. ವೇಳೆ.. ಸಿನಿಮಾದಲ್ಲಿ ಆಗೋ ಹಾಗೆ.. ಯಾರದ್ರೂ ನಿನಗೆ ತೊಂದ್ರೆ ಕೊಡೋಕೆ ಬಂದ್ರೆ ನನ್ನ ಮಾತ್ರ ಕರಿಬೇಡ ಮಾರಾಯ್ತಿ.. ನಾನು ಏನಿದ್ರೂ ಬಾಯಲ್ಲಿ ಆವಾಜು ಹಾಕ್ತೀನಿ.. ಬರೋರೆನದ್ರು.. ನನ್ನ ಪ್ರಾಣ.. ತೆಗೆದರೆ ಕಷ್ಟ.. ಅಂತೆಲ್ಲ.. ರೇಗಿಸ್ತಿದ್ದೆ

ಹೀಗೆ ಆ ಕ್ಯಾಂಪ್  ನಲ್ಲಿ ಇರುವಾಗಲೇ.. ನಮ್ಮ ಕಾಲೇಜ್ ನ ಹುಡುಗರು.. ಅವಳ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನ ಗಮನಿಸಿದ್ದೆ.. 
ಅದನ್ನು ಅವಳಲೇ.. ಕೇಳಿದೆ.. ಅವಳು ಅದಕ್ಕೆ.. ಅದೇನೋ.. ಮಹಾ ಸುದ್ದಿಯೇ ಅಲ್ಲವೆಂಬಂತೆ ನಕ್ಕು..
"ತರುಣ್ ನಿನಗೆ ನಾನೆ ಆ ವಿಷಯ ಹೇಳ ಬೇಕೆಂದಿದ್ದೆ.. ಅಷ್ಟರೊಳಗೆ ನೀನೆ ಕೇಳಿದೆ.. ಹುಂ ಅವರು ಹೇಳುವಂತದ್ದು ಏನು ಇಲ್ಲ.. 
ಅದು ಅಲ್ಲದೆ ಚಿಂತೆ ಮಾಡಬೇಡ. ನಮ್ಮ ಜಾತಿಯವನ ಸಂಗಡನೆ ನನಗೆ ಲವ್ ಆಗಿದೆ.. ಅದರಲ್ಲೂ.. ಮನೆಯವರು ಸಹ ಒಪ್ಪಿದಾರೆ ಕಣೋ.
ನಾನು ತರುಣಿ ಆದಗಳಿಂದ.. ಇದೆ.. ಗೋಳು.."...
"ಹುಂ ಎನಂದೇ ??? ನೀನು.. ತರುಣಿನ??? okay . ಹೌದು.. ಯಾರಿಗೂ ಇಲ್ಲದೆ ಇರೋ. ರುಮೌರ್  ನಿನಗೆ ಯಾಕೆ?? " ಅಂತ ಕೇಳ್ದೆ..
"ಹುಂ ನನ್ನ ನೋಡಿದ್ರೆ.. ಗೊತ್ತಗಲ್ವೇನೋ ಗೂಬೆ.."
"ಹುಂ ಗೊತ್ತಯ್ತಮ್ಮ.. ಹೇಳು ಯಾಕೆ.. ಅಂತ??"
"ಏನಿಲ್ಲ.. ನಮ್ಮ ಅಪ್ಪನಿಗೆ.. ೩ ಜನ ಹೆಣ್ಣ ಮಕ್ಕಳು.. ಅದರಲ್ಲೂ ನಾನು ಹಿರೆ ಮಗಳು.. ಅದು ಅಲ್ಲದೆ.. ನಮ್ಮ ಅಪ್ಪ ಶ್ರೀಮಂತ ಬೇರೆ.. ನನ್ನ ಹೆಸರು.. ಕೆಡಿಸದ್ರೆ ಸುಲಭವಾಗಿ.. ಯಾರೋ ಅವರಿಗೆ ಬೇಕಾದವರಿಗೆ.. ನನ್ನ ಮದ್ವೆ ಮಾಡಬಹುದು.. ಅನ್ನೋ.. ಕಾರಣ ಇರಬಹುದು.. ಅದು ಅಲ್ಲದೆ. ನಮ್ಮ ಅಪ್ಪನು ನನ್ನ ಒಬ್ಬ ಮಗನ ಹಾಗೇನೆ ನನ್ನ ಬೆಳೆಸಿದರೆ.. ಅವರ ಹತ್ರ ಮಾತಾಡಬಾರದು.. ಇವರ ಹತ್ರ ಮಾತಾಡಬಾರದು ಅಂತ ಯಾವತ್ತು.. ಹೇಳಿಲ್ಲ... ಅದು ಅಲ್ಲದೆ.. ನೋಡೋ ಜನ ಏನ ಅಂದ್ಕೊಂಡ್ರೆ.. ನನಗೇನು???"
"ವೆರಿ ಗುಡ್.. "
ಹೀಗೆ ಪರಿಚಯ ಆದವಳು.. ತುಂಬಾ.. open  minded  girl  ಅಂತ ಬಹು ಬೇಗ ಆರ್ಥ ಆಗೋಯ್ತು.. ತುಂಬಾ.. ಸ್ನೇಹ ಬೆಳಿತು.. ಅವಳು.. ನಾನು.. ತಿರ್ಗೋದು.. ನೋಡಿ.. ಜನ..ನಮ್ಮ ಬಗ್ಗೆನೇ.. ಏನೋ. ಸಂಬಂಧ ಕಲ್ಪಿಸಿ ಮಾತಾಡೋಕೆ.. ಶುರು ಮಾಡಿದ್ರು.. ನನಗೆ ನನ್ನಿಂದಾಗಿ ಒಂದು ಹುಡುಗಿಗೆ ಕೆಟ್ಟ ಹೆಸರು ಬರೋದು.. ನನಗೆ ಯಾಕೋ ಇಷ್ಟ ಆಗಲಿಲ್ಲ.. ನನಗೆ.. ಅವಳ ಹತ್ರ ಮಾತಾಡೋದನ್ನ ಕಡಿಮೆ ಮಾಡ್ಕೋ ಬೇಕು ಅಂತ ಅಂದೊಕೊಂಡು... ಎರಡು ದಿನ avoid  ಮಾಡದೇ.. ಮಾರನೇ ದಿನ.. ಕೇಳಿ ಬಿಟ್ಟಳು.. "ಏನು  ನನ್ನ ಸಂಗಡ ನೀನು ಮಾತಾಡ್ತಿಯ ಅಂತ ಜನ ಏನೇನೋ ಮಾತಾಡ್ಕೋತ ಇರೋದನ್ನ ಕೇಳಿ ನಿನಗೆ.. ನಿನ್ನ ಹೆಸರು ಎಲ್ಲಿ ಹಾಳಾಗಿ ಹೋಗುತ್ತೋ ಅನ್ನೋ ಭಯ ಬಂದ ಹಾಗಿದೆ.." ಅಂತ ಅಂದ್ಲು.. ನಾನು ಹಾಗೇನಿಲ್ಲ.. ನನ್ನ ಮನಸಿನಲ್ಲಿ ಉಂಟಾದ ಕಳವಳನ ಅವಳಲ್ಲಿ ಹೇಳ್ದೆ.. ಅದಕ್ಕೆ ಅವಳು. ಹೋ ಹೋ.. ಹಾಗೋ.. ಹೇ.. ತರುಣ್ ನನ್ನ ಹೆಸರು.. ಯಾವಾಗಲೋ.. ಒಂದು.. ಲೆವೆಲ್ ಗೆ ಹಾಳಾಗಿದೆ.. ನನಗೇನೆ.. ಅದ್ರ ಬಗ್ಗೆ.. ಕಾಳಜಿ.. ಇಲ್ಲ.. ಅದು ಅಲ್ಲದೆ.. ನನ್ನ ಬಗ್ಗೆ.. ನಮ್ಮ ಮನೆಯಲ್ಲಿ.. ಮತ್ತೆ.. ನನ್ನ ಬಾವಿ ಪತಿ ದೇವರಿಗೆ ನಂಬಿಕೆ ಇದೆ ಅಂದ ಮೇಲೆ.. ಇದಕ್ಕೆಲ್ಲ. . ಏನಕ್ಕೋ.. ನಾನು.. ತಲೆ ಕೆಡಿಸ್ಕೋ ಬೇಕು.. ನಿನಗೆ ಇಷ್ಟ ಇದ್ದರೆ.. ನಿನ್ನ ಈ ತಂಗಿ ಜೊತೆ ಮೊದಲಿನ ಹಾಗೆ ಇರು.. ಕಷ್ಟ ಅನ್ನಿಸ್ದ್ರೆ.. ಹೋಗ್ತಾ ಇರು.. ಸ್ವಲ್ಪ ಬೇಜಾರ್ ಆಗುತ್ತೆ.. ಅದು.. ನಿನ್ನ ಅಂತ ಒಳ್ಳೆ ಅಣ್ಣನ್ನ ಕಳಕೊಂಡಿದ್ದಕ್ಕೆ. ಇದೆಲ್ಲ ಮಾಮೂಲಿ.. ತಾನೆ.." ಅವಳ ಮಾತು.. ಕೇಳಿ.. ನಾನು ದಂಗಾಗಿ ಬಿಟ್ಟೆ.. ಯಾ ಅವಳು.. ಆಡ್ತಾ ಇರೋ ಮಾತಲ್ಲಿ.. ಸತ್ಯಾಂಶ ಇದೆ ಅನ್ನಿಸ್ತು.. ಅದು ಅಲ್ಲದೆ.. ಅವಳು.. ಉಳದವರ ಲೆಕ್ಕದಲ್ಲಿ.. ಏನೋ.. ನನಗಂತೂ.. ತುಂಬಾ ಒಳ್ಳೆ ಗೆಳತಿ.. ಕಂ ತಂಗಿ ಆಗಿದಾಳೆ.. ನಾನು ಯಾಕೆ ಅಂತವಳನ್ನ ಕಳಕೊಳ್ಳಲಿ..

ಆದರು.. ಅವಳ ಹೇಳೋ ಕತೆನೆಲ್ಲ.. ಕೇಳ್ತಿದ್ದೆ.. ಆವಳ ಗಂಡ ಆಗ್ತೀನಿ ಅಂತ ಹೇಳದವ್ನು.. ಅವಳಗೆ ಮೋಸ ಮಾಡದೇ.. ಇರಲಿ.. ದೇವರೇ.. ಅಂತ ಅನ್ನಿಸ್ತಿತ್ತು.. ಉಳದವ್ರು.. ಏನೋ ಅಂದ್ರು ಅಂತ ಅವಳನ್ನ ನಾನು ಮಾತಾಡಿಸದೇ ಹೋಗಿದ್ರೆ.. ನಿಜಕ್ಕೂ..ಆ . ಮಗುವಿನಂತ ಗುಣದವಳನ್ನ ತಂಗಿ ಆಗಿ ಪಡೆಯೋ ಅದೃಷ್ಟ ಕಳಕೊಂಡು ಬಿಡ್ತಿದ್ದೆ..
ಅದು ಅಲ್ಲದೆ.. ಅಷ್ಟೊತ್ತಿಗೆ ರಕ್ಷಾ ಬಂಧನ ಹಬ್ಬ ಬಂತು.. ಅವಳು.. ಎಲ್ಲ ಹುಡುಗರ ಮುಂದೇನೆ ನನಗೆ ರಾಖಿನು ಕಟ್ಟದ್ಲು.. ಎಷ್ಟೋ ಜನ.. ರಾಖಿ ಕಟ್ಟಿಸ್ಕೊಂಡು ಕಾಲೇಜ್ ಲೈಫ್ ಅಲ್ಲಿ ಅಣ್ಣ ಆಗ್ತಾರೆ ಅಂತ ಗೊತ್ತಿತ್ತು.. ಆದ್ರೆ.. ನಾನು.. ಅಣ್ಣ ಅಂತ ಆದ ಮೇಲೇನೆ..ರಾಖಿ ಕಟ್ಟಿಸಿಕೊಂಡೆ.. ನನಗಂತೂ.. ತುಂಬಾ ಖುಷಿ ಆಯ್ತು.. ಯಾಕಂದ್ರೆ.. ಉಳಿದವರು.. ನಮ್ಮ ಬಗ್ಗೆ ತಪ್ಪು ಮಾತಾಡೋದು.. ಕಡಿಮೆ ಆಯ್ತಲ್ಲ. ಅಂತ..

ಅದೇನೇ ಇದ್ದರು.. ನಮ್ಮ ಬಿಂದಾಸ್ ಹುಡುಗಿ.. ಇದೆ ಬರೋ ಮೇ ೫ ಕ್ಕೆ ಮದ್ವೆ ಆಗ್ತಿದಲೇ.. ನಿಜಕ್ಕೂ.. ಸಂತೋಷದ ಸಂಗತಿ.. ಮದ್ವೆಗೆ ಹೋಗೋಕೆ ಆಗುತ್ತೋ ಇಲ್ಲವೋ ಗೊತ್ತಿಲ್ಲ.. ಆದರೋ.. ನನ್ನ ಪ್ರೀತಿ ತುಂಬಿದ ಹಾರೈಕೆ  ಮಾತ್ರ.. ಅವಳ ಜೊತೆ ಜೊತೇನೆ ಸದಾ ಇರುತ್ತೆ.."

ಹುಂ ಕೊನೆದಾಗಿ ಒಂದು ಮಾತು.. ಬೆಳ್ಳಗೆ ಇರೋದೆಲ್ಲ ಹಾಲಲ್ಲ.. ಹಾಗೆ.. ಕಣ್ಣಿಗೆ ಕಾನೋದೆಲ್ಲ ಸತ್ಯ ಅಲ್ಲ.. ಅದರಲ್ಲೋ.. ಮಹಿಳ ದಿನವಾದ.. ಇಂದೇ.. ಈ ಪೋಸ್ಟ್ ಮಾಡ್ತಾ ಇದ್ದೀನಿ.. ಬಿಚ್ಚು ಮನಸಿನ ಹುಡುಗಿಯರೆಲ್ಲ ಕೆಟ್ಟವರು ಅನ್ನೋಕಾಗಲ್ಲ.. ಹಾಗೆ.. ಸುಮ್ಮನೆ ಇರೋ.. ಹೆಣ್ಣ ಮಕ್ಕಳೆಲ್ಲ.. ಸಾಚ ಅಂತ ನಾನು ಹೇಳೋಕೆ ತಯಾರಿಲ್ಲ.. ಆದರೂ ಅವರು ಎಂತವ್ರೆ ಆಗಿದ್ರೂ   ಅವರೆಲ್ಲರ ಹೃದಯದಲ್ಲಿ ಕಾಣದೆ ಇದ್ದರು.. ಮಮತೆಯ ತಾಯಿ ಇದ್ದೆ ಇರ್ತಾಳೆ.. ಅದು ನಾನು ನನ್ನ ಇ ತಂಗಿಯಲ್ಲಿ ಕಂಡಿರುವೆ ಅಂದ್ರೆ.. ನೀವು ನಂಬಲೇ ಬೇಕು.. ಹುಂ ನಾನು ಎಲ್ಲರಂತೆ ಆಗಿದ್ದೆ.. ಅವಳಿಂದ ನಾನು ಬದಲಾದೆ..

Friday, March 4, 2011

ಹೇ ಅರೆ ಮಲೆನಾಡ.. ಬೆಡಗಿ..
                           ನಿನ್ನ ತುಂಬಾ ಮಿಸ್ ಮಾಡ್ಕೊತ ಇದೀನಿ.. ಕಣೆ.. 
"ಏನು.. ಬಿಟ್ಟು ಹೋಗಬೇಕಿದ್ದರೆ.. ಗೊತ್ತಾಗಲಿಲ್ಲವ.. ನನ್ನ ನೋವು ನಿನಗೆ ಅರ್ಥ ಆಗಲಿಲ್ಲವ.. ಎಲ್ಲಾ ಹುಡುಗರಂತೆ.. ನೀನು..  
ಈಗೇಕೆ.. ನನ್ನ ನೆನಪು..???.. ಏನು.???. ನಾನು ಏನು ಮಾಡಿದೆ..ಎಂದು.. ನನ್ನ ಬಿಟ್ಟು ಹೋದೆ?? ನಿನ್ನ ಮೇಲೆ ನಾನು ಅದೆಷ್ಟು ನಂಬಿಕೆ ಇಟ್ಟಿದ್ದೆ..ಅದಕ್ಕಾಗೆ.. ಬೇರೆಯವರು..ಹೊಟ್ಟೆಕಿಚ್ಚು.. ಪಡುವಷ್ಟು.. ನೀನು ಸಂತೋಷವಾಗಿ ನನ್ನೊಂದಿಗೆ  ಇರಬೇಕೆಂದು.. ನಿನ್ನ ನೋವಿನಲ್ಲೂ.. ನಾ ಜೊತೆ ಇದ್ದೆ... ಅದಾರೋ .. ಕರೆದರೆಂದು.. ಒಂದು ಮಾತು.. ನನ್ನ ಕೇಳದೆ.. ಓದಿ ಹೋದೆಯಲ್ಲ.. ನಿನಗೇಕೆ ಬರಬೇಕು ನನ್ನ ನೆನಪು?? " ಎಂದು.. ಯೋಚಿಸುತ್ತಿರುವೆಯ.. ನನ್ನ ಗೆಳತಿ..

ನೀನು ಈ ರೀತಿ.. ಪುಂಖಾನುಪುಂಖವಾಗಿ.. ಪ್ರಶ್ನೆಗಳ ಮಳೆಗರೆದರೆ.. ನಾನು ಏನೆಂದು.. ಉತ್ತರ.. ಹೇಳಿಯೇನು.. ಓಹೋ... ಕ್ಷಮಯಾಧರಿತ್ರಿ.. 
ನೀನು ಹೇಳುವುದು.. ನಿಜ.. ನೀನು ನನಗೇನು ಕಡಿಮೆ ಮಾಡಿದ್ದೆ..??? ನನಗೆ.. ನಿನ್ನಲ್ಲೇ.. ಮುಂದಿನ ಬದುಕನ್ನ ರೂಪಿಸಿಕೊಳ್ಳುವ ಅವಕಾಶವನ್ನ.. ನೀಡಿದೆ.. ಆದರೂ ಎಲ್ಲಾ.. ಕಾಲೇಜ್ ಓದಿದ ತರುಣರಂತೆ ನಾನು.. ನಿನ್ನ ಆ ಆಶ್ರಯವನ್ನ.. ನಿರ್ಲಕ್ಷಿಸಿ. ಓಡಿದೆ..
ಅದೇನೋ ಹೇಳ್ತಾರಲ್ಲ.. ಕೆಲವರಿಗೆ.. ಪಕ್ಕದ ಮನೆಯವಳೇ.. ತಮ್ಮನೆಯವಳಿಗಿಂತ ಸುರಸುಂದರಿ ಅಂತೆ ಕಾಣುತ್ತಾಳೆ.. ಅಂತೆ... ಹಾಗೇ.. ನೀನು ಕೊಟ್ಟ.. ಎಲ್ಲಾ ಸುಖವನ್ನ ಅನುಭವಿಸಿ ಕೊಬ್ಬಿದ್ದ ನನಗೆ.. ದೂರದಲ್ಲಿ.. ಮಾಲುಗಳು..ಆಯಟಿ ಬಿಟಿಗಳನ್ನ.. ಎಂ ಏನ್ ಸಿ ಕಂಪನಿಗಳನ್ನ ತನ್ನ ಮೈಗಳಲ್ಲಿ..ಹೊತ್ತು..ಜೀನ್ಸ್ ಪ್ಯಾಂಟು..ಹಾಗೂ ಟಿ ಶರ್ಟ್ ನಲ್ಲಿ ಕಂಗೊಳಿಸುವ.. ತುಂಬು ಯವ್ವನೆಯಾಗಿ ನಿಂತಿದ್ದಾ..ಆ ಬೆಂಗಳೂರು..ಎಂಬ.. ಕಾಂಕ್ರಿಟ್ ಮಾಯಂಗನೆಯೇ ನಿನಗೀಂತ ಚೆಲುವಾಗಿ ಕಂಡಳು. ಬಹುಶಃ  ಅವಳಿಗೂ ನಿನ್ನ ನೆರಳಲ್ಲಿ.. .. ನನ್ನ ಆ ಸುಖಿ ಮುಖ ಕಂಡು.. ಹೊಟ್ಟೆ ಕಿಚ್ಚು.. ಹುಟ್ಟಿರಬೇಕು.. ಅದಕ್ಕೆ ನನ್ನ.. ಕೈ ಬಿಸಿ ಕರೆದು.. ತನ್ನ ಮಾಯಾ ಜಗತ್ತಿನಲ್ಲಿ.. ಸೇರಿಸಿಕೊಂಡಿತು.. ಆಗ.. ಅವಳ ಕುಡಿ ನೋಟ.. ನಿಜಕ್ಕೂ.. ಎಂತವರಿಗೂ ಮತ್ತೆರಿಸುವಂತಿತ್ತು.. ಅದೇನೋ ಹೇಳ್ತುತ್ತರಲ್ಲ.. ದೂರದ.. ಬೆಟ್ಟದಂತೆ..ತುಂಬಾ ಸುಂದರವಾಗಿ.. ಕಂಡಿತು.. ಅವಳ ಆ ಒನಪು.. ಆ ಲಾವಣ್ಯ..
ಆದರೆ.. ಈಗೀಗ ತಿಳಿಯುತ್ತಿದೆ.. 
ಆಧುನಿಕತೆಯ ಆದ್ಧೂರಿತನದಲ್ಲಿ ತನ್ನ ನಿಸರ್ಗದತ್ತ ಸೌಂದರ್ಯವನ್ನ ಕಳೆದುಕೊಂಡು.. ಉದ್ಯಾನದ ಚೆಲುವೆಯ ಮಾಟವನ್ನ ಕಳಚಿಕೊಂಡು.. ಬರೆಯ ಕಾಂಕ್ರಿಟ್ ಸುಂದರಿ ಆಗಿರುವ.. ಇವಳನ್ನ ನಿನಗೆ ಹೋಲಿಸಬೇಕೆನಿಸಿದೆ.. ಹಾಗೇ ಹೋಲಿಸಲು ಹೋರಾಟಗಳೆಲ್ಲ.. ನನ್ನ ಹುಟ್ಟೂರು.. ಎಷ್ಟು.. ಸುಂದರಿ ಎಂದು.. ಅನಿಸದೆ.. ಇರದು..
ಹೌದು.. ಕಾಲದ ತಕ್ಕೆಯಲ್ಲಿ.. ಅನುಭಾವಿಯಾಗಿರುವ ನೀನು.. ಸಹಜ ಸೌಂದರ್ಯವನ್ನ.. ನಿನ್ನಲ್ಲೇ.. ಅಡಗಿಸಿ ಕೊಂಡಿರುವ.. ರೂಪವತಿ .. ಹಸಿರಿನ.. ಸೀರೆಯಿಂದ ನಿನ್ನ.. ಆ ಗುಡ್ಡ ಬೆಟ್ಟಗಳನ್ನ..ಹುದುಗಿಸಿಕೊಂಡು.. ಜೋಗ.. ಜಲಪಾತವನ್ನ.. ಆ ನಿನ್ನ ಸೀರೆಯ ಸೇರಗಾಗಿಸಿಕೊಂಡು .ಬುರುಡೆ, ಉಂಚಳ್ಳಿ..ಜಲಪಾತಗಳನ್ನ ನಿನ್ನ ಆ ಸೀರೆಯ ನೆರಿಗೆಗಳನ್ನಗಿಸಿಕೊಂಡು.. ಅಘನಾಶಿನಿ ನದಿಯನ್ನೇ ನಿನ್ನ ನೀಲ ಜಡೆಯನ್ನಾಗಿಸಿಕೊಂಡು ಒಯ್ಯಾರದಿ.. ಬಳಕುವ.. ಹದಿ ಹರೆಯದ.. ಚೆಲುವೆ ನೀನು..ಎಷ್ಟೋ ಕಾಲದಿಂದ.. ಒಂದೇ ತೆರನಗಿರುವ.. ಸಹಜ ಸುಂದರಿ ನೀನು..ತಾಯಿ ಕನ್ನಡಮ್ಮ ಭುವನೇಶ್ವರಿಯ ಏಕೈಕ ದೇಗುಲವನ್ನ. ನಿನ್ನ ಕೀರಿಟವನ್ನಾಗಿಸಿಕೊಂಡು ಮಿನುಗುತ್ತಿರುವ..ರೂಪಸಿ ಆಗಿರುವ .. 
 ನಿನಗೂ.. ಈ ಕಾಂಕ್ರೀಟ್  ಸುಂದರಿಗೂ ಹೋಲಿಕೆ ಮಾಡುವುದು ತರವೇನು..???

ಮೊದಲೆಲ್ಲ.. ನಿನ್ನ  ಈ ಸಹಜ ಸೌಂದರ್ಯ ನನಗೆ ಅದೆಷ್ಟು.. ಖುಷಿಯನ್ನ ನೀಡಿದೆ.. ಆ ನಿನ್ನ ಮಡಿಲಲ್ಲಿ.. ಬೆಳೆದ.. ಪುಣ್ಯ ನನ್ನದು..
ಆ ನಿನ್ನ ಮೊಗವನ್ನ.. ನೋಡಲು..ಎಂತವರು.. ಕ್ಲೀನ್ ಬೋಲ್ಡ್.. ನೀನು.. ನಿಜಕ್ಕೂ.. ಚಿರ ಯ್ವವನೆ..
  ಮೊದಲೆಲ್ಲ.. ಆ ಮೀನು ಪೇಟೆ ಜಾಗವನ್ನೇ ನರಕ ಎನ್ನುತಿದ್ದೆ. ಅದೆಷ್ಟು ಗಲೀಜು.. ಮೂಗು ಬಿಡಲಾಗದಷ್ಟು.. ಆದರೆ.. ಅದೊಂದನ್ನು ಬಿಟ್ಟರೆ.. ನಿನ್ನ ಪ್ರತಿ.. ಜಗವು ನಿರ್ಮಲ ನೆಮ್ಮದಿಯ ತಾಣ.. ಅದೇನೋ ಕಣೆ.. ಈಗ ಅನ್ನಿಸುತ್ತಿದೆ.. ಅದೇನು ಮಹಾ ನರಕವೇ ಅಲ್ಲಾ.. ಇಲ್ಲಿನ ಸ್ಲಂ  ಜಾಗಗಳು.. ನಿನ್ನ ಇಡಿ ಶರೀರವನ್ನು.. ಮುಳುಗಿಸುವಷ್ಟು.. ದೊಡ್ಡದಾಗಿದೆ..
 ಆದರೂ.. ಕೃತಕ ಅಲಂಕಾರದಿಂದ.. ಶೋಭಿಸುವ..ಅವಳೇ ಲೋಕದ ಕಣ್ಣಿಗೆ.. ಚೆನ್ನ..
.
ನಾ  ದುಃಖದಲ್ಲಿ ಇದ್ದಾಗೆಲ್ಲ.. ಮೈ ದಡವಿ ನಿನ್ನ ಮಡಿಲ ಮೇಲೆ ಮಲಗಿಸಿ.. ಸಂತೈಸಿದೆ.. ಗೆದ್ದು.. ಬಾ ಮಗನೆ.. ಎಂದು.. ನೀನು ನೀಡುತ್ತಿದ್ದ.. ಆ ಸ್ಪೂರ್ತಿಯ.. ಮಾತುಗಳು.. ನನ್ನ  ಬಳಲಿದ... ಜೀವನಕ್ಕೆ.. ಹೊಸ.. ಚೇತನವನ್ನ.. ನೀಡುತ್ತಿತ್ತು... ಆ ಚೇತನ ನನಗೆ ಮತ್ತೆ ಬೇಕೆನಿಸಿದೆ.. ನಿನ್ನ ಮಡಿಲಲ್ಲಿ ಮಲಗಿ..ನಿನ್ನ ಸಾಂತ್ವನದ..ಮಾತುಗಳನ್ನ ಕೆಳ ಬೇಕೆನಿಸಿದೆ.. 
"ಇದೇನಿದು.. ಇವನು ನಾನು ಬೆಳೆಸಿದ.. ಹುಡಗನ ಬಾಯಿಂದ.. ಬರುತ್ತಿರುವ.. ಮಾತೆ.. ಇಟ್ಟ ಹೆಜ್ಜೆಯನ್ನ.. ಹಿಂದಕ್ಕೆ.. ಹಾಕದಂತೆ.. ಪ್ರೋತ್ಶಹಿಸಿ ಬೆಳೆಸಿದರು.. ನೀನು.. ಹೇಡಿಯಂತೆ.. ಮತ್ತೆ ನನ್ನ ಅಶ್ರಯವೇ ಬೇಕೆನ್ನುವಿಯಲ್ಲ.. ಎಂದು.. ಕೇಳುತ್ತಿರುವೆಯೇನು??"  ಖಂಡಿತ.. ಅನ್ಯಥಾ ಭಾವಿಸದಿರು.. ನಾನು.. ಬೇಡುತ್ತಿರುವುದು.. ನಿನ್ನ ಮಡಿಲಿನಲ್ಲಿ.. ತಲೆ ಇಟ್ಟು. ಮತ್ತೆ ಕೇಳಬೇಕು ಅನ್ನಿಸುತ್ತಿದೆ.. ಆ ನಿನ್ನ ಚೇತನದಾಯಕ ಹಿತ ನುಡಿಗಳನ್ನ.. ನೀನು..ಆ ಹೊಸ ಚೇತನವನ್ನ.. ನೀಡು ಎಂದೆನೇ .. ಹೊರತು.. ರಣಹೇಡಿಯಂತೆ.. ಹಿಂದೆ.. ಓಡಿ ಬಂದು.. ನಿನ್ನ ಆಶ್ರಯ.. ಬೇಡಿಲ್ಲ.. ನಿನ್ನ ಆಶ್ರಯಕ್ಕೆ.. ಬರುವಾ ಆಸೆ ಏನೋ ಇದೆ.. ಆದರೆ.. ಹೇಡಿ ಆಗಿ ಅಲ್ಲಾ.. ವಿಜಯಿ ಆಗಿ.. ಎಷ್ಟೆಂದರೂ.. ನೀನು.. ಬೆಳೆಸಿದ.. ಹುಡುಗ.. ನಾನು.. ನನ್ನ ಕಿಂಚಿತ್ತು.. ಸೇವೆಯನ್ನಾದರೂ.. ನಿನಗಾಗಿ.. ಮುಡಿಪಾಗಿರಿಸ ಬೇಕೆಂದಿದೆ.. ಅದು ನಿನ್ನ ಪ್ರೋತ್ಸಾಹದಿಂದ ಮಾತ್ರ ಸಾಧ್ಯ..
.
ಇಂತಿ ನಿನ್ನ ಹವಿ ಹುಡುಗ..

Friday, February 25, 2011

ಕಾಮನಬಿಲ್ಲಿನಲ್ಲಿ ಒಂದೇ ಬಣ್ಣ ಇರಲು ಸಾಧ್ಯವೇನು??

ಹೇ ನನ್ನ ಮನದನ್ನೆ..


                      ದಯಮಾಡಿ ಕ್ಷಮೆ ಇರಲಿ.. ತುಂಬಾ ದಿನವಾಯಿತು.. ನಿನಗೊಂದು ಓಲೆಯನ್ನ  ಬರೆಯಲಾಗಲಿಲ್ಲ.. ಹುಂ ನನಗೆ ಗೊತ್ತು.. ನೀನು ಇದನ್ನ ನೋಡಿ.. ನಿನ್ನ ಬಾಯಿ ಇಂದ ಬರುವ ಉದ್ಗಾರ ಏನೆಂದು 
" ಅಯ್ಯೋ ಪಾಪಿ ಇನ್ನೂ ಬದುಕಿದ್ದಿಯಾ?? ಅದೇನೋ ಹೇಳ್ತಿದ್ದೆ ನಿನ್ನ ಒಂದು ಕ್ಷಣ ಬಿಟ್ಟು ಬದುಕಿರೋಲ್ಲ ಅಂತ ಏನೇನೋ.. ನಾನೆಲ್ಲೋ ಹೋಗೆ ಬಿಟ್ಟೆ ಅಂದ್ಕೊಂಡನಲ್ವೋ.. ಇನ್ನೂ ಸ್ವಲ್ಪ ತಡದಿದ್ದ್ರೆ.. ಅಷ್ಟೇ... ನಾನು ನಿನ್ನ ನೆನಪಲ್ಲಿ ಅತ್ತು ಅತ್ತು.. ಕಂಬನಿ ಎಲ್ಲಾ ಬತ್ತಿದ.. ಮೇಲೆ ನಾನು ಸಾಯಬೇಕು ಅಂತ ಇದ್ದೆ ಅಂತ ಹಳೆ ಕಾಲದ ಹೆಣ್ಣು ಮಕ್ಕಳಂತೆ ಹೇಳ್ತೀನಿ ಅಂದ್ಕೋ ಬೇಡ.. ಇನ್ನೂ ಒಳ್ಳೆ ಹುಡುಗನ್ನ ಹುಡುಕಲಿಕ್ಕೆ ಹೊರಟಿದ್ದೆ.. ನಿನ್ನ ಪುಣ್ಯ ನನಗೆ ನಿನ್ನ ಅಂತ ಕೋತಿ ಸಿಗಲೇ ಇಲ್ಲವೋ.. ಅದಕ್ಕೆ ಬಚಾವಾದೆ.. ಇನ್ನೊಮ್ಮೆ.. ಹೀಗೆ ಮಾಡದರೆ.. ಮತ್ತೆ  ಈ ಅವಕಾಶ ಸಿಗುತ್ತೆ ಅಂದ್ಕೋ ಬೇಡ.. "ಅಂತ ಗೊಣಗಾಟ ಶುರುವಾಗಿದೆ ಅಂತ ನನಗೆ ಗೊತ್ತು.. ನನ್ನ ಚಿನ್ನು..

  ನನಗೆ ಗೊತ್ತು.. ಚಿನ್ನು.. ನಿನಗೆ ನನ್ನ ಮೇಲೆ ಎಷ್ಟು ಕೋಪ ಬಂದಿದೆ ಅಂತ ಆದ್ರೆ ಏನ್ ಮಾಡಲಿ..ಚಿನ್ನು ನಾನು ನಮ್ಮ ಭವಿಷ್ಯವನ್ನು ಕಟ್ಟಕೋ ಬೇಕಲ್ವ.. ಬರೆ ನಾನು ನೀನು ಕನಸು ಕಾಣತ ಕುತುಬಿಟ್ಟರೆ ಆ ನಮ್ಮ ಕನಸು ನನಸು ಮಾಡ್ಕೊಳ್ಳೋದು ಯಾವಾಗ.. ನನ್ನ ಚಲುವೆ.. ನೀನು ತುಂಬಾ ಜಾಣೆ ಇದನ್ನೆಲ್ಲಾ ಅರ್ಥ ಮಾಡ್ಕೋತಿಯ ಅಂದ್ಕೋತೀನಿ.. ಕಣೆ.. ಹೌದು.. ನಾನು ನಿನ್ನ ಒಂದು ತಿಗಲಿನಲ್ಲಿ ಬಂದಿರಬಹುದಾದ.. ೧೫ ಪತ್ರಗಳಿಗೆ ಒಂದೇ ಪತ್ರದಲ್ಲಿ ಸಾಧ್ಯವಾದಷ್ಟು ಉತ್ತರ ಬರೆದು ಕಳಿಸುತ್ತೇನೆ..  

           ಇವಾಗ ನಿನಗೊಂದು.. ವಿಶಿಷ್ಟ ಕೊರೆತವನ್ನ ಕೊರೆಯಬೇಕೆಂದು.. ಸಿದ್ಧ ಆಗಿದ್ದೇನೆ.. ದಯಮಾಡಿ ಸಹಕರಿಸಿ ಓದು.. ಹೀಗೊಂದು ವಿಚಾರ.. ಕಾಮನ ಬಿಲ್ಲಿನಲ್ಲಿ ಒಂದು ವೇಳೆ ಒಂದೇ ಬಣ್ಣ ಇದ್ದಿದ್ದರೆ ಏನಾಗ್ತಿತ್ತು?? ಅದನ್ನ ಯಾರದ್ರು ಕಾಮನಬಿಲ್ಲು ಅನ್ನುತ್ತಿದ್ದರೆ??? ಹಾಗೇ ಬಾಳಲ್ಲೂ , ಸಮಾಜದಲ್ಲೂ.. ಎಲ್ಲೇಲ್ಲೂ ವೈವಿದ್ಯತೆಯೇ ಇಲ್ಲದಿದ್ದರೆ.. ಎಲ್ಲವು.. ಒಂದೇ ರೀತಿ ಇದ್ದರೆ.. ನಾಳೆಯ ಬದುಕಿನ ಬಗೆಗೆ ಯಾರಾದರು ಕನಸು ಕಾಣುತ್ತಿದ್ದರೆ??? ಜೀವನದಲ್ಲಿ, ಸಮಾಜದಲ್ಲಿ ಆಸಕ್ತಿ ಇರುತ್ತಿತ್ತೆನು?? ಅದು ಅಲ್ಲದೆ.. ನೀನು ನನಗೆ ಯಾಕೆ ಈ ರೀತಿ ಕಾಡುತ್ತಿದ್ದೆ.. ನಾನೇಕೆ ನಿನಗೆ ಕೊರೆಯುತ್ತಿದ್ದೆ.. ಅಲ್ಲವ.. ಹೇ ಏನಾಯ್ತು... ಇವಗಲೇ.. ನಿದ್ದೆ ಹೋದೆಯ.. ಹೇ ನನ್ನ ಬರಹದ ಸ್ಪೂರ್ತಿಯೇ.. ನೀನು ಈ ರೀತಿ ಮೌನಿ ಆದರೆ ಸಹಿಸೇನು.. ಪೀಠಿಕೆಯೇ ಜಾಸ್ತಿ ಆಯಿತು ಅಂತ ಬೈತಿದಿಯ.. ನೆರವಾಗಿ ವಿಷಯಕ್ಕೆ ಬರುತ್ತೇನೆ ಮಾರಾಯ್ತಿ.
.
            ನನ್ನ ಪ್ರಕಾರ ವೈವಿದ್ಯತೆ ಇರುವುದರಿಂದಲೇ ಸಮಾಜ ಸುಂದರವಾಗಿದೆ.. ಸೋಲು ಗೆಲುವು.. ಎಲ್ಲಾ ಇದ್ದರೇನೆ ಬಾಳು ಸೊಗಸಾಗಿರುತ್ತೆ.. ಹಾಗೇ ನಮ್ಮ ಭವ್ಯ ಜಾತ್ಯತೀತ ಭಾರತದಲ್ಲಿ ಜಾತಿ ಅನ್ನೋ ವ್ಯವಸ್ತೆ ಅದರ ಪಾಡಿಗೆ ಅದು  ಒಂದು ಪ್ರಮಾಣದಲ್ಲಿ ಇದ್ದರೇನೆ  ಭಾರತದ ಸಂಸ್ಕೃತಿಗೆ ಒಂದು ಸೊಬಗು.. ಹುಂ ಎಲ್ಲಾ ನಮ್ಮ ಇಂದಿನ ಮೇಧಾವಿಗಳು ನನ್ನ ಈ ಮಾತು ಕೇಳದ್ರೆ ಖಂಡಿತ ಛೀ ಮಾರಿ ಹಾಕ್ತಾರೆ ಅಂತ ಗೊತ್ತು ನನಗೆ .. ಯಾಕೆಂದರೆ.. ಅವರೆಲ್ಲ .. ಜಾತಿ ರಹಿತ 



ಸಮಾಜದ ನಿರ್ಮತ್ರರಾಗುವ ಕನಸು ಹೊತ್ತವ್ರಲ್ಲ್ವ.. ಅದಕ್ಕೆ ನಾನು ಇಂತ ಅಸಂಬದ್ದ  ವಿಚಾರಗಳನ್ನ ನಿನ್ನಲ್ಲಿ ಹೇಳಿಕೊಳ್ಳುವುದು.. ಹೌದು... ಅವರು ಜಾತಿರಹಿತ ಸಮಾಜ ನಿರ್ಮಾಣ ಮಾಡಿ.. ಮತ್ತೇನು ಮಾಡಿಯಾರು.. ??ಮನುಷ್ಯನ  ಹುಟ್ಟು ಸ್ವಭಾವವನ್ನ ಹೋಗಲಾಡಿಸಲು ಆಗುವುದೇನು?? ಜಾತಿ ಪದ್ಧತಿ  ಹೋಗಿ.. ಪಾಶ್ಚಾತ್ಯರಲ್ಲಿ ಇರುವಂತೆ.. ವರ್ಗ ಮದರಿಯ ಬೇರ್ಪಡುವಿಕೆ ಶುರುವಾಗುವುದು.. ಅಷ್ಟೇ. ಅದೇನು ಇದಕ್ಕಿಂತ ಒಳ್ಳೆಯದೆನು?? ಅದು ಅಲ್ಲದೆ.. ಈ ನಮ್ಮ ಭವ್ಯ ಜಾತ್ಯತೀತ ಭಾರತ ದೇಶದಲ್ಲಿ.. ಜಾತಿ ಆಧಾರದ ಮೇಲೆ ತಮ್ಮ ಬೆಳೆ ಬೇಯಿಸಿಕೊಂಡು.. ಬದುಕುತ್ತಿರುವ.. ರಾಜಕಾರಣಿಗಳ ಪಾಡೇನು?? ಅವರು.. ತಮ್ಮ.. ತಲೆಯನ್ನ.. ದುಡ್ಡು ಮಾಡುವದರ ಜೊತೆಗೆ ಮತ್ತೆ ಹೊಸ ರಣತಂತ್ರಕ್ಕಾಗಿ ಉಪಯೋಗಿಸಬೇಕಲ್ಲ.. ಸುಂದರಿ.. ಅದು ಎಷ್ಟೊಂದು.. ಕಷ್ಟದಾಯಕವಲ್ಲವೇ?? ಪಾಪ..!!!

 "ಹುಂ ನಿನಗ್ಯಾಕೆ ಇವೆಲ್ಲ ನಿನಾಯಿತು ನಿನ್ನ ಬದುಕಾಯಿತು.. ಅಂತ ಇರೋಕಗಲ್ವ ಅಂಥ ಬೈತಿದಿಯ.. "ಹುಂ.. ಜಾತ್ಯತಿತತೆಯ ಬಗ್ಗೆ ಮಾತನಾಡುವ.. ಹುಂಬ.. ಹಾಗೂ ಮೇಧಾವಿ.. ಬೊಗಳೆ ಭಟ್ಟರನ್ನ ಕಂಡಾಗ ಮೈ ಎಲ್ಲಾ ಉರಿಊತ್ತದೆ  ಗೆಳತಿ.. 
ಅಲ್ಲಾ ಅಂತವರಿಗೆಲ್ಲ ಒಂದು ಖಾಸಗಿ ಪ್ರಶ್ನೆ.. ಕೇಳಬೇಕು.. ಅನ್ನಿಸುತ್ತಿದೆ.. ಅಂಥವರ  ಮಕ್ಕಳು  ಬೇರೆ ಉನ್ನತ ಜಾತಿಯ ಕನ್ಯೆಯನ್ನ/ಹುಡುಗನನ್ನ ಮದುವೆ ಆದರೆ.. ಅವರು ಖಂಡಿತ..ಸಂತೋಷದಿಂದ  ಒಪ್ಪುವರು ಅಂಥ ನನಗೆ ಗೊತ್ತು.. ಅದೇ.. ಅವರ ಜಾತಿಗಿಂತ ನಿಮ್ನ ವರ್ಗದ ಹುಡುಗ/ಹುಡುಗಿ ಯನ್ನ ಮದುವೆಯಾಗಿ ಬಂದರೆ ಅವರು ಅದನ್ನ ಅಷ್ಟೇ ಸಂತೋಷವಾಗಿ ಸ್ವೀಕರಿಸುವರೆನು?? ಹುಂ ಮೇಲಿಂದ.. ಒಪ್ಪಿದರು..ಅವರ ಒಳ ಮನಸ್ಸು ಕೊರಗುತ್ತಲೇ ಇರುವುದು..ಇದು ಮಾತ್ರ ದಿಟ..ಕಣೆ.. ಹಾಗಾದಾಗಲೇ.. ಅವರ ನೈಜ ಬಣ್ಣ ಬಯಲಾಗುವುದು..
ಅದಕ್ಕೆ ನಾನು ಹೇಳಿದ್ದು.. ಪಾಶ್ಚಿಮಾತ್ಯರಿಗೆ  ವರ್ಗ ಪದ್ಧತಿ ಹೇಗೋ ಹಾಗೇ ನಮಗೆ ಜಾತಿ ಪದ್ಧತಿ.. ಹುಂ ನನಗೆ ಗೊತ್ತು.. ನೀನು ಮನಸಿನಲ್ಲೇ.. ಇವನು ಪಕ್ಕ.. ಸಂಪ್ರದಾಯವಾದಿ ಅಂತ ಗೊಣಗುತ್ತಿರುವೆ ಅಂತ ಗೊತ್ತು.. 
ಇಲ್ಲಾ ಕಣೆ ನಾನು ವಾಸ್ತವವಾದಿ.. ನನಗೆ ನಿಸರ್ಗ, ಸಮಾಜ.. ಮನುಷ್ಯರು ಅವರ ನೈಜ ಆಗಿ ಕಂಡರೆನೆ ತುಂಬಾ ಇಷ್ಟ.. ಹೌದು.. 
ನೀನು ಲಂಗದಾವನಿಯಲ್ಲಿ ಕಂಡಷ್ಟು ಚಂದ ಪ್ಯಾಂಟು ಶರ್ಟು ಹಾಕಿದರೆ ಕಾಣಲಾರೆ.. ಎಂದು ನಾನು ಅದೆಷ್ಟು ಬಾರಿ ನಿನಗೆ ಹೇಳಿಲ್ಲ.. ಹಾಗೇ..  ನೀನು ಚಂದ ಕಾಣುತ್ತಿಯ ಅಂದ ಮಾತ್ರಕ್ಕೆ ನೀನು ಅಧುನಿಕ ಉಡುಗೆ ತೊಡಲೇ ಬಾರದು ಎಂದು ನಾನು ಎಂದಾದರು ಹೇಳಿರುವೆನೇನು???? 
ಅದೇ ರೀತಿ.. ಜಾತಿ ವ್ಯವಸ್ಥೆಯಲ್ಲಿಯ  ಎಲ್ಲಾ ಲೋಪ ದೋಷಗಳನ್ನು ನಾನು ಸಮರ್ಥಿಸುತ್ತಿಲ್ಲ ಕೂಸೇ.. ಅದನ್ನ ಮಾಡಿದವರು..ನಮ್ಮ ಹಿಂದಿನವರು.. ಅದು ಅಂದಿನದು..ನಾವು ಕಾಲಕ್ಕೆ ತಕ್ಕಂತೆ ಅದನ್ನ ಬದಲಾಯಿಸಿಕೊಳ್ಳಬೇಕು.. ಹಾಗಂತ.. ಅದನ್ನ ನಿರ್ನಾಮವೇ ಮಾಡಬೇಕು ಅನ್ನುವುದು ತಪ್ಪು.. ಏನಂತೀಯ .. ನನ್ನ ಮನದ ಒಡತಿಯೇ..?? 
 ಬರೆ ಇದೆ ಆಯಿತು.. ನಮ್ಮಿಬ್ಬರ ಬಗೆಗಿನ ಕುಶಲೋಪರಿ ನಡೆದೇ ಇಲ್ಲವಲ್ಲೋ ಅಂಥ ಹೇಳ್ತಿದಿಯ?? ಹೇ ಗುಬ್ಬಿ.. ನಿನ್ನ ನೋಡ್ಬೇಕು ಅನ್ನಿಸ್ತಿದೆ ಕಣೆ.. ಆದಷ್ಟು ಬೇಗ.. ಇಲ್ಲಿಂದ.. ಓಡಿ ಬಂದು ಬಿಡುತ್ತೇನೆ.. ಯಾಕೋ ನಿನ್ನ ಮಡಿಲಲ್ಲಿ.. ಮಲಗಿ.. ನಾವು.. ಕಂಡ ಕನಸುಗಳ ಮತ್ತೊಮ್ಮೆ ಮೆಲುಕು ಹಾಕಬೇಕು ಅನ್ನಿಸಿದೆ..
              ಹೌದು.. ಆಲೆಮನೆ ಶುರು ಆಯ್ತಾ??? ನನ್ನ ಕರೆದೆ ಇಲ್ಲ??? ಕ್ಷಮೆ ಇರಲಿ.. ನೀನು ಮೊನ್ನೆ ಕಳಿಸಿದ ಪತ್ರದಲ್ಲಿ ಕರೆದಿರಬೇಕು.. ಅದನ್ನು ಇನ್ನು ಒಡೆದು ಓದಿಲ್ಲ..  
ಇಂತಿ ಎಂದೆದಿಗೂ ನಿನ್ನ ಉಸಿರಾಗಿರುವವ
~ ಕಮಲು ~
-- 

-- 

Thursday, February 24, 2011

ಸುಳ್ಳಿನ ಸುಳಿಯಲ್ಲಿ - (ಅನುಭವ ಕಲಿಸಿದ ಪಾಠ )


  ತರುಣ್ ಅದೇಕೋ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಮಲಗಲು ರೆಡಿ ಆಗಿದ್ದಾಗ ನಡೆದ ಘಟನೆ ಇಂದ ಸ್ವಲ್ಪ ವಿಚಲಿತನಾದ..ಹಾಸಿಗೆಯ ಮೇಲೆ ಅಂಗತಾನೆ ಮಲಗಿ ಹಾಗೇ ಅದಾವುದೋ ನೆನಪಿನ ಲೋಕಕ್ಕೆ. ತೇಲಿ ಹೋದ..  
             "ನನಗೆ ಯಾಕೋ ಗೊತ್ತಿಲ್ಲ.. ಆಗಾಗ ಬಾಲ್ಯದ ದಿನದ ನೆನಪುಗಳು ಕಾಡುತ್ತವೆ.. ಅಂದು ಹಾಗೇ ಆಯಿತು.. ನಮ್ಮ ಚಿಕ್ಕಪ್ಪನಾ ಮಗ ಶಾಲೆ ಮುಗಿದ ಮೇಲೆ ಮನೆಗೆ ಬರಬೇಕಾದವನು.. ರಾತ್ರಿ ನಮ್ಮ ಊಟ ಮುಗಿದ ಮೇಲೆ.. ಮನೆ ಸೇರಿದ.. ಆದಗೂ ಯಾರು ಅವನನ್ನ ಏನು ಹೇಳಲಿಲ್ಲ.. ಕೇಳಲು ಹೋದ ಕೆಲವರಿಗೆ ೨ ನೇ ತರಗತಿಯ ಪುಟ್ಟ ಹುಡುಗ ದಿಟ್ಟ ಸುಳ್ಳುಗಳನ್ನ ಹೇಳಿ ಪುಸುಲಾಯಿಸಿದ. ಅಷ್ಟೊತ್ತಿಗಾದರೂ ಮನೆ ಸೇರಿದನಲ್ಲ ತನ್ನ ಮಗ ಅನ್ನೋ ಧನ್ಯತಾ ಭಾವ ಅವನ ತಾಯಿಯಲ್ಲಿ.. ಅದಕ್ಕಾಗಿ ಆ ವಿಷಯವಾಗಿ.. ಅವನ್ನನ್ನ ಯಾರಾದರು ಕೇಳಿದರೆ.. ತಾಯಿಗೆ ಕೋಪ.. ಇದು ಸಹಜ ಅಲ್ಲವೇ..
ಈ ಘಟನೆಯೇ.. ನನ್ನ ನೆನಪಿನ ಗೂಡಲ್ಲಿ ಹಾಸಿ ಹೊದ್ದು ಮಲಗಿದ್ದ.. ನನ್ನ ಬಾಲ್ಯದ ಘಟನೆಗಳು ಎದ್ದು ಕಾಡ ತೊಡಗಿದವು.. ಆ ಸುಳ್ಳು ಹೇಳುವ ಚಟ ಬಿಡಿಸಿದ ಘಟನೆ ನಿಮಗೆ ಹೇಳಲೇ ಬೇಕು..
ನಾನು ಕೂಡ ಕುಟುಂಬದ ಜಂಜಾಟದಲ್ಲಿ ಎಲ್ಲರು ನನ್ನವರು ಅನ್ನೋ ಭಾವನೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದೆ.. ಅಷ್ಟೊತ್ತಿಗಾಗಲೇ.. ನನ್ನ ಹುಡುಗಾಟಿಕೆಯ ಗುಣದಿಂದಾಗಿ ಎಲ್ಲರಿಗಿಂತ ಖದೀಮ ನಾನಗಿದ್ದೆ.. ಅದಕ್ಕಾಗೆ.. ನಾವೆಲ್ಲ ಆಟ ಆಡುವಾಗ ಯಾರೇ ತಪ್ಪು ಮಾಡಿ ಗಲಾಟೆ ನಡೆದರೂ.. ಅಪ್ಪನಿಗೆ ಆ ಗಲಾಟೆ ಸುದ್ದಿ ಮುಟ್ಟದೆ ಇರುತ್ತಿರಲಿಲ್ಲ ಅದರ ಪರಿಣಾಮ .. ನನಗೆ ಚಂ ಚಂ ಛಡಿಯ ರುಚಿ ಸಿಗದೇ ಇರುತ್ತಿರಲಿಲ್ಲ.. ಇದನ್ನೆಲ್ಲಾ ನೋಡಿದ ನನ್ನ ಅಜ್ಜಿ.. ಬೇಸೆತ್ತು.. ನನ್ನ ಬೇರೆ ಕಡೆ ಹೈಸ್ಚೂಲ್  ಓದಲು.. ಬಿಟ್ಟರು..
ಜಾತ್ರೆಯಲ್ಲಿ ಬೆಳೆದವನಿಗೆ ಏಕಾಂತದ ಜೀವನ ಹೇಗೆ ಹಿಡಿಸಿತು.. ಆ ಮನೆ ನಿಜಕ್ಕೂ.. ನನ್ನ ಪಾಲಿಗೆ ದೇವರ ಮನೆ ಅಂತೆ ಅವರು.. ತಮ್ಮ ಮನೆಯ ಮಗನಂತೆ ನನ್ನ ನೋಡಿಕೊಲ್ಲುತಿದ್ದರು.. ನನಗೆ ಯಾಕೋ.. ಆ ಗಲಾಟೆ ಇಲ್ಲದ ಜೀವನ ಹಿಡಿಸಲಾರಾದೆ ಹೋಗಿದ್ದೆ.. ಅವರ ಮನೆಯವರಿಗೂ ನಾನು ಸಾಕಸ್ಟು ನೋವನ್ನ ನೀಡಿರಬೇಕು.. ಆದರೇನು.. ಕ್ರಮೇಣ ಏಕಾಂತದ ಜೀವನ ಒಗ್ಗಿ ಹೋಯಿತು.. ಹೊಸ ಗೆಳೆಯರ ಪರಿಚಯ ಆಯಿತು.. ಮಳೆಗಾಲ ಮುಗಿದು.. ಚಳಿಗಾಲ ಬಂತು.. 
ಮಳೆಗಾಲದಲ್ಲಿ.. ಎಲ್ಲಾ ಕಡೆ ಹಸಿರಾಗುವ ಕಳವಾದರೆ.. ಮಕ್ಕಳ ಮನಸಿಗೆ ಅದು ಬೇಸರದ ಕಾಲವಲ್ಲವೇ.. ಚಳಿಗಾಲ ಬಂತು.. ಅಲ್ಲಿನ ಎಲ್ಲಾ ಮಿತ್ರರ ಸಂಗಡ.. ಸೇರಿ.. ನನ್ನ ಬಾಲವು ಚಿಗುರ ತೊಡಗಿತು.. ಹಾಗೇ ಪರಿಚಿತ ಆದವರಲ್ಲಿ.. ವರುಣ್ ಕೂಡ ಒಬ್ಬ ತುಂಬಾ ಶ್ರೀಮಂತರ ಮನೆಯವನು... ದಿನವು.. ಹೈಸ್ಚೂಲ್ಗೆ ಸೈಕಲ್ ತರುತ್ತಿದ.. ನಾನು ಪಾದಚಾರಿ ಒಂದೇ ದಾರಿಯಲ್ಲಿ ಹೋಗುವವರು ಅಂದ ಮೇಲೆ ಕೇಳಬೇಕೆ.. ಇನ್ನೂ ಆತ್ಮೀಯತೆ ಬೆಳೆಯಿತು..
 ಒಂದು ಶನಿವಾರ.. ಮದ್ಯಾನ್ಹ ಹೈಸ್ಚೂಲ್ ಮುಗಿಸಿ ಮನೆಯಕಡೆ ಹೋಗುವಾಗ.. ಅವನು.. ಹೇಯ್ ದೋಸ್ತ್.. ಸೈಕಲ್ ಹತ್ತು.. ಬೇಗ ಹೋಗೋಣ ಅಂತ.. ಹೇಳಿದ.. ನಾನು.. ಅವನ ಮಾತನ್ನು ಕೇಳಿ.. ಸೈಕಲ್ ಹತ್ತಿ.. ಒಂದು ಸ್ವಲ್ಪ್ ದೂರ ಬಂದಿರಬಹುದು.. ಅವನ ನಾಗಲೋಟದ ಸೈಕಲ್ ಸವಾರಿಯ ಆನಂದ ಸವಿಯುತ್ತಿರುವಗಲೇ.. ಒಂದು ಕ್ಷಣ ಏನಾಯಿತು ಎಂದು ತಿಳಿಯುವಷ್ಟರಲ್ಲಿ  ಇಬ್ಬರು.. ಕೆಳ ಬಿದ್ದಿದ್ದೆವು..
 ಅವನು ನನ್ನಂತೆ ಬೇರೆಯವರ ಮನೆಯಿಂದ ಸ್ಚೂಲ್ಗೆ ಬರುತ್ತಿದ್ದವನು.. ಇಬ್ಬರಿಗೂ ಏನು ಮಾಡಬೇಕೆಂದೇ ತೋಚಲಿಲ್ಲ.. ಇಬ್ಬರು.. ಸೈಕಲ್.. ಅಪಘಾತ ಆಗಿ ಹೀಗೆ ಪೆಟ್ಟಾಯಿತು ಅನ್ನಲು ಭಯ.. ಆದುದರಿಂದ.. ಇಬ್ಬರು.. ನೋವಿನ ಮದುವಿನಲ್ಲೇ.. ಆಸ್ಪತ್ರೆ ಗೆ ಸೇರುವ ದಾರಿಯಲ್ಲಿ ಮಾತನಾಡಿಕೊಂಡೆವು.. ನಾನು ಎಂದಿನಂತೆ ನಡೆದೇ ಹೋಗುತ್ತಿದ್ದೆ.. ಅವನು.. ಸೈಕಲ್ ಹೊಡೆದು ಕೊಂಡು.. ನನ್ನ ದಾಟುವ ವೇಳೆಗೆ ಸರಿಯಾಗಿ.. ಒಂದು ಲಾರಿಯವನು ಬಂದ.. ಇದರಿಂದ.. ಬ್ಯಾಲೆನ್ಸ್ ತಪ್ಪಿ.. ಅವನು ನನಗೆ ಗುದ್ದಿದ.. ಅದು ಅಲ್ಲದೆ.. ಅವನು ಬಿದ್ದ.. ಇದು..ನಾವು.. ನಮ್ಮ ಪಳಕರಲ್ಲಿ ಹೇಳ್ಬೇಕು ಅಂದು.. ನಿರ್ಧರಿಸಿದ್ದು.. 
        ನಂತರ.. ಆಸ್ಪತ್ರೆಯಲ್ಲಿ ಡಾಕ್ಟರ ಕೂಡ.. ಇ ಘಟನೆ ಹೇಗಾಯಿತು ಅಂತ ಕೇಳಲಾಗಿ.. ಇಬ್ಬರು.. ಇದನ್ನೇ ಹೇಳಿದೆವು.. ಅಂತೂ.. ಆ ದಿನ ಮನೆ ತಲುಪುವುದು ಸಂಜೆ ಆಯಿತು.. ನಾನು ಉಳಿದ ಮನೆಯಲ್ಲಿ ದೊಡ್ಡಪ್ಪ.. ಗಾಭರಿಯಿಂದ.. ಅಣ್ಣನನ್ನ ಕಳುಹಿಸಿ ಊರೆಲ್ಲ ಹುದುಕಿಸಿದ್ದ.. ನಾನು ಮನೆಗೆ ಹೋದಾಗ.. ಅವರು.. ಇದು ಹೇಗಾಯಿತು.. ಅಂತ ಕೇಳ್ದಾಗ.. ಮತ್ತೆ ಅದೇ ಸುಳ್ಳು.. ಅದನ್ನ ಕೆದಕಲು ಇನ್ನೇನೋ ಕೇಳಿದಾಗ ಅದನ್ನ ಸಮರ್ಥನೆಗೆ ಇನ್ನೊಂದು.. ಸುಳ್ಳು.. ಹೀಗೆ ನನ್ನ ಸುಳ್ಳುಗಳ ಕಂತೆ ಬೆಳೆಯುತ್ತಲೇ ಹೋಯಿತು.. ಅತ್ತ ನನ್ನ ಮಿತ್ರ ವರುಣ ಏನು ಮಾಡಿಕೊಂದಿರುವನೋ ಎಂಬ ಚಿಂತೆ.. ಅವನು ನನ್ನ ಅಂತೆ.. ಹೇಳಿದ್ದರೆ ಒಳ್ಳೆಯದು.. ಆದರೆ.. ವಿಚಿತ್ರ ಅಂದರೇ.. ಆ ಸತ್ಯಕ್ಕೆ.. ಆದರೆ ಇರುವುದು ಒಂದೇ ರೂಪ.. ಆದರೆ ಸುಳ್ಳಿಗೆ.. ಎಲ್ಲರು ಒಂದೇ ರೀತಿ ಹೇಳಲಾದಿತೆ?? ಅವನೊಂದು.. ನಾನೊಂದು.. ಸುಳ್ಳುಗಳ ಕತೆಯನ್ನೇ ಸೃಷ್ಟಿಸಿ ಬಿಟ್ಟೆವು.. 
 ನಂತರ ಅದು ಹೇಗೋ ಏನೋ.. ನಮ್ಮ ಪಾಲಕರ ಮನೆಯವರು ಅವರ ಮನೆಗೆ ಫೋನ್ ಮಾಡಿ ವಿಚಾರಿಸಲಾಗಿ.. ಎಲ್ಲಾ ಬಟಾ ಬಯಲು.. ನಮ್ಮ ಮಿಥ್ಯದ ಅರಮನೆ ಗಾಳಿ ಗೋಪುರವಾಗಿತ್ತು..  ಹುಂ ಇನ್ನೇನು ಮಾಡುವುದು.. ನಿಜ ಒಪ್ಪಿಕೊಳ್ಳದೆ ವಿಧಿ ಇಲ್ಲಾ ಎಂದು ತೋಚಿದಾಗ ಇಬ್ಬರು. ನಮ್ಮ ನಮ್ಮ ಮನೆಗಳಲ್ಲಿ.. ನಿಜ ಒಪ್ಪಿಕೊಂಡೆವು.. ಆದರೆ.. ನಾವು ಆಡಿದ ನಾಟಕದಿಂದಾಗಿ ಎಲೆಲ್ಲೂ ನಾವು.. ಸೈಕಲ್ ಮಿತ್ರರು ಎಂದೆ ಕರೆಸಿಕೊಳ್ಳುವ ಹಾಗಾಯಿತು 
 ನಮ್ಮನ್ನು ಛೇಡಿಸಲು ಒಂದು ಸಾಧನ ಆಯಿತು.. ನನಗೆ ನನ್ನ ಮೇಲೇನೆ ಯಾಕೋ.. ಮುಜುಗುರ ಆಗ ತೊಡಗಿತು.. ಅಂದೆ ನಿರ್ಧರಿಸಿದೆ.. ಸುಳ್ಳು ಎಂದಿಗೂ ಮತ್ತಷ್ಟು  ನೋವನ್ನ ನಮಗೆ ತರುತ್ತದೆಯೇ ಹೊರತು.. ಸುಖವನ್ನಲ್ಲ.. ಅದೇ ನಿಜ ಹಾಗಲ್ಲ.. ಇಂದಲ್ಲ ನಾಳೆ.. ಹೊರ ಬಂದೆ ಬರುತ್ತದೆ.. ತುಂಬಾ ತಡವಾಗಿ ತಿಳಿದಷ್ಟು ನಮ್ಮ ಆತ್ಮೀಯರಿಗೆ ನಮ್ಮ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ.. ಅಂದಿನಿಂದ ಇಲ್ಲಿವರೆಗೂ ನಡೆದದ್ದನ್ನ ಇದ್ದ ಹಾಗೇ  ಒಪ್ಪಿ ಕೊಳ್ಳುವ ಗುಣ ನನ್ನಲ್ಲಿ ಬೆಳೆದು ಬಂದಿತು..
       ಅದೇ ನಾನು ಹುಟ್ಟಿದ ಮನೆಯಲ್ಲೇ ಇದ್ದರೆ ಈ ಅನುಭವ ಬೇರೆಯದೇ ಆಗಿರುತಿತ್ತು.. ಅನ್ನಿಸುತ್ತದೆ.. ಯಾಕೆಂದರೆ.. ಅಪ್ಪನ ಹೊಡೆತಕ್ಕಿಂತ.. ಸುಳ್ಳೇ ಹಿತ ಎನಿಸುತಿತ್ತೋ ಏನೋ.. ಜೊತೆಗೆ ಅಮ್ಮನ ಮಮತೆ...ಜೊತೆ ಇರುತ್ತಿತ್ತಲ್ಲ..
ಅದನ್ನ ನೆನೆಯುತ್ತ ನೆನೆಯುತ್ತ.. ನನ್ನ ಮನಸು.. ವಂದನೆ ಹೇಳಿತು.. ಆ ನನ್ನ ಪಾಲಕರಿಗೆ.. ಎಂತ ಪುನ್ಯತ್ಮರಪ್ಪ ಅವರು.. ಅಂಥವರ ಮನೆಯಲ್ಲಿ ನಾನು ಬದುಕಿದ್ದೆ ಎನ್ನಲು.. ನನಗೆಷ್ಟು ಖುಷಿ..ಅಂತವರ ನೆರಳಲ್ಲಿ ಬೆಳೆದ ನಾನೇ ಧನ್ಯ.. ಎನ್ನುತ್ತಾ.. ಮಗ್ಗುಲು.. ಬದಲಾಯಿಸಿದ.." ತರುಣ.. ಆ ಸವಿ ನೆನಪನ್ನ ಮನಸಾರೆ ನೆನೆಯುತ್ತ.. ನಿದ್ರಾ ದೇವಿಯಲ್ಲಿ ಲೀನನಾದ..

~ಕಮಲು~

Wednesday, February 23, 2011

ಅಮ್ಮ ಕೊಡಿಸಿದ ಸೈಕಲ್


           ಅಮ್ಮ ಕೊಡಿಸಿದ ಸೈಕಲ್ 


                    " ನಿನಗೆ  ಯಾಕೋ ಮಾರಾಯ ಈ ಸೈಕಲ್ ಇನ್ನೂ.. ಯಾವದಾದ್ರು ಗುಜರಿಗೆ ಕೊಡು . ಅಲ್ಲಾ ನೀನು ಅಂತು.. ಇನ್ನೂ ಅದನ್ನ ಹೊಡೆಯೋದು  ಅಷ್ಟರಲ್ಲೇ ಇದೆ ..  ನೀನು ಪಟ್ಟಣದಿಂದ ಬರೋದು ಯಾವಾಗ?? ಇದನ್ನ ಹೊಡೆಯೋದು ಯಾವಾಗ..??? ಇನ್ನೂ ಬಂದ್ರು.. ಬೈಕ್ , ಕಾರು, ಅಂತವುಗಳಲ್ಲಿ ತಿರುಗೋ ಜಮಾನ ಬಂದಿದೆ.." ಎಂದು  ಸೈಕಲ್ ಅಂಗಡಿಯ ರಾಯರು  ಸೈಕಲ್ ಅನ್ನ  ಆಯ್ಲಿಂಗ್ ಮಾಡ್ತಾ ಇದ್ರೆ.. 

 ನನಗೆ ಯಾಕೋ ಅವರ ಮಾತು ಅಷ್ಟು ಸರಿ ಬರಲಿಲ್ಲ.. 
                    ಆದರೂ ಅವ್ರು ಹಿರಿಯರು ನಾನು ಚಿಕ್ಕವನಿದ್ದಗಿಂದ ನೋಡಿದ ಮನುಷ್ಯ. ಅವರು ನನ್ನ ತಿಳುವಳಿಕೆ ಬಂದಾಗಲಿಂದ ನೋಡ್ತಿದೀನಿ.. ಎಂತ ಶ್ರಮ ಜೀವಿ. ಅವರು ಸ್ವಲ್ಪ ಕೂಡ ಬದಲಾಗಿಲ್ಲ.. ಅವರ ಅಂಗಡಿಯಂತೆ  ಅವರು ಕೂಡ.. ಅದು ಅಲ್ಲದೆ.. ಅವರು ಯಾವತ್ತು ತಪ್ಪು ಮಾತನಾಡುವವ್ರಲ್ಲ. ಅದೇ ಈ ಸೈಕಲ್ ತಗೋಳುವಾಗ ಅವರು ನೀಡಿದ ಸಲಹೆನ ನಾನು ಹೇಗೆ ತಾನೆ ಮರಿಲಿ. ಆ ಮಾತುಗಳು ಇನ್ನೂ ನನ್ನ ಮನದಲ್ಲಿ ಹಸಿಯಾಗಿದೆ " ಏನೋ ತರುಣ ನಿಮ್ಮ ಅಪ್ಪ ಅದೇನೋ ಕಷ್ಟ ಪಟ್ಟು ಹಣ ಹೊಂದಸಿ ನಿನಗೆ ಸೈಕಲ್ ಕೊಡಿಸ್ತಿದಾರೆ. ಅದು ನೀನು ಚನ್ನಾಗಿ ಓದಲಿ ಅಂತ. ಇದನ್ನ ನೀನು ನಿನ್ನ ಕೊನೆ ಕಾಲದ ವರೆಗೂ  ಇಟ್ಟುಕೊಂಡು ಇರಬೇಕು. ಅಂತ ಒಳ್ಳೆ ಮಾಲು ನಾನು ನಿನಗೆ ಕೊಡ್ತಿದೀನಿ.. ಯಾಕಂದ್ರೆ ನಿಮ್ಮ ಮನೆಯಲ್ಲಿ ಎಷ್ಟೋ ದಿನ ಊಟ ಮಾಡಿದಿನಿ ಅದನ್ನ ಮರೆಯೋಕಗುತ್ತ??  ಹಾಗಾಗೆ ದುಡ್ಡಿನ ಮುಖ ನೋಡದೇನೆ.. ಎಲ್ಲಕಿಂತ ಒಳ್ಳೆ ಸೈಕಲ್ ನಿನಗೆ ಕೊಡ್ತಿದೀನಿ.. ಹುಂ ಅದ್ರು ಸಣ್ಣ ಆಸೆ ಏನು ಅಂದ್ರೇ ನೀನು ನಿಮ್ಮ ಅಪ್ಪನ ಹಾಗೇ ಏನು ಓದದೆ ಇರಬಾರದು. ಅವ್ರ ಆಸೇನ ಇದೆರಿಸ್ಬೇಕು ತಿಳಿತ.. ಹಾಗೇ ನನ್ನ ಆಸೆ ಏನಪ್ಪಾ ಅಂದ್ರೇ.. ಪ್ರತಿ ಬಾರಿ ಈ ಸೈಕಲ್ ರಿಪೇರಿ ಬಂದಾಗ ನನ್ನ ಅಂಗಡಿಗೆ ಬರಬೇಕು ತಿಳಿತಲ್ಲ.." ಎಂತ ಮಾತುಗಳು..
ಹೌದು ಆ ಸೈಕಲ್ ನಾನು ಮಾರಬೇಕೆನು??? ಅಂತ ದಾರಿದ್ರ್ಯ ನನಗೆ ಇನ್ನೂ ಬಂದಿಲ್ಲ.. ಅದು ಅಮ್ಮ ಅಂದು ನನಗೆ ಕೊಡಿಸದಿದ್ದರೆ.. ಬಹುಶಃ ನಾನು ಕಾಲೇಜ್ ಜೀವನವನ್ನ ಇಷ್ಟು ಯಶಸ್ವಿಯಾಗಿ.. ಮುಗಿಸುತ್ತಿರಲಿಲ್ಲವೇನೋ.. ಒಟ್ಟು ಕುಟುಂಬದಲ್ಲಿಯಾ  ಯಜಮಾನನಗಿದ್ದ ಚಿಕ್ಕಪ್ಪ ನನ್ನನ್ನು ಕಾಲೇಜ್ ಗೆ ಕಲಿಸಲಾಗುವುದಿಲ್ಲ ಎಂದು ಹೇಳಿದಾಗ... ಛಲದಿಂದ ..ನಾನು ಹೋಗೆ ತೀರುತ್ತೇನೆ ಎಂದು.. ನಿರ್ಧರಿಸಿ  ಎಲ್ಲರು.. ಖಾಸಗಿ ಕಾಲೇಜ್ ಗೆ ಹೋದರೆ.. ನಾನು ಕಲಾ ವಿದ್ಯಾರ್ಥಿ ಆಗಿ ಸರಕಾರಿ ಕಾಲೇಜ್ ಸೇರಿದೆ.. ಅದನ್ನ  ಕಂಡು ಅದಕ್ಕೆ ಬೆಂಬಲವಾಗಿ ನಿಂತು.. ತಾನು ಕಷ್ಟ ಕಾಲಕ್ಕೆ ಬೇಕೆಂದು.. ಅಡಿಕೆ ಸುಲಿದೋ, ಗೇರು ಬೀಜ ಮಾರಿಯೋ ಕೂಡಿಟ್ಟ ಹಣವನ್ನ ಕೊಟ್ಟು.. ಈ ದುಡ್ಡಿನಿಂದ.. ಒಂದು ಸೈಕಲ್ ತಗೋ ಎಂದು.. ಕೊಟ್ಟಾಗ.. ನನಗೆ ಆಗ ಹೊಸ ಆಸೆ ಮೈಗೆದರಿತ್ತು.. ಅದು.. ಅಲ್ಲದೆ.. ಆ ಸೈಕಲ್ನಾ  ಸಹಾಯದಿಂದ ಎಷ್ಟೋ ದುಡಿಮೆಗಳನ್ನ ಮಾಡಿ.. ನನ್ನ ಓದಿಗೆ ಸಾಕಾಗುವಷ್ಟನ್ನ ಸಂಪಾದಿಸಿಕೊಳ್ಳಲು ಸಹಾಯಕವಾಯಿತು.. ಅದನ್ನ ಮಾರುವುದೇ...  

ಅವರನ್ನ ನೋಯಿಸೋ ಮನಸಾಗದೆ.. ಸಮಾದನದಲ್ಲೇ ಹೇಳದೆ.. " ಇಲ್ಲಾ ರಾಯರೆ ನಾನು ಅದನ್ನ ಕೊಡಲ್ಲ."
          ಯಾಕೋ ಹಾಗೇ ಹೇಳ್ತಿದಿಯ ಇವಾಗ ಇಂತ ಹಳೆ ಸೈಕಲ್ ಆಯ್ಲಿಂಗ್ ಮಾಡ್ಸಿ ಕೊಟ್ಟರೆ ಎಂತ ಒಳ್ಳೆ ಬೆಲೆ ಇದೆ ಅಂತ ನಿನಗೆ ಗೊತ್ತಿಲ್ವ.. ನೀನು ಕೊಂಡ ಬೆಲೆಗೆ ಇದನ್ನ ಇವಾಗ ಮಾರಬಹುದೋ ಹುಚ್ಚಪ್ಪ ಅದು ಅಲ್ಲದೆ ನನಗೆ  ತುಂಬಾ ಜನ ಕೇಳ್ತಿದ್ದಾರೆ ಎಲ್ಲಾದರು ಇದ್ರೆ ಕೊಡ್ಸಿ ಅಂತ." ಅಂತ ಹೇಳ್ತುತ್ತ ತಮ್ಮ ಬೆಲೆಯ ಪೈಜಾಮವನ್ನ ಒಮ್ಮೆ ಮೇಲೇರಿಸಿಕೊಂಡು.. ಚೈನ್ ಬಾಕ್ಸ್ ಅನ್ನ ಸಾರಿಸಿ.. ಬೆಂಡ್ ತೆಗೆದು ರೆಡಿ ಆಗಿದ್ದ ಗಾಲಿಯನ್ನ ಸೇರಿಸ ತೊಡಗಿದರು..
 " ದುಡ್ಡಿನ ಆಸೆಗೆ ಇದನ್ನ ಕೊಡೋವಷ್ಟು ವ್ಯಾಪಾರೀ ಮನೋಭಾವ ನನ್ನದಲ್ಲ ರಾಯರೇ.. ನಿಮಗೆ ಬೇರೆ ಎಲ್ಲಾದರು ಸಿಕ್ಕದರೆ ಕೊಡಿ.. ಇದು ನನ್ನ ಬಾಳಿನಲ್ಲಿ ಬೆಲೆ ಕಟ್ಟಲಾಗದ್ದು.. ಇದು ಪಡೆದ ದಿನದಿಂದ ಹಿಡಿದು ಇಲ್ಲಿವರೆಗೂ ನಾನು ನಿಮ್ಮಲ್ಲೇ ರಿಪೇರಿ ಮಾಡಿಸಿರುವೆ.. ನಾನು ಏನಾದ್ರು ಬಾಕಿ  ದುಡ್ಡು ಕೊಡೋದು ಇದ್ರೆ ಹೇಳಿ ಕೊಟ್ಟು ಬಿಡುತ್ತೇನೆ.." ಅಂತ ಹೇಳಿ ಅವರ ಅಂಗಡಿಯ  ಕುರ್ಚಿಯಲ್ಲಿ ಆಸೀನನಾದೆ. 
   
        ಹಾಗೇನು ಇಲ್ಲವೋ ಮಾರಾಯ.. ಸುಮ್ಮನೆ ಮುದ್ಕಿಗೆ ಸಿಂಗಾರ ಮಾಡದ ಹಾಗೇ ಇದಕ್ಕೆ ಪ್ರತಿ ವರ್ಷ ಊರಿಗೆ ಬಂದಾಗಲು ನನ್ನ ಅಂಗಡಿಗೆ ತಂದು  ರಿಪೇರಿ ಮಾಡಿಸ್ತಿ. ಯಾಕೆ ಸುಮ್ಮನೆ ಅದಕ್ಕೆ ಖರ್ಚು ಅಂತ ಹೇಳ್ದೆ. ಅಷ್ಟೇ.
ಅಂತ ಸೈಕಲ್ ನಾ ಪೆಡಲ್ ಸರಿ ಮಾಡ ತೊಡಗಿದರು.
                    ನಿಮಗೆ ಬೇಜಾರಾಗಲ್ಲ ಅಂದ್ರೇ ಒಂದು ಮಾತು ರಾಯರೆ.. ನಾನು ನಿಮ್ಮ ಹತ್ರ ಈ ಸೈಕಲ್ ತಗೋಳುವಾಗ ನಾನು ಇದ್ದ ಸ್ಥಿತಿಯಲ್ಲಿ ಇರೋ ಅಂತ ಯಾರದ್ರು.. ಬಡ ಪ್ರತಿಭಾವಂತ ಹುಡುಗ ಇದ್ರೆ ಹೇಳಿ.. ಅವನಿಗೆ ಕಲಿಲಿಕ್ಕೆ ಸಹಾಯ ಆಗುತ್ತೆ ಅನ್ನೋದಾದ್ರೆ.. ಇದನ್ನ ಅವನು ಬಳಸ್ಕೊಳ್ಳಲಿ.. ಆದರೆ ಅವನಿಗೆ ಇದನ್ನ ಮಾರಲ್ಲ. ಅವನಿಗೆ ಇದರ ರಿಪೇರಿ ಖರ್ಚು ಕೂಡ ನಾನೇ ಬರ್ಸ್ತಿನಿ..ಅವನು ಓದು ಮುಗಿದ ತಕ್ಷಣ ಅದನ್ನ ನನಗೆ ಕೊಡಬೇಕು.. ಅಂತವ್ರಿದ್ರೆ ಹೇಳಿ.. ಯಾಕಂದ್ರೆ ಇದು.. ನನ್ನ ಅಮ್ಮ ಕೊಡಿಸಿದ ಸೈಕಲ್. ನಿಮಗೆ ಇದು ಬರಿ ಸೈಕಲ್ ತರ ಮಾತ್ರ ಕಾಣ್ಸುತ್ತೆ . ಆದರೆ ಇದ್ರಲ್ಲಿ ನನಗೆ ಅಮ್ಮನ ಕಷ್ಟದ ದಿನಗಳ  ನೆನಪು.. ಕಾಣುತ್ತೆ.. ನನಗೆ ನನ್ನ ಕಾಲೇಜ್ ದಿನದಿಂದನು ಇಲ್ಲಿವರೆಗೂ ಇವನು ನನಗೆ ಒಳ್ಳೆ ಸಂಗಾತಿ.. ಯಾವತ್ತು ನನಗೆ ಮೋಸ ಮಾಡಿಲ್ಲ.. ಮನುಷ್ಯರಂತೆ.. ನಾನು ಬಿದ್ದಾಗ ನಕ್ಕಿಲ್ಲ.. ನನ್ನ ಅಳುವಿನಲ್ಲೂ ಮೌನಿ ಆಗಿ ನಾನು ಇರುವೆ ಗೆಳೆಯ ಎಂದಿದೆ.. ನಾನು ನಗುವಾಗಲು.. ನಿನ್ನ ಜೊತೆಯಲ್ಲೇ ಇರ್ತೇನೆ.. ಮರಿಬೇಡ ಅಂತ ಅದು ಮೌನಿಯಾಗೆ ನನ್ನ ಹತ್ರ ಹೇಳಿದೆ..  ಇವನು ನನಗೆ ನಿಜ ಹೇಳ್ಬೇಕು ಅಂದ್ರೇ ಯಾವತ್ತು ನನಗೆ ಒಂದು ಹೊರೆ ಅಂತ ಅನ್ಸೆ ಇಲ್ಲಾ.. ಯಾಕೋ ಗೊತ್ತಿಲ್ಲ.. ಇವಾಗ ಅವನನ್ನ ಕಳಕೊಲ್ಲದು ಅಂದ್ರೇ.. ಮುತ್ತು ಕೊದವ್ಳು  ಬಂದಾಗ ತುತ್ತು ಕೊಟ್ಟ ಹೆತ್ತ ತಾಯೀ ನಾ ಮರೆತಂತೆ ಆನ್ಸುತ್ತೆ.. ನನಗೆ ನನ್ನ ಅಮ್ಮ ಅಪ್ಪ ಹಾಗೂ ನನ್ನ ಬೆಳೆಸಿದವರು ಇದ್ದಂತೆ ಈ ಸೈಕಲ್ ಕೂಡ.. ಇದಕ್ಕೂ ಜೀವ ಇದೆ.. ಅದು ನನ್ನ ಮನಸಿನಲ್ಲಿ . ರಾಯರೆ.. ನೀವೇ ಹೇಳಿದ್ರಿ.. ನೆನಪಿದೆಯ.. ನಿಮ್ಮಷ್ಟು ವಯಸ್ಸು ಆಗೋವರೆಗೂ ಇದನ್ನ ನಿನ್ನ ಹತ್ರ ಇಟ್ಟು ಕೊಂಡಿರಬೇಕು  ಅಂತ ಆಗ ಉದಾಪೆಯಗೆ ನಿಮ್ಮ ಮಾತು ತಗೊಂಡಿದ್ದೆ.. ಇವಾಗ ನಿಮ್ಮ ಮಾತು ನಿಜ ಅನ್ಸ್ತಿದೆ.. ರಾಯರೆ.. ನನಗೆ ನಿಮ್ಮಷ್ಟು ಕಾಲ ಬದುಕೋ ಅದೃಷ್ಟ ಇದೆಯೋ ಇಲ್ಲವೋ.. ಆದ್ರೆ ನನ್ನ ಕಡೆ ಘಳಿಗೆವರೆಗೂ ಇದು ನನ್ನ ಜೊತೇನೆ ಇರುತ್ತೆ.. ಅಂಥ ಮಾತ್ರ ಹೇಳಬಲ್ಲೆ..
ನನ್ನ ಆ ಹಳೆ ನೆನಪಿಂದ ಹೊರ ಬಂದು  ಸೈಕಲ್ ರೆಡಿ ಆಗಿರಬಹುದು ಅಂತ ತಿರುಗಿ ನೋಡ್ತೀನಿ.. ರಾಯರು ನನ್ನ ಪಕ್ಕದಲ್ಲಿ ಸೈಕಲ್ ತಂದು ನಿಲ್ಲಸ್ತ.. ನನ್ನ ಹೆಗಲ ಮೇಲೆ ಕೈ ಹಾಕಿ ಹೇಳದ್ರು.. 
" ಮಗ ನೀನು ನಿಮ್ಮ ಅಪ್ಪನ ತರಾನೆ.. ಗುಣ ಅಂದ್ರೇ ಹೀಗಿರಬೇಕು... ಈಗಿನ ಕಾಲದಲ್ಲಿ ವಯಸ್ಸಾದ ನನ್ನ ಅಂತ ಮನುಷ್ಯರನ್ನೇ ನೀನು ಏನು ಕಡದಿರೋದು? ಅಂತ ಹೇಳಿ ವ್ರುದ್ದಶ್ರಮಕ್ಕೆ ಸೇರಿಸೋ ಈ ಕಾಲದಲ್ಲಿ.. ಜೀವ ಇರದ ಈ ಸೈಕಲ್ ಕೂಡ ನನ್ನ ಸಂಗಾತಿ.. ಅದನ್ನ ನಿನ್ನ ಹಿರಿಯರನ್ನ ನೋಡಿಕೊಂದಂತೆ ನೋಡ್ಕೋತೀನಿ ಅಂದ್ಯಲ್ಲ.. ನಿಜಕ್ಕೂ ಖುಷಿ ಆಯ್ತು.." ಅಂತ ಅವರ ಕಣ್ಣಲ್ಲಿನ ನೀರು ಒರೆಸಿ ಕೊಂಡರು. 
ರಾಯರೇ ಏನಾಯ್ತು ನಿಮಗೆ ನಿಮ್ಮನ್ನ ನಿಮ್ಮ ಮಕ್ಕಳು...
ಅವರ ಕತೆ ಏನ್ ಕೇಳ್ತಿಯ ಮಗ.. ನನ್ನ ಮತ್ತೆ ನನ್ನವಳನ್ನ ವ್ರುದ್ದಶ್ರಮಕ್ಕೆ ಸೇರಸ್ಲಿಕ್ಕೆ ಹೊರ್ತಿದ್ರು.. ನಾನು ಶಕ್ತಿ ಇರೋ ತನಕ.. ದುಡದೆ ಬದಕ್ತಿನಿ ಅಂತ ಮತ್ತೆ ಅಂಗಡಿ ಅಲ್ಲೇ ಕೆಲಸ ಮಾಡ್ತಿದೀನಿ.. ಹಾಗೇ ಇಷ್ಟ ದಿನ ನನ್ನ ಜೊತೆ ಇರೋವಳನ್ನು..ಕೂಡ ನಾನೇ ನೋಡ್ಕೊತಿದಿನಿ..ಯಾವದಕ್ಕೂ ಇರಲಿ ಅಂತ ಸ್ವಲ್ಪ್ ದುಡ್ಡು ಅವಳ ಹೆಸ್ರನಲ್ಲೇ ಇಟ್ಟಿದ್ದೆ ಅದು ಈಗ ಅನುಕೂಲಕ್ಕೆ ಬಂತು..

ನೀನು ಮಾತ್ರ ನಿಮ್ಮ ಅಪ್ಪ ಅಮ್ಮಂಗೆ ಎಂದು ಹಾಗೇ ಮಾಡಬೇಡ ಮಗ.. ನೀನು ಈಗ ಆಡಿದ ಮಾತಿನಂತೆ ನಡ್ಕೋ..ನೀನು ನಡ್ಕೊತಿಯ ಅಂತ ನನ್ನ ಹೃದಯ ಹೇಳ್ತಾ ಇದೆ ಕಣೋ..
 ತಗೋ ನಿನ್ನ ಸೈಕಲ್ ರೆಡಿ ಇದೆ.. ಹುಂ ಇದನ್ನ ಇಟ್ಟ ಕೊಳ್ಳಿ ರಿಪೇರಿ ಚಾರ್ಜು.. ಚೇಂಜ್ ಏನು ಕೊಡೋದು ಬೇಡ.. ಅಂತ ಹೇಳ್ದೆ.. ನಿಮ್ಮ ಕೈ ಅಲ್ಲಿ ರೆಡಿ ಆದ ಸೈಕಲ್ ಅಂದ್ರೇ.. ಅದು ಮುದ್ಕಿನು.. ಹದಿ ವಯಸ್ಸಿಗೆ ಬಂದ ಹಾಗಿದೆ ರಾಯರೆ.. ಇಂತ ಸೈಕಲ್ ಮಾರೋದ.. ಛೇ ಯಾವತ್ತು ಆಗಲ್ಲ.. ಅಂತ ಹೇಳಿ ಅವ್ರಿಗೆ ಧನ್ಯವಾದ ಹೇಳಿ.. ಸೈಕಲ್ ಏರಿದೆ.. ಮತ್ತೆ ನನ್ನ ಗತಕಾಲದ ಸಂಗಾತಿ ಯೊಂದಿಗೆ ಹಳೆಯ ನೆನಪುಗಳ ಮೆಲುಕು ಹಾಕುತ್ತ..
ಆದರು ಬಿಡದೆ ಕಾಡುತ್ತಿದೆ.. ನಮ್ಮ ರಾಯರ ಕೊನೆಯ ಮಾತು. 
~ಕಮಲು~ .  
--
BΣПΛKΛ KЯ

Wednesday, November 3, 2010

ಇಬ್ಬಂದಿತನ

                             ಬಾಲ್ಯದಲ್ಲಿ ಪಕ್ಕದ ಮನೆಗೆ ಸಿಟಿಯಿಂದ ರಜಾ ಸಮಯದಲ್ಲಿ ಅವರ ನೆಂಟರು ಬಂದರು ಎಂದರೆ ಅವರನ್ನ ಕೌತುಕದಿಂದ ನೋಡುತ್ತಿದ್ದ.. ಅವರ ಮಾತನಾಡುವ ದಾಟಿ, ಅವರ ವಿಚಾರಧಾರೆಗಲೆಲ್ಲ ತುಂಬಾ ವಿಭಿನ್ನ ಅನ್ನಿಸುತಿತ್ತು. ಆದರೆ ಆವನ ವಯಸ್ಸಿನ ಮಕ್ಕಳು  ಮೈ ತುಂಬಾ ಬಟ್ಟೆ ಹಾಕಿಕೊಳ್ಳದೆ ಇದ್ದುದನ್ನ ನೋಡಿ ಮನಸಿನ್ನಲ್ಲೇ ಮರುಕ ಪಟ್ಟಿದ್ದ. ಒಮ್ಮೆ ಹೀಗೆ ಪಕ್ಕದ ಮನೆಗೆ ಬಂದ ಇವನ ವಯಸ್ಸಿನ ಮಗುವಿನ ಹತ್ತಿರ ಕೇಳಿಯೇ ಬಿಟ್ಟಿದ್ದ.. ಇದೆಂತ ಡ್ರೆಸ್ ನಿನ್ನದು ಮೈ ಎಲ್ಲಾ ಕಾಣುತ್ತಿದೆ?? ಅಂತ. ಅದಕ್ಕೆ ಆ ಹುಡುಗಿ ಹೇಳಿದ್ದಳು ಅಯ್ಯೋ ಇದು ಫಾಶಿಒನ್ ಡ್ರೆಸ್  ಕಣೋ ತರುಣ್ ಎಂದು. ಹೌದಾ ನಮ್ಮಮ್ಮ ಮತ್ತೆ ನಮ್ಮ ಮನೆನಲ್ಲಿ ಮೈ ಕಾಣುವಂತ ಬಟ್ಟೆ ಹಾಕಿಕೊಂಡರೆ ಏನು ಮೈ ತುಂಬಾ ಬಟ್ಟೆ ಹಾಕಿಕೊಲ್ಲೋಕೆ ಆಗದೆ ಇರೋಷ್ಟು ದಾರಿದ್ರ್ಯ ಬಂತೇನೋ ನಮಗೆ ಅಂಥ ಬೈಒದನ್ನ ನೆನಪಿಸಿಕೊಂಡು ತರುಣ್ ಸುಮ್ಮನಾಗಿದ್ದ. ಆಗೆಲ್ಲ ಅಂತವರನ್ನ ಕಂಡಾಗ ಕನಿಕರ ಹುಟ್ಟುತಿತ್ತು. ನಂತರ ಬೆಳೆದು ದೊಡ್ದವನಗುತ್ತ ಹೋದಂತೆ ಅವಳು ಹೇಳಿದ್ದೆ ಸರಿ ಇದು ಈಗಿನವರ ಫಾಶಿಒನ್ ಎಂದು ತಿಳಿದಿತ್ತು. ಅಂತ ಜೀವನ ತನಗೆ ಬೇಡವೇ ಬೇಡ ಎಂದು ಮನದಲ್ಲೇ ನಿರ್ಧರಿಸಿ ಬಿಟ್ಟಿದ್ದ. ಆದರೆ ಏನು ಎಲ್ಲಾ ಇವನ ವಯಸ್ಸಿನವರು ಶಾಲಾ- ಕಾಲೇಜು ಮೆಟ್ಟಿಲು ಹತ್ತುವಾಗ ತಾನು ಏನು ಮಾಡಬೇಕೆಂದು ಸರಿಯಾದ ಮಾರ್ಗದರ್ಶಕರಿಲ್ಲದೆ.. ಕುರಿಯಂತೆ ತಾನು ಹಿಂಬಾಲಿಸಿದ್ದ. ಕ್ರಮೇಣ ಅದರಲ್ಲೇ ಹಿಡಿತ ಸಾಧಿಸಿ ಎಲ್ಲರಿಂದಲೂ ಗುರುತಿಸಿಕೊಳ್ಳುವನ್ತವನಾಗಿದ್ದ. ಹೀಗೆ ಪದವಿಯನ್ನು ಮುಗಿಸಿದ ಹುಡುಗ.. ತನ್ನ ಗೆಳೆಯರೆಲ್ಲ ಮುಂದೆ ಓದಲು ನಡೆದರೆ.. ಇವನಿಗೆ ಮುಂದೆ ಓದಿಸಿ ಅನ್ನಲು ಮನೆಯಲ್ಲಿಯ ಸ್ಥಿತಿ ತಿಳಿದು ಬಾಯಿ ಬರದೆ ಬೆಂಗಳೂರು ಎಂಬ ಮಾಯಾನಗರಿಗೆ ಮನೆಯವರೆಲ್ಲ ಕಳುಹಿಸಿಕೊಟ್ಟ ಮೇಲೆ ಬಂದಿದ್ದ. ಬರುವಾಗ ನೂರಾರು ಕನಸು ಅವನ ಜೊತೆಗಿತ್ತು.. ಹೇಗಾದರೂ ಮಾಡಿ ಸ್ವಲ್ಪ್  ದುಡ್ಡು ಮಾಡಿಕೊಂಡು ಬೇಗನೆ  ಊರಿಗೆ ವಾಪಸಾಗಬೇಕು. ಅಲ್ಲೇ ಏನಾದರು ಬಿಸಿನೆಸ್ ಮಾಡಬೇಕು.. ಒಟ್ಟಿನಲ್ಲಿ ಅಪ್ಪ ಅಮ್ಮನ   ಕೊನೆ ತನಕ ಚನ್ನಾಗಿ ನೋಡಿ ಕೊಳ್ಳಬೇಕು..  ಆದರೆ  ಈಗ ಏನು ಮಾಡಬೇಕೆಂದೇ ತಿಳಿಯದೆ ಚಿಕ್ಕದಾಗಿದ್ದ ರೂಮ್ನಲ್ಲಿ ಬೆಡ್ ಮೇಲೆ ಮಲಗಿ ಯೋಚಿಸುತ್ತಿದ್ದಾನೆ ತರುಣ್.      
                          ಈಗೊಂದು ಪುಟ್ಟ ಕೆಲಸ ಸಿಕ್ಕಿದೆ ಆದರೆ ಊರಲ್ಲಿ ಇದ್ದಾಗಿನ ಗೆಲುವು ಮಾಯವಾಗಿದೆ. ಹೌದು ಮುಂದೊಂದು ದಿನ ಉತ್ತಮವಾದ ಕೆಲಸ ಸಿಕ್ಕೆ ಸಿಗುವುದೆಂಬ ನಂಬಿಕೆ ನಮ್ಮ ತರುಣನಿಗೆ ಇದೆ. ಯಾಕೆಂದರೆ ಅವನು ಊರಲ್ಲಿ ಬುದ್ಧಿವಂತ ಅಂತ ಹೆಸರು ಮಾಡಿದ್ದವನು.. ಎಲ್ಲಾ ತರಗತಿಯನ್ನು ರಾಂಕ್ ಪಡೆಯದಿದ್ದರೂ ಪ್ರಥಮ ದರ್ಜೆ ಯಲ್ಲಿಯೇ ಪಾಸಾಗಿ ಬಂದವನು. ಆದರೆ ಅವನಿಗೆ ತಾನು ಏನು ಅಲ್ಲಾ ಅನ್ನೋದು ಈ ಮಾಯಾನಗರಿಗೆ ಬಂದಾಗಲೇ ಅರಿವಾದದ್ದು. ಯಾಕೆಂದರೆ ಕನ್ನಡ ಮಾದ್ಯಮದಲ್ಲಿ ಓದಿದ ಈ ಹುಡುಗನಿಗೆ, ಕನ್ನಡ ರಾಜಧಾನಿಯಲ್ಲಿ ಕನ್ನಡ ಬಂದವರು ಮಾತನಾಡಲು ಇಂಗ್ಲಿಶ್ ಅನ್ನೇ ಅವಲಂಬಿಸಿ,  ತಾವು ಪರಕೀಯರು ಎಂದು ತೋರಿಸಿ ಕೊಳ್ಳುವುದರಲ್ಲೇ ತಮ್ಮ ಜಾಣತನ ಆಡಗಿದೆ ಎಂದು ತೋರಿಸಿಕೊಟ್ಟಿದ್ದಾರೆ.  ಬೆಂಗಳೂರು ಎಂಬ ಚೆಲುವೆ ಅದೆಷ್ಟು ಜನರಿಗೆ ಆಶ್ರಯ ನೀಡಿದೆಯೋ ಯಾರಿಗೆ ಗೊತ್ತು. ನಮ್ಮ ತರುಣ ವಯಸ್ಸಿನ ತರುಣನಿಗೆ ಇಲ್ಲಿ ಆಶ್ರಯ ಸಿಗಲಾರದು ಎಂಬ ಚಿಂತೆ ಅಲ್ಲಾ.. ಈ ಬೆಂಗಳೂರು ಎಂಬ ಮಾಯಾನಗರಿಗೆ ಬಂದ ಹೊಸತರಲ್ಲಿ  ಎಲ್ಲರಿಗೂ ಕಾಡಿರಬಹುದಾದ ಚಿಂತೆ ಇದಾಗಿರಬಹುದು. ಕನಸು ಕಾಣುವ ವಯಸ್ಸಿನಲ್ಲಿ ಚಿಂತೆ ಆವರಿಸಿ ಇಬ್ಬಂದಿತನಕ್ಕೆ ಕಾರಣವಿದೆ..
                               ಈ ನಗರದಲ್ಲಿ   ಅವನು ಹಳೆಯ ತಲೆಮಾರಿನ ಜನರಿಂದ ಹಿಡಿದು.. ಇವನ ವಯೋಮಾನದ ಎಲ್ಲಾ ಜನರ ಮುಖವನ್ನ ನೋಡಿದ್ದಾನೆ.. ಯಾರಲ್ಲೂ ಹಳ್ಳಿಯ ಜನರಲ್ಲಿ ಕಾಣ ಬಹುದಾದ ಸಹಜ ಮಂದಹಾಸ ಕಂಡಿಲ್ಲ.. ಸದಾ ಏನೋ ಕಳೆದು ಕೊಂಡವರಂತೆ  ಕಾಣುವ ಮುಖಗಳು.. ದುಡ್ಡು ಮಾಡುವ ಏಕೈಕ ಉದ್ದೇಶದಿಂದಲೇ ತಾವು ಬದುಕಿದ್ದೇವೆ ಎಂಬಂತೆ ಕಾಣುವ ಜನರಿವರು.. ಅವರಂತೆಯೇ ತಾನು.. ಛೆ ಇದೊಂದು ಜೀವನವೇನು.. ಹಳ್ಳಿಯ ಜನರಿಗೆ ಆಸೆಗಳು ಎಷ್ಟೇ ಇದ್ದರು, ತಾವು ಬೆಳೆದ ಪೈರಿಗೆ ಸಮರ್ಪಕವಾದ ಬೆಲೆ ಎಂದು ದೊರೆಯದಿದ್ದರು. . ಆ ನೋವನ್ನು ನುಂಗಿ ತಾವು ಮಾಡುವ ಕೆಲಸದಲ್ಲಿ ನಿಷ್ಠೆಯಿಂದ ದುಡಿದು.. ಆತ್ಮ ತೃಪ್ತಿಯನ್ನ ಕಾಣುತ್ತ ನಗುತ್ತಾರೆ.. ಅಂತ ನಗು ತಿಂಗಳ ತಿಂಗಳ ನಿಯಮಿತವಾಗಿ ಸಂಬಾವನೆ ಪಡೆಯುವ ಈ ನಗರದ ಜನರಲ್ಲಿ ಕಾಣಲು ಸಾಧ್ಯವೇನು??? ಯಾವಾಗಲೂ ತೀರದ ಬಯಕೆಯಲ್ಲೇ ಜೀವನ ಸಾಗಿಸುವ ಈ ಬದುಕೇಕೆ ಅನ್ನಿಸುತ್ತಿದೆ.  ಮೊದ ಮೊದಲು ಒಂದು ಕೆಲಸ ಸಿಕ್ಕರೆ ಸಾಕು ಎಂಬ ಚಡಪಡಿಕೆ, ನಂತರ ಒಂದು ಓಡಾಟಕ್ಕೆ ಬೈಕ್ ಆದರು ಹೊಂದುವ ಬಯಕೆ. ಇವುಗಳ ನಡುವೆ ಮದುವೆಯ ಹಂಬಲ. ಅದು ಮುಗಿಯಿತು  ನಂತರ ಸ್ವಲ್ಪ ಮೇಲ್ದರ್ಜೆಗೆ ಹೋದನೆಂದರೆ ಒಂದು ಕಾರನ್ನಾದರೂ ಹೊಂದಬೇಕೆಂಬ ಬಯಕೆ. ಅದು ಮುಗಿದ ಮೇಲೆ  ಒಂದು ಸಣ್ಣ ಸೈಟ್ ಮಾಡಿ ಒಂದು ಪುಟ್ಟ ಮನೆಯನ್ನೇಕೆ ಕಟ್ಟಿಸಬಾರದು ತಾನು ಎಂಬ ಹಂಬಲಿಕೆ. ಅದು ಮುಗಿದ ಮೇಲೆ ಮತ್ತೊಂದು..ಇಷ್ಟಕ್ಕೆ ಜನ್ಮವೆಲ್ಲ ಮುಗಿಯುತ್ತ ಬಂದಿರುತ್ತೆ. ಇಷ್ಟಾದರೂ ಬಾಲ್ಯದಲ್ಲಿ ಕಾಣುತಿದ್ದ ಮಂದಹಾಸ ಆ ಮೊಗದಲ್ಲಿ ಕಾಣುವುದೇ ಇಲ್ಲಾ.. ಮತ್ತೇನೋ ಚಿಂತೆ.. ಬಹುಷ ತನ್ನ ಹೆತ್ತುರನ್ನ ಮರೆತೆನಲ್ಲ ಎಂಬುದಿರಬೇಕು.. ಈ ತರಹದ ಜೀವನ ಬೇಕೇನು??
                                   ಹೀಗೆ ಬದುಕ ಸವೆಸಿದರೆ ತಾನು ಕಂಡ ಕನಸು ನನಸಾಗುವುದಾದರು ಯಾವಾಗ ?? ಎಂಬುದೇ ತರುಣನ ಚಿಂತೆ. ಹಾಗೊಂದು ವೇಳೆ ಕೃಷಿ ಮಾಡಿಕೊಂಡೆ ಜೀವನ ನಡೆಸೋಣ ಅದರಿಂದ ನಾಲ್ಕಾರು ಜನರಿಗೆ ಕೆಲಸ ನೀಡುವಂತವನಗುತ್ತೇನೆ. ಆದರೆ   ಕೃಷಿ ಮಾಡಿಕೊಂಡು ಜೀವನ ನಡೆಸುವಷ್ಟು  ಜಮೀನು ಆತನ ತಂದೆಯ ಹತ್ತಿರವಿಲ್ಲ.. ಅದು ಅಲ್ಲದೆ   ಹುಟ್ಟ ಒಳ್ಳೆಯ ಓದುಗ ಎಂಬ ಖ್ಯಾತಿ ಬೇರೆ ಅಂತವನು ಮನೆಯ ಬದಿಯಲ್ಲೇ ಉಳಿದರೆ ಜನ ಏನೆಂದಾರು ??
               ಅವನು ಒಮ್ಮೊಮ್ಮೆ ಯೋಚಿಸುವುದುಂಟು ಯಾಕೆ ಕೃಷಿಕರಿಗಾಗಿ ಕೊಡ ಮಾಡುವ ಸಾಲದಲ್ಲಿ ಜಮೀನನ್ನು ಪಡೆದು, ಬೇಸಾಯ ಶುರುಮಾಡಬಾರದು. ಒಂದು ವೇಳೆ ಅದರಲ್ಲಿ ಸೋತೆ ಎಂದಾದರೆ.. ನಮ್ಮೂರಿನ ಜನ ಖಂಡಿತ ನಕ್ಕಾರು ಎಂಬ ಭಯ. ಕೃಷಿಕ ಕುಟುಂಬದಲ್ಲೇ ಜನಿಸಿದರು ಯಾವತ್ತು ತನ್ನ ಅಪ್ಪ ಅಮ್ಮನಂತೆ ಮೈ ಬಗ್ಗಿಸಿ ದುಡಿದವನಲ್ಲ.. ಕೆಲಸಕ್ಕೆ ಬಂದವರೋಟ್ಟಿಗೆ ಅಪ್ಪನೊಂದಿಗೆ ಹೊಗುತ್ತಿದ್ದನಾದರೂ ಅವರಂತೆ ಮೈ ಬಗ್ಗಿಸಿ, ಬೆವರು ಸುರಿಸಿ ದುಡಿದವನಲ್ಲ.. ಆದರೆ ಈಗ್ಯಾಕೋ ಅದೇ ಜೀವನ ನೆಮ್ಮದಿ ಅನ್ನಿಸುತ್ತಿದೆ.. ಆದರೆ ಪ್ರತಿ ವರ್ಷ ಅಪ್ಪ, ಚಿಕ್ಕಪ್ಪ ಎಲ್ಲಾ ಮಾತನಾಡುವುದನ್ನ ಕೇಳಿದ್ದಾನೆ.. ಚೊಲೋ ಮಾಡಿ ಓದಿಕಂಡು ಒಳ್ಳೆ ನೌಕರಿ ಸೇರರ್ರೋ ನಮ್ಮ ತರ ನೀವು ಆಗೋದು  ಬೇಡ ಅನ್ನೋ ದೊಡ್ಡವರ ಹಿತ ವಚನಗಳನ್ನ ಆದೆಷ್ಟೋ ಬಾರಿ ಕೇಳಿಸಿಕೊಂಡಿದ್ದಾನೆ.. ಆದರು ನಿಜವಾಗಿಯೂ ಅವರಷ್ಟು ಪುಣ್ಯಾತ್ಮರು ಮತ್ತೊಬ್ಬರಿಲ್ಲ.. ಅನ್ನಿಸುತ್ತಿದೆ.. ಈ ಹಾಳು ಪೇಟೆ ಜೀವನಕ್ಕಿಂತ. ಅವರ ಜೀವನ ಎಷ್ಟೋ ಮೇಲು ಅನ್ನಿಸುತ್ತಿದೆ.. 
               .

Wednesday, October 27, 2010

ಮನದ ತುಮುಲ

ಮನದ ತುಮುಲ :
 ಪ್ರೀತಿಯ ಮನದ ಒಡತಿಯೇ,
                       ನಿನಗೆ ಹೀಗೊಂದು ಪತ್ರ ನಾನು ಬರೆದದ್ದು ನೆನಪಿದೆಯೇನು???  ಈ ಪತ್ರ ಬರೆಯಲು ಕಾರಣವಾದ ನಿನ್ನ ಪತ್ರವನ್ನ ನಾ ಅದೆಷ್ಟೋ ಬಾರಿ ಓದಿ ನಕ್ಕಿರುವೆ.. ಅತ್ತಿರುವೆ.. ಅದು ಮೊದ ಮೊದಲು ನಾವು ಪತ್ರ ಮುಖೇನ ಕ್ಷೇಮ ಸಮಾಚಾರ ಆರಂಭಿಸಿದಾಗಿನದು.. 
                        ಆ ನೀ ಕಳುಹಿಸಿದ ಪತ್ರ ನೋಡಿ ದಂಗಾಗಿದ್ದೆ. ಅದಕ್ಕೆ ಆ ಪತ್ರವನ್ನ ಮತ್ತೊಮ್ಮೆ ಬರೆಯುವ ತವಕ. ಹಾಗೇ ತಮಗೆ ಮತ್ತೊಮ್ಮೆ ಕೊರೆತ 
                ಪ್ರಿಯೆ, ರಾಣಿ, ಸುಂದರಿ, ಗುಬ್ಬಚ್ಚಿ, ಸಹಜ ಸುಂದರಿ, cute ಗರ್ಲ್, ಚೆಲುವೆ, ರಾಜಕುಮಾರಿ, ಹಃ ರಾಜಕುಮಾರಿ ಎಂಬ ಶಬ್ದ ತುಂಬಾ ಒಪ್ಪುತ್ತದೆ ಕಣೆ ನಿನಗೆ ಸಹಜ ಸ್ಥಿತಿಯಲ್ಲಿ ನೀನು ರಾಜಕುಮಾರಿ.. ಅದೇ ಕೊಪಿಸಿಕೊಂಡಿದ್ದಾಗ ಬರೆ ಮಾರಿ.. ಎಂದೆಲ್ಲಾ ನನ್ನ ಪತ್ರದಲ್ಲಿಯಾ ಬ್ರಹ್ಮ ಲಿಪಿಯಲ್ಲಿ ಗಿಚಿಯಿರುವದನ್ನ ಅರ್ಥೈಸಿಕೊಂಡು   ನೀನು ಒಗಟಾಗಿ ನನ್ನ ಪ್ರಶ್ನೆ ಕೇಳಿದ್ದೆ.. ಏನು ಹಾಗೆಲ್ಲ ಕರೆಯುತ್ತಿಯೇ??? ಇದರ ಅರ್ಥವೇನು ಎಂದು??? 
              ಹುಂ ಆಗೋ ಏನೇನೋ ಸಬೂಬು ಹೇಳಿದರು ಕೇಳದೆ ನಂತರ ಉತ್ತರವನ್ನು ಚಾಪಿಸಿದ್ದೆ ಅಲ್ಲವೇ???  ಹಾಗೇ ಕರೆಯಬೇಕೆನ್ದೆನಿಸಿತು ಕರೆದೆ. ಹೇ ನಿಜ ಹೇಳಲೆನೇ.. ಇದುವರೆಗೂ ನನ್ನ ಬಾಳಿನಲ್ಲಿ ಹಾಗೇ ಕರೆಸಿಕೊಂಡಿರುವವ್ರು ಯಾರದ್ರು ಇದ್ದರೆ ಅದು ನೀನು ಮಾತ್ರ. ಅದು ನಿನ್ನ ದುರ್ವಿಧಿ ಅಂಥ ಬೇಕಾದರು  ಅಂದುಕೋ.. 
                ಹೇ ಈ ನನ್ನ ಸ್ಥಿತಿಯನ್ನ ಹೇಳ ಬಯಸುತ್ತೇನೆ ನನ್ನ ಅರಗಿಣಿ, ಮೇಲ್ವರ್ಗದ ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದ ನನಗೆ ಮಾತ್ರ ಹೀಗೆ ಅನ್ನಿಸುವುದೋ ಅಥವಾ ನನ್ನ ಅಂಥ ಎಲ್ಲಾ ಹುಡುಗರಿಗೂ ಹೀಗೆ ಅನ್ನಿಸುವುದೋ ಗೊತ್ತಿಲ್ಲ.. ಮೊದಲೇ ಹೇಳಿ ಬಿಡುತ್ತೇನೆ ಅದೇನೋ ಅಂತಾರಲ್ಲ ಬಿಸಿ ತುಪ್ಪ ಬಾಯಿಯಲ್ಲಿ ಹಾಗಿದೆ ನನ್ನ ಸ್ಥಿತಿ. ನಿನ್ನನ್ನ ಕಳೆದು ಕೊಳ್ಳಲು ಮನಸಿಲ್ಲ. ಹಾಗೇ ನೀನು ಅಥವಾ ನಿನ್ನ ಅಂಥಹ ವಿದ್ಯಾವಂತ ತರುಣಿಯರು ಬಯಸುವ ಆರ್ಥಿಕ ಶ್ರೀಮಂತಿಕೆಯನ್ನು ನಾನು ಕೇಳಿಕೊಂಡು ಬಂದಿಲ್ಲ ಕಣೆ. ನೀನು ಬೇಕೇ ಬೇಕು ಅಂಥ ಹೇಳಿ ನಾನು ಏನಾದರೂ ನಮ್ಮಿಬ್ಬರ ಈ ಸಂಬಂಧಕ್ಕೆ "ಲವ್" ಎಂಬ ಬಣ್ಣ ಹಚ್ಚಿ ನಿನ್ನ ಮುಂದೆ ನಿವೇದಿಸಿದರೆ ಮುಗಿದೇ ಹೋಯಿತು. 
                    ನೀನು ಆಗ ನೀಡುವ ಉತ್ತರವನ್ನ ನಾನು ಇಗಲೇ ಊಹಿಸಬಲ್ಲೆ ನನ್ನ ಗೆಳತಿಯೇ.. ನೀನು ಆಗ  ಏನೋ ನೀನು ಇಂಥ ಮನುಷ್ಯ ಅಂದು ಕೊಂಡಿರಲಿಲ್ಲ. ಚೀ..  ನೋಡೋ ಇವತ್ತೇ ಲಾಸ್ಟ್ ಇನ್ನುಮುಂದೆ ನನ್ನ ಹತ್ರ ಮಾತಾಡಲು ಬೇಡ ಯಾವದೇ ರೀತಿ ಕಾಂಟಾಕ್ಟ್ ಕೂಡ ನಮ್ಮಿಬ್ಬರ ನಡುವೆ ಬೇಡ ತಿಳಿತ?? ಅಂಥ ಮುಖದ ಮೇಲೆ ಹೊಡೆದಂತೆ ಮಾತನಾಡಿ ಒಂದೇ ಮಾತಿನಲ್ಲಿ ನಮ್ಮಿಬ್ಬರ ನಡುವಿನ ಗೆಳೆತನವನ್ನ ಕಡಿದು ಹಾಕಿ ಒಮ್ಮೆಯೂ ತಿರುಗಿ ನೋಡದೆ ಹೋಗಬಲ್ಲೆ ಎಂಬುದ ನಾ ಬಲ್ಲೆ.  ಹಾಗೇ  ಹೇಳಿಸ್ಕೊಂಡು ಜೀವನ ಪರ್ಯಂತ ನಿನ್ನಿಂದ ದೂರವಗಿರೋದ್ಕಿಂತ  ಈಗ ಹೇಗಿದ್ದಿವೋ ಹಾಗೇ ಇರೋದ್ರಲ್ಲೇ ತುಂಬಾ ಸುಖ ಅನ್ನಿಸ್ತಿದೆ ಕಣೆ. ಯಾಕಂದ್ರೆ ನಾನು ಒಂದು ವೇಳೆ ಹಾಗೇ ನಿನ್ನಲ್ಲಿ ನಿವೇದಿಸಿಕೊಂದಾಗ ನೀನು ನೀಡಬಹುದಾದ ಉತ್ತರ ತಪ್ಪು ಅಂಥ ನನಗೆ ಅನ್ನಿಸೋಲ್ಲ ಯಾಕಂದ್ರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಇಷ್ಟಗಲಿರುತ್ತಲ್ವ?? 
       ಹೇ ನಾನು ಹೀಗೆಲ್ಲ ಮಾತಾಡ್ತಾ ಇದ್ದೀನಿ ಅಂಥ ತಪ್ಪು ತಿಳಿಬೇಡ, ಈ ಹದಿ ಹರೆಯದ ವಯಸ್ಸಿನಲ್ಲಿ ಬಯಸುವ ದೈಹಿಕ ತೃಪ್ತಿ ಬೇಕಾದರೆ ಮುಂದೊಂದು ದಿನ ಸಿಗಬಹುದು. ಸಿಗದೇ ಹೋದರು ಪಡಿಬಹುದು. ಆದರೆ ಮನಸಿಗೆ ಮುದ ನೀಡ ಬಹುದಾದ ಮಧುರ ಮಾತುಗಳು, ಪರಸ್ಪರ ಕಾಳಜಿ, ಪ್ರೀತಿ, ಸುಂದರ  ಬದುಕಿಗೆ ಬೇಕಾದ ಪ್ರೋತ್ಸಾಹದಾಯಕ  ಸಾಹಚರ್ಯ ಸಿಗಬೇಕು ಅಂತಾದ್ರೆ ಅದರ ಅರ್ಥಗೊತ್ತಿರೋ ಹಾಗೂ ಅಂಥ ಹೃದಯ ಇರೋ ನಿನ್ನ ಅಂಥವರೇ ಬೇಕು. 
               ಅಂಥ ನಿನ್ನನ್ನ ಕಳಕೊಂಡು ಬದುಕೋದು ಹೇಗೆ ಸುಂದರಿ.. ಅದಕ್ಕೆ ಹೇಳಿದ್ದು. ನನಗೆ ಆ ಲವ್ ಅನ್ನೋ ಸಂಬಂಧ ಹಚ್ಚಿ ನಿನ್ನ ಸಂಬಂಧ ಕಳಕೊಲೋಕೆ  ನನಗೆ ಇಷ್ಟ ಇಲ್ಲಾ.. 
                    ಎಲ್ಲಾ ಗೊಂದಲ ಗೊಂದಲಮಯವಾಗಿದೆಯ?? ಏನು ಮಾಡೋದು ಹೇಳು ಹೇಳಿ ಕೇಳದೆ ಈ ಭೂಮಿ ಮೇಲೆ ಹುಟ್ಟಿ ಬಿಟ್ಟಿದಿನಿ.. ಅದು ನಿನ್ನ ಪರಿಚಿತನಾಗಿ. ಈಗ ನಿನ್ನ ಕಳಕೊಲೋಕೆ ನನಗೆ ಸುತರಾಂ ಇಷ್ಟ ಇಲ್ಲಾ.. ಕಣೆ..   
                   ಇಷ್ಟಕ್ಕೂ ಒಂದು ವಿನಂತಿ ನೀನು ನನ್ನ ಈ ಸ್ಥಿತಿಯನ್ನು ಒಪ್ಪಿ ಕೂಡ ನನ್ನೊಟ್ಟಿಗೆ ಸಾಥ್ ನೀಡುವೆ ಎಂದರೆ.. ನಾನು ನಿನಗೆ ಚಿರಋಣಿ.


                                               ಇಂತಿ ನಿನ್ನ ಪ್ರೀತಿಯ
                                                        ಬೆನಕ 


  
                       

Friday, October 22, 2010

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು...3

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು..
೩  
                                         
             ನಮ್ಮ  ಯಜಮಾನನ ಮನೆಯಲ್ಲಿ  ಎಂದಿನಂತೆ... ಹೋದೆ.. ಇಂದು ನಾನು ಇನ್ನೂ ಮುಂದೆ ನಿಮ್ಮಲ್ಲಿ ಕೆಲಸ ಮಾಡಲಾರೆ ಎಂದು ಹೇಳೇ ಬಿಡಬೇಕು ಅನ್ನಿಸಿದರು.. ಬಾಯಿ ಯಾಕೋ ಸಹಕರಿಸಲಿಲ್ಲ.. ಮಾಮೂಲಿನಂತೆ ಕೆಲಸ ಮಾಡಿದೆ.. ನಮ್ಮ ಯಜಮಾನರಿಗೆ ಯಾಕೋ ಅಶ್ವಿನ ಮೇಲೆ ಸಿಟ್ಟು ಆರಿದಂತಿತ್ತು.. ಬಹುಶಃ ಅವನಿರದಿರುವ ದಿನಗಳಲ್ಲಿ ಯಾವದೋ ಸೂಳೆಯರೊಂದಿಗೆ ಮಜಾ ಮಾಡಿರಬೇಕು.. ಅಥವಾ ಅಶ್ವಿನನ ಊರಿನಿಂದಲೇ  ಬಂದಿರುವ ಇಲ್ಲಿನ ಎಲ್ಲಾ ಸ್ಥಿತಿಗೂ  ಹೊಂದಿಕೊಂಡಿರುವ ಕೆಲವೊಮ್ಮೆ ನನಗೆ ಹೇಸಿಗೆ ಹುಟ್ಟಿಸುವನ್ತೆಲ್ಲ ನಮ್ಮ ಯಜಮನನೊಂದಿಗೆ ನಡೆದು ಕೊಳ್ಳುವ  ಶರತ್ ಎಂಬ ಹುಡುಗ ಚನ್ನಾಗಿ ಯಜಮಾನನ ಸೇವೆ ಮಾಡಿರಬೇಕು.. ಹಲವು ಬಾರಿ ಯೋಚಿಸಿದ್ದಿದೆ..  ಇಬ್ಬರು ಒಂದೇ ಕಡೆಯಿಂದ ಬಂದರು.. ಇವರಿಬ್ಬರ ನಡುವೆ ಅದೆಂತಾ ಭಿನ್ನತೆ.. ಹಲವು ಬಾರಿ ಅವರಿಬ್ಬರ ನಡುವೆಯೇ ಅದೇ ಯಾವುದೊ ಹವ್ಯಕ ಭಾಷೆಯಂತೆ ಅದ್ರಲ್ಲಿ ವಾಗ್ಯುದ್ದ ನಡೆಯುತ್ತದೆ.. ಅದನ್ನೆಲ್ಲ ಮೊದ ಮೊದಲು ತಮಿಳಿಗೆ ಹೊಂದಿಸಿ ಹೇಳುತ್ತಿದ್ದವನು ಶರತ್. ಅವನು ಇವನಂತೆ ಬಲು ಬೇಗ ತಮಿಳು ಕಲಿತವನು.. ಅಶ್ವಿನ ತಮಿಳು ಲಿಪಿಯನ್ನು ಕಲಿತ ಜೊತೆಗೆ ನನಗು ಕನ್ನಡ ಹೇಳಿಕೊಟ್ಟ. ಅವನ ಹತ್ತಿರ ಎನಗಬೇಕೆನ್ದಿರುವೆ ಎಂದು ಕೇಳಿದಾಗ ಟೀಚರ್ ಆಗಬೇಕೆಂಬ ಆಸೆ ಇದೆ ಕಣೋ. ಎಂದಿದ್ದ.. ಖಂಡಿತ.. ಅವನೇನಾದರೂ ಶಿಕ್ಷಕನಾದರೆ ಖಂಡಿತ ಒಬ್ಬ ಆದರ್ಶ ಶಿಕ್ಷಕನಾಗುವುದರಲ್ಲಿ ನನಗಂತೂ ಅನುಮಾನವಿರಲಿಲ್ಲ...ಅಷ್ಟು ಚನ್ನಾಗಿ ನನಗೆ ಕನ್ನಡ ಕಲಿಸಿ ಕೊಟ್ಟಿದ್ದ..  ಅವನು ತಮಿಳು ಲಿಪಿಯನ್ನು ಕಲಿತದ್ದು , ನಂತರ ತಮಿಳು ಪತ್ರಿಕೆಯನ್ನ ಓದ ತೊಡಗಿದ್ದನ್ನು    ಕಂಡ ನಮ್ಮ ಯಜಮಾನ ಅಭಿಮಾನದಿಂದ ಬೇಶ್ ಅಂದಿದ್ದರು.. ಅದನ್ನ ಕಂಡು.. ನಮಗೆಲ್ಲ ಆಶ್ಚರ್ಯವಾಗದೆ ಇರಲಿಲ್ಲ.. ಒಮ್ಮೊಮ್ಮೆ.. ನಮ್ಮ ಯಜಮಾನನು ಒಳ್ಳೆಯವನಂತೆ ಕಾಣಿಸುತ್ತನಲ್ಲ ಎಂದು.. ಅದಕ್ಕೆ ಆಗ  ನನ್ನ ಮಿತ್ರ ಹೇಳಿದ್ದು ನೆನಪಿಗೆ ಬರುತ್ತಿದೆ.. ದೋಸ್ತ  ಯಾರು ಕೆಟ್ಟವರಲ್ಲ ಪರಿಸ್ತಿತಿ ಕೆಟ್ಟವರ್ನ್ನಗಿಸುತ್ತದೆ. 
                            ಮದುವೆ ಮುಗಿಸಿ ಬಂದು ಒಂದೆರಡು ದಿನ ಕಳೆದಿರಬಹುದು ಅಂದು ರಾತ್ರಿ ಮದಿರೆಯ ಸೇವನೆಗೆ ಕುಳಿತಿದ್ದರು ನಮ್ಮ ಸಾಹುಕಾರ. ಪಕ್ಕದಲ್ಲಿ ನಾನು ಮತ್ತೆ ಶರತ್ . ಲೋಟಕ್ಕೆ ಮದಿರೆಯನ್ನ ಎರಸಿ ಕುಡಿಸುತ್ತಿದ್ದೆವು. ಅಶ್ವಿನ್ ಮಾತ್ರ ಎದುರಿನಲ್ಲಿ ಇರಲಿಲ್ಲ.. ಅವನು ಸಂದ್ಯವಂದನೆಗೆಂದು ಅವನೇ ತಂದಿಟ್ಟುಕೊಂಡಿದ್ದ.. ದೇವರ ಫೋಟೋ ಮುಂದೆ ಕುಳಿತಿದ್ದ. 
                            ಆಗ ಅಶ್ವಿನ್ ನ ಬಗ್ಗೆ ಮಾತನಾಡ ತೊಡಗಿದರು. ನಮ್ಮ ಬಾಸ್ ಏನೇನೋ ತಮ್ಮ ಕೀಳು ಶಬ್ದಗಳಿಂದ ಅವನನ್ನ ವರ್ಣಿಸುತ್ತಿದ್ದರು. ನನ್ನ ಸೇವೆ ಮಾಡೋಕೆ ಅಂಥ ಕರ್ಕೊಂಡು ಬಂದ್ರೆ ಇವನ ಸೇವೆನೆ ನಾನು ಮಾಡ ಬೇಕಾಗಿದೆ.. ಎಂದು ಮುಂತಾಗಿ ಮಾತನಾಡುತ್ತಿದ್ದರು.ಅದಕ್ಕೆ ಶರತ್ ಧ್ವನಿಗೂಡಿಸುತ್ತಿದ್ದ. ಅಷ್ಟರಲ್ಲಿ ಅಶ್ವಿನ್ ಅಲ್ಲಿಗೆ ಬಂದ.. ಅದನ್ನ ಕಂಡ ನಮ್ಮ ಬಾಸ್ ನ ನಾಲಿಗೆ ತಕ್ಷಣ ಹೊರಳಿ ಅವನ ಬಗ್ಗೆ ಪ್ರೀತಿ ಹೆಚ್ಚಿ ಬಿಟ್ಟಿತು. ಹಾಗೇ ಪ್ರೀತಿಯಿಂದ ಅವನನ್ನು ತಮ್ಮ ಪಕ್ಕ ಕರೆದು ಕೂಡ್ರಿಸಿಕೊಂಡರು ಬೆಣ್ಣೆಯಲ್ಲಿ ನೂಲು ತೆಗೆದಂತೆ ಅವನೊಟ್ಟಿಗೆ ಹರಟ ತೊಡಗಿದರು. ಅವನ ಕನಸುಗಳ ಬಗ್ಗೆ ಕೇಳಿದರು ಅವನು ಟೀಚರ್ ಆಗಬೇಕೆಂಬ ಆಸೆ ಇದೆ ಎಂದ. ಅದಕ್ಕೆ ಅವರು ಕುಡಿದ ಅಮಲಿನಲ್ಲಿ ಟೀಚರ್ ವೃತ್ತಿಯ ಬಗ್ಗೆ ಕೇವಲವಾಗಿ ಮಾತನಾಡಿ ಬಿಟ್ಟರು. ಅದನ್ನ ಕಂಡು ಅಶ್ವಿನ ಮುಖ ಕೆಂಪಗುತ್ತಿರುವುದು ಕಂಡಿತು. ನಂತರ ಕಲಾಮಜೀ ಅವರ ಯಾವುದೊ  ಒಂದು ನುಡಿಮುತ್ತು ಊದುರಿಸಿ ಯಾವತ್ತು ನಮ್ಮ ಕನಸು ದೊಡ್ಡದಾಗಿರಬೇಕು ಆತಿ ಚಿಕ್ಕ ಗುರಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದೆಲ್ಲಾ ಅವನ ತಲೆ ಸವರ ತೊಡಗಿದರು.ನಂತರ ತಾವು ಕುಡಿಯುತ್ತಿದ್ದ ಮದಿರೆಯ ಲೋಟವನ್ನ ಅವನ ಬಾಯಿಯ ಹತ್ತಿರ ತಂದರು. ಆಗ ಪರಿಸ್ಥಿತಿ ವಿಕೋಪ ತಲುಪಿತು. ನಾನು ಈಗ ಅಶ್ವಿನ್ ಅನ್ನು ತಡೆಯುವಷ್ಟು ಆತನಿಗೆ ಆತ್ಮಿಯನಗಿದ್ದೆ ಆದರೆ ನಮ್ಮ ಬಾಸ್ ಗೆ ಏನು ಎದುರೇಟು ನೀಡುತ್ತಾನೆ ಎಂದು ನೋಡಲೇ ಬೇಕಾಗಿತ್ತು. ಅದು ಅಲ್ಲದೆ ಅವನು ನನ್ನ ಮಾತನಾಡುವ ಬಾಯಿ ಆಗಿದ್ದ.  ಅಶ್ವಿನ ಆ ಲೋಟವನ್ನು ಕಸಿದು ಕೊಂಡು ದೂರದಲ್ಲಿ ಇಡಲು ಹೋದಾಗ ಅದರಲ್ಲಿರುವ ಮದಿರೆ ತುಳುಕಿ ನಮ್ಮ ಬಾಸ್ ಮೇಲೆ ಚೆಲ್ಲಿ ಅವರ ಮುಖ ಕಪ್ಪಿಟ್ಟಿತು.. ಸಿಟ್ಟಿನಲ್ಲಿ ಅವನ ಮೇಲೆ ಕೈ ಮಾಡ ಹೋದರು. ಅವರ ಕೈ ಹಿಡಿದು ಕೊಂಡ.. ಅಶ್ವಿನ್  ತನ್ನ ವಾಗ್ಜರಿಯನ್ನ ಆರಂಭಿಸಿದ. " ಏನೋ ಅಂದೇ  ಟೀಚರ್ ಅಂದರೇ ಏನು ಅಂಥ ತಿಳಿದಿದಿಯ ನೀನು. ಒಂದು ಮಾತು ನೆನಪಿಟ್ಟಕೋ ಇವತ್ತು ನೀನು ದೊಡ್ಡ ಹೆಸರು ಮಾಡಿರಬಹುದು. ಸುಪ್ರಿಂ ಕೋರ್ಟ್ ಲಾಯೆರ್ ಆಗಿರಬಹುದು. ಅದಕ್ಕೆಲ್ಲ ತಳಹದಿ ಆಗಿ ನಿಂತಿರೋರಲ್ಲಿ ಟೀಚರ್ ಪ್ರಮುಖ. ನಿನ್ನ ಹೆತ್ತ ತಂದೆ ತಾಯಿಗಾದ್ರೂ ನಿನ್ನ ಬೆಳೆಸೋದ್ರಲ್ಲಿ ಮಗ ಮುಂದೆ ತಮ್ಮನ್ನ ಚನ್ನಾಗಿ ನೋಡ್ಕೋಬೇಕು ಅಂಥ ಅನ್ನೋ ಸ್ವಾರ್ಥ ಇರುತ್ತೆ.. ಆದರೆ ಅದೇ ಟೀಚರ್ ಗೆ ಯಾವ ಆಸೆ ಇರುತ್ತೆ.. ತಿಂಗಳ ಸಂಬಳ ಕಲಿಸದೆ ಹೋದರು ಅವರ ಕೈ ಸೇರುತ್ತೆ. ಆದರು ಅವರು ತಮ್ಮ ಮಕ್ಕಳಂತೆ ನಮ್ಮನ್ನ ತಿದ್ದುತಾರೆ. ಒಂದು ವೇಳೆ ನಿನಗೆ ಒಳ್ಳೆ ಟೀಚರ್ ಸಿಗದೇನೇ  ಅವರು ನಿನಗೆ ಮದಿರೆ ಕುಡಿ ಸ್ಟೇಟಸ್ ಬರುತ್ತೆ ಅನ್ನೋ ಹಿತವಚನ ಹೇಳಿ ಮದಿರೆ ಬಾಟಲ್ ನಿನ್ನ ಕೈ ಹಿಡಿಸಿದಿದ್ರೆ ನೀನು ಇಷ್ಟೊತ್ತಿಗೆ ಯಾವ ಮೊರಿನಲ್ಲಿ ಕುಡಿದು ಬಿದ್ದಿರ್ತಿದ್ಯೋ ಏನೋ.. ದೇಶಕ್ಕೆ ಸುಸಂಸ್ಕ್ರತ ಪ್ರಜೆಗಳನ್ನ ಕೊಡಬೇಕು ಅಂತ ಅಂದ್ರೇ ಅದಕ್ಕೆ ಟೀಚರ್ ಪಾತ್ರ ಬಹು ದೊಡ್ಡದು.. ಹೌದು ನೀನು ಹೇಳೋದು ಕೆಲವಷ್ಟು ನಿಜ.  ಅದರಲ್ಲಿ ನೀನು ಗಳಿಸಿದಷ್ಟು ಹಣ ಹೆಸರು ಗಳಿಸಲಿಕ್ಕೆ ಆಗದೆ ಇರಬಹುದು.. ಆದರೆ ನೆಮ್ಮದಿ ಇದೆ. ಸಾಯೋ ಕಾಲದಲ್ಲಿ ನಮ್ಮ ಕೈ ಹಿಡಿದವಳು ನಾವು ಹೆತ್ತ ಮಕ್ಕಳು ಎಲ್ಲರಿಂದ ದೂರಾಗಿ ಬದುಕೋ ನಿನ್ನ ಅಂಥ ಬೀದಿ ನಾಯಿ ಪಾಡು ಖಂಡಿತ ಬರಲ್ಲ ಅನ್ನೋ ನಂಬಿಕೆ ಇದೆ. ಹಾಗೇ ನಾನು ಇಲ್ಲೇ ನಿನ್ನ ಕೈ ಕೆಳಗೆ ಜೀತ ಮಾಡ್ಕೊಂಡಿದ್ರೆ ಆ ಸುಖಾನು ಸಿಗೋಲ್ಲ ನಿನ್ನ ಸ್ಟೇಟಸ್ ಕೂಡ ಕನ್ನಡಿಯ ಗಂಟಾಗಿ ಬಿಡುತ್ತೆ.. ಸಿಕ್ಕದ್ರು ಅದು ನೀ ಕೊಟ್ಟ ಭಿಕ್ಷೆ ಆಗಿರುತ್ತೆ.. ಅದೆಲ್ಲ ನನಗೆ ಬೇಡ. ನಾನು ಊರಿಗೆ ಹೋಗ್ತೀನಿ. ನನ್ನ ಹತ್ರ ಇವಾಗ ಊರಿಗೆ ಹೋಗೋಷ್ಟು ದುಡ್ಡಿಲ್ಲ ಕೊಡಿ ನಂತರ ನಿಮ್ಮ ಅಕೌಂಟ್ ಗೆ  ಜಮ ಮಾಡ್ತೀನಿ. ಇಲ್ಲಿ ನಾನು ಕೆಲಸ ಕೂಡ ಮಾಡಿರೋದ್ರಿಂದ ಊಟ ಮಾಡಿರೋದಕ್ಕೆ ಅಂತ ನಾನೇನು ನಿಮಗೆ ಕೊಡೋದು ಇಲ್ಲಾ ಅಂದ್ಕೋತೀನಿ. ಹಃ ಹಾಗೇ ನಮ್ಮ ಬಾಲಾಜಿಗೂ ಈ ಬದುಕು ಸಾಕಾಗಿದೆ. ಅವನನ್ನ ಅವರ ಮನೆಗೆ ಕಳಿಸಿಕೊಡಿ. ಅವನು ನಿಮಗೆ ಕೊಡ್ಬೇಕಿರೋ ಹಣಾನ ಕಂಡಿತ ಅವನೇ ಸ್ವತಂತ್ರವಾಗಿ ದುಡುದು ತೀರಿಸ್ತಾನೆ. ಅದರಲ್ಲಿ ನಂಬಿಕೆ ಇರಲಿ. ಯಾಕಂದ್ರೆ ಅವನು ನನ್ನ ಹಾಗೇ  ಸಾಕಸ್ಟು ಕನಸ ಕಂಡಿದಾನೆ. ದಯಮಾಡಿ ಅದನ್ನ ಚಿವುಟಿ ಹಾಕದೆ ಚಿಗುರಲು ಬಿಡಿ. ಖಂಡಿತ ನೀವು ನಮ್ಮ ಅಂಥ ಅಮಾಯಕರನ್ನ ಓದುಸ್ತಿವಿ ಅಂಥ ಕರೆಸ್ಕೊಂದು ಅವರ ಓದಿಗೆ ತಿಲಾಂಜಲಿ ಇಡೋ ಹಾಗೇ ಮಾಡಬೇಡಿ.  ಬೇಕಾದರೆ ದಿನ ರಾತ್ರಿ ಬರ್ತಾರಲ್ವ ಅಂಥವರನ್ನ ಯಾರನ್ನಾದರು ಖಾಯಮ ಆಗಿ ಇರಿಸಿಕೊಳಿ. ಆದರೆ ಅವರಿಗೂ ಒಂದು ಕನ್ಸಿರುತ್ತೆ ಅನ್ನೋದನ್ನ ಮರಿಬೇಡಿ.. ಅದಕ್ಕಿಂತ ನಿಮ್ಮ ಹೆಂಡತಿ ಮಕ್ಕಳ ಸಂಗಡ ಬದುಕೋದು ಎಸ್ಟೋ ಉತ್ತಮ. ಪ್ರೀತಿ ಮತ್ತೆ ನೆಮ್ಮದಿನ ಹಣದಿಂದ ಮತ್ತೆ ಬಲವಂತವಾಗಿ ಯಾರಿಂದಲೂ ಕಿತ್ತ್ಕೊಲೋಕೆ ಆಗಲ್ಲ ಅನ್ನೋದು ದೊಡ್ಡವರಾದ ನಿಮಗೆ ಗೊತ್ತು. ಇಲ್ಲಿ ನಿಮಗೆ ಗುಲಾಮರಾಗಿ ದುಡಿತ ಇರೋ ಯಾರೊಬ್ಬರಿಗೂ ನಿಮ್ಮ ಮೇಲೆ ನಿಜವಾದ ಪ್ರೀತಿ ಇಲ್ಲಾ.. ಇದ್ದಿದ್ದರೆ ಇಷ್ಟು ನಿಮ್ಮ ಬಗ್ಗೆ ಮಾತಾಡ್ತಾ ಇರೋ ನನ್ನನ್ನ ಹೊಡೆದು ಹಾಕ್ತಿದ್ರು.. ಇಲ್ಲಾ ಕೊಲೇನೆ ಮಾಡ್ತಿದ್ರು.. ಅಲ್ಲವ ಸರ್??"
ಇಷ್ಟು ಹೇಳಿ ಬಾಟಲ್ ನಲ್ಲಿದ್ದ ನೀರನ್ನ ಕುಡಿದು ನಾಳೆ ಹೊರಡ್ತೀನಿ..ಸರ್. ನನ್ನ ಜೊತೆ ಬಾಲಾಜಿನ ಬಸ್ ಸ್ಟಾಪ್ ವರೆಗೂ ಕಳುಹಿಸಿ ಕೊಡಿ.
ಎಂದು ಎದ್ದು ಮಲಗುವ ಕೋಣೆಗೆ ನಡೆದ. 
                   ನಂತರ ನನ್ನ ಕರೆದು ಅವನ ಬ್ಯಾಗಿನಲ್ಲಿ  ೩೦೦ ರೂಪಾಯಿ ಇದೆ.. ಮೈಸೂರ್ ವರೆಗೆ ಹೋಗಲು ಇನ್ನೂ ೧೫೦ ರೂಪಾಯಿ ಬೇಕು ಅದನ್ನ ಅವನಿಗೆ ಕೊಡು. ಮೈಸೂರಿಗೆ ಹೋಗುವ ನಾಳೆ ರಾತ್ರಿಯ ಬಸ್ ಗೆ ಹತ್ತಿಸಿ ಬಾ. ಊಟ ತಿನ್ದಿಗೆನು ಕೊಡೋದು ಬೇಡ.. ಹ್ಯಾಗೂ ಆ ಭಟ್ರು ಮನೆಯಿಂದ ತಾನೆ ಕರ್ಕೊಂಡು ಬಂದಿರೋದು ಅಲ್ಲಿವರೆಗೆ ಕಳಸದ್ರೆ ಆಯ್ತು. ಇಂಥ ನಾಲಯಕಗಳ ಮಾತನ್ನೆಲ್ಲ ಕೇಳಿ ತಲೆ ಹಾಳು ಮಾಡ್ಕೋ ಬೇಡ.. ತಿಳಿತ. ಎಂದರು. ಅಲ್ಲಾ ಅಶ್ವಿನ್  ಹತ್ತಿರ ಇರೋ ಬಿಡಿಗಾಸನ್ನು ಸಹ ಕದ್ದು ನೋಡಿದ್ದಾರಲ್ಲ ಎಂಥ ಮನುಷ್ಯ ಇರಬಹುದು. ಇವನು. ಅನ್ನಿಸಿ ಸರಿ ಎಂದು ಹೋಗಿ ಮಲಗಿದೆ.
                             ಅಲ್ಲಿಂದ ಮಾರನೇ ದಿನ ರಾತ್ರಿ ಅಂದರೇ ನವೆಂಬರ್ ೧೪ ರ ರಾತ್ರಿ  ಲಗೇಜ್ ಹಿಡಿದು ಅಶ್ವಿನ್ ಜೊತೆ ಹೊರಟೆ. ಮನೆಯಿಂದ  ಹೊರಡುವಾಗ ಅಶ್ವಿನ್ ನಮ್ಮ ಬಾಸ್ ಹತ್ತಿರ ಬಂದು ನಿಂತು " ಸರ್ ನಾನೇನಾದರೂ ತಪ್ಪಾಗಿ ಮಾತಾಡಿದ್ರೆ ಕ್ಷಮಿಸಿ. ನಿಮ್ಮ ಮನಸಿಗೆ ನೋವು ಆಗುವಂತೆ ಮಾತಾಡದೆ. ನನಗೆ ಓದುಬೇಕು ಅಷ್ಟೇ ಅದಕ್ಕೆ ನಮ್ಮ ಮನೆ ಪರಿಸ್ತಿತಿ ಓದ್ಸೋ ಅಷ್ಟು ಚನ್ನಾಗಿ ಇರಲಿಲ್ಲ ಅದು ಅಲ್ಲದೆ ನಮಗೆ ಹತ್ತಿರದ ಸಂಬಂದಿ ಆಗಿದ್ದ ನಮ್ಮ ಭಟ್ರು ಹೇಳಿದ್ರು ಒಳ್ಳೆ ಜನ ಅವರೇ ಓದ್ಸ್ತಾರೆ ಅಂತೆಲ್ಲ ಏನೇನೋ ಹೇಳ್ದಾಗ.. ನನ್ನ ಕಿವಿ ಮೇಲೆ ಬಿದ್ದಿದ್ದು ಓದು ಹೇಳೋ ಶಬ್ದ ಮಾತ್ರ. ಅದಕ್ಕೆ ಜಾಸ್ತಿ ಯೋಚನೆ ಮಾಡದೇ ಒಪ್ಪ್ಕೊಂದು ಇಲ್ಲಿಗೆ ಬಂದೆ..ನಿಮಗೆ ಅಂದೇನು ಪ್ರಯೋಜನ.. ಎಲ್ಲಾ ನನ್ನ ಮಂಕು ಬುದ್ದಿ.. ನಿಮಗೆ ಗೊತ್ತ ಸರ್ ನಾನು ಪಿ.ಯು.ಸಿ.ನಲ್ಲಿ ತಾಲೂಕಿಗೆ ೩ ನೇ ರಾಂಕ್ . ಪರೀಕ್ಷೇಲಿ ಪಾಸಾದೆ ಎಂಬ ಮತ್ತಲ್ಲಿ  ಜೀವನ ಎಂಬ ಪರೀಕ್ಷೇಲಿ ಫೈಲ್ ಆಗಿಬಿಟ್ಟೆ. ಆದರು ಬೇಜಾರಿಲ್ಲ ಸರ್ ಇದೊಂದು ಮರೆಯಲಾಗದ ನೆನಪು.. ಧನ್ಯವಾದಗಳು " ಹೇಳಿ ಹೊರಟ. ಅದಕ್ಕೆ ನಮ್ಮ ಬಾಸ್ ಮಾಡಿದ್ದೇನು ಗೊತ್ತೇ ಕರೆದು ಅಪ್ಪಿಕೊಂಡು. ಆದಷ್ಟು ಬೇಗ ಈ ಮನೆಗೆ ವಾಪಸ್ಸ್ ಬಾ ಅಶ್ವಿನ್ ಖಂಡಿತ ನಿನ್ನ ಓದಿಸ್ತಿನಿ." ಸರ್ ಇಲ್ಲಾ ಸರ್ ನನಗೆ ಇಂಥ ಜೀವನ ಇಷ್ಟ ಆಗೋಲ್ಲ.. ನನಗೆ ನನ್ನ ಪುಟ್ಟ ಹಳ್ಳಿಯ ಜೀವನಾನೆ ಚಂದ ಅಲ್ಲಿಂದಲೇ ಮತ್ತೊಮ್ಮೆ ಹುಟ್ಟಿ ಬರ್ತೀನಿ. ಜಗತ್ತನ್ನ ಆ ಕಣ್ಣುಗಳಿಂದಲೇ ನೋಡ್ಲಿಕ್ಕೆ ಇಷ್ಟ ಪಡ್ತೀನಿ. "
            ಅಲ್ಲಿಂದ  ಚನ್ನೈ ಬಸ್ ಸ್ಟಾಪ್ ನಲ್ಲಿ ಮೈಸೂರ್ಗೆ ಹೋಗೋ ಬಸ್ ಹತ್ತಿಸಿದೆ.. ನಂತರ. ದೋಸ್ತ ಯಾವಾಗಲು ಕಾಂಟಾಕ್ಟ್ ಅಲ್ಲಿ ಇರು ಎಂದೆ.. ಆಯಿತು.. ಆದಷ್ಟು ಬೇಗ ನೀನು ಕೂಡ ಹೊಸ ಬಾಲಾಜಿ ಆಗು ಎಂದ.. ಅಷ್ಟೇ ಅಲ್ಲಾ ನೀನು ಒಂದು ದೊಡ್ಡ ಬಿಸಿನೆಸ್ ಮ್ಯಾನ್ ಆಗೇ ಆಗ್ತಿಯ ಆ ನಿಮ್ಮ ಯಜಮಾನನ ಮನೆಯಲ್ಲಿ ಹಾಕಿದ ಅರ್ಧದಷ್ಟು ಪರಿಶ್ರಮ ನಿನ್ನ ಬಿಸಿನೆಸ್ ಗೆ ಪ್ರೀತಿಯಿಂದ ಹಾಕು.. ನೀನು ದೊಡ್ಡ ಮನುಷ್ಯನಾದೆ ಅಂದ್ರೇ ಎಲ್ಲರಿಗಿಂತ ಜಾಸ್ತಿ ಖುಷಿ ಪಡುವವನು ನಾನು..ಎಂದು ಹೊರಟೆ ಹೋದ.   ಅಲ್ಲಿಂದ ಹೊರಟು ಹೋದವನ ಮುಖ ನಂತರ ನೋಡಲೇ ಇಲ್ಲಾ. ಆದರೆ.. ಆ ಅರೆ ಮಲೆನಾಡ ಹುಡುಗ.. ನಂತರ ಒಂದೆರಡು ಪತ್ರಗಳ ಮೂಲಕ ತನ್ನ ಅರೆಬೆಂದ ಕನಸುಗಳ ಸ್ಥಿತಿ ಹೇಳಿಕೊಂಡ.. ಅದೆಲ್ಲ ನನಗೆ ಸ್ಪೂರ್ತಿ ಕೊಟ್ಟಿತು. ಅದೇ ಈಗ  ಜೀವನದಲ್ಲಿ ಮೊಬೈಲ್ ಶೋ ರೂಂ ಇಟ್ಟು ಕೊಂಡು. ಕೈ ಅಲ್ಲಿ ನಾನಾ ತರಹದ ಬಿಸಿನೆಸ್ ಮಾಡಿಕೊಂಡು ಪಲ್ಸುರ್ ಬೈಕ್ನಲ್ಲಿ ಅಮ್ಮನನ್ನ ಕೂರಿಸಿಕೊಂಡು ಸಿಟಿ ಸುತ್ತಲು ಕಾರಣ ಆಯಿತು.. ಅಷ್ಟೇ ಅಲ್ಲಾ ನಾನು ಇವಾಗ ೧೦-೧೫ ಮಂದಿ ಜನರಿಗೆ ಕೆಲಸ ಕೊಟ್ಟಿದೀನಿ.. ಬರುವ ವರ್ಷ  ಮತ್ತಷ್ಟು ವಿಸ್ತರಿಸಬೇಕೆಂದಿದೆ. ಆದರೆ ನನ್ನ ಯಜಮನಂತೆ ದರ್ಪದಿಂದಗಲಿ ಹಣದಿಂದಗಲಿ ನನ್ನ ಕೆಲಸಗರರನ್ನ್ ಗೆದ್ದಿಲ್ಲ ಬದಲಿಗೆ  ಪ್ರೀತಿಯಿಂದ ಗೆದ್ದಿದ್ದೇನೆ.. ಇದಕ್ಕೆ ಅವನು ಸ್ಪೂರ್ತಿಯುತ ಪತ್ರಗಳು ಕಾರಣ. ಅವನು  ಬರೆದ ಕೆಲವು ಪತ್ರಗಳನ್ನ ಮುಂದಿನ ಸಂಚಿಕೆ ಅಲ್ಲಿ ತೆರೆದಿದುತ್ತೇನೆ. ನಾನು ಕೂಡ ಅವನಿಗೆ ಒಂದೆರಡು ಪತ್ರ ಬರೆದಿದ್ದೆ. ಬೇಗ ಬಾ ಎಂದು..  
         
              ಮುಂದುವರೆಯುವುದು ..

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು... 2

ಅರೆಮಲೆನಾಡ ಹುಡುಗನ ಅರೆಬೆಂದ ಕನಸುಗಳು....


೨ 
   ಅಂದಿನಿಂದ ಯಾವ ಕೆಲಸವನ್ನು ಮಾಡದೇ ಸುಮ್ಮನೆ ಪುಸ್ತಕ ಹಿಡಿದು ಕುಳಿತಿರುತ್ತಿದ್ದ.. ಊಟಕ್ಕೆ ಹತ್ತಿರದಲ್ಲೇ ಇದ್ದ ಶಂಕರ ಮಠವನ್ನ ಅವಲಂಬಿಸಿದ.. ಅಲ್ಲಿಯ ಊಟ ಮಾಡ  ತೊಡಗಿದ ಮೇಲೆ ಗೆಲುವಾದ.. ನನ್ನೊಟ್ಟಿಗೆ ಒಮ್ಮೆ ಹೇ ಬಾಲಾಜಿ ನಾನು ಇವಾಗ ಮೊದಲಿನತಗುತ್ತಿದ್ದೇನೆ ಆರೋಗ್ಯದಲ್ಲಿ.. ನಾನು ಆರೋಗ್ಯವನ್ತಂದೆ ಎಂದಾದರೆ ಈ ನಿನ್ನ ಬಾಸ್ ಗೆ ಒಂದು ಗತಿ ಕಾಣಿಸದೆ ಬಿಡಲಾರೆ..ಈ ನಿಮ್ಮ ಆಹಾರ ನಮಗೆ ಒಗ್ಗುವುದಿಲ್ಲ.. ಮಠದಲ್ಲಿ ಕೊಡೊ ಊಟ ನಿಜಕ್ಕೂ ನಮ್ಮ ಬದಿಯ ಊಟದಂತಿದೆ.  ಹೌದು ನಿನಗೇನೂ ದಾಡಿ ಇವನಲ್ಲಿ  ಯಾಕೆ ಜೀತಕ್ಕೆ ಸೇರಿರುವೆ.. ಸೂಳೆಯಾಗಿ, ಮನೆ ಕೆಲಸದವನಾಗಿ ಬದುಕಲು ನಾಚಿಕೆ ಆಗೋದಿಲ್ಲೇನು...ನಿನ್ನಿಷ್ಟ. ಎಂದವನು ನಂತರ   ಯಾಕೋ ನನಗೆ ನಿನ್ನ ಕಂಡಾಗ ನೀನು ನನ್ನ ಅಂತೆ ಅಳುವುದನ್ನ ಕಂಡಿರುವದರಿಂದ ಹೇಳಿದೆ..ಅಷ್ಟೇ " ಎಂದ.

           ನಂತರ ಅವನಿಗೂ ನಮ್ಮ ಬಾಸ್ ಗು ಮಾತು ಕತೆ ಇಲ್ಲದಾಯಿತು..   ಅಷ್ಟೊತ್ತಿಗಾಗಲೇ ನನ್ನ ಅಕ್ಕನನ್ನ ನಮ್ಮ ಯಜಮಾನನ ಸಿನಿಯರ್ ಅಸಿಸ್ಟಂಟ್  ಪಾರ್ಥ ಸಾರಥಿ ಪ್ರೇಮಿಸಿದ್ದ.. ಅದನ್ನ ತಿಳಿದಾಗ ನನ್ನ ಕಣ್ಣು ಒದ್ದೆಯಾಗಿತ್ತು... ಅಂದಿನಿಂದ ಮತ್ತೊಂದು  ಫುಲ್ ಬಾಟಲ್ ಮದಿರೆ ಖಾಲಿ ಆಗ ತೊಡಗಿತ್ತು .. ಆದರೇನು ನಮ್ಮ ಯಜಮಾನನ ಒತ್ತಾಯಕ್ಕೆ ಮನೆಯಲೆಲ್ಲ ಒಪ್ಪಿದ್ದರು. ಎಲ್ಲಕಿಂತ ಹೆಚ್ಚಾಗಿ ಅಕ್ಕನು ಇಷ್ಟ ಒಪ್ಪಿದ್ದಳು. ಆ ಮದುವೆಗೆ ಇನ್ನೆರಡು ದಿನ ಬಾಕಿ ಇತ್ತು. ಅದಕ್ಕಾಗಿ ಮನೆಗೆ ಹೊರಟವನ ಸಂಗಡ ನಮ್ಮ ಯಜಮಾನನ ದಿನಚರಿಗೆ ಆಡ್ಡಿ ಆಗಿದ್ದ  ಅಶ್ವಿನ್ ಅನ್ನು ನನ್ನ ಒಟ್ಟಿಗೆ  ಕಳುಹಿಸಿ ಕೊಟ್ಟರು.
                                                  ಅವನಿಗೆ  ಟಿ ನಗರದ ಹೊರವಲಯದಲ್ಲಿದ್ದ  ಸಣ್ಣದೊಂದು ಅಪಾರ್ಟ್ಮೆಂಟ್ ನಾ ನನ್ನ ಗೂಡಿಗೆ ಕರೆದೊಯ್ಯುವಾಗಲೇ ಹೇಳಿದೆ. " ಅಶ್ವಿನ್ ನೀನು ಅಂದು ಕೇಳಿದ ಪ್ರಶ್ನೆಗಳಿಗೆ ಇಂದು ನಿನಗೆ ಉತ್ತರ ಸಿಗ ಬಹುದು... ಮೊದಲು ನಮ್ಮ ಮನೆ ನೋಡುವಿಯಂತೆ ನಡೆ" ಎಂದು ಕರೆದು ಕೊಂದು ಹೋದೆ..   
                 ಮನೆಯನ್ನ ನೋಡಿ ಒಮ್ಮೆ ಅವಕ್ಕದವಂತೆ ಕಂಡ ಅಶ್ವಿನಗೆ  ನಾನು ಇನ್ನೂ ನಾಲ್ಕೈದು ದಿನ ನನ್ನೊಟ್ಟಿಗೆ ಇದೆ ಮನೆಯಲ್ಲಿ ಇರಬೇಕು.. ನನ್ನ ಅಕ್ಕನ ಮದುವೆ ಇದೆ ನಾನು ಕೆಲಸದ ಮೇರೆಗೆ ಹೊರಗೆ ಹೋಗುತ್ತಿರುತ್ತೇನೆ ಆದರು ನನ್ನ ಅಜ್ಜಿ ಮನೆಯಲ್ಲೇ ಇರುತ್ತಲೇ.. ಅವಳೊಂದಿಗೆ ಇರು. ಹ ಮನೆಯವರನ್ನ ಪರಿಚಯ ಮಾಡಿಸಿಲ್ಲ ಅಲ್ಲವೇ .. ನೋಡು ಎರಡು ಕಾಲು ಕಳೆದು ಕೊಂಡು ಇದೀಗ ಕೃತಕ ಕಾಲಿನಲ್ಲಿ ಓಡಾಡುತ್ತಿರುವ  ಇವರೇ  ನನ್ನ ತಂದೆ, ಇದೀಗ ಕಾಲಿನೋಟ್ಟಿಗೆ  ಕಳೆದು ಹೋದ ತಮ್ಮ ಸಣ್ಣ ಜಾಬ್ ಅನ್ನು  ಮರೆತು ಎಲ್ ಆಯ ಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.. ಇವರು ನಮ್ ತಾಯಿ. ಮೊದಲು ಗೃಹಿಣಿ ಆಗಿದ್ದವಳು ನಮ್ಮ ಮನೆಯ ಕಷ್ಟ್ ಕಾಲದಲ್ಲಿ ಅಪ್ಪನಿಗೆ ನೆರವಾಗಲು ಟೈಪಿಸ್ಟ್  ಕೆಲಸ ಮಾಡುತ್ತಿದ್ದಾಳೆ.. ಇನ್ನೂ ಇವಳೇ ನನ್ನ ಅಕ್ಕ , ಮದುಮಗಳು.. ಓದಿರೋದು ಎಂ.ಬಿ.ಎ. ಮದುವೆ ಆಗಲು ಹೊರಟಿರುವುದು.. ಪಿ.ಯು.ಸಿ. ಪಾಸು ಆಗಿರಬಹುದಾದ ಕುಡುಕ ಪಾರ್ಥ ಸಾರಥಿಯ ಜೊತೆ.. ಎಂದೆಲ್ಲಾ ವಿವರಿಸಿದೆ. ನಂತರ  ನಾನು ಮನೆಯಿಂದ ಯಾವುದೊ ಕೆಲಸದ ಮೇಲೆ ಹೋಗಿ ಸಂಜೆ ಮರಳುವ ವೇಳೆಗೆಲ್ಲ ನಮ್ಮ ಮನೆಯವರಿಗೆಲ್ಲ ಅಚ್ಚುಮೆಚ್ಚಿನ ಅಶು ಆಗಿ ಬಿಟ್ಟಿದ್ದ...
        ಅಜ್ಜಿ ಅಂತು ನಾನು ಬಂದ ತಕ್ಷಣ ನನ್ನೊಟ್ಟಿಗೆ ಕೇಳಿದ್ದು ಇಸ್ಟೇ.." ಇಂಥ ಒಳ್ಳೆ ಮಕ್ಕಳನ್ನೆಲ್ಲ ಯಾಕಪ್ಪ ಆ ನಿನ್ನ ಯಜಮಾನ ತನ್ನ ಅಡಿ ಆಳಾಗಿ ಮಾಡ್ಕೋತಾನೆ.. ಆ ದೇವರು ಖಂಡಿತ ಮೆಚ್ಚೋಲ್ಲ.. ಅವನು ಅನಾಥ ಹೆಣವಾಗಿ ಹೋಗ್ತಾನೆ." ಎಂದೆಲ್ಲಾ ಹೇಳದಳು.. ನಂತರ ಅಶ್ವಿನ್ ಬಗ್ಗೆ ಮತ್ತೆ ಯಜಮನನಿಗೂ ಇವನ ನಡುವೆಯೂ ನಡೆದ ಘಟನೆಗಳ ಬಗ್ಗೆ ಹೇಳಿದೆ.. ಅಜ್ಜಿ ಮೆಚ್ಚುಗೆ ಸೂಚಿಸಿದಳು..
           ಹಾಗೇ ಇವತ್ತು ಎಂದಿನಂತೆ ಕುಡಿದು ಬರದಿದ್ದ ನನ್ನನ್ನು ಆಶ್ಚರ್ಯದಿಂದ ನೋಡಿದ ಅಮ್ಮ ಏನೋ ಮೊದಲಿನ ಬಾಲಾಜಿ ಆಗಿ ಬಿಟ್ಟಿದಿಯ ಅಂದ್ಲು.. ಹೌದು  ಅಮ್ಮ.. ಈ ಅಶ್ವಿನ್ ನನ್ನ ಮೊದಲಿನ ಜೀವನದ ಸಿಹಿ ಕನಸನ್ನ ಮತ್ತೆ ನೆನಪಿಸಿದ.. ನಾನು ನಿಮ್ಮ ಮುಂದೆಲ್ಲ ಕೂಗಾಡುವಂತೆ ನಮ್ಮ ಯಜಮಾನನ ಮುಂದೆ ಕೂಗಾಡಿದ.. ಅದು ಅಲ್ಲದೆ.. ನನ್ನ ಹತ್ತಿರ ನಮ್ಮ ಮನೆಗೆ ಬರುವಾಗ ದಾರಿಯಲ್ಲಿ  ಕುಡಿಯೋದು ಒಳ್ಳೇದಲ್ಲ ಕಣಲೇ.. ಅದು.. ನೋವನ್ನ ಮರೆಸಲ್ಲ.. ನಮ್ಮ ಸಮಾಧಿ ಮಾಡುತ್ತೆ.. ಅಷ್ಟೇ.. ನೀನು ಅವನಂತೆ ಒಂದು ಸ್ಟೇಟಸ್ ಮಾಡ್ಕೋ ಬೇಕು ಅಂದ್ರೇ ಕುಡುದ್ರೆ ಸಾಧ್ಯ ಇಲ್ಲಾ.. ಓದು ಇಲ್ಲಾ ಏನಾದ್ರು ಬಿಸಿನೆಸ್ ಮಾಡು.. ಒಟ್ಟಿನಲ್ಲಿ ಈ ಹಾಳು ಮೃಗದ ಸಹವಾಸ ಬಿಡು ಎಂದ... ನಿನಗೆ ಎಷ್ಟೇ ಕಷ್ಟ ಇದ್ರೂ ಇಂತವರ ಸಂಗಡ ಇದ್ರೆ ನೀನು ಜೀತದಾಳು ಆಗೊಗ್ತಿಯ.. ಅಷ್ಟೇ.. ನಿನ್ನ ಕನಸನ್ನ ಯಾವುದು ನನಸು ಮಡ್ಕೊಲೋದಿಕ್ಕೆ  ಆಗೋಲ್ಲ.. ಅದೇ ನಾವೇ ಏನಾದ್ರು ಮಾಡಿ ದುಡುದು ತಿಂದರೆ ಮಾತ್ರ ನಮ್ಮ ಕನಸನ್ನ  ನಮ್ಮ ನಮ್ಬಿರೋರನ್ನ ಚನ್ನಾಗಿ ಅಲ್ಲದೆ ಹೋದರು ನಮಗೆ ತೃಪ್ತಿ ಆಗೋ ಹಾಗೇ ನೋಡ್ಕೋ ಬಹುದು.. ಎಂದ.. ನನಗು ಇದು ಸರಿ ಅನ್ನಿಸಿದೆ . ಅದಕ್ಕೆ ಆದಷ್ಟು ಬೇಗ ನಾನು ಏನಾದ್ರು ಬಿಸಿನೆಸ್ಸ್ ಆರಂಭಿಸಬೇಕು ಅಂತಿದಿನಿ..ಕಣಮ್ಮ.. ಇನ್ನೆಷ್ಟು ದಿನ ಅಂತ ಅವನ ಕೈ ಕೆಳಗೆ ಕೆಲಸ ಮಾಡ್ಲಿ.. ಇನ್ನೂ ಓದೋಕಂತು ನನ್ನ ಕೈ ಅಲ್ಲಿ ಸಾಧ್ಯ ಇಲ್ಲಾ.. ಒಂದು ಚಿಕ್ಕ ಬಿಸಿನೆಸ್ಸ್ಗೆ ಬೇಕಾಗೊಸ್ತು ಸಾಲ ಎಲ್ಲಾದರು ಮಾಡಿಸಿ ಕೊಡ್ತಿಯ.. ಹೇಗೂ ಅಪ್ಪನ ಕಾಲು ಆಪರೇಷನ್,  ಅಕ್ಕನ ಮದುವೆ, ಅಂತೆಲ್ಲ ಸಾಲ ಮಾಡಿ  ಕುತ್ತಿಗೆ ವರೆಗೆ ಮುಳುಗಿದಿವಿ  .. ಇನ್ನೂ ಒಂಚೂರು ಮುಳುಗ್ಲಿಕ್ಕೆ ಏನು ಭಯ ಅಲ್ಲವ ಅಮ್ಮ.. ಗೆದ್ದರೆ ನಿನ್ನ ಮತ್ತೆ ಅಪ್ಪನ್ನ ನಾನು ಬದುಕಿರೋ ತನಕ ಚನ್ನಾಗಿ ನೋಡ್ಕೊಂಡು ಆರಾಮಾಗಿ ಇರಬಹುದು ಅಲ್ಲವ??? ಇದೆಲ್ಲ.. ಅವನು ನನಗೆ ಹೇಳದೆ ಹೋದರು ಅವನು ಹಚ್ಚಿದ ಚಿಂತನೆ ಇಂದ ಹುಟ್ಟಿರೋದು.. ನನಗೇನು ಇನ್ನೂ  ೨೨ ಇನ್ನೂ ದುಡಿಯೋ ವಯಸ್ಸು..ಅಮ್ಮ ಒಪ್ಪಿಗೆ ಕೊಡಮ್ಮ.. ಆ ನನ್ನ ಯಜಮಾನನ ಹತ್ತಿರ ಮಾಡಿದ ಸಾಲ ಆದಷ್ಟು ಬೇಗ ತೀರಿಸ್ಲಿಕ್ಕೆ ಪ್ರಯತ್ನ ಪಡ್ತೀನಿ.. ಎಂದೆ..
 ನನ್ನ ಅಮ್ಮನಿಗೂ ಹರ್ಷವದಂತೆ ಕಂಡು ಬಂತು..ಆಕೆಯು ಕಣ್ಣಿನಲ್ಲೇ ಒಪ್ಪಿಗೆ ಸೂಚಿಸಿದಳು. ಆ ನನ್ನ ಅಮ್ಮನಾ ನಗು ಮೊಗ ಕಂಡು ಎಷ್ಟೋ ಕಾಲವಾಗಿತ್ತು.. ಅದನ್ನ ನನ್ನ ಗೆಳೆಯ ಅಶ್ವಿನ ಹತ್ತಿರ ಹೇಳಿದಾಗ ನಿಜಕ್ಕೂ.. ಖುಷಿ ಪಟ್ಟನಲ್ಲದೆ.. ಯಾ ಇವಾಗ ನೀನು ಬಾಲಾಜಿ ಎಂಬ ಹೆಸರಿಗೆ ತಕ್ಕವನಾದೆ ಎಂದು ಪ್ರೀತಿಯಿಂದ ಅಪ್ಪಿಕೊಂಡ.. 
           ಹಾಗೇ ಬಿಸಿನೆಸ್ ಸ್ಟಾರ್ಟ್ ಮಾಡಿದರೆ ನಿಜಕ್ಕೂ ಈ ನನ್ನ ಗೆಳೆಯನನ್ನ ಜೊತೆಯಲ್ಲೇ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿ ಕೇಳಿದರೆ.. ನೋಡೋಣ ಗೆಳೆಯ ಎಂದಷ್ಟೇ.. ಹೇಳಿದ.. ಅಂತು ಅಕ್ಕನ ಮದುವೆ ನಾನು ಬಯಸಿದಂತೆ ನಡೆಯದಿದ್ದರೂ.. ನಡೆದು ಹೋಯಿತು.. ಅಕ್ಕ ಸಂತಸದಿಂದ ಇದ್ದರಷ್ಟೇ ಸಾಕು ಎಂದು ಬಯಸಿದೆ.. ನನ್ನ ಭಾವ ಈಗ ಆರ್ಥಿಕವಾಗಿ ಬಲಿಷ್ಟನಗಿದ್ದ.. ಎಷ್ಟಾದರೂ.. ಅವನು ನಮ್ಮ ಯಜಮಾನನ ಗುಲಾಮ ತಾನೆ.. ಎಂದು ದುಃಖವಾಯಿತು.. ಎಲ್ಲಾ ದೇವರ ಆಟ.
                        ನಮ್ಮ ಮನೆಯಲ್ಲಿ ಉಳಿದ ಕಡೆಯ ದಿನ ಊಟ ಮಾಡುತ್ತ ಅಶ್ವಿನ್ ಹೇಳಿದ್ದು ಇನ್ನೂ ನೆನಪಿದೆ.." ಬಾಲಾಜಿ ನಿಜಕ್ಕೂ ಆ ನಿನ್ನ ಸಾಹುಕಾರನ ಹಂಗಿನ ಅರಮನೆಗಿಂತ ಈ ನಿಮ್ಮ ಪ್ರೀತಿ ತುಂಬಿದ ಕುಟೀರ ನನಗೆ ತುಂಬಾ ಇಷ್ಟ ಆಯಿತು. ಅಂತು ನಮ್ಮ ಅಕ್ಕನ ಮದುವೆ ಆಯಿತು..ಈ ಮನೆಯಲ್ಲಿ  ಏನೋ ಕಳೆದುಕೊಂಡಂತೆ ಬರೆ ೨ ದಿನ ಉಳಿದ ನನಗೆ ಆಗುತ್ತಿರ ಬೇಕಾದರೆ..ಇನ್ನೂ ನಿನಗೆ ಒಡಹುಟ್ಟಿದವಳು.. ದುಃಖವಾಗುವುದು ಸಹಜ.. ನಿನ್ನ ಅಮ್ಮ , ಅಪ್ಪ, ಅಜ್ಜಿಯರ ಮನಸನ್ನ ನಾನು ಸಾಂತ್ವನ ಪಡಿಸಲಾರೆ.. ನಿಮ್ಮ ಭಾವ ನಮ್ಮ ಅಕ್ಕನನ್ನ ಚನ್ನಾಗಿ ನೋಡಿಕೊಳ್ಳಲಿ. ಖಂಡಿತ ನೋಡಿ ಕೊಲ್ಲುತ್ತಾನೆ.. ಯಾಕೆಂದರೆ.. ಹಾಗೇ ಬದಲಾಯಿಸುವ ಶಕ್ತಿ ನಿನ್ನ ಅಕ್ಕನಲ್ಲಿದೆ.. " ಎಂದು.. ಹೊರಗೆ ಬಂದು.. ಅಜ್ಜಿಯ ಕಾಲಿಗೆ ನಮಸ್ಕರಿಸಿ.. ಅಲ್ಲಿಂದ ಹೊರಟೆವು.. ನಿಜಕ್ಕೂ ಈ ನನ್ನ ಮಿತ್ರ ತನ್ನ ಅಕ್ಕನ ಮದುವೆ ಎಂಬಂತೆ ಸಡಗರದಿಂದ ನನ್ನ ಒಟ್ಟಿಗೆ ಕೆಲಸದಲ್ಲಿ ಸಹಾಯ ಮಾಡಿದ್ದ..  ಅವನು ಮತ್ತೆ ಯಜಮಾನನ ಮನೆಗೆ ಹೋಗೋಣ ಎಂದು ಹೊರಟು ನಿಂತಾಗ ನಮ್ಮ ಮನೆಯವರ ಮುಖವೆಲ್ಲ ಬಾಡಿತ್ತು .. ಅಕ್ಕನಷ್ಟೇ ಇವನು ತಮ್ಮ ಮನೆಯ ಮಗ ಈಗ ಹೊರಟು ನಿಂತಿರುವನಲ್ಲ ಎಂದು ಅವರ ಮನ ತಳ ಮಳಿಸಿತ್ತು.. ಅದಕ್ಕೆ ಸಾಕ್ಷಿ ಎಂಬಂತೆ ಅಮ್ಮ ಕೇಳಿಯೇ ಬಿಟ್ಟಳು " ಅಶ್ವಿನ್ ಅವರ ಮನೆಗೆ ಇವತ್ತೇ ಹೋಗಲೇ ಬೇಕೇನು??? ಇಲ್ಲೇ ಇದ್ದರೆ ನಮಗೂ ಏನೋ ಸ್ವಲ್ಪ ಸಮಾಧಾನ ಬೇಕಾದರೆ ಬಾಲಾಜಿ ಹೋಗಿ ಬರಲಿ ನೀನು ನಾಳೆ  ಹೋಗುವಿಯಂತೆ ಎಂದಳು "  ಅದಕ್ಕೆ " ಅಮ್ಮ ಇನ್ನೊಮ್ಮೆ ಖಂಡಿತ ಬರುತ್ತೇನೆ... ಆದರೆ ಇಂದು ನಾನು ಹೋಗಲೇ ಬೇಕು.. ಅನ್ಯಾತ ಭಾವಿಸದೆ ಆಶೀರ್ವದಿಸಿ ಕಳುಹಿಸಿ ಕೊಡಿ" ಎಂದು.. ಕೇಳಿಕೊಂಡ, ಇದು ಸಾಕಲ್ಲವೇ.. ನಮ್ಮ ಮನೆಯವರು ಅವನನ್ನ ನನ್ನ ಅಂತೆ ಎಷ್ಟು ಹಚ್ಚಿಕೊಂಡಿದ್ದರು ಎಂದು ತಿಳಿಯಲು... ನಿಜಕ್ಕೂ ಅವನು ನಾನು ನಮ್ಮ ಯಜಮಾನನ ಮನೆಗೆ ಹೊರಟಾಗ ದಾರಿಯ ನಡುವೆ ಫೋನ್ ರಿಂಗಿನಿಸಿತ್ತು.. ಅಮ್ಮ ಹೇಳುತ್ತಿದ್ದಳು.. ಮನೆ ಯಾಕೋ ಬಿಕೋ ಅನ್ನುತ್ತಿದೆ ಕಣೋ.. ಬೇಗ  ಹೋಗಿ ನಿಮ್ಮ ಯಜಮಾನನ ಮನೆಯಿಂದ ರಜಾ ಪಡೆದು ಬೇಗ ಬಾ....




ಮುಂದುವರೆಯುವುದು...

ಅರೆಮಲೆನಾಡ ಹುಡುಗನ ಅರೆಬೆಂದ ಕನಸು

ಅರೆಮಲೆನಾಡ ಹುಡುಗನ ಅರೆಬೆಂದ ಕನಸು
ಓದುವ ಮುನ್ನ ಒಂದು ಮಾತು : ಇದು ಸತ್ಯ ಘಟನೆ ಆಧಾರಿತ ಕಥೆ. ಹಃ ಅದು ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. ಆದರೆ    ಈ ಕಥೆಯಲ್ಲಿ ಬರುವ ವಕೀಲರಂತ ಗೋ ಮುಖ ವ್ಯಾಘ್ರಗಳು, ಭಟ್ಟರಂತ ಪ್ರಜ್ಞಾವಂತ ಬ್ರೋಕೆರ್ ಗಳಿಂದ ವಿದ್ಯೆಗಾಗಿ ಹಪಹಪಿಸಿ ಎಡವುವ ಬಾಲಾಜಿ, ಅಶ್ವಿನ್, ಶರತರಂತೆ ಯಾರು ಬಲಿ ಆಗದೆ ಎಚ್ಚರವಹಿಸುವಂತಗಲಿ ಎಂಬುದೇ ಈ ಕಥೆ ಬರೆದವನ ಆಶಯ. ಇಂಥ ಆಧುನಿಕ ಕಾಲಗಟ್ಟದಲ್ಲೂ ಇಂತವು ನಡೆಯುವುದೇ ಎಂದು ಕೇಳಬಹುದು. ಹಲವು ಪ್ರಶ್ನೆಗಳು ಎದುರಾಗಬಹುದು.. ಅದರ ಜಿಜ್ಞಾಸೆ ನಿಮಗೆ ಬಿಟ್ಟದ್ದು..


೧ 
ನವೆಂಬರ್ ೧೪

                        ಈ ದಿನ ಬಂದಗೆಲೆಲ್ಲ ಭಾರತೀಯರಿಗೆ ನೆನಪಾಗುವುದು ಮಕ್ಕಳ ದಿನಾಚರಣೆ ಎಂಬ ಸುದಿನ ನೆಹರು ಎಂಬ ಅನಭಿಷಿಕ್ತ ದೊರೆಯ ಹುಟ್ಟಿದ ದಿನ. ಆದರೆ ಭಾರತಿಯನದರೂ ನನಗೆ ನೆನಪಾಗುವುದು ನನ್ನ ಬಾಳಿನಲ್ಲಿ ವಿಮೋಚನೆಯ ದಾರಿ ಕಾಣಿಸಿದ ಸ್ವಾತಂತ್ರ್ಯದ ಬಗ್ಗೆ ತಿಳಿಸಿದ ಅಶ್ವಿನ ಎಂಬ ಮಲೆನಾಡ ಕನಸಿನ ಹುಡುಗ ಮಾತ್ರ.. 
                  ಎಲ್ಲರಂತೆ ನಾನು ಕೂಡ ಚನ್ನಾಗಿ ಓದ ಬೇಕು ನಂತರ ಒಳ್ಳೆ ಕೆಲಸ ಹಿಡಿಯಬೇಕು ಇಷ್ಟು ದಿನ ನನ್ನ ಹೆತ್ತು ಹೊತ್ತು ಸಲಹಿದ ನನ್ನ ಅಪ್ಪ ಅಮ್ಮ ನ್ದಿರನ್ನ "ನ ಭುತೊಹ್  ನ ಭವಿಷ್ಯತಿ" ಎನ್ನುವಂತೆ ಚನ್ನಾಗಿ ನೋಡಿಕೊಳ್ಳಬೇಕು.. ಜೊತೆಗೆ ನನ್ನ ಒಡಹುಟ್ಟಿದ ಅಕ್ಕನ ಮದುವೆಯನ್ನ ಚನ್ನಾಗಿ ಮಾಡಬೇಕು.. ಅವರ ಮೊಗದಲ್ಲಿಯಾ ನಗುವನ್ನ ಕಂಡು ನಾನು ಮಗುವಾಗಬೇಕು.. ಇದೆಲ್ಲವು ನಾನು ಪಿ ಯು. ಸಿ ಓದುತ್ತಿದ್ದಾಗ ಕಂಡ ಕನಸುಗಳು.
             ಅದು  ಸುಪ್ರಿಂ ಕೋರ್ಟ್ ಲಾಯೆರ್ ಎಂಬ ಗೋಮುಖ ವ್ಯಾಘ್ರನ ಕೈ ಕೆಳಗೆ ಕೆಲಸಕ್ಕೆ ಸೇರುವ ಮೊದಲಿನದು.. ಅಲ್ಲಿ ಅವನು ನಮಗೆ ಮುಂದೆ ಓದಿಸುತ್ತೇನೆ ಎಂದು ತಮ್ಮಲ್ಲಿ ಸೇರಿಸಿಕೊಂದಾಗಳು ಆ ಕನಸಿಗೆ ರೆಕ್ಕೆ ಪುಕ್ಕ ಬಲಿತಿತ್ತು. ಆದರೆ ಅಲ್ಲಿನ ದಿನಗಳು ನನ್ನ ಕನಸಿನ ಪಕ್ಷಿಯ ರೆಕ್ಕೆಯನ್ನ ಕಡಿದು ಹಾಕಿದವು. ಅಲ್ಲಿನ ದಿನಚರಿ ಹೇಗಿತ್ತು ಎಂದರೆ ಬೆಳಗ್ಗೆ ಮುಂಜಾನೆ ಎದ್ದು ಅರಮನೆಯಸ್ಟು ದೊಡ್ಡದಾಗಿದ್ದ ಮನೆಯನ್ನ ಎರಡೆರಡು ಬಾರಿ ಗುಡಿಸಿ ಒರೆಸಬೇಕು. ಏಕೆಂದರೆ ಒಂದು ಬಾರಿ ಮಾತ್ರ ಒರೆಸುವುದು ಸತ್ತವರ ಮನೆಯಲ್ಲಿ ಮಾತ್ರವಂತೆ.. ನಮ್ಮಲ್ಲಿ ಇನ್ನೊಬ್ಬ ನಮ್ಮ ವಕೀಲರಿಗೆ ಬೆಳಗಿನ ಬಿಸಿ ಬಿಸಿ ತಿಂಡಿ ಕಾಫಿ ಮಾಡಿ ಕೊಡಬೇಕು.. ಅಷ್ಟೆಲ್ಲ ಮಾಡುವದರ ಜೊತೆಗೆ ಅವನಿಗೆ ತಿನ್ನಿಸಬೇಕು. ಅದೆಲ್ಲ ಮುಗಿಯುವ ವೇಳೆಗೆ ೧೦ ಗಂಟೆ ಆಗಿರುತ್ತದೆ, ನಂತರ ರೇಶನ್ ಅಕ್ಕಿಯಿಂದ ಮಾಡಿದ ಅನ್ನದಲ್ಲಿ ಬೆಳಗಿನ ಊಟ. ಅದರ ನಂತರ ಅವನ ಬಟ್ಟೆಗಳನ್ನೆಲ್ಲ ತೊಳೆದು ಹಾಕಬೇಕು. ಹೀಗೆ ಹತ್ತು ಹಲವು ಕೆಲಸಗಳು ಕೆಲವಷ್ಟನ್ನು ಹೇಳದಿದ್ದರೆ ಚೆನ್ನ.. ಮಧ್ಯನ್ನ ಕೂಡ ನಮಗೆಲ್ಲ ತಂಗಳು ರೇಶನ್ ಊಟ. ರಾತ್ರಿ ನಮ್ಮ ಯಜಮಾನ ಕುಡಿದು ಅಮಲೇರಿ ಮಲಗಿದ ಮೇಲೆ ಅಂದರೇ ಭೂತ ಪ್ರೇತಗಳು ಎಚ್ಚರವಾಗುವ ಸಮಯದಲ್ಲಿ ಊಟ. ನಂತರ ಯಾವುದೇ ಹುಡುಗಿ ಅಂದು ಬಾರದಿದ್ದರೆ ಹುಡುಗಿಯ ಜಾಗದಲ್ಲಿ ನಾವು ವಕೀಲನ ಜೊತೆ ಮಲಗಬೇಕು   ಅದೆಲ್ಲದರ ನಡುವೆ ಬೆಳಗ್ಗೆ ಬೇಗ ಏಳಬೇಕು. ಇಸ್ಟೆಲ್ಲಾ ಮಾಡಿ ನಾವು ಓದುವುದು ಯಾವಾಗ??? ಆದರು ನಿಮಗೆ ಆಶ್ಚರ್ಯವಾಗಬಹುದು ದಿನವಿಡೀ ಕಾಲೇಜ್ ಗೆ ಹೋಗಿ ಎಕ್ಷಮ ಬರೆದರೂ ನಾನು ಪಿ. ಯು. ಸಿನಲ್ಲಿ ೬೦% ಮಾಡುವಾಗ ಹರಸಾಹಸ ಪಟ್ಟಿದ್ದೆ. ಆದರೆ ಪುಸ್ತಕ ಎಂಬುದನ್ನೇ ಓದದೆ ಕಾಲೇಜ್ ಮೆಟ್ಟಿಲು ಎಕ್ಷಮ ಗೆ ಮಾತ್ರವೇ ಹತ್ತಿ ಪ್ರತಿಷ್ಟಿತ ವಿಶ್ವ ವಿದ್ಯನಿಲಯದಿಂದ ಕಲಾ ಪದವಿ ಪಡೆದಿದ್ದೆ ಎಲ್ಲಾ ನಮ್ಮ ವಕೀಲರ ಪ್ರಭಾವದಿಂದ.. ಆಗಲೇ ತಿಳಿದದ್ದು ಹಣವೊಂದಿದ್ದರೆ ಏನನ್ನು ಸಾಧಿಸಬಹುದು.. ಕ್ರಮೇಣ ನನ್ನ ದುಃಖ ಮರೆಯಲು ಮದಿರೆಯಾ ಸಹವಾಸ ಅನಿವಾರ್ಯವಾಯಿತು.. ಈ ರೀತಿ ಬೇರೆ ಕಡೆ ಎಲ್ಲಾದರೂ ದುಡಿದಿದ್ದಾರೆ ನಮಗೆ ನೆಮ್ಮದಿ ಆದರು ಇರುತಿತ್ತು.. ಆದರೆ ಇವನು ನಮಗೆ ೩ ಹೊತ್ತು ಊಟ ಕೊಡುತ್ತಿದ್ದ ಅಷ್ಟೇ.. ಆರೋಗ್ಯ ಹದಗೆಟ್ಟರು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ನಾನು ಇಲ್ಲಿ ಉಳಿದಿರಲು ಕಾರಣ ಒಂದೇ ಯಾವುದೇ ಸೆಕ್ಯೂರಿಟಿ ಕೆಲದೇನೆ ನನ್ನ ಅಪ್ಪನ ಆಪರೇಷನ್ ದುಡ್ಡು ಅವನೇ ಕೊಟ್ಟಿದ್ದ..
    ಇಂತಹ  ಜೀತದ ಬದುಕಿನಲ್ಲಿ ನನ್ನ ಕನಸೆಲ್ಲ  ಮರೆತೇ ಹೋಗಿದ್ದವು ಎಲ್ಲೋ ಒಮ್ಮೊಮ್ಮೆ ನೆನಪಾದರು ಅದನ್ನ ಮರೆಯಲು ನಮ್ಮ ಸಾಹುಕಾರ ತನಗಾಗಿ ನಮ್ಮಿಂದ ಹೊರಿಸಿ ತಂದಿರುತ್ತಿದ್ದ ವಿವಿಧ ಬಣ್ಣದ ಮದಿರೆಯ ಕದ್ದು ಕುಡಿದರೆ ಮರೆತೇ ಹೋಗುತ್ತಿತ್ತು.. ಆಗ ಸಿಕ್ಕವನೆ ಈ ಅಶ್ವಿನ್ ಎಂಬ ಗಾರುಡಿಗ..
           ಆವತ್ತು ಮೈಸೂರ್ ಗೆ ಅವನನ್ನು ಕರೆ ತರಲು ನಮ್ಮ ಬಾಸ್ ಸಂಗಡ ಹೋದಾಗ " ಒಳ್ಳೆ ಹಳ್ಳಿ ಗಮ್ಮಾರ ಸಿಕ್ಕಿದ ಇನ್ನೂ ನಾನು ಮಾಡುವ ಕೆಲಸವೆಲ್ಲ ಇವನ ಹತ್ತಿರವೇ ಮಾಡಿಸಿದರಾಯಿತು ಒಳ್ಳೆ ಬಕರ. ಎಂದೆಲ್ಲಾ ಮನಸಿನಲ್ಲೇ ಮಂಡಿಗೆ ಮೆಂದಿದ್ದೆ."  ನಂತರ  ನೆದೆದಿದ್ದೆಲ್ಲವನ್ನ ಸಾಧ್ಯಂತ ವಿವರಿಸುವೆ.. ಅವನನ್ನು ಬಿಡಲು ಬಂದಿದ್ದ ಬಹುಶಃ ಅವನ್ ತಂದೆ ಇರಬೇಕು ನಮ್ಮ ಯಜಮಾನನ ಹತ್ತಿರ " ಸ್ವಾಮಿ ನಮಗೆ ನಿಮ್ಮ ಭಾಷೆ ಬರಲಾರದು ಆದರು ಹೇಳುತ್ತೇನೆ.. ಇವನಿಗೆ ತುಂಬಾ ಕಲಿಯಬೇಕೆಂಬ ಚಪಲ ಆದ್ರೆ ನನ್ನ ಕೈಯಲ್ಲಿ ಅಷ್ಟೆಲ್ಲ ಓದಿಸಲಾಗದು. ನೀವು ಓದಿಸುತ್ತಿರೆಂದು ಎಂದು ನಮ್ಮ ಭಟ್ರು ಹೇಳಿದುದರಿಂದ ನಿಮ್ಮೊಂದಿಗೆ ಈ ನನ್ನ ಮಗನನ್ನ ಕಳುಹಿಸಿ ಕೊಡುತ್ತೇನೆ." ಎಂದೆಲ್ಲಾ ವಿನಿತವಾಗಿ ಕೇಳಿಕೊಂಡಾಗ ಖಂಡಿತ ಎನ್ನುವಂತೆ ಭರವಸೆ ಕೊಟ್ಟ ಈ ನಮ್ಮ ಬಾಸ್. ನನಗೆ ಮನದಲ್ಲೇ ನಗು ಈ ಪುಣ್ಯಾತ್ಮ ಈ ನಮ್ಮ ಬಾಸ್ ಒಳ್ಳೆಯದನ್ನ ಮಾಡುವ ಎಂದು ನಂಬಿರುವನಲ್ಲ ಎಂದು.
           ನಂತರ ನಡೆದಿದ್ದೆ ಬೇರೆ ಅವನು ನಮ್ಮ ಬಾಸ್ ಮನೆಗೆ ಹೆದರುತ್ತಲೇ ಬಂದ.. ನಾ ತಿಳ್ದಷ್ಟು  ದಡ್ದನೆನಗಿರಲಿಲ್ಲ.. ಆಂಗ್ಲ ದಿನಪತ್ರಿಕೆಗಳನ್ನೆಲ್ಲ ಸಲೀಸಾಗಿ ಓದುತ್ತಿದ್ದ ಒಮ್ಮೆ ನನಗೆ ಅನುಮಾನ ಬಂದು ಇದು ನಾಟಕವ ಎಂದು ಪರೀಕ್ಷಿಸ ಹೋಗಿ ಕೈ ಸುಟ್ಟು ಕೊಂಡಿದ್ದಿದೆ.. ಕೆಲವೇ ದಿನಗಳಲ್ಲಿ ನಾವು ಮಾತಾಡುವ ತಮಿಳನ್ನ ಅರ್ಥ ಮಾಡಿಕೊಂಡು ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯಿಸ ತೊಡಗಿದ. ನನ್ನ ಕೆಲಸವನ್ನು ಅವನೇ ಮೊದ ಮೊದಲು ಮಾಡುತ್ತಿದ್ದವನು. ಒಂದು ಕ್ಷಣವೂ ಸುಮ್ಮನೆ ಕೂರದೆ ನಮ್ಮ ಬಾಸ್ ನಿಂದ ಏನೇನೋ ಇಂಗ್ಲಿಷ್ ಬುಕ್ ಕೇಳಿಕೊಂಡು ಓದ ತೊಡಗಿದ.. ನಂತರ ಕಂಪ್ಯೂಟರ್ ಅನ್ನು ನಮಗೆಲ್ಲ ಕಲಿಸಿದಂತೆ ಒಂದು ದಿನ ಹೀಗೆ ಉಪಯೋಗಿಸುವುದು ಎಂದು ತೋರಿಸಿಕೊಟ್ಟರು. ದಿನವು ಅದನ್ನ ಉಪಯೋಗಿಸಿ ಏನೇನೋ ಕಲಿಯ ತೊಡಗಿದ.. ನಮಗೂ ಆಸೆ ಇದ್ದರು ನಮ್ಮ ಕೆಲಸ ಕಾರ್ಯ ಮುಗಿಸುವುದರೊಳಗಾಗಿ ಮೈ ಮನವೆಲ್ಲ ದಣಿದು ಹಿಪ್ಪೆ ಆಗಿರುತಿತ್ತು ಮಲಗಿದರೆ ಸಾಕಾಗುತ್ತಿತ್ತು ಅದು ಅಲ್ಲದೆ ನಮ್ಮ ಬಾಸ್ ಈ ಮೊದ್ಲು ನಾನು ಹೀಗೆ ಬಳಸಲು ಹೋದಾಗ ಬೈದಿದ್ದ  ನೆನಪುಗಳು.. ಆಗೆಲ್ಲ ಆ ಬೇಸರ ಮರೆಯಲು ಆಸರೆ ಎಂದರೆ ಮದಿರೆ ಮತ್ತು ಸಿಗರೆಟ್ .

                   ನಂತರ ಇದ್ದಕಿದ್ದಂತೆ ಯಾಕೋ ಏನೋ ಅವನಿಗೆ ಚನ್ನೈ ವಾತಾವರಣ ಹಿಡಿದಸದೆ ಕಳೆಗುಂದಿದ. ಆರೋಗ್ಯ ಹದಗೆಟ್ಟಿತು.. ಇದೆ ವೇಳೆ ನಮ್ಮ ಬಾಸ್ ಅವನ ಮೇಲೆ ನಮಗೆ ಹೇಳಿದಂತೆ ಎಲ್ಲಾ ರೀತಿಯ ಕೆಲಸ ಹೇಳ ತೊಡಗಿದ  ಆದರೆ ಅವನು ಅದನ್ನ ಸಾಧ್ಯವಾದಷ್ಟು  ಮಾಡುತ್ತಿದ್ದ. ಒಂದು ದಿನ ಕುಡಿತದ ಮತ್ತಿನಲ್ಲಿದ್ದ ನಮ್ಮ ಬಾಸ್ ಅಶ್ವಿನ್ ನನ್ನು ತನ್ನ ಬಳಿ ಬರಲು ಕರೆದು ತಾವು ಊಟ ಮಾಡುತ್ತಿದ್ದ ತಟ್ಟೆಯಲ್ಲಿದ್ದ ತಮ್ಮ ಎಂಜಲನ್ನು ಅವನಿಗೆ ತಿನ್ನಿಸ ಹೋದರು.. ಎಲ್ಲಿತ್ತೋ ಅವನಿಗೆ ಸಿಟ್ಟು ಅವರ ತಟ್ಟೆಯನ್ನು ಕಸಿದು ದೂರ ಬಿಸಿ ಒಗೆದ " ಏನೋ ನಿನ್ನ ಎಂಜಲು ನಾನು ತಿನ್ನ ಬೇಕಾ? ನೋಡು ನಾನು ತಿಳುವರಿಕೆ ಬಂದಾಗಲಿಂದ ನನ್ನ ಅಪ್ಪ ಅಮ್ಮನ ಎನ್ಜಳನ್ನೇ ನಾನು ತಿನ್ದವನಲ್ಲ ಅಂತದ್ರಲ್ಲಿ ನಿನ್ನ ಅಂಥ ನಂಬಿಕೆ ದ್ರೋಹಿಗಳ ಎಂಜಲು ತಿನ್ನಿತಿನ??? ನನಗೆ ಶಿಕ್ಷಣ ಕೊಡ್ಸ್ತಿನಿ ಅಂಥ ಕರಕೊಂಡು ಬಂದು ಇಲ್ಲಿ ನಿನ್ನ ಜೀತದ ಕೆಲಸ ಮಾಡಸ್ತಿಯ??? ನಿನ್ನೆ ರಾತ್ರಿ ಯಾವುದೊ ನಿನ್ನ ಸೂಳೆ ಬಂದಿಲ್ಲ ಅಂತ ನನ್ನ ಕರೆದಿದ್ದೆ ಅಲ್ವ??? ಆಗ ಕೊಟ್ಟ ಏಟು ಮರೆತು ಹೊಯ್ತ ನನ್ನ ಮಗನೆ??? ಹೌದು.... ನಿಮ್ಮ ಕಾಲದಲ್ಲಿ ಅದೇನೋ ನಿನ್ನ ಎಂಜಲನ್ನ ನಿನ್ನ ಹೆಂಡತಿನದ್ರು ತಿನ್ನೋ ಸಂಪ್ರದಾಯ ಇತ್ತಲ್ಲವ??? ಅವಳೆಲ್ಲಿ  ಹೋದಳು??? ನಿನ್ನ ಕಾಟ ತದೆಲಿಕ್ಕ ಆಗದೆ ಬೇರೆ ಮನೆ ಮಾಡಿದಳ??? ಇನ್ನೂ ವೃದ್ದಾಪ್ಯದಲ್ಲಿ ನಮ್ಮನ್ನ ನೋಡ್ಕೋ ಬೇಕಾಗಿರೋದು ನಮ್ಮ ಭಾರತೀಯ ಸಂಸ್ಕ್ರುತಿನಲ್ಲಿ ಹೆತ್ತ ಮಕ್ಕಳು ಅವರು ಕೂಡ ನಿನ್ನ ಕಾಟ ಸಹಿಸಲಿಕ್ಕಗದೆ ದೂರ ಇಟ್ಟರ??? ಇಷ್ಟಾದರೂ ಇನ್ನೂ ನಿನ್ನ ದರಿದ್ರ ಬುದ್ದಿ ಬಿಟ್ಟಿಲ್ವ??? ಏನೋ ಅಂದೇ ಕುಡದ್ರೆ ಸ್ಟೇಟಸ್ ಬರುತ್ತಾ??? ಹಾಗೇ ಕುಡಿಯೋದ್ರಿನ್ದೆಲ್ಲ ಸ್ಟೇಟಸ್ ಬರೋ ಹಂಗಿದ್ರೆ ನಮ್ಮ ದೇಶದಲ್ಲಿ ದಟ್ಟ ದರಿದ್ರತೆನ, ಬಡತನನ ಮರೆಯ್ಕೊಸ್ಕರ ಕಂಠ ಪೂರ್ತಿ ಕುಡಿದು ಹಾದಿಯಲ್ಲಿ ಬಿಳತರಲ್ವ ಅಂತ ಬೇಜವಾಬ್ದಾರಿ ನಾಲಾಯಕ ಜನರೆಲ್ಲಾ ಒಳ್ಳೆ ಹೆಸರು ಮಾಡಿ ಬಿಡತಿದ್ರು.    ಇನ್ನೊಂದು ಸಲ ಏನಾದ್ರು ನನ್ನ ತಂಟೆಗೆ ಬಂದ್ರೆ ಅಷ್ಟೇ." ಎಂದೆಲ್ಲಾ ಆರ್ಭಟಿಸಿದ.  ಅವನ ಧೈರ್ಯ ಕಂಡು ನಿಜಕ್ಕೂ ಬೆರಗಾದೆ.. ಯಾವದೋ ತಮಿಳು ಫಿಲ್ಮನಲ್ಲಿ ನೋಡಿದ ಡೈಲಾಗ್ ನಂತಿತ್ತು..ಆದರೆ ಅದನ್ನ ನಿನ್ನೆ ಮೊನ್ನೆ ಕಂಡ ಈ ಹುಡುಗನ ಬಾಯಿಯಲ್ಲಿ ಕೇಳಿದ್ದೆ .
                                 ಆ ಸನ್ನಿವೇಶದ ನಂತರ ನಮ್ಮ ಬಾಸ್ ಎಂಬ ವಕೀಲ ಕೂಡ ಒಂದು ಕ್ಷಣ ನಡುಗಿದ್ದ.. ಅದನ್ನ ಮರೆಯಲು ಮತ್ತೊಂದು ಪೆಗ್ ಹಾಕಿದ್ದ!!! ನನಗೋ ಅವನಿಗೆ ಕೆಲಸ ಹೇಳಲು ಹೆದರಿಕೆ ಆಗ ತೊಡಗಿತು.. ಅವನ ಹೇಳಿದ್ದೆಲ್ಲ ಹಲವು ಬಾರಿ  ಮೆಲಕು ಹಾಕಿದಾಗ ನಿಜಕ್ಕೂ ಅವನ ಬಗ್ಗೆ ಭಯ ಮಿಶ್ರಿತ ಅಭಿಮಾನ ಮೂಡಿತ್ತು..
                                                                                                                                                            ಮುಂದುವರೆಯುವುದು....

Friday, October 15, 2010

ಬತ್ತಗೆರೆ ಸಾವಿತ್ರಜ್ಜಿ

ಬತ್ತಗೆರೆ ಸಾವಿತ್ರಜ್ಜಿ ಎಂಬ  ಆಧುನಿಕ ಹರಿಕಾರ್ತಿ


ನನ್ನ ಜೀವಾಮೃತವೆ...
                       ನೀನು 'ಇಂಥ ೨೧ ನೇ ಶತಮಾನದಲ್ಲಿಯೂ ಕೂಡ ಪತ್ರ ಬರವಣಿಗೆ ಯಾಕೆ??'  ಅಂಥ ಕೇಳಿದ್ದೆ ನೆನಪಿದೆಯ??? ನಿಜ.. ಆದರೆ ಮನದ ಎಲ್ಲಾ ತುಮುಲ ಹಾಗೂ ಭಾವನೆಗಳ ಮಿಡಿತವನ್ನ ಹೊರ ಹಾಕಲು ಇಂದಿನ ಆಧುನಿಕ ಸಂಪರ್ಕ ಮದ್ಯಮಗಳಿಂದ ಎಷ್ಟೇ ಸಾದ್ಯ ಕಣೋ ಅಂತ ನೀನು ಹೇಳಿದರು.. ಪತ್ರ ಬರೆಯುವಿಕೆ ಹಾಗೂ ಅದರ ಪರತುತ್ತರಕ್ಕಾಗಿ ಕಾಯುವಿಕೆ ನಿಜಕ್ಕೂ ಆ ಸಮಯದಲ್ಲಿ ಸಿಗುವ ಖುಷಿಯನ್ನ ಪದಗಳಲ್ಲಿ ಹಿದಿದಿರಲಾಗದಂತಹುದು.. ಅಂದಾಗ. ನೀನು  ಅದೇನೋ ನೋಡೇ ಬಿಡ್ತೀನಿ ಅಂತ ಸವಾಲು ಸ್ವಿಕರಿಸುವವಳಂತೆ ನೋಡಿ ಒಪ್ಪಿಕೊಂಡೆ.. ಈಗ ನಂಗೆ ಪುರುಸೊತ್ತು ಸಿಗುವುದಿಲ್ಲ ನನ್ನ ಬಂಗಾರ ಅಂತ ಹೇಳುತ್ತಾನೆ ಎಷ್ಟೋ ಪತ್ರ ನಮ್ಮಿಬ್ಬರ ನಡುವೆ ಬಟವಾಡೆ ಆಗಿ ಹೋಯಿತು ಅಲ್ಲವ???  ನಿಜ ನಾನು ಪತ್ರ ಬರೆಯಲು ಕಲಿತದ್ದು ನನ್ನ ಅಮ್ಮನಿಂದ ನಾನು ಶಾಲೆಗೆ ಸೇರಿ ಅಲ್ಲಿ ಪತ್ರ ಬರೆಯುವುದನ್ನ ಹೇಳಿ ಕೊಡುವ ಮೊದಲೇ.. ನನ್ನ ಹೆತ್ತಮ್ಮ ತನ್ನ ತವರೊರಿಗೆ ಹಾಗೂ ದೂರದ ಕೇರಳ ದಲ್ಲಿದ್ದ ನನ್ನ ಚಿಕ್ಕಪ್ಪನಿಗೆಲ್ಲ ಪತ್ರ ಬರೆದು ಕ್ಷೇಮ ಸಮಾಚಾರ ಕೇಳುವಾಗ ನನ್ನ ಹತ್ತಿರದಲ್ಲೇ ಬರೆದು ಕೊಡು.. ಹೀಗೆ ಬರೆಯಬೇಕು ಎಂದೆಲ್ಲಾ ನಿರ್ದೇಶಿಸಿ ಕೊನೆಯದಾಗಿ ತಪ್ಪುಗಳಿದ್ದಲ್ಲಿ ತಿದ್ದಿ ಓದಿ ಎಂದು ಮುಗಿಸುತ್ತಿದಳು.. ಅದು ನನಗೆ ಈಗ ನನ್ನ ಭಾವನೆಯನ್ನ ಹಂಚಿಕೊಳ್ಳಲು ಸಹಾಯ ಮಾಡುತ್ತಿದೆ..
                    ಹಃ  ಮೊನ್ನೆ ಅಮ್ಮ ಫೋನ್ ಮಾಡಿದ್ದಾಗ ನಮ್ಮೂರಿನ ಸಾವಿತ್ರಜ್ಜಿ ತೀರಿಹೋದಳು ಎಂದಳು.. ಫೋನ್ ಇಟ್ಟ ಮೇಲೆ ಸಾವಿತ್ರಜ್ಜಿ ಎಂಬ ಆಧುನಿಕ ಹರಿಕಾರ್ತಿಯ ನೆನಪು ಕಣ್ಣು ಮುಂದೆ ಬಿಡದೆ ಕಾಡಿತು.. ಬೊಚ್ಚು ಬಾಯಿಯ ಕಾಟನ್ ಸೀರೆಯ ಆ ಆಜ್ಜಿ ನನಗೆ ತಿಳಿದಂತೆ ನನ್ನ ಅಜ್ಜಿಯ ಆಪ್ತ ಗೆಳತಿ.. ದಿನ ಮಧ್ಯಾಹ್ನ  ಊಟ ಚಹ ಆದ ಮೇಲೆ ಒಂದು ಕುಡುಗೋಲು ಹಿಡಿದು ಅದನ್ನು ಮಸೆಯುವ ನೆಪ ಮಾಡಿ ನಮ್ಮ ಮನೆಗೆ ದಾವಿಸಿದಳೆಂದರೆ   ಅಲ್ಲಿ ಆರಂಭ ಆಯಿತು ಮುದುಕಿಯರ ಕಟ್ಟೆ ಮಾತುಕತೆ... ಇನ್ನೂ ಆ ಅಜ್ಜಿ ಹೊರಡಲು ಸೂರ್ಯ ತನ್ನ ದಿನಚರಿ ಮುಗಿಸಿ ಇನ್ನೂ ತಾನು ನಾಳೆ ಬರುವೆ ಎಂದು ಹಿಂದಿನ ಧರೆಯ ಕಡೆ ಹೊರಟಿರ ಬೇಕು ಅಷ್ಟೊತ್ತಿಗೆಲ್ಲ ಕವಳದ ಬಟ್ಟಲಿನಲ್ಲಿಯ ಸಾಮಗ್ರಿಗಳೆಲ್ಲ ( ಅಡಕೆ, ಸುಣ್ಣ, ತಂಬಾಕು) ಮುದುಕಿಯರ ಸ್ಪರ್ದೆಯಲ್ಲಿ ತಾನು ಸೋತೆ ಎನ್ನುತ್ತಾ ಬರಿದಾಗಿ ಅವರ ಬಾಯಿಗಳಿಗೆ ಆಹಾರ ವಾಗಿರುತ್ತದೆ.. ಇನ್ನುಲಿದದ್ದರಲ್ಲಿ ಒಂದು ಕವಳ ಬಡ ಸಾವಿತ್ರಜ್ಜಿಯ ಮುಡಿ ಕಂಕುಳನ್ನ ಸೇರಿರುತ್ತೆ.. ಅಜ್ಜಿ ಹೊರಾಡುವ ವೇಳೆಗೆಲ್ಲ ನಾವು ಶಾಲೆ ಮುಗಿಸಿ ಮನೆಗೆ ಬಂದಿರುತ್ತೆವೆಲ್ಲ ನಮ್ಮ ಹುಡುಗಾಟಿಕೆಗೆ ಎಷ್ಟೋ ಬಾರಿ ಆ ಅಜ್ಜಿಯ  ಬಾಯಿಂದ ಅಷ್ಟೋತ್ತರವನ್ನ ಕೇಳಿಸಿಕೊಂಡದ್ದು ಉಂಟು.. ಹಾಗೇ ಕೆಲವೊಮ್ಮೆ ಅಜ್ಜಿಗೆ ಕೊಡುತ್ತಿದ್ದ ತ್ರಾಸುಗಳು ಅಷ್ಟಿಷ್ಟಲ್ಲ.. ಅಲ್ಲವ??? 
               ಒಮ್ಮೆ ನಿನಗೆ ನೆನಪಿದೆಯ ಸಾವಿತ್ರಜ್ಜಿಯ ಬಂದಳೆಂದು ಕವಳದ ಬಟ್ಟಲು ಅಡಗಿಸಿಟ್ಟದ್ದು.. ನಂತರ ಅದು ಯಾಕೆ ಹಂಗೆ ಮಾಡಿದೆ ಎಂದು ಆ ಅಜ್ಜಿ ಕೇಳಲಾಗಿ ನಾನು ನಿಮ್ಮ ಮನೆಯ ಅಡಿಕೆ ಖರ್ಚಾಗುತ್ತದೆ ಎಂದು ಇಲ್ಲಿಗೆ ಬಂದು ಕವಳ ಹಾಕುತ್ತಿಯ  ಎಂದದ್ದು.. ಅವಳು ಅದನ್ನೇ ದೊಡ್ದದನ್ನಗಿಸಿ ಸತ್ಯವನ್ನ ಅರಗಿಸಿ ಕೊಳ್ಳಲಾಗದೆ ನನಗೆ ಹೊಡೆದದ್ದು. ನಾನು ಇನ್ನೇನು ಎಲ್ಲಾ ಮುಗಿಯಿತು ಇನ್ನೂ ಅತ್ತು ಸಂತೈಸಿ ಕೊಳ್ಳೋಣ ಎಂದಿರುವಾಗಲೇ ಆದರ್ಶವನೆಲ್ಲ ತನ್ನ ಮಗ ಮೈಗೂಡಿಸಿಕೊಂಡು ಬೆಳೆಯೇಬೇಕೆಂದು ನನ್ನ ಸಣ್ಣ ಸಣ್ಣ ತಪ್ಪಿಗೂ ಕೈ ಗೆ ಸಿಕ್ಕಿದುದ್ರಲ್ಲಿ ತನಗೆ ಸಮಾಧಾನ ಆಗುವ ತನಕ ಬಡಿದು  ನನ್ನ ಹದ ಮಾಡುತ್ತಿದ್ದ ನನ್ನ ತೀರ್ಥರೂಪನಿಗೆ ಸುದ್ದಿ ಮುಟ್ಟಿಸಿ ಅವನಿಂದ ಆ ಅಜ್ಜಿ ಹೊಡೆದ ನೋವಿನ ಮೇಲೆ ಮತ್ತೊಂದಿಷ್ಟು ತನ್ನ ದೇಣಿಗೆಯನ್ನ ಆಪ್ಪ ಕೊಟ್ಟಿದ್ದು.. ಅದನ್ನ ಕಂಡು ಕಾಣದವಳಂತೆ ಸುಮ್ಮನಿದ್ದ ನನ್ನ ಅಮ್ಮನ ಹತ್ತಿರ ನಾನು ತೋರಿಸಿದಾಗ ಆಕೆ  'ಕೊಟ್ಟು ಹಂಗಿಸಬೇಡ' ಎಂಬ ಪಾಠ ಹೇಳಿ ನನ್ನ ಸಮಾಧಾನ ಮಾಡಿದ್ದೂ ..   ನಂತರ ಆದ  ಬಸುಂದೆಗಳಿಗೆ ಅಮ್ಮ ಎಣ್ಣೆ ಹಚ್ಚುತ್ತ ಏನೇನೋ ಪುರಾಣದ ಕಥೆ ಹೇಳಿದ್ದು.. ಸೆರಗಿನಲ್ಲೆ ಕಣ್ಣು ಒರೆಸಿಕೊಂಡದ್ದು..
 ಈ ಪ್ರಸಂಗ ಆದ ನಂತರ ನಾವಿಬ್ಬರು  ಆ ಅಜ್ಜಿಯನ್ನು ಇನ್ನಷ್ಟು ದ್ವೇಷಿಸಲು ಶುರು ಮಾಡಿದ್ದೂ... ನಂತರ ನಮ್ಮದೇ ತಪ್ಪು ಎಂದು ಗೊತ್ತಾದ ಮೇಲು ಅವರು ನನಗೆ ಹೊಡೆದೇಕೆ ಹೇಳ ಬೇಕಿತ್ತು ಹಾಗೇ ಹೇಳಿದ್ದರೆ ತಿಳಿದು ಕೊಳ್ಳುತ್ತಿದ್ದೆ ಎಂದು ನಮ್ಮನ್ನೇ ಸಮರ್ಥಿಸಿಕೊಂಡದ್ದು..
ಎಲ್ಲಾ ನೆನಪಾಯಿತು...
 ಹ ಆ ಅಜ್ಜಿಯ ಬಗ್ಗೆ ನಾನು ಅಭಿಮಾನ ಹೊಂದಿರಲು ಕಾರಣ ಹಾಗೂ ಅವಳನ್ನ ನಮ್ಮೂರಿನ ಆಧುನಿಕ ಹರಿಕಾರ್ತಿ ಎನ್ನಲು ಆಕೆಯ ವೈಚಾರಿಕ ನಿಲುವನ್ನು ಆವಳ ಧ್ರುಧತೆಯನ್ನು ಕಂಡಾಗ ನಿಜಕ್ಕೂ ನನಗೆ ಆಕೆಯಲ್ಲಿ ಅಭಿಮಾನ ಮೂಡುತ್ತದೆ..  ಹಾಗೇ ಹೇಳಲು ಕಾರಣವಿದೆ.. ಅವಳು ನನಗೆ ತಿಳಿದಂತೆ.. ನಮ್ಮ ಸಮಾಜದಲ್ಲಿ ಸ್ತ್ರೀಯರಿಗೆ ಸ್ಥಾನ ಮಾನವೇ ಇಲ್ಲಾ ಎನ್ನೋ ಕಾಲದಲ್ಲಿ  ತನ್ನ ೩ ಗಂಡು ಮಕ್ಕಳನ್ನ ದೂರ ಇಟ್ಟು ತನ್ನ ಕಿರಿಯ ಮಗಳಿಗೆ ತನ್ನ ಮನೆಯ ಯಜಮಾನಿಕೆಯನ್ನ  ನೀಡಿ ಅವಳ ಜೊತೆಗೆ ಜೀವನ ನೆಡೆಸಿದವಳು.. ಅಷ್ಟೇ ಅಲ್ಲಾ ತನ್ನ ಆ ಮಗಳು ಮದುವೆಯಾಗಿ ವರ್ಷವಾಗುವ ಮುನ್ನವೇ  ಗಂಡನನ್ನು ಬಿಟ್ಟು ಬೇರೆ ಜಾತಿಯ ಕುಬೇರನನ್ನ ವಿವಾಹ ಆದಾಗ.. ಧೃತಿಗೆಡದೆ ಅದನ್ನು ಸಮಾಜ್ ಏನೇ ಅಂದರು ತಲೆಕೆಡಿಸಿಕೊಳ್ಳದೆ.. ತನ್ನ ಆ ಮಗಳಿಗೆ ಒತ್ತಾಸೆ ಆಗಿ ನಿಂತ ಮಹಾತಾಯಿ ಅವಳು.. ಆ ಮೂಲಕ ಸಂಪ್ರದಾಯವನ್ನೆಲ್ಲ ಬದಿಗೊತ್ತಿ ಜಾತ್ಯತಿತತೆಯನ್ನ ಮೆರೆದ ಆಧುನಿಕ ಹರಿಕಾರ್ತಿ ಎಂದರೆ ತಪ್ಪದಿತೇನು?? ನೀನೆ ಹೇಳು ನನ್ನ ಅಭಿಪ್ರಾಯ ಸರಿ ಇಲ್ಲವೇನು ನನ್ನ ಚಿನ್ನು????